ಕಲ್ಪ ಮೀಡಿಯಾ ಹೌಸ್ | ಸೊರಬ |
ನಾವು ನಿಂತ ನೆಲೆಯ ಮೇಲೆ ಅಭಿಮಾನ ಮೂಡಲು ರಾಷ್ಟ್ರೀಯ ಹಬ್ಬ ಹರಿದಿನಗಳಲ್ಲಿ, ಆಚರಣೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ದೇಶ ಭಾಷೆಯ ಅಭಿಮಾನವೇ ವೈಯಕ್ತಿಕ ಅಭಿಮಾನವಾಗಿ ವ್ಯಕ್ತಿಯ ಮಾನಸಿಕ ದೈಹಿಕ ಸದೃಢತೆ ಪಕ್ವವಾಗುತ್ತದೆ ಎಂದು ಜೀವವೈವಿಧ್ಯ ಮಂಡಳಿ ಪಿಬಿಆರ್ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ತಾಲ್ಲೂಕು ಯಲಸಿ ಗ್ರಾಮದ ಸುವರ್ಣ ಸರೋವರದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಟಗುಪ್ಪೆ ಗ್ರಾಪಂ ವತಿಯಿಂದ ನಡೆದ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
Also read: ಎಳನೀರುಕೊಪ್ಪ ಸರ್ಕಾರಿ ಶಾಲೆಯಲ್ಲಿ ನಡೆಯದ ಸ್ವಾತಂತ್ರ್ಯ ದಿನಾಚರಣೆ: ಸ್ಥಳೀಯರ ಆರೋಪವೇನು?
ಧ್ವಜಾರೋಹಣ ನಡೆದ ಸ್ಥಳ ಪವಿತ್ರ ಸ್ಥಳವಾಗಿ ಹೊರಹೊಮ್ಮುವಲ್ಲಿ ಗ್ರಾಮಸ್ಥರ ಸಕಾರಾತ್ಮಕ ಸಂಕಲ್ಪ ಈ ವೇಳೆ ಆಗಲಿ, ಮುಂದಿನ ದಿನಗಳಲ್ಲಿ ಈ ಸ್ಥಳ ಪವಿತ್ರ ಸುವರ್ಣ ವನವಾಗಿ ಕಂಗೊಳಿಸಲಿ ಎಂದು ಆಶಿಸಿದರು.
ದಿನಾಚರಣೆ ಅಂಗವಾಗಿ ಸುವರ್ಣ ಸರೋವರದ ಆವರಣದಲ್ಲಿ ಗಿಡ ನೆಡಲಾಯಿತು. ಗ್ರಾಮಸ್ಥರ ಪರವಾಗಿ ಎಸ್ಕೆಡಿಆರ್ಡಿಪಿ ಕಾರ್ಯಕರ್ತ ಟಿ. ಉಮೇಶ್ ಮತ್ತು ಗ್ರಾಮಸಮಿತಿ ಕಾರ್ಯದರ್ಶಿ ಕನ್ನಪ್ಪ ಗ್ರಾಮದ ಸಾರ್ವಜನಿಕ ಆಸ್ತಿಯನ್ನು ಕಾಪಾಡಿಕೊಳ್ಳಲು ಕರೆ ನೀಡಿದರು.
ಮುಟಗುಪ್ಪೆ ಗ್ರಾಪಂ ಪಿಡಿಒ ಸುಧಾಕರ್, ಸಿಬ್ಬಂದಿ ರವೀಶ್, ಆನಂದಪ್ಪ, ಬೊಮ್ಮಪ್ಪ, ಗ್ರಾಮ ಪ್ರಮುಖ ಸೀತೆ ಕೃಷ್ಣಪ್ಪ, ವಿ.ಬಸಪ್ಪ, ಬಿ.ಚೌಡಪ್ಪ, ವಿ.ಟಿ. ರವಿ, ಇ.ಸೀನಪ್ಪ, ಟಿ.ಹುಚ್ಚಪ್ಪ, ಬಿ. ನಾರಾಯಣ, ಗ್ರಾಮಸಮಿತಿಯವರು ಸೇರಿದಂತೆ ಮೊದಲಾದವರು, ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post