ಕಲ್ಪ ಮೀಡಿಯಾ ಹೌಸ್ | ಸೊರಬ |
ಏಳು ಬೀಳು ಇದ್ದಾಗಲೆ ಕೃಷಿಯಲ್ಲಿ ಮೇಲೆ ಬರಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ದೊರೆರಾಜ್ ಹೇಳಿದರು.
ತಾಲ್ಲೂಕು ಯಲಸಿ ಸುವರ್ಣವನದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಡಿಕೆ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೊದಲು ಕೆಲವು ಸಾವಿರವಿದ್ದ ಅಡಿಕೆ ತೋಟವೀಗ ತಾಲ್ಲೂಕಿನಲ್ಲಿ ೨೬ ಸಾವಿರ ಹೆಕ್ಟೇರ್ ದಾಟಿದೆ. ಹಲವು ಪ್ರಯೋಗಗಳ ಬಳಕೆಯೂ ಆಗಿದೆ. ಇವೆಲ್ಲದರ ನಡುವೆ ಈಗಿನ ಪರಿಸರದ ಸ್ಥಿತಿಗೆ ಹೊಂದಿಕೊಂಡು ಕೃಷಿ ಸುಸ್ಥಿರತೆಗೆ ಮುಂದಾಗಬೇಕಾಗಿರುವುದು ಸರಿಯಾದ ಮಾರ್ಗ ಎಂದರು.

ಪ್ರಗತಿಪರ ಸಾವಯವ ಕೃಷಿಕ ಶ್ರೀಧರ ಮೂರ್ತಿ ನಡಳ್ಳಿ ತಮ್ಮ ಕೃಷಿ ಅನುಭವ ಹಂಚಿಕೊಂಡರು.

ಕೃಷಿ ಸಾಧಕ ತಾರಕನಾಥ ಕಾನ್ಗೋಡು ಈಚೆಗಿನ ಸ್ವದೇಶಿ ಕೃಷಿ ಉತ್ಪನ್ನಗಳನ್ನು ಪ್ರದರ್ಶನದ ಮೂಲಕ ಪರಿಚಯಿಸಿದರು.

ಬರಹಗಾರ ಕಲಗಾರ್ ಲಕ್ಷ್ಮೀನಾರಾಯಣ ತಾಳಗುಪ್ಪ, ಪ್ರಗತಿಪರ ಕೃಷಿಕರಾದ ಪ್ರಸನ್ನಗೌಡ ಗುಡವಿ, ರಜನಿ ಬಸವರಾಜಗೌಡ ಗುಂಡಶೆಟ್ಟಿಕೊಪ್ಪ, ಅಭಿಷೇಕ್ ಡಿ.ಕೊಂಡಿಕಾರ್, ಬಾಲಕೃಷ್ಣ ಕೊಠಾರಿ, ಆರತಿ ಮಹೇಶ್, ಇನ್ನೂ ಅನೇಕ ರೈತರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















Discussion about this post