ಕಲ್ಪ ಮೀಡಿಯಾ ಹೌಸ್ | ಸೊರಬ |
ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ನಿಮ್ಮ ಐಪಿ ಸೆಟ್ ನ್ನು ನೊಂದಾಯಿಸಿಕೊಳ್ಳಿ. ಆಗ ನಮಗೆ ಸಮರ್ಪಕವಾಗಿ ವಿದ್ಯುತ್ ನೀಡಲು ಸಾಧ್ಯ ಎಂದು ಶಾಸಕ ಕುಮಾರ್ ಬಂಗಾರಪ್ಪ MLA Kumar Bangarappa ಹೇಳಿದರು.
ತಾಲ್ಲೂಕಿನ ವಿವಿದೆಡೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು ಯಲಸಿ ಗ್ರಾಮದ ಒಂದು ಕೋಟಿ ರೂ. ವೆಚ್ಚದ ಸಂಪರ್ಕ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೃಷಿಗೆ ಪೂರಕವಾಗಿ ಹಲವಾರು ಯೋಜನೆಗಳನ್ನು ರೂಪಿಸಲು ಮುಂದಾಗಿದ್ದು, ತಾಲ್ಲೂಕಿನ ಕುದುರಗಣಿ ಸಮೀಪ ಇನ್ನೊಂದು ಗ್ರಿಡ್ ಆಗಲಿದೆ, ಆಗ ಇನ್ನಷ್ಟು ವಿದ್ಯುತ್ ಅಡಚಣೆ ಕಡಿಮೆಯಾಗುತ್ತದೆ. ಉಳಿದಂತೆ ಕಡಸೂರು ಬಳಿ ವರದಾ ನದಿಗೆ ಬ್ಯಾರೇಜ್ ಆಗಲಿದೆ, ತಾಳಗುಪ್ಪ ಬಳಿಯ ಹಿನ್ನೀರಿನಿಂದ ನೀರು ತರುವ ಯೋಜನೆ ಪ್ರಗತಿಯಲ್ಲಿದೆ. ಆ ಕಾರ್ಯದಿಂದ ಈ ಭಾಗದ ಅನೇಕ ಕೆರೆಗಳು ಜೀವ ಪಡೆಯುತ್ತವೆ. ಕೊನೆಪಕ್ಷ ರೈತರು ವರ್ಷಕ್ಕೆ ಎರಡು ಭಾರಿಯಾದರೂ ಬೆಳೆ ಬೆಳೆಯಬೇಕಿದ್ದು, ನಾವಂದುಕೊಂಡ ಯೋಜನೆಯಾದರೆ ವರ್ಷಕ್ಕೆ ಮೂರು ಬೆಳೆ ಬೆಳೆಯುವ ಸಾಮರ್ಥ್ಯ ಲಭಿಸಿದಂತಾಗುತ್ತದೆ ಎಂದರು.
Also read: 5 ವರ್ಷಗಳಲ್ಲಿ ಜಿಲ್ಲೆಗೊಂದು ಅತ್ಯುತ್ಕೃಷ್ಟ ಎಂಜಿನಿಯರಿಂಗ್ ಕಾಲೇಜು: ಸಚಿವ ಅಶ್ವತ್ಥ್ ನಾರಾಯಣ್ ಗುರಿ
ಯಾವುದೇ ಯೋಜನೆಗಳು ಜನತೆಗೆ ಸಂಪೂರ್ಣವಾಗಿ ತಲುಪಲು ಎಲ್ಲರ ಸಹಕಾರ ಮುಖ್ಯ. ಬೇಧ ಮರೆತು ಉತ್ತಮ ಕಾರ್ಯ ನಡೆಸಲು ಗ್ರಾಮಸ್ಥರು ಸಹಕರಿಸಬೇಕು ಎಂದರು.
ಈ ವೇಳೆ ಗ್ರಾಮದ ಹಲವಾರು ಅಹವಾಲುಗಳನ್ನು ಸ್ವೀಕರಿಸಿ ಲಭ್ಯವಿರುವ ಯೋಜನೆಗಳ ಮೂಲಕ ಕೂಡಲೇ ಅನುಷ್ಠಾನ ಗೊಳಿಸುವುದಾಗಿ ತಿಳಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರು, ಪಕ್ಷ ಪ್ರಮುಖರು, ಯಲಸಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post