ಕಲ್ಪ ಮೀಡಿಯಾ ಹೌಸ್ | ಸೊರಬ |
ಭಾದ್ರಪದ ಮಾಸ 1730 ರಾಜಸ್ಥಾನದ ಬಿಷ್ಣೋಯ್ ಸಮುದಾಯದವರ ಕರಾಳ ದಿನವೊಂದರ ಸ್ಮರಣೆಗಾಗಿ ಪರ್ಯಾವರಣ ಸಂಘಟನಾ ಗತಿವಿಧಿ ಕರೆನೀಡಿದ್ದ ಪ್ರಕೃತಿ ದಿನದ ಅಂಗವಾಗಿ ಭಾನುವಾರ ತಾಲ್ಲೂಕಿನ ಅನೇಕ ಕಡೆ ಪ್ರಕೃತಿ ವಂದನೆ ಆಚರಿಸಿದ್ದು, ಪರಿಸರ ಪ್ರಜ್ಞೆಯನ್ನು ಜಾಗೃತಿಗೊಳಿಸುವಲ್ಲಿ ಸಹಕರಿಸಿದ್ದಾರೆ.
ಪಟ್ಟಣದ ಯುವಬ್ರಿಗೇಡ್ Yuvabriged ಸಂಚಾಲಕ ಮಹೇಶ್ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ ನ ಮಧುಕೇಶ್ವರ ಸಂಗಡಿಗರು ವೃಕ್ಷಪೂಜೆ ನಡೆಸಿದ್ದು, ಇಲ್ಲಿನ ಸಾಯಿ ವೃದ್ಧಾಶ್ರಮದಲ್ಲಿ ಹಿರಿಯ ನಾಗರೀಕರೊಂದಿಗೆ ಕನ್ನಡ ಸಾಂಸ್ಕೃತಿಕ ಜಗಲಿ ಅಧ್ಯಕ್ಷೆ ಸುಜಾತ ಜೋತಾಡಿ ರಕ್ಷಾಬಂದನದ ಮೂಲಕ ಪೂಜೆ ಸಲ್ಲಿಸಿದರು.
ಹೊಸೂರು ಶಿವರುದ್ರಪ್ಪ ಜೋಗಿ ತಮ್ಮ ಗ್ರಾಮದಲ್ಲಿ, ಕೋಡೂರು ಜಯಂತ್ ಕುಟುಂಬ ದವರು ಕುನ್ನೂರು ಗ್ರಾಮದಲ್ಲಿ, ಮೇಟೂರಿನಲ್ಲಿ ಸೊರಬ ಮೂಲದ ಗಾಯತ್ರಿ ಕುಟುಂಬ, ಚಂದ್ರಗುತ್ತಿಯಲ್ಲಿ ಲೋಕೇಶಪ್ಪ ಕಮಲಾಪುರ ಇವರು 2003 ರಲ್ಲಿ ಅರಳಿ ಗಿಡವನ್ನು ಹಚ್ಚಿದ್ದರು , ಬೆಳೆಸಿ ಸ್ವತಃ ಊರಿನ ಹಳ್ಳದಿಂದ ನೀರನ್ನು ತಂದು ಗಿಡಕ್ಕೆ ಪೂರೈಕೆ ಮಾಡಿ ಪೋಷಿಸಿ ಬೆಳೆಸಿದ ಮರಕ್ಕೆ ಲೋಕೇಶಪ್ಪ ಅವರ ಜೊತೆ ರಾಮಣ್ಣ ಸ್ವಾದಿ, ಪರಮೇಶ್ ಕೆ, ರಾಘವೇಂದ್ರ ಆಟೋ, ವಿನಾಯಕ ಶೇಟ್, ಚೇತನ್ ಮೊದಲಾದವರು ಪ್ರಕೃತಿ ವಂದನೆ ಸಲ್ಲಿಸಿದರು.
Also read: ಶಿವಮೊಗ್ಗದಿಂದ ಇನ್ನೂ ಮೂರು ನಗರಗಳಿಗೆ ವಿಮಾನ ಹಾರಾಟ: ಸಮಯ-ದರ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
ಹೊಸನಗರದ ರಾಧಕೃಷ್ಣ ತಮ್ಮ ಗ್ರಾಮದಲ್ಲಿ, ಎಸ್ ಬಿ ನಾಯ್ಕ್ ತಮ್ಮ ಸ್ವಗ್ರಾಮದಲ್ಲಿ, ಪಸಂಗವಿ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಬಳಗ ಸಾಗರ ಹೊಸಗುಂದ ಕಂಚಿ ಕಾಳಮ್ಮ ದೇಗುಲ ಆವರಣದಲ್ಲಿ ರಕ್ಷಾಬಂಧನದ ಮೂಲಕ ಪೂಜೆ ಸಲ್ಲಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post