ಮನುಷ್ಯ ನಿಸ್ವಾರ್ಥ ಸೇವೆ ಸಲ್ಲಿಸಿದರೆ, ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವಕೀಲ ವೈ. ಜಿ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಕೀಲ ಮಿತ್ರರಿಂದ ವಕೀಲರ ದಿನಾಚರಣೆಯ ಅಂಗವಾಗಿ ರೋಗಿಗಳಿಗೆ ಬ್ರೆಡ್ ಹಣ್ಣು ಹಂಪಲು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಕೀಲರ ದಿನಾಚರಣೆಯನ್ನು ಡಾ.ರಾಜೇಂದ್ರ ಪ್ರಸಾದ್ ಅವರ ನೆನಪಿಗಾಗಿ ಆಚರಿಸಲಾಗುತ್ತಿದೆ. ಹೀಗೆ ದೇಶದಲ್ಲಿ ನಾನಾ ಮಹಾನ್ ಚೇತನಗಳ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದು ಎಂದಿಗೂ ಮಾಸುವುದಿಲ್ಲ ಜೊತೆಗೆ ನೌಕಾ ದಳದ ದಿನಾಚರಣೆ ಕೊಡ ಪ್ರತೀ ವರ್ಷ ಭಾರತದಲ್ಲಿ ಡಿಸೆಂಬರ್ 4 ನೌಕಾದಳ ದಿನವನ್ನಾಗಿ ಆಚರಿಸಲಾಗುತ್ತದೆ. ದುರ್ಗಮ ಸ್ಥಳಗಳು ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ನಮ್ಮ ಯೋಧರು ಗಡಿ ಪ್ರದೇಶದಲ್ಲಿ ಚುರುಕಾಗಿ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ ಬಲಿಷ್ಠ ರಕ್ಷಣಾ ಸಾಮರ್ಥ್ಯವನ್ನು ಭಾರತೀಯ ನೌಕಾ ಸೇನೆ ಹೊಂದಿದ್ದು ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಅವರು ಸಿದ್ಧರಿರುತ್ತಾರೆ ಭಾರತದ ನೌಕಾಪಡೆಯ ಸಾಧನೆಗಳ ನೆನಪಿಗಾಗಿ ಪ್ರತೀ ವರ್ಷ ಈ ದಿನವನ್ನು ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಧೈರ್ಯಶಾಲಿಗಳ ಶೌರ್ಯವನ್ನು ಭಾರತೀಯ ನೌಕಾದಿನದಂದು ನೆನಪಿಸಿಕೊಳ್ಳಲಾಗುತ್ತದೆ ಎಂದರು.
ವಕೀಲರಾದ ಸೈಯದ್ ಅಹಮದ್ ಮಾತನಾಡಿ ಭಾರತ ದೇಶದ ಎಮಿನೆಂಟ್ ವಕೀಲ ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ದ್ಯೆಯ ಗಳು ವಕೀಲರಾಗಿ ಅವರ ಸಾಧನೆ ಇಂದಿಗೂ ಅಜರಾಮರ ಅವರ ಜನ್ಮ ದಿನದ ಈ ಸುಸಂದರ್ಭದಲ್ಲಿ ದೈಹಿಕವಾಗಿ ನೊಂದ ರೋಗಿಗಳ ಯೋಗಕ್ಷೇಮ ವಿಚಾರಿಸಿ ಹಣ್ಣು ವಿತರಿಸಿದ್ದು ಸರ್ವ ವಕೀಲ ಮಿತ್ರರಲ್ಲಿ ಸಂತಸ ತಂದಿದೆ ಎಂದರು.
ಈ ಸಂಧರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪ್ರಭು ಸಾಹುಕಾರ್, ಹಿರಿಯರ ಆರೋಗ್ಯ ನಿರಿಕ್ಷಣಾಧಿಕಾರಿ ಶಬ್ಬೀರ್ ಖಾನ್, ವಕೀಲರಾದ ದಿನಕರ ಭಟ್ ಬಾವೆ, ಜಿ. ಉಮೇಶ್, ಡಿ. ಕೆ. ಪರಶುರಾಮ್, ವಿ.ಎನ್. ಪಾಟೀಲ್, ಹೆಚ್.ಬಿ. ಬಿಮಪ್ಪ, ಶ್ರೀಧರ್, ಯುವರಾಜ್, ಸುರೇಶ್ ಆರ್, ಹೆಚ್, ಡಾಕಪ್ಪ ಮತ್ತಿತರರಿದ್ದರು.
Discussion about this post