ಕಲ್ಪ ಮೀಡಿಯಾ ಹೌಸ್ | ಸೊರಬ |
ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗಿನ ಯುವಾಬ್ರಿಗೇಡ್ ನ ಬೃಹತ್ ಯೋಜನೆಯಾದ ಕೈಹಿಡಿದು ನಡೆಸೆನ್ನನು ಯೋಜನೆಯ ಮುಖಾಂತರ ರಾಜ್ಯದ 50ಕ್ಕೂ ಹೆಚ್ಚಿನ ಆಯ್ದ ಸರ್ಕಾರಿ ಪ್ರೌಢ ಕನ್ನಡ ಶಾಲೆಯ ಮಕ್ಕಳಿಗೆ, ಕನ್ನಡದಲ್ಲೇ ಗ್ರಹಿಕೆ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯುವಾಬ್ರಿಗೇಡ್ ಸೊರಬ ವತಿಯಿಂದ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಹಳೇಸೊರಬ ಶಾಲೆಗೆ 30 ಟ್ಯಾಬ್ ಮತ್ತು ಪ್ರತಿ ವಿದ್ಯಾರ್ಥಿಗೆ ಗ್ರಹಿಕೆ ಆಧಾರಿತ ಶಿಕ್ಷಣದ ಮೊಬೈಲ್ ಅಪ್ಲಿಕೇಷನ್ ನೀಡಲಾಯಿತು.
ಸಂಸ್ಥಾನ ಮಠ ಜಡೆ ಮುರಘಾ ಮಠದ ಡಾ. ಮಹಾಂತ ಸ್ವಾಮಿಗಳ ಸಾನಿಧ್ಯದಲ್ಲಿ ವಿತರಿಸಿದ ಕಾರ್ಯಕ್ರಮದಲ್ಲಿ ಡಾ. ಶ್ವೇತ ಅವರು ಮಕ್ಕಳ ಶುಚಿತ್ವ ಹಾಗೂ ಆರೋಗ್ಯದ ಕುರಿತು ಮಾಹಿತಿ ನೀಡಿ ಮಾತಾನಾಡಿದರು.
ಯುವಾ ಬ್ರಿಗೇಡ್ ನ ಮಂಗಳೂರು ವಿಭಾಗ ಸಂಚಾಲಕ ಅಣ್ಣಪ್ಪ ಟ್ಯಾಬ್ ವಿತರಣೆಯ ಉದ್ದೇಶ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಷೋ ನಲ್ಲಿ ದ್ವಿತೀಯ ಸ್ಥಾನ ಪಡೆದ ಕು. ಹರ್ಷಿತಾಳನ್ನು ಅಭಿನಂದಿಸಲಾಯಿತು. 9ನೇ ತರಗತಿಯ ಕೀರ್ತನಾ ಮತ್ತು ತಂಡದವರಿಂದ ಕಂಸಾಳೆ ಜನಪದ ನೃತ್ಯ ನಡೆಯಿತು.
ಮುಖ್ಯೋಪಾಧ್ಯಾಯರಾದ ಒಂಕಾರಪ್ಪ ಬಿ ಅಧ್ಯಕ್ಷತೆ ವಹಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೃಷ್ಣಪ್ಪ ಓಟೂರು, ಯುವಾ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮಹೇಶ್ ಖಾರ್ವಿ, ಪ್ರಮುಖರಾದ ಸಿ.ಪಿ.ಈರೇಶ್ ಗೌಡ್ರು, ನಾಗರಾಜ ಗುತ್ತಿ, ಡಿ. ಶಿವಯೋಗಿ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉಮೇಶ್ ಪಿ, ವಾಸಂತಿ ನಾವಡ, ರೂಪದರ್ಶಿನಿ, ಶ್ಯಾಮಲಾ ನಾವಡ, ಅನಿತಾ ದಾಮ್ಲೆ, ಮೆಹಬೂಬ್, ಯುವಾ ಬ್ರಿಗೇಡ್ ಕಾರ್ಯಕರ್ತರಾದ ರಂಗನಾಥ ಮೊಗವೀರ, ಅನಿಲ್ ಮಾಳವಾದೆ, ರಾಹುಲ್, ಕೃಷ್ಣ ಮೊಗವೀರ, ಲೋಕೇಶ್, ವಿನೋದ್ ವಾಲ್ಮೀಕಿ, ದೈಹಿಕ ಶಿಕ್ಷಣ ಶಿಕ್ಷಕಿ ಜಯಶ್ರೀ ಡಿ.ಎಸ್, ಶಿಕ್ಷಕರು, ಶಾಲಾಸಮಿತಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post