ಕಲ್ಪ ಮೀಡಿಯಾ ಹೌಸ್ | ಸೊರಬ |
ಈ ಭೂಮಿಯ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ, ಬದುಕು ಕಸಿಯುವ ಕ್ರಿಯೆ ವಿಕೃತ ಮನಸ್ಸಿನ ಇನ್ನೊಂದು ಮುಖ ಎಂದು ಪರಿಸರ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಆಯೋಜಿಸಿದ್ದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ರಾಮಪತ್ರೆ ಜಡ್ಡಿಯ ವೈಶಿಷ್ಟ್ಯತೆ, ಉರಗ ಪ್ರಬೇಧಗಳ ಪರಿಚಯ ಹಾಗೂ ಪ್ರಕೃತಿಯಲ್ಲಿ ಅವುಗಳ ಪಾತ್ರ ಕುರಿತು ಮಾತನಾಡಿದರು.

ಇರುವುದನ್ನಾದರೂ ಉಳಿಸುವ ಇಚ್ಛೆ ಸ್ವಪ್ರೇರಣೆಯಿಂದ ಆದಲ್ಲಿ ಒಂದಿಷ್ಟಾದರೂ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಸಂರಕ್ಷಣೆಯ ಜವಾಬ್ಧಾರಿ ನಮದೆಲ್ಲರದು ಎಂಬ ಸಂಕಲ್ಪ ಎಲ್ಲರದ್ದಾಗಲಿ ಎಂದು ಆಶಿಸಿದರು.

ಕಾಲೇಜು ಪ್ರಾಚಾರ್ಯ ಪ್ರೊ.ಚಂದ್ರಕುಮಾರ್, ವಿಭಾಗಾಧಿಕಾರಿ ವೆಂಕಟೇಶ್ ನಾಯಕ್, ಅಟೋಮೊಬೈಲ್ ವಿಭಾಗದ ಅಜ್ಮಲ್ ಎಸ್.ಎ, ಗಣಕಯಂತ್ರ ವಿಭಾಗದ ಲೋಹಿತ್ ಬಣಕಾರ್, ಎಲೆಕ್ಟ್ರಾನಿಕ್ಸ್ ವಿಭಾಗದ, ಶೇಖರಪ್ಪಾ ಜಿ. ರೆಜಿಸ್ಟ್ರಾರ್. ಉಮೇಶ್ ಡಿ. ಕೆ. ಉಪನ್ಯಾಸಕರು, ಗಣಕಯಂತ್ರ ವಿಭಾಗಾಧಿಕಾರಿ, ಸಂಯೋಜಕಿ ಮಮತಾ ಸಿ. ಹಾಗೂ ಪ್ರಥಮ ವರ್ಷದ ವಿವಿಧ ವಿಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post