ಕಲ್ಪ ಮೀಡಿಯಾ ಹೌಸ್ | ಸೊರಬ |
ಹಿಂದೂ ಸಮಾಜ ನಿರ್ಮಾಣಕ್ಕೆ ಛತ್ರಪತಿ ಶಿವಾಜಿ Chatrapathi Shivaji ಕೊಡುಗೆ ಅಪಾರ, ನಾವಿಂದು ಅವರ ಭಾವಚಿತ್ರ, ಅವರ ಮೇಲಿನ ಕೃತಿಗಳನ್ನು ಮನೆಯಲ್ಲಿಟ್ಟು ಪೂಜಿಸುವ ಮೂಲಕ ನಮ್ಮ ಹಿಂದೂ ಧರ್ಮವನ್ನು ರಕ್ಷಿಸಲು ಮುಂದಾಗಬೇಕು ಎಂದು ಭಜರಂಗದಳದ ದಕ್ಷಿಣ್ಯ ಪ್ರಾಂತ್ಯ ಸಂಯೋಜಕ ಕೆ.ಆರ್. ಸುನೀಲ್ ಕುಮಾರ್ ಹೇಳಿದರು.
ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಅನೇಖ ಹಿಂದೂಪರ ಸಂಘಟನೆಗಳವರ ಸಂದ್ಯಾಸಂಗಮ, ಹಿಂದೂ ಸನಾತನ ಧರ್ಮೋತ್ಸವ ಕಾರ್ಯಕ್ರಮದಲ್ಲಿ ಧಿಕ್ಸೂಚಿ ಭಾಷಣ ಮಾಡಿದರು.
ದೇವಾನುದೇವತೆಗಳ ಕಯಯಲ್ಲಿ ಆಯುಧಗಳಿರುವುದು ದುಷ್ಟರ ಸಂಹಾರಕ್ಕೆ, ನಮ್ಮ ಧರ್ಮಕ್ಕೆ ಅಪಚಾರ, ಹಾನಿಯಾದಲ್ಲಿ ಅದನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮೆಲ್ಲರದ್ದು, ನಮ್ಮ ಧರ್ಮಕ್ಕೆ ಚ್ಯುತಿ ತರುವ ದುಷ್ಟಶಕ್ತಿಗಳಿಗೆ ನಾವು ತಕ್ಕ ಪಾಠ ಕಲಿಸಲೇಬೇಕು. ಸ್ವಾಭಿಮಾನಿ ಸಮಾಜವನ್ನು ನಿರ್ಮಿಸಬೇಕು ಎಂದರು.
ವೇದಿಕೆ ಮತ್ತು ವರ್ಣರಂಜಿತ ಶೋಭಾಯಾತ್ರೆಯಲ್ಲಿ ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀಗಳು, ಅಮರೇಶ್ವರ ಶ್ರೀಗಳು, ಶಾಂತಾಪುರ ಮಠದ ಶಿವಾನಂದ ಶಿವಾಚಾರ್ಯರು,ಹಿರೆಹಡಗಲಿ ಮಠದ ಶ್ರೀಗಳು, ಲಕ್ವಳ್ಳಿ ಜೈನಮಠದ ಆಚಾರ್ಯರು, ವಿಹಿಂಪದ ವಾಸುದೇವ್, ಕಾಳಿಂಗರಾಜ್, ಮಹೇಶ್ ಖಾರ್ವಿ, ವಸಂತಿ ನಾವುಡಾ, ರಂಗನಾಥ ಮೊಗವೀರ, ವೀಶೈಯುವೇ ಜಿಲ್ಲಾಧ್ಯಕ್ಷ ಸಿ.ಪಿ.ಈರೇಶಗೌಡ, ಬಿಜೆಪಿ, ಆರೆಸ್ಸೆಸ್, ಭಜರಂಗದಳದ ಪ್ರಮುಖರಿದ್ದರು.
Also read: ಹಿಜಾಬ್’ಗಾಗಿ ಪರೀಕ್ಷೆ ಬಿಟ್ಟು ತೆರಳಿದ ವಿದ್ಯಾರ್ಥಿನಿ, ಭವಿಷ್ಯಕ್ಕಾಗಿ ಮನವೊಲಿಸಿ ಕರೆತಂದ ಪೋಷಕರು
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post