Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

51ರ ಸಂಭ್ರಮದಲ್ಲಿ ಬಹು ಕ್ಷೇತ್ರದ `ಕೃಷಿಕ’ ಪತ್ರಕರ್ತ ಗಜೇಂದ್ರಸ್ವಾಮಿ

February 28, 2024
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಗಜ ವೃಂದಕ್ಕೆ ಅಧಿಪತಿ ಗಜೇಂದ್ರ. ಪತ್ರಿಕಾ ವೃಂದದಲ್ಲಿ ಇಂತಹ ಅಧಿಪತ್ಯ ಸ್ಥಾಪನೆ ಕಷ್ಟ ಸಾಧ್ಯ. ಆದರೆ ಪಾರುಪತ್ಯ ಸ್ಥಾಪನೆ ಅಸಾಧ್ಯವೇನಲ್ಲ. ಇಂತಹ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿಸಿರುವ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ 50ನೇ ಜನ್ಮ ದಿನ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.

ಮನುಷ್ಯನ ಜೀವಿತಾವಧಿಯಲ್ಲಿ 50 ವರ್ಷ ಪೂರೈಕೆ ಮಹತ್ವದ ಮೈಲಿಗಲ್ಲು. ಗಜೇಂದ್ರ ಸ್ವಾಮಿಗೆ ಅದಾಗಲೇ 50 ವರ್ಷ ತುಂಬಿ ಹೋಯ್ತಾ ಎಂದು ಅಚ್ಚರಿ ಪಡುವಷ್ಟು ಕ್ರಿಯಾಶೀಲ, ಸಕ್ರಿಯವಾಗಿರುವ ಈ ಚಿರ ಯೌವನಿಗ ಪತ್ರಕರ್ತರಾಗಿರುವ ಜಿ. ಸ್ವಾಮಿ ಕಾಲಚಕ್ರ ಯಾರಿಗೂ ಕಾಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಜನ್ಮ ದಿನಾಂಕ ಆಧಾರಿತ ವಯಸ್ಸು ಕೇವಲ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ. ಸಾಧಿಸಬೇಕೆಂಬ ಛಲ, ಪ್ರಯತ್ನ, ಪರಿಶ್ರಮವಿದ್ದರೆ ಉತ್ತಮ ಫಲ, ಯಶಸ್ಸು ಪಡೆಯಲು ವಯಸ್ಸು ಎಂದೂ ಅಡ್ಡಿಯಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೇ ಪತ್ರಕರ್ತ ಗಜೇಂದ್ರ ಸ್ವಾಮಿ.
ನಮ್ಮ ಸುತ್ತಲಿನ ವಿದ್ಯಮಾನ, ಸಾಮಾಜಿಕ ಆಗು ಹೋಗುಗಳು, ಜನಸಾಮಾನ್ಯರ ಸಮಸ್ಯೆ, ಆಡಳಿತಶಾಹಿಯ ನ್ಯೂನತೆ, ಕರ್ತವ್ಯಲೋಪ ಸೇರಿದಂತೆ ನವನವೀನ ಸಂಗತಿಗಳನ್ನು ಬಹು ಬೇಗನೆ ಸಲೀಸಾಗಿ, ಸೂಕ್ಷ್ಮವಾಗಿ ಗ್ರಹಿಸುವ, ಆಳಕ್ಕಿಳಿದು ಅಧ್ಯಯನ ಮಾಡುವ ಮತ್ತು ಲೇಖನ, ವರದಿ, ವಿಶೇಷ ವರದಿ, ಹುಡುಕಾಟದ ವರದಿಗಳ ಮೂಲಕ ತಮ್ಮ ಪತ್ರಿಕೆಯಲ್ಲಿ ಅಚ್ಚುಕಟ್ಟಾಗಿ ಸಾದರ ಪಡಿಸುವ ಶೈಲಿ ಗಜೇಂದ್ರ ಸ್ವಾಮಿಯವರಿಗೆ ಸಿದ್ಧಿಸಿದೆ. ಸ್ಥಳೀಯ, ನಾಡು- ಹೊರನಾಡಿನ ಪ್ರಸ್ತುತ ಸುದ್ದಿ- ಸನ್ನಿವೇಶಗಳನ್ನು ದಿನನಿತ್ಯ ಪತ್ರಿಕೆಯ ಮೂಲಕ ಓದುಗರ ಮುಂದಿಡುತ್ತಾ ಬರುತ್ತಿದ್ದಾರೆ.

ವಯಸ್ಸು 50 ದಾಟಿದ್ದರೂ ತನ್ನ ಬದುಕಿನ ಅರ್ಧದಷ್ಟು ವಯಸ್ಸನ್ನು (28 ವರ್ಷ) ಪತ್ರಿಕೋದ್ಯಮದಲ್ಲಿ ಕಳೆದಿರುವ ಗಜೇಂದ್ರ ಸ್ವಾಮಿ ವೃತ್ತಿ ಬದುಕಿನಲ್ಲಿ ಸಾಗಿ ಬಂದ ಹಾದಿ ಸಲೀಸಲ್ಲ. ಸಾಕಷ್ಟು ಏಳು- ಬೀಳು, ಕಷ್ಟ- ನಷ್ಟ, ನೋವು- ನಲಿವನ್ನು ಅನುಭವಿಸಿ ಮನಸ್ಸಿದ್ದರೆ ಮಾರ್ಗ ಎಂದು “ಗಜ ಗಾಂಭಿರ್ಯ” ದಿಂದ ಸಾಗಿದ ಪರಿಣಾಮ ಯಶಸ್ಸು, ಸಾಧನೆ ಸಾಧ್ಯವಾಗಿದೆ.

ಚಿಕ್ಕ ಅಂಕುಶದಿಂದ ದೊಡ್ಡ ಗಜವನ್ನು (ಆನೆಯನ್ನು) ಬೇಕಾದರೂ ಪಳಗಿಸಬಹುದು ಎಂಬುದನ್ನು ಅರಿತಿರುವ ಗಜೇಂದ್ರ ಸ್ವಾಮಿ, ಪೆನ್ ಎಂಬ ಚಿಕ್ಕ ಅಂಕುಶ ಹಿಡಿದು ಆಡಳಿತಶಾಹಿ ಎಂಬ ಮದಗಜವನ್ನು ಸಾಮಾಜಿಕ ಹಿತಾಸಕ್ತಿ, ಬದ್ಧತೆ, ಕಾಳಜಿ, ಕಳಕಳಿಯಿಂದ ತಿವಿಯುತ್ತಿದ್ದಾರೆ. ಅದನ್ನು ಪಳಗಿಸಲು ಹರಸಾಹಸ ಪಡುತ್ತಲೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಬಾರಿ ಯಶಸ್ಸನ್ನೂ ಸಾಧಿಸಿದ್ದಾರೆ.

ಪೆನ್ನಿನ ಮೇಲೆ ಪ್ರೀತಿ: ಪೆನ್ನಿನ ಮೇಲೂ ಪ್ರೀತಿ ಹೊಂದಿರುವ ಗಜೇಂದ್ರ ಸ್ವಾಮಿ ಅವರ ಬರವಣಿಗೆಯಲ್ಲೂ ‘ಕಿಕ್’ ಇದೆ. ಎಡಪಂಥೀಯ, ಬಲಪಂಥೀಯ ಎಂಬ ಯಾವುದೇ “ಇಸಂ” ಹೊಂದದೆ ‘ಮದ್ಯ’ಪಂಥೀಯರಾಗಿ, ಯಾವುದೇ ಮತ, ಜಾತಿ, ಧರ್ಮ, ಪಕ್ಷದ ಚೌಕಟ್ಟು ಹಾಕಿ ಕೊಳ್ಳದೆ ಆನೆ ನಡೆದದ್ದೇ ಹಾದಿ ಎಂಬಂತೆ ಗಜೇಂದ್ರ ಸ್ವಾಮಿ ಸಾಗುತಿದ್ದಾರೆ.
ಬರವಣಿಗೆ ಮೂಲಕ ತಾನೂ ಬೆಳೆಯುವುದರೊಂದಿಗೆ ಮತ್ತೊಬ್ಬರನ್ನೂ ಬೆಳೆಸುವಂತಹ, ಪ್ರೋತ್ಸಾಹಿಸುವಂತಹ ಸಹೃದಯತೆ ಜಿ. ಸ್ವಾಮಿಯವರ ವಿಶೇಷ ಗುಣ. ಪತ್ರಿಕೋದ್ಯಮದ ಗಂಧ- ಗಾಳಿ ಗೊತ್ತಿಲ್ಲದಂತಹ ಸೋಮಿನಕೊಪ್ಪದ ರಾಕೇಶ್‌ನನ್ನು ವಿಶೇಷ ವರದಿ ಮಾಡುವ ವರದಿಗಾರನನ್ನಾಗಿ ರೂಪಿಸಿ, ತಿದ್ದಿ- ತೀಡಿ, ಪ್ರೀತಿಯಿಂದ ಗದರಿ, ಬೈಯ್ದು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಕೆಲಸ ಮಾಡುವಂತಹ ಸಾಮರ್ಥ್ಯ ಮೂಡಿಸಿದ್ದಾರೆ. ಕೇವಲ ಇದೊಂದು ಸಾಂದರ್ಭಿಕ ಉದಾಹರಣೆ ಅಷ್ಟೇ. ಇಂತಹ ಅನೇಕರು ಸ್ವಾಮಿಯ ಪತ್ರಿಕೋದ್ಯಮ ಎಂಬ ಗರಡಿ ಮನೆಯಲ್ಲಿ ಪಳಗಿದ್ದಾರೆ. ಈಗ ರಾಜ್ಯಮಟ್ಡದ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ ಗಳಲ್ಲಿ ಕೆಲಸ ಮಾಡುತ್ತಾ, ಅವರ ಪಟ್ಟುಗಳನ್ನು ಕಲಿತಿರುವುದನ್ನು ಅವರೇ ಸ್ಮರಿಸುತ್ತಾರೆ.

ಬ್ರೋ (ಬ್ರದರ್), ಸಿಸ್ (ಸಿಸ್ಟರ್) ಎಂದು ಕರೆಯುವುದು ಫ್ಯಾಷನ್ ಆಗಿರುವ ಇಂದಿನ ಕಾಲಮಾನದಲ್ಲಿ ತನಗಿಂತಲೂ ಕಿರಿಯ ವಯಸ್ಸಿನವರನ್ನೂ ಸಹ ಅಣ್ಣಾ ಹೇಳಿ, ಅಕ್ಕ ಹೇಳಿ ಎಂದು ಸಹೋದರತ್ವದ ಮನೋಭಾವದಿಂದ ಮೊಬೈಲ್ ಕರೆ ಸ್ವೀಕರಿಸಿ ಮಾತನಾಡು ಮನೋಭಾವ ಸ್ವಾಮಿಯವರದ್ದು. ಸಿಡುಕುತನ, ಮನೋಭಾವದ ಬದಲಾವಣೆ ಇಲ್ಲವೆಂದಲ್ಲ, ಆದರೆ ಅದು ಸಂದರ್ಭಕ್ಕೆ ಮಾತ್ರ ಸೀಮಿತ.
ಇವರ ಯಶಸ್ಸಿನ ಹುಡುಕಾಟದ ವರದಿಯ ನಡುವೆಯೂ ಹುಡುಕಾಟ, ಕುಲುಕಾಟವಿದ್ದರೂ ಅವರನ್ನು ಸ್ಥಿತಪ್ರಜ್ಞತೆಯಿಂದ ಸಹಿಸಿ, ಸೈರಿಸಿಕೊಂಡಿರುವ ಸಹಧರ್ಮಿಣಿ, ಸರ್ಕಾರಿ ಶಾಲೆಯ ಶಿಕ್ಷಕಿ ವೀಣಾ ಟೀಚರ್, ಅಪ್ಪನ ಮುದ್ದು ಮಗಳಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪಿಕಾ ಜಿ. ಸ್ವಾಮಿ, ಕುಲಪುತ್ರ ಬಿ ಫಾರ್ಮಸಿ ಓದುತ್ತಿರುವ ದರ್ಶನ್ ಜಿ. ಸ್ವಾಮಿಯವರನ್ನು ಒಳಗೊಂಡ ಸುಖಿ ಕುಟುಂಬ ಇವರದ್ದು. ತಂದೆ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಗೂ ತಾಯಿ ಶಕುಂತಲಮ್ಮ ಅವರೊಂದಿಗೆ ಗುರುಹಿರಿಯರ ಮಾರ್ಗದರ್ಶನವನ್ನು ಅವರು ಸದಾ ಸ್ಮರಿಸುತ್ತಾರೆ.

ಪತ್ರಿಕೋದ್ಯಮದೊಂದಿಗೆ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಗಜೇಂದ್ರ ಸ್ವಾಮಿ ಅಸಲಿ ಮಣ್ಣಿನ ಮಗ. ಅವರಿಗೆ ಅದರ ಬಗ್ಗೆ ವಿಶೇಷ ಆಸಕ್ತಿ. ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ರಂಗಭೂಮಿ ಮತ್ತಿತರೆ ಕ್ಷೇತ್ರಗಳಲ್ಲೂ ಇಂದಿಗೂ ಇವರ ಬರವಣಿಗೆಯ ಆಸಕ್ತಿ ಕುಂದಿಲ್ಲ. ಹಲವು ಪುಸ್ತಕಗಳನ್ನು ಸಂಪಾದಿಸಿದ್ದಾರೆ, ಸ್ವಂತ ರಚಿಸಿದ್ದಾರೆ. ಊಟಕ್ಕೆ ಒಂದಿಷ್ಟು ಉಪ್ಪಿನಕಾಯಿ ಎಂಬಂತೆ ಅವರ ವರದಿಯಲ್ಲಿ ಕ್ರೈಂ, ಸೆಕ್ಸ್ ವರದಿಗಳೂ ಉಂಟು. ಎಲ್ಲಿಯೂ ಅತಿರೇಖದ ವೈಭವೀಕರಣ ಇರೊಲ್ಲ. ಓದುಗರನ್ನು ಸೆಳೆಯುವ ಬರಹ ಅವರದು.
ಪತ್ರಕರ್ತ ಪಿ. ಲಂಕೇಶ್‌ರ ತುಂಟಾಟ, ರವಿ ಬೆಳೆಗೆರೆಯವರ ಲವಲವಿಕೆಯಂತಹ ಪೋರಿ- ಟಪೋರಿತನದಿಂದ ಬರಹದಲ್ಲಿ ಒಂದಿಷ್ಟು ಕಲಿತ 51ರ ಹರೆಯದ ಚಿರ ಯೌವನದ ಪತ್ರಕರ್ತರಾಗಿರುವ ಗಜೇಂದ್ರ ಸ್ವಾಮಿ “ಆಡು ಮುಟ್ಟದ ಸೊಪ್ಪಿಲ್ಲ” ಎಂಬಂತೆ ಇವರು ಬರೆಯದ ಪ್ರಕಾರಗಳೇ ಬಹುತೇಕ ಇಲ್ಲವೆನ್ನಬಹುದು.

ನುಡಿದಂತೆ ನಡೆಯುವ, ಬರೆದಂತೆ ಬದುಕುವ ಗಜೇಂದ್ರ ಸ್ವಾಮಿ ಪರಿಪಕ್ವ ಪರ್ತಕರ್ತರಾಗಿ ರೂಪುಗೊಂಡಿದ್ದಾರೆ. ಫೆ. 24ರ ಶನಿವಾರ ಇವರು 50 ವರ್ಷ ಪೂರೈಸಿ 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ‘ವಿಧಾತ ಸುಧೀರ್’ ಎಂದೇ ಹೆಸರಾಗಿರುವ ಸಹ್ಯಾದ್ರಿ ಸುದ್ದಿ ದಿನಪತ್ರಿಕೆಯ ಸಂಪಾದಕ ಸುಧೀರ್ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದ ಗಜೇಂದ್ರ ಸ್ವಾಮಿಯವರ ಫೋಟೊ ಹಾಕಿ 51 ನಾಟ್ ಔಟ್ ಎಂದು ಶುಭ ಹಾರೈಸಿದ್ದರು. ಪೆನ್ ಎಂಬ ಬ್ಯಾಟ್ ಹಿಡಿದಿರುವ ಈ ದೈತ್ಯ ದಾಂಡಿಗ ಪತ್ರಕರ್ತ ಬದುಕಿನ ಮ್ಯಾಚ್‌ನಲ್ಲೂ ಸೆಂಚುರಿ ಬಾರಿಸಲಿ ಎಂಬುವುದೇ ಹಿತೈಷಿಗಳ ಹಾರೈಕೆ.

ಲೇಖಕರು: ಸಂತೋಷ್ ಎಲಿಗಾರ್, ಮೊ: 7848851966   

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited                             

Tags: Kannada NewsKannada News LiveKannada News Online ShivamoggaKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamogga NewsSpecial Articleಮಲೆನಾಡು_ಸುದ್ಧಿವಿಶೇಷ ಲೇಖನಶಿವಮೊಗ್ಗ_ನ್ಯೂಸ್
Previous Post

ಶಿವಮೊಗ್ಗ: ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕರಡಿ ಅರಣ್ಯ ಇಲಾಖೆ ಬಲೆಗೆ

Next Post

ಅನೈತಿಕತೆಗೆ ಮನ್ನಣೆ, ಭ್ರಷ್ಟಾಚಾರದ ಹೆಚ್ಚಳ: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅನೈತಿಕತೆಗೆ ಮನ್ನಣೆ, ಭ್ರಷ್ಟಾಚಾರದ ಹೆಚ್ಚಳ: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!