No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿಸ್ಮಯ ಲೋಕಕ್ಕೆ ಕೊಂಡೊಯ್ದ ನಾಟ್ಯಾರಾಧನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 25, 2025
in Special Articles
0
ವಿಸ್ಮಯ ಲೋಕಕ್ಕೆ ಕೊಂಡೊಯ್ದ ನಾಟ್ಯಾರಾಧನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ನಾಟ್ಯಾರಾಧನಾ-14 ಸಹೃದಯರ ಮನದಲ್ಲಿ ಸದಾ ಉಳಿಯುವಂತೆ ಮೂರು ದಿನದ ಕಾರ್ಯಕ್ರಮವೂ ಸಹ ಬಹಳ ವಿಶೇಷವಾಗಿ ಆಯೋಜನೆಯಾಗಿತ್ತು. ಹೃನ್ಮನಗಳಿಗೆ ರಸದೌತಣ ನೀಡಿದ ಈ ಆಯೋಜನೆ ಶಿವಮೊಗ್ಗದ ಜನತೆಗೆ ಒದಗಿದ ಮಹಾಭಾಗ್ಯವೇ ಸರಿ.

ಮೊದಲ ದಿನ ದಾಸರ ಪದಗಳನ್ನು ನಾಟ್ಯಾಲಯದ ವಿದ್ಯಾರ್ಥಿಗಳು ಬಹು ಸುಂದರವಾಗಿ ಪ್ರದರ್ಶನ ನೀಡಿ ಗಮನ ಸೆಳೆದರು. ಅಂದಿನ ಆಯ್ಕೆಯ ಪ್ರತಿಯೊಂದು ಗೀತೆಯೂ ಸಹ ಅಷ್ಟೇ ಸೊಗಸಾಗಿತ್ತು. ಪುಟಾಣಿಗಳಿಂದ ಹಿಡಿದು ದೊಡ್ಡವರವರೆಗೂ ಇದ್ದ ನಾಟ್ಯಾಲಯದ ವಿದ್ಯಾರ್ಥಿಗಳು ಎಲ್ಲರಿಗೂ ಮನಸ್ಸಿಗೆ ಮುದ ತರುವಂತೆ ನೃತ್ಯ ಮಾಡಿ ಭಕ್ತಿ ಸುಧಾರಸದ ಔತಣ ನೀಡಿದರು. ಅಂದಿನ ವೈಶಿಷ್ಟ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಕದನ ಕುತೂಹಲ ರಾಗದಲ್ಲಿದ್ದ ತಿಲ್ಲಾನದ ನೃತ್ಯ. ವಿಶೇಷವಾಗಿ ಈ ರಾಗವೇ ಒಂದು ಸಂತೋಷದ ಸಂಕೇತ ಎಲ್ಲರ ಮನಸ್ಸಿಗೂ ನಾಟುವಂತಹದ್ದು ಆಕರ್ಷಕ ಸ್ವರ ಸಂಚಾರ ಹೊಂದಿ ತೀವ್ರ ಚುರುಕು ಹರ್ಷಭರಿತ ಮತ್ತು ಆನಂದ ತುಂಬಿದ ರಾಗಕ್ಕೆ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ರಮಣೀಯವಾಗಿ ನರ್ತಿಸಿದರು.
ಎರಡನೆಯ ದಿನ ಆರಂಭದ ನೃತ್ಯ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ಅವರ ಏಕವ್ಯಕ್ತಿ ನೃತ್ಯ ಪ್ರಸ್ತುತಿಯಾದ ರಾಧಾ ಮಾಧವ ವಿಲಾಸ. ಇದನ್ನು ಜಯದೇವನ ಅಷ್ಟಪದಿಯ ಶೃಂಗಾರಮಾಲೆಯಿಂದ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸಹನಾ ಅಂದು ಸುಮಾರು ಅರ್ಧ ಗಂಟೆಗಳ ನೃತ್ಯ ಮಾಡಿದರೆ ಅವರ ಭಾವ, ಅಭಿನಯ ನೃತ್ಯ ಎಲ್ಲವೂ ಎಲ್ಲರನ್ನೂ ಸೆಳೆದು ಸಮಯದ ಪರಿವೆಯೇ ಇಲ್ಲದಂತೆ ಮಾಡಿತೆಂದರೆ ತಪ್ಪಾಗಲಾರದು. ಜಯದೇವ ವಿರಚಿತ ಗೀತ ಗೋವಿಂದದಲ್ಲಿ ಬರುವ ಪ್ರಸಿದ್ಧ ಅಷ್ಟಪದಿಗಳಲ್ಲಿ ಒಂದಾದ ಕೃತಿ ಯಾಹಿ ಮಾಧವ ಯಾಹಿ ಕೇಶವದಲ್ಲಿ ರಾಧೆಯ ಮನೋಭಾವವನ್ನು ಜಯದೇವನು ಬಹಳ ಸೂಕ್ಷ್ಮವಾಗಿ ವರ್ಣಿಸಿದರೆ ಅದನ್ನು ಸಹನಾ ಅವರು ಅಷ್ಟೇ ಚೆನ್ನಾಗಿ ಅಭಿನಯಿಸಿದರು. ಇಲ್ಲಿ ಹೇಗೆ ಜೀವಾತ್ಮ ಸ್ವರೂಪಿಯಾದ ರಾಧೆ ಪರಮಾತ್ಮ ಸ್ವರೂಪಿಯಾದ ಕೃಷ್ಣ ತನ್ನಲ್ಲಿ ಸದಾ ನೆಲೆಸಬೇಕೆಂದು ಬಯಸುವಂತೆ ನಮಗೂ ಇನ್ನಷ್ಟು ಸಮಯ ಅವರ ನೃತ್ಯ ಬೇಕೆಂದು ಬಯಸುವಂತೆ ಮಾಡಿದ್ದಂತೂ ಸುಳ್ಳಲ್ಲ.

ನಂತರ ನಾಟ್ಯಾಲಯದ ವಿದ್ಯಾರ್ಥಿಗಳು ಅಭಂಗ್ ನೃತ್ಯ ಮಾಧುರ್ಯವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟರು. ಅದಕ್ಕೂ ಪ್ರಮುಖವಾಗಿ ಅಂದಿನ ಹಾಡುಗಳ ಆಯ್ಕೆ ವಿಶೇಷವಾಗಿತ್ತು ಅದರಲ್ಲೂ ಕನ್ನಡದ ಗೀತೆಯಾದ ಟೊಂಕದ ಮೇಲೆ ಕೈ ಇಟ್ಟು….ಎನ್ನುವುದಂತು ಅತ್ಯಾಪ್ತವಾಗಿತ್ತು. ಮಕ್ಕಳಂತೂ ಚಂದದ ಪ್ರಸ್ತುತಿ ನೀಡಿ ಮನಸೆಳೆದರು.
ಬಹು ಮುಖ್ಯವಾಗಿ ಹೇಳಲೇಬೇಕಾದದ್ದು ರಾಷ್ಟ್ರೀಯ ನೃತ್ಯ ಮಹೋತ್ಸವದ ಕೇಂದ್ರವಾಗಿ ಆಯೋಜನೆಯಾದ ಒಡಿಸ್ಸಿ ಮತ್ತು ಬಿಹು ನೃತ್ಯದ ಕುರಿತಾಗಿ. ಒರಿಸ್ಸಾದ ರುದ್ರಾಕ್ಷ ಫೌಂಡೇಶನ್ ಅವರು ಭಾರತದ ಎಂಟು ಶ್ರೇಷ್ಠ ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಸಿದ್ಧವಾದ ನೃತ್ಯ ಶೈಲಿಯನ್ನು ನಮ್ಮೆದುರಿಗೆ ಅಭಿನಯಿಸುತ್ತಿದ್ದರೆ ಅದರಲ್ಲಿ ನಾವೇ ಲೀನವಾದ ಭಾವ ಉಂಟಾಗಿ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಆ ಸೊಬಗು, ಆ ಒನಪು, ಒಯ್ಯಾರ, ಲಯಬದ್ಧತೆ, ಲಾಸ್ಯ, ಭಾವ ಪ್ರಧಾನವಾದ ಶೈಲಿ ಇವುಗಳನ್ನು ಅಭಿನಯಿಸಿದ ರೀತಿಯಂತೂ ಮನಮೋಹಕವಾಗಿತ್ತು. ಸ್ತ್ರೀ ಪುರುಷರಿಬ್ಬರ ಅಭಿನಯ ನೃತ್ಯ ಲಾಲಿತ್ಯ, ಶೃಂಗಾರ ಎಲ್ಲವೂ ಮೈ ನವಿರೇಳಿಸುವಂತಿತ್ತು. ಒಬ್ಬರಿಗೊಬ್ಬರು ಒಂದಿನಿತು ಸ್ಪರ್ಧಿಸದೆ ಮೂಡಿಸಿದ ಶೃಂಗಾರ ಭಾವ ರೋಮಾಂಚನ ತಂದಿತ್ತು. ಸೂರ್ಯ ನಮಸ್ಕಾರವೇ ಮೊದಲಾಗಿ, ಕಾಳಿಯ ನೃತ್ಯದವರೆಗೂ ಎಲ್ಲವೂ ನಮ್ಮನ್ನ ಕಣ್ಣೆವೆ ಇಕ್ಕದೆ ನೋಡುವಂತೆ ಮಾಡಿತ್ತು. ಎಲ್ಲರೂ ಚಂದದ ನೃತ್ಯ ಮಾಡುವವರೇ, ಯಾರನ್ನು ನೋಡುವುದು ಯಾರನ್ನು ಬಿಡುವುದೆಂದು ತಿಳಿಯಲಿಲ್ಲ. ನಿಜಕ್ಕೂ ತ್ರಿಭಂಗಿಯ ಭಂಗಿ, ಶೈಲಿಯ ಲಲಿತತೆ ಮತ್ತು ಭಕ್ತಿ ಭಾವನೆಗಳಿಂದ ತುಂಬಿ ನಮ್ಮೆಲ್ಲರನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ದ ಅದ್ಭುತ ಶಾಸ್ತ್ರೀಯ ನೃತ್ಯವಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ನಂತರ ಅಸ್ಸಾಂನ ರಂಗಧಾಲಿ ಡ್ಯಾನ್ಸ್ ರಾಜ್ಯದ ಸಾಂಸ್ಕೃತಿಕ ಹಾಗೂ ಜಾನಪದ ಶೈಲಿಯನ್ನು ಹೊಂದಿದ ನೃತ್ಯವನ್ನು ಮಾಡಿದರು. ಅದು ಸಹ ಹರ್ಷೋಲ್ಲಾಸಗಳಿಂದ ಕೂಡಿದ್ದೇ ಅಲ್ಲದೆ ವೇಗದ ಹೆಜ್ಜೆ ಕಮರು ಮತ್ತು ಕತ್ತಿನ ನಾಜೂಕಿನ ಚಲನೆ ಚಪ್ಪಾಳೆಗಳಿಂದ ಕೂಡಿದ ನೃತ್ಯ ಜನಮನಾಕರ್ಷಿಸಿತು.

ಒಟ್ಟಿನಲ್ಲಿ ಮೂರು ದಿನಗಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಿ ಸುಸಂಪನ್ನವಾಯಿತು. ಇದು ಕಲೆಯ ಮೂಲಕ ದೇವರತ್ತ ಸಾಗುವ ಸುಂದರ ಮಾರ್ಗವಾಯಿತು. ಹೀಗಾಗಿ ನಾಟ್ಯಾರಾಧನೆ ಎಂದರೆ ಜೀವನವನ್ನು ಕಲೆಗೊಳಿಸಿ, ಕಲೆಗೆ ದೇವರ ರೂಪ ನೀಡುವ ಶ್ರೇಷ್ಠ ಸಾಧನವಾಗಿರುವುದಂತೂ ಸತ್ಯ ಹಾಗಾಗಿ ಇದರ ಆಯೋಜಕರಿಗೊಂದು ಅನಂತಾನಂತ ವಂದನೆಗಳು ಸಲ್ಲಲೇ ಬೇಕು.

ಚಿತ್ರಕೃಪೆ: ಆದಿತ್ಯ ಪ್ರಸಾದ್ ಎಮ್.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/08/VID-20250820-WA0058.mp4
http://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News Online ShivamoggaKannada WebsiteKannadaNewsWebsiteLatest News KannadaLatestNewsKannadaLocalNewsMalnadNewsNews in KannadaNews KannadaShimogaShivamoggaNewsSpecial Articleಮಲೆನಾಡು_ಸುದ್ಧಿವಿಶೇಷ ಲೇಖನಶಿವಮೊಗ್ಗ_ನ್ಯೂಸ್
Share196Tweet123Send
Previous Post

ಭದ್ರಾವತಿ | ಶಾಸಕ ಸಂಗಮೇಶ್ವರ್‌ಗೆ ಸಚಿವ ಸ್ಥಾನ ಲಭಿಸಲಿ: ಬಿಳಿಕಿ ಶ್ರೀ 

Next Post

ಗಣಪನ ಮೂರ್ತಿ ಪ್ರಕೃತಿ ಸ್ನೇಹಿಯಾದಲ್ಲಿ ಹಬ್ಬದ ಆಚರಣೆ ಸಾರ್ಥಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಣಪನ ಮೂರ್ತಿ ಪ್ರಕೃತಿ ಸ್ನೇಹಿಯಾದಲ್ಲಿ ಹಬ್ಬದ ಆಚರಣೆ ಸಾರ್ಥಕ

ಗಣಪನ ಮೂರ್ತಿ ಪ್ರಕೃತಿ ಸ್ನೇಹಿಯಾದಲ್ಲಿ ಹಬ್ಬದ ಆಚರಣೆ ಸಾರ್ಥಕ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

April 10, 2026
ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

April 10, 2026
ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

April 10, 2026
ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

April 10, 2026
ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL