No Result
View All Result
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?
English Articles

Critical Condition Turned Around with Timely Medical Intervention

by ಕಲ್ಪ ನ್ಯೂಸ್
March 27, 2026
0

Kalpa Media House  |  Bengaluru(WhiteFiled)  | A 26-year-old man from West Bengal, who had been suffering from a serious condition...

Read moreDetails
Yogada Satsang Society brings out Kannada version on Kriya Yoga today

Yogada Satsang Society brings out Kannada version on Kriya Yoga today

March 25, 2026
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
  • Advertise With Us
  • Grievances
  • About Us
  • Contact Us
Saturday, March 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಏಕ ಕಂಠದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಸಮರ್ಪಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 28, 2026
in Special Articles
0
ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |
ಜಗತ್ತಿನ ಏಳಿಗೆಗೆ ಭಾರತದ ಕೊಡುಗೆ ಅಪಾರ. ಅದರಲ್ಲಿಯೂ ಸಂಸ್ಕೃತದಲ್ಲಿನ ಮಂತ್ರಗಳು ಶ್ಲೋಕಗಳು ಮನಕುಲದ ಸರ್ವತೋಮುಖ ಏಳ್ಗೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ನಾಮಸ್ಮರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಸ್ತೋತ್ರಗಳ ರಾಜ ಎಂದು ಕರೆಸಿಕೊಳ್ಳುವ ಈ “ವಿಷ್ಣು ಸಹಸ್ರನಾಮ” ಮಹಾಭಾರತದ ಅನುಶಾಸನ ಪರ್ವದಲ್ಲಿ ಶರಶಯ್ಯೆಯಲ್ಲಿದ್ಧ ಭೀಷ್ಮರು ಯುಧಿಷ್ಠಿರನಿಗೆ ನೀಡಿದ ಅಮೂಲ್ಯ ಉಪದೇಶವೇ ಇದಾಗಿದೆ. ಭಗವಾನ್ ವಿಷ್ಣುವಿನ ಸಾವಿರ ನಾಮಗಳನ್ನು ಒಳಗೊಂಡ ಸ್ತೋತ್ರ, ಭಕ್ತಿ, ಜ್ಞಾನ ಮತ್ತು ಧ್ಯಾನದ ಸಮನ್ವಯ ರೂಪವೇ ಆಗಿದೆ.

ಭಗವಂತನ ನಾಮ ಜಪ ಮಾಡುವಾಗ ಅದು ಮನಸ್ಸನ್ನು ಶುದ್ಧಗೊಳಿಸಿ ಒಳಗಿನ ಚೇತನವನ್ನು ಜಾಗೃತಿಗೊಳಿಸುತ್ತದೆ. ಆದ್ದರಿಂದಲೇ ಶಾಸ್ತ್ರಗಳು ನಾಮ ಸ್ಮರಣೆಯನ್ನು ಸುಲಭ ಮತ್ತು ಶ್ರೇಷ್ಠ ಸಾಧನೆ ಎಂದು ವರ್ಣಿಸಿವೆ. ಇಂದಿನ ವೇಗದ ಜೀವನದಲ್ಲಿ ಎಲ್ಲರಿಗೂ ಮಾನಸಿಕ ಒತ್ತಡ ಸರ್ವೇಸಾಮಾನ್ಯವಾಗಿದೆ. ಚಂಚಲದ ಮನಸ್ಸು ಸ್ಥಿರವಾಗಿ ಆತಂಕ ಕಡಿಮೆಯಾಗುತ್ತದೆ. ಧ್ಯಾನದೊಂದಿಗೆ ಇದನ್ನು ಪಠಿಸುವಾಗ ಏಕಾಗ್ರತೆ ಅಧಿಕವಾಗಿ ಆಲೋಚನೆಗಳಿಗೆ ಸ್ಪಷ್ಟತೆ ದೊರೆಯುತ್ತದೆ.
ಯೋಗ ಮತ್ತು ಆಯುರ್ವೇದದ ದೃಷ್ಟಿಯಿಂದ ನೋಡುವುದಾದರೆ, ಧ್ವನಿಯ ಸ್ಪಂದನೆಗಳು ಮನುಷ್ಯನ ದೇಹದಲ್ಲಿರುವ ನಾಡಿಗಳ ಮೇಲೆ ಪರಿಣಾಮ ಬೀರುತ್ತವೆ. ಈ ಸಹಸ್ರ ನಾಮ ಪಠಣೆಯಿಂದ ದೇಹದೊಳಗಿನ ಪ್ರಾಣಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣ, ಉತ್ತಮ ನಿದ್ರೆ ಮತ್ತು ದೇಹದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ನನ್ನ ಸಹೋದ್ಯೋಗಿ ಒಬ್ಬರು ಸಂಸ್ಕೃತದ ಮಹತ್ವ ಹೇಳುವಾಗ ಒಮ್ಮೆ ಈ ರೀತಿಯಾಗಿ ಹೇಳಿದ್ದು ಇಂದು ನೆನಪಿಗೆ ಬರುತ್ತದೆ. ಅವರಿಗೆ ಕೆಲಸದ ಒತ್ತಡದಿಂದ ಅಧಿಕ ರಕ್ತದೊತ್ತಡ ಬಂದಿತ್ತು ಆಗ ವೈದ್ಯರ ಬಳಿ ಹೋದಾಗ ಅವರು ನಿರ್ದೇಶನ ಮಾಡಿದ್ದು ವಿಷ್ಣು ಸಹಸ್ರನಾಮ ಹೇಳಿ ಎಂದು. ಅವರು ಹೇಳಲು ನನಗೆ ಬರುವುದಿಲ್ಲ ಎಂದಾಗ ಅದನ್ನು ಕೇಳಿ ಸಾಕು ಎಂದರು. ಅವರು ಬಿ.ಆರ್ ಪ್ರಾಜೆಕ್ಟ್ ನಿಂದ ಶಿವಮೊಗ್ಗಕ್ಕೆ ಕೆಲಸದ ನಿಮಿತ್ತ ಬರಬೇಕು, ಬರುವಾಗ ದಾರಿಯಲ್ಲಿ ಸಹಸ್ರನಾಮ ಕೇಳುತ್ತಾ ಬಂದರಂತೆ. ಸುಮಾರು 28 ದಿನಗಳು ಕಳೆದ ಮೇಲೆ ಅವರ ಸ್ಟ್ರೆಸ್ ಲೆವೆಲ್ ಹಾಗೂ ರಕ್ತದೊತ್ತಡದ ತೀವ್ರತೆ ಕಡಿಮೆ ಆಗಿರೋದು ಕಂಡುಬಂದಿತ್ತು. ಈ ಘಟನೆಯನ್ನು ಕೇಳಿದಾಗ ಸಹಸ್ರನಾಮದ ಮಹತ್ವ ನಮಗೆ ಅರಿವಾಗುತ್ತದೆ.

ಹಾಗೆ ಒಮ್ಮೆ ನನ್ನ ಮಗನಿಗೆ ಏಳಲೂ ಶಕ್ತಿ ಇಲ್ಲದ ರೀತಿಯಲ್ಲಿ ಜ್ವರ ಬಂದು ಮಲಗಿದ್ದ. ಆಗ ನನಗೇನು ಮಾಡಲು ತೋಚದೇ ಸಹಸ್ರನಾಮವನ್ನು ಕೇಳಲು ಅವನ ಮಲಗಿದ್ದ ಸ್ಥಳದಲ್ಲಿ ಜೋರಾಗಿ ಕೇಳುವಂತೆ ಟೇಪ್ ರೆಕಾರ್ಡರ್ ನಲ್ಲಿ ಹಾಕಿ ಬಂದೆ. ಸ್ವಲ್ಪ ಸಮಯದ ನಂತರ ಜ್ವರದ ತೀವ್ರತೆ ಇಳಿಯುತ್ತಾ ಬಂದಿದ್ದನ್ನು ನಾನೇ ಗಮನಿಸಿದ್ದೇನೆ. ಅದಾದ ನಂತರ ನನ್ನ ಮಗನಿಗೆ ಜ್ವರ ಬಂದಾಗೆಲ್ಲ ಸಹಸ್ರನಾಮ ಹಾಕಮ್ಮ ಜ್ವರ ಬಿಡುತ್ತೆ ಎಂದು ಹೇಳುವುದು ಸ್ವತಃ ನನ್ನ ಅನುಭವವೇ ಆಗಿದೆ. ಇದರ ವೈಶಿಷ್ಟ್ಯವೆಂದರೆ ಹೇಳುವುದರಿಂದ ಎಷ್ಟು ಲಾಭವಿದೆಯೋ ಅದನ್ನು ಶ್ರದ್ಧೆಯಿಂದ ಕೇಳಿದಾಗಲೂ ಸಹ ಅಷ್ಟೇ ಲಾಭ ಇರುವುದನ್ನು ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ ಎನ್ನುವಲ್ಲಿ ಈ ಮಾತನ್ನೇ ಹೇಳಿರುವುದು.
ಒಮ್ಮೆ ಅನೇಕ ಕಾಯಿಲೆಗಳನ್ನು ಬಂದಂತಹ ವಿವಿಧ ಧರ್ಮದ ಜನರನ್ನು ಒಟ್ಟಾಗಿ ಸೇರಿಸಿ ಅವರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಪ್ರತಿನಿತ್ಯ ಅವರವರ ಧರ್ಮ ಗ್ರಂಥಗಳನ್ನು ಪಠಿಸಲು ಹೇಳಲಾಯಿತು, ಅದರಲ್ಲಿ ಹಿಂದುಗಳಿಗೆ ವಿಷ್ಣು ಸಹಸ್ರನಾಮವನ್ನು ಹೇಳಲು ಸೂಚಿಸಲಾಯಿತು. ಹೀಗೆ 48 ದಿನದ ಒಂದು ಮಂಡಲ ಕಳೆದ ಮೇಲೆ ಅವರನ್ನು ಪರೀಕ್ಷಿಸಿದಾಗ ಯಾರು ವಿಷ್ಣು ಸಹಸ್ರನಾಮವನ್ನು ಹೇಳುತ್ತಿದ್ದರು ಅವರ ಕಾಯಿಲೆಗಳು ಸ್ವಲ್ಪ ಸುಧಾರಿಸಿದ್ದನ್ನು ಕಂಡರು. ಅದರಿಂದ ನಮ್ಮ ಆರೋಗ್ಯದ ಮೇಲೆ ವಿಶೇಷವಾದಂತಹ ಪ್ರಭಾವವನ್ನು ಈ ವಿಷ್ಣು ಸಹಸ್ರನಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ. ಅದನ್ನೇ ರೋಗಾರ್ತೋ ಮುಚ್ಯತೇ ರೋಗಾದ್ಭದ್ದೋ ಮುಚ್ಯೇತ ಬಂಧನಾತ್ ಎನ್ನುವ ಶ್ಲೋಕದಲ್ಲಿ ಇದನ್ನೇ ತಿಳಿಸಿದೆ.

ಜೀವನದಲ್ಲಿ ಎದುರಾಗುವ ಅನೇಕ ಸಂಕಟಗಳು ಮತ್ತು ಅಡೆತಡೆಗಳು ಮನಸ್ಸನ್ನು ಕುಗ್ಗಿಸುತ್ತವೆ. ಆ ಸಂದರ್ಭಗಳಲ್ಲಿ ಆಂತರಿಕ ಧೈರ್ಯ ಹೆಚ್ಚಿಸಿ ಸಂಕಟಗಳನ್ನು ಎದುರಿಸುವ ಶಕ್ತಿ ನೀಡುವುದು ಸಹಸ್ರನಾಮ ಪಠಣ. ನಮ್ಮೊಳಗಿನ ನಕಾರಾತ್ಮಕ ಚಿಂತನೆಗಳನ್ನು ನಿವಾರಿಸಿ ಸಕಾರಾತ್ಮಕ ಮನೋಭಾವನೆ ಬೆಳೆಸುವ ಅತ್ಯಂತ ಪರಿಣಾಮಕಾರಿಯಾದ ನಾಮಸ್ಮರಣೆ ಇದಾಗಿದೆ.

ವಿದ್ಯಾರ್ಥಿಗಳು, ಉಪನ್ಯಾಸಕರು ಅಲ್ಲದೇವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಈ ವಿಷ್ಣು ಸಹಸ್ರನಾಮದ ಪಠಣವು ಅತ್ಯಂತ ಸಹಕಾರಿಯಾಗಿದೆ ಅವರಲ್ಲಿನ ಏಕಾಗ್ರತೆಯನ್ನು ಹೆಚ್ಚಿಸಿ ನಿರ್ಧಾರದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಇದರ ನಿಯಮಿತ ಪಠಣದಿಂದ ಕೆಲಸದಲ್ಲಿನ ನಿಷ್ಠೆ ಮತ್ತು ಯಶಸ್ಸಿಗೆ ದಾರಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಈ ವಿಷ್ಣು ಸಹಸ್ರನಾಮದಲ್ಲಿಯೇ #Vishnusahasranama ಬರುವ ಶ್ರೀ ರಾಮ ರಾಮೇತಿ ರಮೇ ರಾಮೇ ಮನೋರಮೇ l ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ll ಎನ್ನುವ ಈ ಶ್ಲೋಕವಂತೂ ಪರಮೇಶ್ವರನು ತನ್ನ ಸತಿಯಾದ ಪಾರ್ವತಿಗೆ ಹೇಳಿದುದಾರೂ ಇದರಲ್ಲಿಯೇ ಇರುವ ವಿಶೇಷ ಹೀಗಿದೆ ರಾಮ ಎನ್ನುವಲ್ಲಿ ಯ ರ ಲ ವ ಅಕ್ಷರ ಗಳಲ್ಲಿ ರ 2 ನೆಯದು, ಮ ಇದು ಪವರ್ಗ ದಲ್ಲಿ 5 ನೆಯದು ಇವನ್ನು ಗುಣಿಸಿದರೆ 10 ಮತ್ತೆ ರಾಮ ಎಂದಾಗ 10×10=100, ಮತ್ತೆ ರಾಮ ಎಂದರೆ 100×10=1000 ಹಾಗಾಗಿ ಇದು 3 ಬಾರಿ ರಾಮ ಎಂದರೆ ಸಾವಿರ ನಾಮಗಳಿಗೆ ಸಮನಾಗಿದೆ.

ಹೀಗೆ ಬಹು ಮಹತ್ವವನ್ನು ಹೊಂದಿರುವಂತಹ ಈ ವಿಷ್ಣು ಸಹಸ್ರನಾಮವೆಂಬುದು ಕೇವಲ ಸ್ತೋತ್ರವಲ್ಲ ಅದು ಸಂಪೂರ್ಣ ಜೀವನದ ಮಾರ್ಗದರ್ಶಕವಾಗಿದ್ದು, ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ, ಆತ್ಮಕ್ಕೆ ಶುದ್ದಿ ನೀಡುವಂತದ್ದಾಗಿದೆ. ಇಂತಹ ಅದ್ಭುತವಾದಂತಹ ಸಹಸ್ರನಾಮ ಪಠಣವನ್ನು ಪ್ರತಿಯೊಬ್ಬರೂ ಮಾಡುವಂತಾಗಿ ಸುಖ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವಂತಾಗಲೆಂದು ನಗರದ ಪ್ರಖ್ಯಾತ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಭಜನಾ ಪರಿಷತ್ ಶಿವಮೊಗ್ಗ ಹಾಗೂ ಗ್ಲೋಬಲ್ ವಿಷ್ಣು ಸಹಸ್ರನಾಮ ಸಂಘ ಫೆಡರೇಶನ್ ಶಿವಮೊಗ್ಗ ಶಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ನಿನ್ನೆ ರಾಮನವಮಿಯಿಂದ ಆರಂಭಿಸಿ ಅನೇಕ ಮಾತೆಯರು ಈ ಪಠಣವನ್ನು ಅಭ್ಯಾಸ ಮಾಡಲಾರಂಭಿಸಿದ್ದಾರೆ. ಆ ರೀತಿ ಅಭ್ಯಾಸ ಗೈದ ಮಂತ್ರವನ್ನು ಇದೇ ಮಾರ್ಚ್ 30ರಂದು ಬೆಳಗ್ಗೆ ಕುವೆಂಪು ರಂಗಮಂದಿರದಲ್ಲಿ ಎಲ್ಲರೂ ಸೇರಿ ಏಕಕಂಠದಲ್ಲಿ ಪಾರಾಯಣ ಮಾಡುವವರಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಹಾಗೂ ಬಾಳಗಾರು ಮಠದ ಕಿರಿಯ ಶ್ರಿಗಳಾದ ಶ್ರೀ ಶ್ರೀ ಅಕ್ಷೋಭ್ಯ ರಾಮಪ್ರಿಯತೀರ್ಥ ಶ್ರೀಪಾದರು ಇವರುಗಳ ಸಾನಿಧ್ಯವಿದ್ದು ಎಲ್ಲರನ್ನೂ ಅನುಗ್ರಹಿಸಲಿದ್ದಾರೆ. ಆದಕಾರಣ ಲೋಕ ಕಲ್ಯಾಣಾರ್ಥವಾದ ಈ ಕಾರ್ಯಕ್ರಮಕ್ಕೆ ನಗರದ ಎಲ್ಲಾ ಸಜ್ಜನ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಈಶ್ವರಪ್ಪನವರು ಹಾಗೂ ಕೋಶಾಧ್ಯಕ್ಷರಾದ ಶ್ರೀ ಕೆ. ಈ. ಕಾಂತೇಶ್ ಅವರು ಮನವಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial ArticleVishnusahasranamaವಿಶೇಷ ಲೇಖನವಿಷ್ಣು ಸಹಸ್ರನಾಮ
Share196Tweet123Send
Previous Post

ಶ್ರೀ ರಾಮನ ಚಿಂತನೆಗಳು ಸರ್ವರಿಗೂ ಮಾದರಿ: ಉಮ್ಮತ್ತೂರು ಇಂದು ಶೇಖರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಲೋಕಕಲ್ಯಾಣರ್ಥ ಮಾ.30ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ

ಏಕ ಕಂಠದಲ್ಲಿ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಸಮರ್ಪಣೆ

March 28, 2026
ಶ್ರೀ ರಾಮನ ಚಿಂತನೆಗಳು ಸರ್ವರಿಗೂ ಮಾದರಿ: ಉಮ್ಮತ್ತೂರು ಇಂದು ಶೇಖರ್

ಶ್ರೀ ರಾಮನ ಚಿಂತನೆಗಳು ಸರ್ವರಿಗೂ ಮಾದರಿ: ಉಮ್ಮತ್ತೂರು ಇಂದು ಶೇಖರ್

March 28, 2026
ಶ್ರೀ ರಾಮನವಮಿ | ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ

ಶ್ರೀ ರಾಮನವಮಿ | ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ

March 27, 2026
ಮಾ.30ರಂದು ರಾಷ್ಟ್ರೀಯ ಯೋಗೋತ್ಸವ ವಿಶೇಷ ಕಾರ್ಯಕ್ರಮ: ಡಾ. ರಾಘವೇಂದ್ರ ಪೈ

ಮಾ.30ರಂದು ರಾಷ್ಟ್ರೀಯ ಯೋಗೋತ್ಸವ ವಿಶೇಷ ಕಾರ್ಯಕ್ರಮ: ಡಾ. ರಾಘವೇಂದ್ರ ಪೈ

March 27, 2026
ಏ.4 | ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ

ಏ.4 | ವಾಸವಿ ಮಹಿಳಾ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ

March 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL