No Result
View All Result
Sagara Engulfed In The Ocean of Music
English Articles

Sagara Engulfed In The Ocean of Music

by ಕಲ್ಪ ನ್ಯೂಸ್
March 23, 2026
0

Kalpa Media House  |  Special Article by Rasikapriya  | An invigorating music festival held recently at Sagara, Shimoga Dist., took...

Read moreDetails
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
  • Advertise With Us
  • Grievances
  • About Us
  • Contact Us
Tuesday, March 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವೈಕುಂಠ ಏಕಾದಶಿಯ ಮಹತ್ವ ಹಾಗೂ ವ್ರತವನ್ನಾಚರಿಸುವ ರೀತಿ ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 12, 2022
in Special Articles
0
ವೈಕುಂಠ ಏಕಾದಶಿಯ ಮಹತ್ವ ಹಾಗೂ ವ್ರತವನ್ನಾಚರಿಸುವ ರೀತಿ ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | |

ಹಿಂದೂಗಳಲ್ಲಿ ಅತ್ಯಂತ ಮುಗ್ಧ ಸಾಮಾನ್ಯ ವ್ಯಕ್ತಿಯ ದೃಷ್ಟಿಯಲ್ಲಿ ಕೂಡಾ ‘ಏಕಾದಶಿ ಮತ್ತು ಉಪವಾಸ ಎರಡು ಒಂದೇ ಅರ್ಥವುಳ್ಳ ಶಬ್ದಗಳು’ ಆಧ್ಯಾತ್ಮಿಕ ಸಾಧನೆಯಲ್ಲಿ ಆದ ಪಾಪಗಳು, ಪ್ರಾಯಶ್ಚಿತ್ತಗಾಗಿಯೂ ಅಥವಾ ಮನೋವೃತ್ತಿಗಳ ನಿಯಂತ್ರಣಗಳ ಮೂಲಕ ಆತ್ಮ ಸಂಯಮದ ಪ್ರಾಪ್ತಿಗಾಗಿಯೂ ನಿರಶನ ವ್ರತ ಸಹಕಾರಿ ಎನ್ನುವುದು ಹಿಂದೂಗಳ ಶೃದ್ಧೆಯಾಗಿದೆ. ನಿರಾಹಾರದಿಂದ ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಮನದ ನಿಯಮನ ಸುಲಭವಾಗುತ್ತದೆ. ಅಂತರಾತ್ಮದ ಕಡೆ ಅಭಿಮುಖವಾಗಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ.

ಧರ್ಮಶಾಸ್ತ್ರಗಳು ಹೇಳುವಂತೆ ಅಶ್ವಮೇಧ ಸಹಸ್ರಾಣಿ, ವಾಜಪೇಯಾಯುತಾನಿಚ | ಏಕಾದಶೋ ಉಪವಾಸಸ್ಯ ಕಲಂ ನಾರಹಂತಿ ಷೋಡಶಿಃ|

ಅರ್ಥ : ಒಂದು ಏಕಾದಶಿ ಉಪವಾಸವೆಂಬುದು ಅಶ್ವಮೇಧಯಾಗ ಹಾಗೂ ವಾಜಪೇಯ ಯಾಗಕ್ಕೆ ಸಮಾನವಾದದ್ದು ಎಂದು ಧರ್ಮಶಾಸ್ತ್ರ ಹೇಳುತ್ತದೆ.

ಮಾನವನಿಂದ ಹನ್ನೊಂದು ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳಿಂದ ಆದ ಪಾಪವನ್ನು ಏಕಾದಶಿ ವ್ರತದಿಂದ ನಾಶಪಡಿಸಬಲ್ಲದು ಎಂದು ಶಾಸ್ತ್ರಗಳು ಪ್ರಮಾಣಿಕರಿಸಿದೆ.

ಏಕಾದಶೇಂದ್ರಿಯೇ ಪಾಪಂ ಯತ್‌ಕೃತಂ ಭವತಿ ಪ್ರಭೋ | ಏಕಾದಶಿ ಉಪವಾಸನ್ ತತ್ ಸರ್ವಂ ವಿಲೆಯಂ ವಜೇತ್ |

ಅರ್ಥ : ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪಕಾರ್ಯಗಳಿಗೆ, ಪ್ರಾಯಶ್ಚಿತ್ತ ಆಗಬೇಕಾದರೆ ‘ಏಕಾದಶಿ ವ್ರತ’ ಮಾಡಬೇಕು. ಅದರಲ್ಲೂ ವೈಕುಂಠ ಏಕಾದಶಿ ಸರ್ವಶ್ರೇಷ್ಠವಾಗಿದೆ. ಪ್ರತಿ ತಿಂಗಳಿಗೆ ಶುಕ್ಲಪಕ್ಷ, ಕೃಷ್ಣಪಕ್ಷದಲ್ಲಿ ಏಕಾದಶಿ ಬರುತ್ತದೆ. ಅಂದರೆ ವರ್ಷಕ್ಕೆ ೨೪ ಏಕಾದಶಿಯಾಗುತ್ತದೆ. (ಕಾಮದ ಏಕಾದಶಿ, ವರುಧಿನಿಏಕಾದಶಿ, ಮೋಹಿನಿ, ಅಪರ, ನಿರ್ಜಲ, ಜೇಷ್ಠಯೋಗಿನಿ, ಪ್ರಥಮ ಏಕಾದಶಿ, ಕಾಮ್ಯದಏಕಾದಶಿ, ಪುತ್ರದಏಕಾದಶಿ, ಇಂದಿರಾ, ಪಾಶಾಂಕುಶ, ರಮಾಏಕಾದಶಿ, ಪ್ರಭೋದಿನಿ ಏಕಾದಶಿ, ಉತ್ಪತ್ತಿ, ಮೋಕ್ಷ, ಸಫಲ, ವೈಕುಂಠ ಏಕಾದಶಿ, ಪಾಪ ವಿಮೋಚನ ಏಕಾದಶಿ, ಅಮಲಕ ಏಕಾದಶಿ ವಿಜಯ ಏಕಾದಶಿ, ಜಯ ಏಕಾದಶಿ.)

ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದ. ಆಗ ವಿಷ್ಣುವೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನೆ. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರೀತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು ಆಚರಿಸಿ ನಿನ್ನ ಸ್ಮರಣೆ ಮಾಡುತ್ತಾರೋ ಅವರಿಗೆಲ್ಲ ಮೋಕ್ಷವನ್ನು ಕರುಣಿಸು’ ಎಂದು ಬೇಡುತ್ತಾಳೆ.

ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ ಹಿಂದೆ ಒಬ್ಬ ರಕ್ಕಸಿಯ ಕಾಟದಿಂದ ಏಕಾದಶಿ ವ್ರತವನ್ನು ತ್ಯಜಿಸಿ, ಉಪವಾಸನಾದಿ ವ್ರತಗಳನ್ನು ಮಾಡದೇ ವ್ರತ ಭೃಷ್ಟನಾದಂತಹ ತನ್ನ ಭಕ್ತ ರುಕ್ಮಾಂಗಧನನ್ನು ವಿಷ್ಣುವು ಉದ್ದರಿಸಿ ಅಂದು ವೈಕುಂಠಕ್ಕೆ ಕರೆದೊಯ್ದ ದಿನ, ಅದು ಕೂಡ ‘ವೈಕುಂಠ ಏಕಾದಶಿ’ಯಾಗಿತ್ತು.

ವ್ರತವನ್ನಾಚರಿಸುವ ರೀತಿ:

ಈ ಏಕಾದಶಿಯನ್ನು ‘ಮುಕ್ಕೋಟಿ ಏಕಾದಶಿ’, ‘ಮೋಕ್ಷ ಏಕಾದಶಿ’ ಎಂದೂ ಕರೆಯುತ್ತಾರೆ. ಅಂದು ರಾಜಸ ತಾಮಸ ಪದಾರ್ಥಗಳನ್ನು ಸ್ವಿಕರಿಸದೇ ಅಶಕ್ತರು, ರೋಗಿಗಳು, ಹಾಲು, ಹಣ್ಣು, ಶಾಬು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಉಪಯೋಗಿಸಬಹುದು, ಅನ್ನ ಸ್ವೀಕಾರ ನಿಷಿದ್ಧ. ಮದ್ಯಪಾನ, ಮಾಂಸಾಹಾರ ಸೇವನೆ ನಿಷಿದ್ಧ, ದೇಹದ ಆತ್ಮದ ನಿಗ್ರಹಕ್ಕಾಗಿ ಆ ದಿನ ಉಪವಾಸವಿದ್ದರೆ ತುಂಬಾ ಉತ್ತಮ ಎಂಬುದು ನಮ್ಮ ಸಂಪ್ರದಾಯ ಹೇಳುತ್ತದೆ.

ಅಂದು ಭಗವಾನ ವಿಷ್ಣುವಿಗೆ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ, ಮನೆಯಲ್ಲಿ ಘಂಟಾನಾದ (ಮನೆಯ ದೇವರಿಗೆ ಪೂಜೆ) ಮತ್ತು ವೈಕುಂಠ ದ್ವಾರದ ಮೂಲಕ (ಉತ್ತರದ್ವಾರದ) ಭಗವಂತನ ದರ್ಶನ ಮಾಡಬೇಕು.

ಆ ದಿನ ನಾವು ಮಾಡುವ ಪದಾರ್ಥಗಳಿಗೆ ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೇಟ್, ಬೀಟರೋಟ್ ಬಳಸಬಾರದು. ಅನ್ನದಿಂದ ಮಾಡಿದ ಪದಾರ್ಥಗಳನ್ನು ಸ್ವೀಕರಿಸದೇ, ಅವಲಕ್ಕಿ, ಶಾಬು ಅಕ್ಕಿಯಿಂದ ಮಾಡಿದ ಪದಾರ್ಥ ಸ್ವೀಕರಿಸಬಹುದು.

ದಕ್ಷಿಣಭಾರತದ ತಿರುಪತಿ, ತಮಿಳುನಾಡಿನ ರಂಗನಾಥ ದೇವಾಲಯದಲ್ಲಿ ವೈಕುಂಠ ಏಕಾದಶಿ ದಿನದಿಂದ 21 ದಿನದ ವರೆಗೂ ವಿಶೇಷ ಪೂಜೆ ಇರುತ್ತದೆ. ಹಾಗೇಯೇ ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ‘ಗೀತೆಯ ಭೋಧನೆ’ ಮಾಡಿದ ದಿನವು ಇದೇ ಆಗಿದೆ. ಅದಕ್ಕಾಗಿ ವೈಕುಂಠ ಏಕಾದಶಿಯಂದು ‘ಗೀತಾಜಯಂತಿ”ಯನ್ನು ಆಚರಿಸುತ್ತಾರೆ. ಅಂದು ಗೀತಾ ಪಾರಾಯಣವನ್ನು ಮಾಡಲಾಗುತ್ತದೆ.

ಇಂತಹ ಒಂದು ವಿಶಿಷ್ಟ ದಿನವನ್ನು ಆಚರಿಸೋಣ ಹಾಗೂ ಉತ್ತರದ್ವಾರದಿಂದ ವಿಷ್ಣುವಿನ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾಗೋಣ, ಆಯುರಾರೋಗ್ಯ, ನೆಮ್ಮದಿಯ ಜೀವನವನ್ನು ಪಡೆಯೋಣ.

ಆಧಾರ : Sanatan.org/kannada

ಸಂಗ್ರಹ :
ಶ್ರೀ. ಪುಂಡಲೀಕ ಪೈ
ಸನಾತನ ಸಂಸ್ಥೆ
(ಸಂಪರ್ಕ : 9448500120)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaSpecial ArticleVaikuntha Ekadashiವೈಕುಂಠ ಏಕಾದಶಿ
Share197Tweet123Send
Previous Post

ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು: ಬಿ.ಕೆ. ಮೋಹನ್

Next Post

ಹೈದ್ರಾಬಾದನತ್ತ ಸಾಗಿದ ‘ರುದ್ರಾಕ್ಷಪುರ’ ಚಿತ್ರತಂಡ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಹೈದ್ರಾಬಾದನತ್ತ ಸಾಗಿದ ‘ರುದ್ರಾಕ್ಷಪುರ’ ಚಿತ್ರತಂಡ

ಹೈದ್ರಾಬಾದನತ್ತ ಸಾಗಿದ ‘ರುದ್ರಾಕ್ಷಪುರ’ ಚಿತ್ರತಂಡ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

March 24, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸ್ವಾಭಿಮಾನದ ಬದುಕಿಗೆ ವಿಶ್ವಕರ್ಮ ಯೋಜನೆ ಶಕ್ತಿ ತುಂಬಿದೆ: ಸಂಸದ ರಾಘವೇಂದ್ರ

March 24, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಗುಡ್ ನ್ಯೂಸ್ | ಹುಬ್ಬಳ್ಳಿ – ರಾಮೇಶ್ವರಂ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

March 24, 2026
ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಸುರೇಶ್ ಕುಮಾರ್

ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಸುರೇಶ್ ಕುಮಾರ್

March 24, 2026
ಘನತ್ಯಾಜ್ಯ ವಿಲೇವಾರಿ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲ: ಶಾಸಕ ಡಿ.ಎಸ್. ಅರುಣ್ ಟೀಕೆ

ಘನತ್ಯಾಜ್ಯ ವಿಲೇವಾರಿ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲ: ಶಾಸಕ ಡಿ.ಎಸ್. ಅರುಣ್ ಟೀಕೆ

March 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL