ಕಲ್ಪ ಮೀಡಿಯಾ ಹೌಸ್ | ಮೈಸೂರು |
ರೈಲ್ವೆಯ ರನ್ನಿಂಗ್ ಸಿಬ್ಬಂದಿ #RailwayRunningStaff ಮತ್ತು ಅವರ ಕುಟುಂಬಗಳ ನಡುವೆ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ #ChamundiClub ಚಾಮುಂಡಿ ಕ್ಲಬ್’ನಲ್ಲಿ ಆಯೋಜಿಸಲಾಗಿದ್ದ ವಿಚಾರಗೋಷ್ಠಿ ಯಶಸ್ವಿಯಾಗಿ ನಡೆಯಿತು.
ರೈಲುಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಸಂಚಾರಕ್ಕಾಗಿ ಕುಟುಂಬಗಳ ಬೆಂಬಲ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
67 ಮಂದಿ ಭಾಗವಹಿಸಿದ ಈ ವಿಚಾರಗೋಷ್ಠಿಯಲ್ಲಿ ರನ್ನಿಂಗ್ ಸಿಬ್ಬಂದಿಯ ವೈಶಿಷ್ಟ್ಯಪೂರ್ಣ ಕೆಲಸದ ಸವಾಲುಗಳು, ಕುಟುಂಬಗಳ ಕಲ್ಯಾಣ ಮತ್ತು ಪರಸ್ಪರ ಹೊಂದಾಣಿಕೆ ಕುರಿತು ಜಾಗೃತಿ ಮೂಡಿಸಲಾಯಿತು.
ಆರೋಗ್ಯಕರ ಆಹಾರ ಪದ್ದತಿ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಸಿಎಫ್’ಟಿಆರ್’ಐ ಹಿರಿಯ ವೈಜ್ಞಾನಿಕ ಅಧಿಕಾರಿ ಜ್ಯೋತಿಲಕ್ಷ್ಮೀ, ಸಮತೋಲನ ಆಹಾರ, ಸಮರ್ಪಕ ಹೈಡ್ರೇಶನ್, ಕರ್ತವ್ಯದ ಸಮಯದಲ್ಲಿ ಊಟ ಮಾಡುವುದು, ಜಾಗೃತಿಯನ್ನು ಕಾಯ್ದುಕೊಳ್ಳಲು ಮತ್ತು ದಣಿವು ಕಡಿಮೆ ಮಾಡಲು ಸಹಾಯಕವಾಗುವ ಆಹಾರ ಆಯ್ಕೆಗಳ ಬಗ್ಗೆ ವಿವರಿಸಿದರು.
ಅವರ ಉಪನ್ಯಾಸವು ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಆರೋಗ್ಯಕರ ಆಹಾರ ಆಯ್ಕೆ ಮಾಡುವಲ್ಲಿ ಮಾರ್ಗದರ್ಶನ ನೀಡಿತು.
ಮೈಸೂರು ರೈಲ್ವೆ ಆಸ್ಪತ್ರೆ ವಿಭಾಗೀಯ ವೈದ್ಯಾಧಿಕಾರಿ ಡಾ. ಪ್ರಶಾಂತ್ ಅವರು ಒತ್ತಡ ನಿರ್ವಹಣೆ ಬಗ್ಗೆ ತಿಳಿಸಿದರು.
ರನ್ನಿಂಗ್ ಸಿಬ್ಬಂದಿ ಎದುರಿಸುವ ಒತ್ತಡ, ಸರಳ ವಿಶ್ರಾಂತಿ ತಂತ್ರಗಳು, ವಿಶ್ರಾಂತಿಯ ಮಹತ್ವ, ಮತ್ತು ಕುಟುಂಬದ ಸದಸ್ಯರು ಹೇಗೆ ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡಬಹುದು ಎಂಬುದನ್ನು ಅವರು ವಿವರಿಸಿದರು.
ಮೈಸೂರು ಡಿಆರ್’ಎಂ ಮುದಿತ್ ಮಿತ್ತಲ್ ಅವರು ಮಾತನಾಡಿ, ರೈಲ್ವೆಯ ಕೇಂದ್ರೀಯ ಸಂದೇಶವಾದ ಮೊದಲು ಸುರಕ್ಷತೆ, ಮೊದಲು ಸುರಕ್ಷತೆ, ಮೊದಲು ಸುರಕ್ಷತೆ ಎಂದು ಪುನರುಚ್ಚರಿಸಿದರು.
ಸುರಕ್ಷತೆ ಎಂಬುದು ಸಿಬ್ಬಂದಿ ಮತ್ತು ಕುಟುಂಬಗಳ ಸಮಾನ ಹೊಣೆಗಾರಿಕೆ ಎಂದು ಅವರು ಹೇಳಿದರು. ರೈಲು ಸಂಚಾರದ ಸುಗಮ ನಿರ್ವಹಣೆಗೆ ರನ್ನಿಂಗ್ ಸಿಬ್ಬಂದಿಯ ಅಮೂಲ್ಯ ಸೇವೆಯನ್ನು ಮೆಚ್ಚಿ, ಅವರು ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿ, ಕುಂದುಕೊರತೆಯನ್ನು ಆಲಿಸಿ, ಪ್ರತಿಯೊಂದು ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿದರು.
ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಹಿರಿಯ ವೈದ್ಯಾಧಿಕಾರಿ, ಹಿರಿಯ ಸುರಕ್ಷತಾ ಅಧಿಕಾರಿ, ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿಯರ್/ಟ್ರಾಕ್ಷನ್, ಮೈಸೂರು, ಸೇರಿದಂತೆ ಹಲವು ಗಣ್ಯ ಅಧಿಕಾರಿಗಳು ಹಾಜರಿದ್ದರು. ಅವರು ಸಿಬ್ಬಂದಿ ಹಾಗೂ ಕುಟುಂಬಗಳೊಂದಿಗೆ ಸಂವಹನ ನಡೆಸಿ, ಪ್ರಶ್ನೆಗಳಿಗೆ ಉತ್ತರ ನೀಡಿ, ಸುರಕ್ಷತೆ, ಆರೋಗ್ಯ, ನಿರ್ವಹಣೆ ಮತ್ತು ಕಲ್ಯಾಣ ಸಂಬಂಧಿತ ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.
ಈ ವಿಚಾರಗೋಷ್ಠಿಯು ರನ್ನಿಂಗ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ನಡುವೆ ಪರಸ್ಪರ ಹೊಂದಾಣಿಕೆಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು, ಸುರಕ್ಷತೆ, ಕಲ್ಯಾಣ ಮತ್ತು ಪರಸ್ಪರ ಬೆಂಬಲದ ಮಹತ್ವವನ್ನು ಹೇಳಲಾಯಿತು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















