No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಆ ಕ್ಷಣ ನನ್ನ ಕಣ್ಣಂಚಲ್ಲಿ ನನಗೆ ತಿಳಿಯದೆ ಕಣ್ಣೀರು ಬಂದಿತ್ತು

ಆ ನೆನಪು ಒಂದು ಕ್ಷಣ ಮರುಕಳಿಸಿತ್ತು...!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 13, 2019
in Special Articles
0
ಆ ಕ್ಷಣ ನನ್ನ ಕಣ್ಣಂಚಲ್ಲಿ ನನಗೆ ತಿಳಿಯದೆ ಕಣ್ಣೀರು ಬಂದಿತ್ತು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೀವನದ ಪುಟಗಳನ್ನು ಹಿಂತಿರುಗಿಸಿ ನೋಡಿದರೆ ಮೊದಲು ನೆನಪಾಗುವುದೇ ಬಾಲ್ಯ. ಆ ಬಾಲ್ಯದ ನೆನಪು ಮತ್ತೆ ಮರುಕಳಿಸಿತ್ತು, ಧರಿಸಿದ ನಿನಗೆ ಪ್ರಾಣವಿಲ್ಲ! ಪ್ರಾಣವಿರುವ ನನಗೆ ಧರಿಸಲಿಕ್ಕಿಲ್ಲ. ಈ ಪದಗಳ ಸಾಲುಗಳು ಒಂದು ಕ್ಷಣ ನನ್ನ ಬಾಲ್ಯವನ್ನು ನೆನಪು ಮಾಡಿತ್ತು. ನಾನು ಇದ್ದ ಆ ದಿನಗಳು ಒಂದು ಕ್ಷಣ ಮರುಕಳಿಸಿತ್ತು. ಈ ಚಿತ್ರದಲ್ಲಿ ಇರುವ ಬಾಲಕ ಹೇಗೆ ಬಟ್ಟೆ ಧರಿಸಿರುವ ಆ ಗೂಂಬೆಯನ್ನು ನೋಡುತ್ತಾ ಇರುವನು ಹಾಗೇ ನಾನು ಕೊಡ ಆ ಬಾಲಕನಂತೆ ಬಟ್ಟೆ ಧರಿಸಿರುವ ಗೊಂಬೆಗಳನ್ನು ನೋಡುತ್ತಾ ನಿಂತಿರುವ ನೆನಪಿದೆ.

ನಾನು ಶಾಲೆಗೆ ಹೋಗುವಾಗ ಬರುವಾಗ ಅಂಗಡಿಗಳಲ್ಲಿ ಬಟ್ಟೆ ಧರಿಸಿರುವ ಗೊಂಬೆಯನ್ನು ಪ್ರತಿದಿನವು ನೋಡಿಕೊಂಡು ಬರುತ್ತಿದೆ. ಒಂದು ದಿನ ಶಾಲೆ ಮುಗಿಸಿಕೊಂಡು ಮನೆಗೆ ಬರುವಾಗ ಇವತ್ತು ನಾನು ಆ ಗೊಂಬೆ ಹತ್ತಿರ ಆ ಬಟ್ಟೆಯನ್ನು ನನಗೆ ಕೊಡು ಎಂದು ಕೇಳುತ್ತೇನೆ ಎಂದು ನನ್ನ ಗೆಳತಿಗೆ ಹೇಳುತ್ತಾ ಬರುತ್ತಿದ್ದೆ. ಇನ್ನೂ ಸ್ವಲ್ಪ ದೂರ ಅಂಗಡಿಯ ಬಳಿ ಹೋಗಬೇಕಿತ್ತು. ಅಷ್ಟರಲ್ಲಿ ಬಬ್ಬ ತಾಯಿ ತನ್ನ ಮಗುವಿಗೆ ಆ ಬಟ್ಟೆಯನ್ನು ಧರಿಸುತ್ತಿದ್ದಳು. ಆಗ ನನ್ನ ಕಣ್ಣಂಚಲ್ಲಿ ನನಗೆ ತಿಳಿಯದೆ ಕಣ್ಣೀರು ಬಂದಿದ್ದು ಈಗ ಮತ್ತೆ ನೆನಪಾಯಿತು.

ಒಂದೇ ನಿಮಿಷದಲ್ಲಿ ನನ್ನ ಮನಸ್ಸನ್ನು ಬಹಳ ನೋಯಿಸಿದ ಕ್ಷಣ ಅದು. ಸುಮ್ಮನೇ ಮನೆಗೆ ಅಳುತ್ತಾ ಬಂದೆ. ನಾನು ಮುಂದೆ ಈ ರೀತಿಯ ಬಟ್ಟೆಯನ್ನು ಧರಿಸಬೇಕು. ನನಗೆ ಈಗಿರುವ ಪರಿಸ್ಥಿತಿಯಲ್ಲಿ ಆಗದೆ ಇರಬಹುದು, ಮುಂದೊಂದಿನ ಪರಿಸ್ಥಿತಿ ಹೀಗೆ ಇರೋಲ್ಲಾ ಎಂದು ಯೋಚಿಸಿದ್ದೆ.

ಈಗಲೂ ನನಗೆ ಒಂದು ನೀತಿ ಕಥೆ ನೆನಪಿಗೆ ಬರುತ್ತೆ. ಕಾಗೆಯೊಂದು ಜೀವನದಲ್ಲಿ ಸಂತೋಷವಾಗಿತ್ತು. ತಾನು ತನ್ನ ಹಾರಾಟ… ಎಲ್ಲೆಡೆ ಹಾರಾಡಿ ಆಹಾರ ಹುಡುಕಿಕೊಂಡು ಸುಖವಾಗಿತ್ತು. ಒಮ್ಮೆ ಆ ಕಾಗೆ ಒಂದು ಹಂಸವನ್ನು ನೋಡಿತು, ನಾನು ಕಪ್ಪಗಿದ್ದೇನೆ, ಈ ಹಂಸ ಎಷ್ಟು ಬೆಳ್ಳಗಿದೆ. ಪ್ರಪಂಚದಲ್ಲಿ ಹೆಚ್ಚು ಸಂತೋಷವಾಗಿರುವ ಪಕ್ಷಿ ಇದೆ ಇರಬೇಕು ಅಂತ ಭಾವಿಸಿ ಅದನ್ನು ಮಾತಾಡಿಸಿತು.

ಆಗ ಹಂಸ ಹೇಳಿತು; ಗಿಳಿಯನ್ನು ನೋಡುವ ಮುಂಚೆ ನಾನು ಹಾಗೇ ಅಂದುಕೊಂಡಿದ್ದೆ, ಆದ್ರೆ ಗಿಳಿಗೆ ಎರಡೆರೆಡು ಬಣ್ಣವಿದೆ. ಅದು ಜೀವನದಲ್ಲಿ ಅತ್ಯಂತ ಸಂತೋಷವಾಗಿರುವ ಪಕ್ಷಿ ಕಾಗೆ ಅಲ್ಲಿಂದ ಗಿಳಿಯ ಬಳಿ ಹೋಗಿ ಮಾತಾಡಿಸಿತು. ಆಗ ಗಿಳಿ ಹೇಳಿತು; ನಾನೇ ಸಂತೋಷವಾಗಿರೋ ಪಕ್ಷಿ ಅಂತ ಭಾವಿಸಿದ್ದೆ, ಆದ್ರೆ ನವಿಲನ್ನು ನೋಡಿದ ಮೇಲೆ ನನಗನಿಸಿದ್ದು ನವಿಲೇ ಅತ್ಯಂತ ಸಂತೋಷವಾಗಿರೋ ಪಕ್ಷಿ, ಅದಕ್ಕೆ ಮೈ ತುಂಬಾ ಬೇರೆ ಬೇರೆ ಬಣ್ಣವಿದೆ. ಅದು ತುಂಬಾ ಸುಂದರವಾಗಿದೆ ಅಂತ ಹೇಳಿತು.

ಅಲ್ಲಿಂದ ಕಾಗೆಯು ಮೃಗಾಲಯದಲ್ಲಿದ್ದ ನವಿಲಿನ ಬಳಿ ಹೋಗಿ ಮಾತಾಡಿಸಿತು. ‘‘ನೀನಿಷ್ಟು ಸುಂದರವಾಗಿದ್ದೀಯ, ಪ್ರಪಂಚದಲ್ಲಿ ಅತ್ಯಂತ ಸಂತೋಷವಾಗಿರೋ ಪಕ್ಷಿ ನೀನೇ ಅಲ್ವಾ’’ ಅಂತ ಕೇಳಿತು.

ಆಗ ನವಿಲು, ನನ್ನ ಸೌಂದರ್ಯವೇ ನನಗೆ ಶತೃ. ಅದಕ್ಕೇ ನನ್ನನ್ನು ಈ ಮೃಗಾಲಯದಲ್ಲಿ ಕೂಡಿ ಹಾಕಿದ್ದಾರೆ. ನನ್ನ ಪ್ರಕಾರ ಅತ್ಯಂತ ಸಂತೋಷವಾಗಿರೋ ಪಕ್ಷಿಯೆಂದರೆ ಕಾಗೆ, ಅಂದರೆ ನೀನು ಈ ಮೃಗಾಲಯದಲ್ಲಿ ಕಾಗೆ ಬಿಟ್ಟು ಬೇರೆಲ್ಲ ಪಕ್ಷಿಗಳನ್ನು ನನ್ನಂತೆ ಬಂಧಿಯಾಗಿದ್ದಾರೆ. ನಾನು ಸಹ ಕಾಗೆ ಆಗಿದ್ದಿದ್ರೆ ನಿನ್ನ ಹಾಗೆ ಸ್ವಚ್ಛಂದವಾಗಿ ಹಾರಾಡಿಕೊಂಡು ಸಂತೋಷವಾಗಿರಬಹುದಿತ್ತು…!

ಆಗ ನನಗೆ ಬಡತನ ಇತ್ತು, ಬಟ್ಟೆಯನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿರಲ್ಲಿಲ್ಲ. ಆಗ ನನಗೆ ಯಾಕೆ ನಾನು ಶ್ರೀಮಂತರ ಮನೆಯಲ್ಲಿ ಹುಟ್ಟಬಾರದಿತ್ತಾ..? ಅಂತ ಆ ಕ್ಷಣ ಅನ್ನಿಸಿತ್ತು. ಆಗ ನಾನು ಕಾಗೆಯಂತೆ ಯೋಚಿಸಿದೆ. ಅಂದರೆ ಈಗ ಸಮಯ ಬದಲಾಗಿದೆ. ನಾವು ಯಾವಾಗಲೂ ಇನ್ನೊಬ್ಬರನ್ನು ನಮಗೆ ಹೋಲಿಸಿಕೊಂಡು ಅವರಷ್ಟು ನಾವು ಸಂತೋಷವಾಗಿಲ್ಲ ಅಂತ ಭಾವಿಸ್ತೇವೆ. ಆದ್ರೆ ಎಲ್ಲರಿಗೂ ಅವರದ್ದೇ ಆದ ನೋವುಗಳಿರುತ್ತೆ. ಈ ಪ್ರಪಂಚದಲ್ಲಿ ನಮಗಿಂತ ಕಮ್ಮಿ ಇರುವವರು ಇದ್ದೇ ಇರ್ತಾರೆ. ಯಾವಾಗಲೂ ನಮಗಿರುವುದರಲ್ಲೇ ನಾವು ಸಂತೋಷವಾಗಿರಬೇಕು. ಆಗ ಮಾತ್ರ ಯಾವುದೇ ನಿರೀಕ್ಷೆಯಿಲ್ಲದೆ ನೆಮ್ಮದಿಯಿಂದ ಇರಬಹುದು.

ಪ್ರತಿ ಹೆಜ್ಜೆಯಲ್ಲೂ ಒಂದು ತಿರುವು. ಆ ತಿರುವಿನಲ್ಲಿ ಅದರದೇ ಆದ ನೋವು-ನಲಿವು. ಜೀವನ ಅಂದ್ರೆ ಇಷ್ಟೇನಾ? ಬಯಸಿದೆಲ್ಲ ಸಿಗಲ್ಲ, ಸಿಕ್ಕಿದರೂ ಆ ವಸ್ತುವಿಗೆ ಬೆಲೆ ಇರೋಲ್ಲ. ನಾವು ಬದುಕಿನಿಂದ ನೂರು ಪಾಠ ಕಲಿತೀವಿ. ಅಂದರೆ ಅದೇ ಬದುಕು ನಮಗೆ ಸಾವಿರ ಪಾಠ ಹೇಳಿಕೊಡುತ್ತೆ.

ನನ್ನ ಅಪ್ಪ ಯಾವಾಗಲೂ ನನಗೆ ಒಂದು ಮಾತು ಹೇಳ್ತಿದ್ರು. ಬದುಕಿನಲ್ಲಿ ಏನೇ ಘಟಿಸಲಿ ನಿರೀಕ್ಷೆ ಮತ್ತು ವಿಶ್ವಾಸ ಎಂಬ ಎರಡು ಹಗ್ಗಗಳನ್ನು ಮಾತ್ರ ಬಿಗಿಯಾಗಿ ಹಿಡಿದುಕೊಳ್ಳಿ. ಪ್ರತಿಯೊಂದು ನೋವು ಒಂದು ಪಾಠವನ್ನು ಕಲಿಸುತ್ತದೆ ಮತ್ತು ಪ್ರತಿಯೊಂದು ಪಾಠ ಮನುಷ್ಯನನ್ನು ಬದಲಿಸುತ್ತದೆ. ನಮ್ಮೆಲ್ಲರ ಬಾಲ್ಯ ಜೀವನದಲ್ಲಿ ಈ ರೀತಿಯ ಆಸೆ, ಯೋಚನೆಗಳು ಬಂದು ಹೋಗುವುದು ಸಹಜವೇ. ಇದರಂತೆ ನನ್ನ ಬಾಲ್ಯದ ನೆನಪು ಮತ್ತು ತುಂಟಾಟದ ಕ್ಷಣಗಳು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪುಗಳು ಮರುಕಳಿಸುತ್ತಾ ಇರುತ್ತವೆ.

ಪ್ರತಿಯೊಬ್ಬರಿಗೂ ಸಹ ತನ್ನ ಹಣೆಬರಹವನ್ನು ಮುಂದಿನ ದಿನಗಳಲ್ಲಿ ಬದಲಾಯಿಸಿಕೊಂಡು ತನ್ನ ಅವಶ್ಯಕತೆಗೆ ತಕ್ಕಂತಹ ವಸ್ತುಗಳನ್ನು ದೊರಕಿಸಿಕೊಳ್ಳವ ಶಕ್ತಿ ಬಂದೇ ಬರುತ್ತದೆ. ಇದಕ್ಕೆ ಉತ್ತಮವಾದ ಉದಾಹರಣೆ ಎಂದರೆ ಸಮಯ. ಯಾಕೆಂದರೆ ನಾನು ಇದ್ದ ಆ ಸಮಯದಲ್ಲಿ ಆ ಬಟ್ಟೆಯನ್ನು ಧರಿಸುವುದಕ್ಕೆ ಆಗದೇ ಇದದ್ದು ನಿಜ. ಆದರೆ ಅದೇ ಸಮಯ ಈಗ ಬದಲಾಗಿದೆ. ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಮುಂದೆ ತಮಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳುವುದಕ್ಕೆ ಸಮಯ ಒದಗಿ ಬಂದೇ ಬರುತ್ತದೆ.

ಸಮಾಜದಲ್ಲಿ ಅದೆಷ್ಟೋ ಜನರು ಭವಿಷ್ಯದ ಬದುಕು ಸುಂದರವಾಗಿಸಲು ಮತ್ತು ಕಂಡ ಕನಸು ಈಡೇರಿಸಿಕೊಳ್ಳಲು ಹಗಲು-ರಾತ್ರಿ ಎನ್ನದೇ ಪರಿಶ್ರಮ ಪಡುತ್ತಿರುತ್ತಾರೆ. ಸಾಧನೆಯ ಗುರಿ ತಲುಪಲು ನಿರಂತರ ಪ್ರಯತ್ನದಲ್ಲಿರುತ್ತಾರೆ. ಆದರೆ ಕೆಲವೂಮ್ಮೆ ಅದೃಷ್ಟ ಕೈ ಕೊಡುತ್ತದೆ. ಈ ಅದೃಷ್ಟ ಎಂಬುದು ಹೀಗೆಯೇ ಯಾರ ಜೀವನದಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಶ್ರೀಮಂತ ಬಡವನಾಗಬಹುದು, ಬಡವ ಶ್ರೀಮಂತನಾಗಬಹುದು.

ಆದರೂ ಅದೃಷ್ಟಕ್ಕೆ ಕಾಯದೇ ನಮ್ಮ ಶ್ರಮದಿಂದ ಆ ಕಾಲವನ್ನು ನಾವೇ ಬೇಕಾದ್ದನ್ನು ಸೃಷ್ಟಿಸಿಕೊಳ್ಳಬೇಕು. ಆದ್ದರಿಂದ ಸಮಾಜದಲ್ಲಿ ಯಾರನ್ನೂ ಆಸ್ತಿ ಮತ್ತು ಅಂತಸ್ತನ್ನು ನೋಡಿ ಅಳೆಯಬಾರದು ಹಾಗೂ ಯಾರನ್ನೂ ಹೀಯಾಳಿಸಿ ಮಾತನಾಡಬಾರದು. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ಥಾನಮಾನವಿರುತ್ತದೆ. ಏನಾದರೂ ಆಗಲಿ ನನ್ನ ಬಾಲ್ಯ ನೆನಪುಗಳು ನನ್ನಿಂದ ಮರೆಯಾಗುವುದಕ್ಕೆ ಸಾಧ್ಯವಿಲ್ಲ, ಎಲ್ಲಾರಿಗೂ ಅವರ ಅವರ ಬಾಲ್ಯದ ನೆನಪುಗಳು ಒಂದೊಂದು ಅನುಭವನ್ನು ನೀಡುತ್ತದೆ ಎಂದಿಗೂ ಬಾಲ್ಯದ ನೆನಪುಗಳು ಮಾಸುವುದಿಲ್ಲ.

Get In Touch With Us info@kalpa.news Whatsapp: 9481252093

Tags: ChildhoodClothDreamKannada ArticlePeacockPovertyRichSandhya SihimogeSpecial ArticleZooಕನಸುನವಿಲುಬಡತನಬಾಲ್ಯಮೃಗಾಲಯಶ್ರೀಮಂತ
Share213Tweet123Send
Previous Post

ಕ್ರಿಸ್ಮಸ್ ಪ್ಲಮ್ ಕೇಕ್ ಮಿಕ್ಸಿಂಗ್’ನಲ್ಲಿ ಪಾಲ್ಗೊಂಡು ಸಂಭ್ರಮಿಸಿದ ನಟಿ ರಾಗಿಣಿ ದ್ವಿವೇದಿ

Next Post

ಇದು ನೀವು ಈವರೆಗೂ ತಿಳಿದಿರದ ಎಫ್’ಎಂ ರೇಡಿಯೋ ಲೈಫ್’ನ ಒಂದಿಷ್ಟು ವಿಚಾರಗಳು…

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಇದು ನೀವು ಈವರೆಗೂ ತಿಳಿದಿರದ ಎಫ್’ಎಂ ರೇಡಿಯೋ ಲೈಫ್’ನ ಒಂದಿಷ್ಟು ವಿಚಾರಗಳು…

ಇದು ನೀವು ಈವರೆಗೂ ತಿಳಿದಿರದ ಎಫ್’ಎಂ ರೇಡಿಯೋ ಲೈಫ್’ನ ಒಂದಿಷ್ಟು ವಿಚಾರಗಳು...

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL