ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾಜಿ ಸೈನಿಕರ ಸಂಘ ಜನಮೆಚ್ಚುಗೆಯ ಹಾಗೂ ಶ್ಲಾಘನೆಯ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ನಿರಂತರವಾಗಿ ನಡೆಸುತ್ತಾ ಬಂದಿದ್ದು ಇಂದು ಭೂಸೇನಾ ದಿನಾಚರಣೆ ಅಂಗವಾಗಿ 2021ರ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ ಸಮಾರಂಭದ ಜೊತೆ ಸ್ವಚ್ಛತೆ ಹಾಗೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ.
ಕಳೆದ ಆರು ತಿಂಗಳಿನಿಂದ ನಿತ್ಯ ಸಿಲ್ವರ್ ಜ್ಯೂಬ್ಲಿ ಕ್ರೀಡಾಂಗಣದಲ್ಲಿ ಭದ್ರಾವತಿ ಸರಹದ್ದಿನ ಯುವಕರಿಗೆ ಸೈನ್ಯ, ಪೊಲೀಸ್, ಅರಣ್ಯ ರಕ್ಷಣಾ ಇಲಾಖೆಯ ಹುದ್ದೆಗಳಿಗೆ ನೇಮಕವಾಗಲು ಅಗತ್ಯವಿರುವ ದೈಹಿಕ ಸಾಮರ್ಥ್ಯ ತರಬೇತಿ ನೀಡುತ್ತಿದ್ದ ಸಂಸ್ಥೆ ಇಂದು ಅತ್ಯಂತ ವಿಶೇಷವಾಗಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post