No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Editorial

ರಾಷ್ಟ್ರವೇ ರಾಜ್ಯದತ್ತ ತಾತ್ಸಾರವಾಗಿ ನೋಡುವಂತಾದ ಹೀನ ರಾಜಕೀಯ ಸ್ಥಿತಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 18, 2019
in Editorial
0
ರಾಷ್ಟ್ರವೇ ರಾಜ್ಯದತ್ತ ತಾತ್ಸಾರವಾಗಿ ನೋಡುವಂತಾದ ಹೀನ ರಾಜಕೀಯ ಸ್ಥಿತಿ
Share on FacebookShare on TwitterShare on WhatsApp

ಯಾರಿಗಾದರೂ ಅನಿಸುತ್ತದೆ ಪ್ರಸ್ತುತ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿದೆ. ಯಾವುದೇ ಪುಢಾರಿಕೆಯ ಲಕ್ಷಣಗಳಿಲ್ಲದ, ಸಾತ್ವಿಕ ಮನೋಭಾವದ ಕುಮಾರಸ್ವಾಮಿ ಅವರಿಗೆ ಮೈತ್ರಿ ಬಳಗದ ಶಾಸಕರ ಹಠಾತ್ ರಾಜಿನಾಮೆ ಪ್ರಸಂಗ ಎದುರಾಗಿದೆ.

ಮೂಲತಃ ಮೈತ್ರಿಯಾದದ್ದೇ ಅಧಿಕಾರ ಉಳಿಸಿಕೊಳ್ಳುವ ಕಾಂಗ್ರೆಸ್ಸಿನ ಹೆಣಗಾಟದಲ್ಲಿ. ಸರಿಯಾದ ಆಡಳಿತ ನೀಡಿದ್ದರೆ ಕಾಂಗ್ರೆಸ್’ಗೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಟಾಗುತ್ತಿರಲಿಲ್ಲ. ಯಾಕೆಂದರೆ ಸಾಂಪ್ರದಾಯಿಕ ಕ್ಷೇತ್ರವನ್ನು ಮಗನಿಗೆ ಬಿಟ್ಟು ಸಿದ್ಧರಾಮಯ್ಯನವರು ಜೆಡಿಎಸ್ ಎದುರು ಸೋಲೊಪ್ಪಕೊಳ್ಳಬೇಕಾಯಿತು. ಆದರೆ ಆತ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗಿಂತ ಅದೃಷ್ಟವಂತ ರಾಜಕಾರಣಿ. ಏಕೆಂದರೆ ಹಿರಿಯ ನಾಯಕರುಗಳಾರೂ ಅವರ ಸಿಎಂ ಅವಧಿಯಲ್ಲಿ ಅದೇ ಗಾದಿಗೆ ತಲೆ ತೂರಿಸಲಿಲ್ಲ. ಇದೇ ಅವರಿಗೆ ಭಾಗ್ಯ ಖುಲಾಯಿಸುವಂತೆ ಮಾಡಿತು. ಯೋಜನೆಗಳು ಮೇಲ್ನೋಟಕ್ಕೆ ಜನಪ್ರಿಯ. ಆದರೆ ಜಾರಿಗೆ ಬರುವಲ್ಲಿ ನಡುವೆಯೇ ದುರುಪಯೋಗವಾಗಿ ಸಫಲವಾಗಲಿಲ್ಲ. ಭಾಗ್ಯಗಳ ಧಾರೆಯನ್ನೇ ಹರಿಸಿದರೂ ಮತಗಳಾಗಿ ಪರಿವರ್ತಿಸಲಾಗಲಿಲ್ಲ.

ಅದೃಷ್ಟ ಅವರಿಗೆ ಕೈ ಕೊಡಲಿಲ್ಲ ಬದಾಮಿಯ ಜನತೆ ಕೈ ಹಿಡಿದರು. ಈ ಅದೃಷ್ಟವೇ ಅವರನ್ನು ದೆಹಲಿಯ ಕಾಂಗ್ರೆಸ್ ಮಂದಿ ಮೆಚ್ಚುವಂತೆ ಮಾಡಿತು.

ನಿಜವಾಗಿ ಹಿರಿಯ ನಾಯಕ ಖರ್ಗೆ ಅವರು ಇವರ ಅವಧಿಯಲ್ಲೇ ಸಿಎಂ ಆಗಬಹುದಿತ್ತು. ಪಕ್ಷ ಈ ಪ್ರಯೋಗ ಮಾಡಿದ್ದಲ್ಲಿ ಹಿಂದುಳಿದ ವರ್ಗದವರ ಬೆಂಬಲ ಹೆಚ್ಚಾಗುತ್ತಿತ್ತು. ಈ ಐದೂ ವರ್ಷಗಳಲ್ಲಿ ಮೋದಿ ಅಲೆಯ ಹಿನ್ನೆಲೆಯನ್ನ ಸೂಕ್ಷ್ಮವಾಗಿ ಅಭ್ಯಸಿಸಿದ್ದರೆ ಜಾಗೃತರಾಗಿ ಚುನಾವಣೆಯನ್ನು ಎದುರಿಸಬಹುದಿತ್ತು. ಏಕೆಂದರೆ ಬಹಳಷ್ಟು ಬಿಜೆಪಿ ಅಭ್ಯರ್ಥಿಗಳು ಹೊಸಮುಖಗಳೇ ಆಗಿದ್ದು ಮೋದಿ ಬಲದಿಂದ ಆಯ್ಕೆಯಾಗುವ ಸನ್ನಿವೇಶ ಬಂತು.

ಕಾಂಗ್ರೆಸ್ ನ ಬಹಳಷ್ಟು ಮಂದಿ ಅಧಿಕಾರದ ಅಮಲಲ್ಲೇ ತೇಲುವ ಸ್ವಭಾವ ತೋರಿಸಿಕೊಂಡಿದ್ದಾರೆ. ಇದು ಬಿಜೆಪಿಗೆ ವರವಾಯಿತು. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿದಾಗ ಒಳಜಗಳದ ಪರಿಣಾಮವಾಗಿ ಮತದಾರ ಅವರಿಗೆ ಸಂಪೂರ್ಣ ಬಹುಮತ ನೀಡಲಿಲ್ಲ. ಅದರ ಫಲವಾಗಿ ಕಾಂಗ್ರೆಸ್ ನವರು ಹಿರಿಯ ದೇವೇಗೌಡರ ಮನೆಬಾಗಿಲು ತಟ್ಟಿದರು. ಇಲ್ಲಿ ಕಾಂಗ್ರೆಸ್ ಸಮಯ ಸಾಧಕತನ ತೋರಿಸಿತೆನ್ನಬಹುದು.

ಅಲ್ಪ ಸ್ಥಾನಗಳಿಗೆ ಧುಮುಧುಮು ಬುಸುಗುಟ್ಟುತ್ತಿದ್ದ ಜೆಡಿಎಸ್’ಗೆ ಅದೃಷ್ಟದ ಬಾಗಿಲು ತೆರೆದಂತಾಯಿತು. ಸಿಎಂ ಆಗುವ ಸುವರ್ಣಾವಕಾಶ ಕುಮಾರಣ್ಣನವರಿಗೆ ಸಿಕ್ಕಿತು. ಯಾವತ್ತೂ ಜೆಡಿಎಸ್ ಬಿಜೆಪಿ ಅಥವಾ ಕಾಂಗ್ರೆಸ್’ನಂತೆ ರಾಜ್ಯವ್ಯಾಪಿ ಬೇರುಗಳಿಲ್ಲ. ಆದರೆ ಈ ಸಿಎಂ ಗಾದಿ ಸಿಕ್ಕಾಗ ಹಿಂದುಮುಂದೂ ನೋಡುವ ಚವಕಾಶಿಗೆ ಸಮಯವಿರಲಿಲ್ಲ.

ಹಿಂದೆ ಎರಡು ಬಾರಿ ಸಮ್ಮಿಶ್ರ ಸರ್ಕಾರ ನಡೆಸಿದ ಅನುಭವ ಕುಮಾರಣ್ಣನವರಿಗಿತ್ತು. ಆದರೆ ಅದರ ಅನುಭವದ ಮೇಲೆ ಈ ಬಾರಿಯ ರಾಜಕೀಯ ಪರಿಸ್ಥಿತಿ ನೋಡಬಹುದಿತ್ತು. ರಾಷ್ಟ್ರಮಟ್ಟದಲ್ಲೂ ನೆಲಕಚ್ಚಿದ ಕಾಂಗ್ರೆಸ್ ಪಕ್ಷದ ಸದ್ಯದ ಇಮೇಜನ್ನು ನೋಡುವ ಜರೂರು ಮಾಡಬೇಕಿತ್ತು. ಹಾಗೆ ಮಾಡಲಿಲ್ಲ. ಹೋಗಲಿ ಹಿರಿಯ ಗೌಡರಿಗೂ ಪ್ರಧಾನಿಗಳಾದಾಗ ಮಿಶ್ರಪಕ್ಷಗಳು ಹೇಗೆ ಬೆನ್ನಲ್ಲಿ ಇರಿದವು ಎಂಬ ನೋವೂ ಇತ್ತು. ಇವೆಲ್ಲದರ ವಿಸ್ಮೃತಿ ಈಗ ಕಾಡುತ್ತಿದೆ. ಏಕೆಂದರೆ ಈಗಿನ ಮೈತ್ರಿಯ ಪಕ್ಷಗಳಲ್ಲಿ ಹೊಂದಾಣಿಕೆ, ಸಮನ್ವಯತೆ ಅಗಾಧ ಕೊರತೆಯಿದೆ ಎಂಬುದನ್ನು ಹಿರಿಯ ನಾಯಕ ವಿಶ್ವನಾಥ್ ಅವರೊಬ್ಬರೇ ಸಂಕೇತಿಸುತ್ತಾರೆ.

ಈಗಿನ ಪರಿಸ್ಥಿತಿಯನ್ನು ಕರುಣಾಜನಕ ಎನ್ನದೇ ವಿಧಿಯಿಲ್ಲ. ಏಕೆಂದರೆ ಸಂಖ್ಯಾಬಲದ ದೃಷ್ಠಿಯಿಂದ ಬಹುಮತ ನಿರ್ಧರಿಸುವ ಸರಳ ಲೆಕ್ಕಾಚಾರ ಪಾರದರ್ಶವಾಗಿ ಕಾಣುತ್ತಿದೆ. ಆದರೂ ನ್ಯಾಯಾಂಗದ ಅಂಗಳದಲ್ಲಿ ಈ ಶಾಸಕರ ರಾಜೀನಾಮೆ ಪ್ರಸಂಗ ಜಾರಿ ಬಿದ್ದಿದೆ. ತೀರ್ಪಿಗೆ ಕಾಯಲೇಬೇಕು.

ಈ ನಡುವೆ ಹಿರಿಯ ರಾಜಕಾರಣಿ ಯಡ್ಯೂರಪ್ಪನವರಿಗೆ ಕೈಗೆ ಬಂದದ್ದು ಬಾಯಿಗೆ ಬರುತ್ತಿಲ್ಲ ಎನ್ನುವ ವಿಲಿವಿಲಿ ಒದ್ದಾಟ. ಆದರೂ ಸದ್ಯ ಅವರು ಮುಂಚಿನಂತೆ ಮಾತಿಗೆ ಮಿತಿ ಹಾಕಿದ್ದಾರೆ. ಆದರೂ ನಡುವೆ ಸಕಾರಣ ಕೊಟ್ಟು ಸ್ಪೀಕರ್ ಅವರು ನಡಕೊಳ್ಳುತ್ತಿರುವ ರೀತಿಯನ್ನು ಕೆಲವು ರಾಜಕೀಯ ಪಕ್ಷಗಳು, ಮಾಧ್ಯಮಗಳು ವಿಳಂಬ ನಡೆ ಎಂದು ಟೀಕಿಸುತ್ತಿವೆ.

ಇನ್ನೂ ಒಂದು ತಿವಿದಂತೆ ಬಂದ ಸಿಎಂ ಅವರು ತಾವು ವಿಶ್ವಾಸಮತ ಕೋರಲು ಸಿದ್ಧನಿರುವೆ ಎಂಬ ಹೇಳಿಕೆ ಸಡನ್ನಾಗಿ ಬಿಜೆಪಿಯನ್ನೂ ಕೊಂಚ ದಂಗು ಬಡಿಸಿದೆ. ಅಲ್ಲದೇ ತಮ್ಮ ಪಕ್ಷದ ಶಾಸಕರನ್ನೇ ಒಂದೆಡೆ ಹಿಡಿದಿಟ್ಟುಕೊಳ್ಳುವ ಜೋಪಾನದ ಕೆಲಸಮಾಡುವಂತೆ ಪ್ರೇರೇಪಿಸಿದೆ. ನೂರೈದು ಶಾಸಕರಲ್ಲಿ ಯಾರು ಎಲ್ಲಿ ಕೈಕೊಡುವರೋ ಎಂಬ ಆತಂಕಕ್ಕೀಡುಮಾಡಿದೆ.

ಒಟ್ಟಿನಲ್ಲಿ ಮುಂಬೈ ಶಾಸಕರ ಆವಾಸ, ಡಿಕೆಶಿಯವರ ಅಸಫಲ ರಾಯಭಾರ, ಮಾಜಿ ಸಿಎಂ ಅವರ ತೊಳಲಾಟ ಇವೆಲ್ಲ ರಾಜ್ಯದ ರಾಜಕೀಯವನ್ನು ದೇಶ ನೋಡುವಂತೆ ಮಾಡಿದೆ.. ನೋಡೋಣ.

ಸಂಪಾದಕೀಯ: ಡಾ.ಸುಧೀಂದ್ರ

Tags: B S yeddyurappaBJPcongressHD KumaraswamyJDSKannada NewsKarnataka politicsSiddharamaiahಕಾಂಗ್ರೆಸ್ಜೆಡಿಎಸ್ಬಿಜೆಪಿ
Share196Tweet123Send
Previous Post

ವಿಐಎಸ್’ಎಲ್ ಉಳಿಸಲು ರಾಘವೇಂದ್ರ ರಾಜೀನಾಮೆ ನೀಡಿ ಕೇಂದ್ರವನ್ನು ಒತ್ತಾಯಿಸಲಿ

Next Post

ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಇಲ್ಲಿವೆ ಹಲವು ಪರಿಣಾಮಕಾರಿ ಮಾರ್ಗಗಳು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಇಲ್ಲಿವೆ ಹಲವು ಪರಿಣಾಮಕಾರಿ ಮಾರ್ಗಗಳು

ಪ್ಲಾಸ್ಟಿಕ್ ಮುಕ್ತ ಅರಣ್ಯಕ್ಕೆ ಇಲ್ಲಿವೆ ಹಲವು ಪರಿಣಾಮಕಾರಿ ಮಾರ್ಗಗಳು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

ಜಾಗತಿಕ ತಾಪಮಾನ ನಿಯಂತ್ರಣ, ಭೂಮಿ ಹಸಿರು ಸಮತೋಲನಕ್ಕೆ ಆಧುನಿಕ ತಂತ್ರಜ್ಞಾನದ ಸಕ್ರಿಯ ಪಾತ್ರ ಅನಿವಾರ್ಯ

April 10, 2026
ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

ಕೃಷಿ, ಸಾಮಾಜಿಕ ಬುನಾದಿ ರಕ್ಷಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಲಿ: ಪ್ರಕಾಶ್ ಕಮ್ಮರಡಿ ಆಗ್ರಹ

April 10, 2026
ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

ರಾಷ್ಟ್ರೀಯ ರಕ್ಷಾ ವಿವಿ | ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನ: ಡಾ.ಕಾವೇರಿ ಟಂಡನ್

April 10, 2026
ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

ಕೆಪಿಎಸ್‍ಸಿ ಅಕ್ರಮ ಸಿಬಿಐ ತನಿಖೆಗೆ ಒಪ್ಪಿಸಿ: ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ ಆಗ್ರಹ

April 10, 2026
ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

ಮುಂದಿನ ದಿನಗಳಲ್ಲಿ ಪೇಸ್ ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ: ಕೆ.ಎಸ್. ಈಶ್ವರಪ್ಪ ಆಶಯ

April 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL