ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಆದಿತ್ಯ ಪ್ರಸಾದ್ ಎಂ. |
ಚಿತ್ರಕಲೆ ಎಂದಾಗ ಅದು ಬರೇ ಬಣ್ಣಗಳಿಂದ ತುಂಬಿದ ಚೌಕಟ್ಟು ಎಂದಲ್ಲ. ಅದು ಒಬ್ಬ ಕಲಾವಿದನ ಕಲ್ಪನೆಯ ಹೃದಯಯದ ಭಾವನೆಗಳ ದೃಶ್ಯಗಳಾಗಿರುತ್ತದೆ. ಹಾಗೆಯೇ ಮಾನವ ಕಲ್ಪನೆಯ ಅಭಿವ್ಯಕ್ತಿಯ ಕಲಾತ್ಮಕ ಸಾಧನವೂ ಹೌದು. ಮಾನವ ಸಂಸ್ಕೃತಿಯ ಪುರಾತನ ಭಾಗವಾಗಿ ರೂಪಾಂತರಗೊಂಡು ಇಂದಿಗೂ ತನ್ನ ಇರುವಿಕೆಯನ್ನ ಉಳಿಸಿಕೊಂಡು ಬಂದ ಒಂದು ಸಾಂಪ್ರದಾಯಿಕ ಕಲೆ ಎನ್ನಬಹುದು. ಬಣ್ಣಗಳ ಮೂಲಕ ಲೋಕವನ್ನು ಹಾಗೆಯೇ ಸಮಾಜದ ಅನೇಕ ಮುಖಗಳನ್ನು ವಿವರವಾಗಿ ತಿಳಿಸಲು ಮತ್ತು ಆಂತರ್ಯದ ಭಾವನೆಗಳನ್ನ ವ್ಯಕ್ತಪಡಿಸಲು ಇರುವ ಮಹೋನ್ನತ ಕಲೆಯಾಗಿದೆ.
ಇಂದು ಚಿತ್ರಕಲೆಯು ಹಲವು ಪ್ರಕಾರಗಳನ್ನು ಹೊಂದಿದೆ. ಪೈಂಟಿಂಗ್, ಡಿಜಿಟಲ್ ಆರ್ಟ್, ಸ್ಕೆಚ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಕಲರ್, ಅಕ್ರಿಲಿಕ್, ಓಯಿಲ್ ಪೇಂಟಿಂಗ್ ಹೀಗೆ ಅನೇಕ ಶೈಲಿಗಳು ಇವೆ. ಅಷ್ಟೆ ಅಲ್ಲದೆ, ಕಾಮಿಕ್ ಬುಕ್ ಇಲೆಸ್ಟ್ರೇಷನ್, ಅನಿಮೇಶನ್, ಗೇಮ್ ಡಿಸೈನ್, ಫ್ಯಾಷನ್ ಡಿಸೈನ್, ವೃತ್ತಿಪರ ಪ್ರಚಾರಚಿತ್ರಗಳು ಇವೆಲ್ಲವೂ ಚಿತ್ರಕಲೆಯ ಅಸ್ತಿತ್ವವನ್ನೇ ಮುಂದುವರೆಸಿದಂತವು ಎನ್ನಬಹುದು.

ಇಂತಹ ಚಿತ್ರಗಳು ನಿನ್ನೆಯ ದಿನ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ವಿಪ್ರ ಯುವ ಮಹೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗನ ಮನಸೂರೆಗೊಂಡವು. ಈ ಪ್ರದರ್ಶನದಲ್ಲಿ ಶಿವಮೊಗ್ಗದವರೇ ಆದ ವಿಕ್ರಮ್ ಆರ್ಟ್ಸ್ನ ವಾಸು ಅವರ ಹಲವು ಚಿತ್ರಗಳು ಪ್ರದರ್ಶನಗೊಂಡಿದ್ದವು.
ಕಲಾಲೋಕದಲ್ಲಿ ತನ್ನದೇ ಶೈಲಿಯಲ್ಲಿ ಚಿತ್ರಗಳನ್ನು ಮೂಡಿಸುವ ವಾಸು ಅವರು ಉಡುಪಿಯ ವೈದಿಕ ಮನೆತನದಿಂದ ಬಂದ ಯು. ನಾರಾಯಣಮೂರ್ತಿ ಹಾಗೂ ಯು. ಶಾರದಾಂಬಾ ದಂಪತಿಗಳಿಗೆ ಜನಿಸಿದ ಮೂವರು ಮಕ್ಕಳಲ್ಲಿ 1962ರ ಏಪ್ರಿಲ್ 3ರಂದು, ಎರಡನೇ ಮಗನಾಗಿ ಜನಿಸಿದರು. ಹಳೇ ಅಂಚೆಕಛೇರಿ ರಸ್ತೆಯಲ್ಲಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮೇರಿ ಮ್ಯಾಕ್ಯುಲೇಟ್ ಶಾಲೆಯಲ್ಲಿ ಹಾಗೂ ಬಿ.ಕಾಮ್ ಪದವಿ ಶಿಕ್ಷಣವನ್ನು ಎನ್ಇಎಸ್ ಸಂಸ್ಥೆಯ ಸಂಜೆ ಕಾಲೇಜಿನಲ್ಲಿ ಪಡೆದರು.


ಅಂದಿನ ದಿನಮಾನಗಳಲ್ಲಿ ತಮ್ಮ ಬದುಕು ನಡೆಸಿಕೊಂಡು ಬರಲು ಆಸರೆಯಾಗಿದ್ದ ಕಲಾವಿದನಿಗೆ ವಾಣಿಜ್ಯ ಉದ್ಯಮವಾಗಿ ಬೆಳೆಯಲಾರಂಭಿಸಿದ ಚಿತ್ರಕಲೆಯನ್ನು ಸಾಂಪ್ರದಾಯಿಕ ಶೈಲಿಯಲ್ಲೂ ಕೂಡ ಉಳಿಸಿಕೊಂಡು ಬರುವ ಕಾರ್ಯ ಜತಜತೆಗೇ ನಡೆಸಿಕೊಂಡು ಬಂದಿರುವುದು ಕಲೆಯ ಮೇಲಿನ ಅವರ ಅದಮ್ಯ ಆಸಕ್ತಿ, ಶ್ರದ್ಧೆ ಹಾಗೂ ಗೌರವ ಎನ್ನಬಹುದು.

ಮುಂದುವರಿಯುತ್ತಿರುವ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕವಾದ ಕಲಾಶೈಲಿ ಹಿಂದೆ ಸರಿಯುತ್ತಿರುವುದನ್ನ ಮನಗಂಡು ಇಂದಿನ ಜನತೆಗೆ ಕಲಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಯುವಕರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post