No Result
View All Result
IBM and Yotta Announce Plans to Deliver Agentic AI Platform for Indian Enterprises
English Articles

IBM and Yotta Announce Plans to Deliver Agentic AI Platform for Indian Enterprises

by ಕಲ್ಪ ನ್ಯೂಸ್
May 9, 2026
0

Kalpa Media House  |  Bengaluru | IBM (NYSE: IBM) and Yotta Data Services Private Limited ("Yotta") today announced plans to...

Read moreDetails
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
Kotak Mahindra Bank Announces Results

Kotak Mahindra Bank Announces Results

May 4, 2026
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
  • Advertise With Us
  • Grievances
  • About Us
  • Contact Us
Monday, May 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ಸಂಕಷ್ಟದಲ್ಲಿರುವ ನಟ ಕಿಲ್ಲರ್ ವೆಂಕಟೇಶ್ ಬೆಂಬಲಕ್ಕೆ ನಿಂತ ಹೃದಯವಂತ ಜಗ್ಗೇಶ್ ಕೂಗಿಗೆ ಸರ್ಕಾರ ಸ್ಪಂದನೆ

250 ಚಿತ್ರದಲ್ಲಿ ನಟಿಸಿದ್ದರೂ ಚಿಕಿತ್ಸೆಗೆ ಹಣವಿಲ್ಲ! ಪೋಷಕ ಕಲಾವಿದರ ನೋವಿಗೆ ಕೊನೆಯೆಂದು? ಇಡಿಯ ಚಿತ್ರರಂಗ ಈ ಒಂದು ತುರ್ತು ಕಾರ್ಯ ಮಾಡಬೇಕಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 19, 2020
in ಸಿನೆಮಾ
0
ಸಂಕಷ್ಟದಲ್ಲಿರುವ ನಟ ಕಿಲ್ಲರ್ ವೆಂಕಟೇಶ್ ಬೆಂಬಲಕ್ಕೆ ನಿಂತ ಹೃದಯವಂತ ಜಗ್ಗೇಶ್ ಕೂಗಿಗೆ ಸರ್ಕಾರ ಸ್ಪಂದನೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ಆ ಖ್ಯಾತ ಚಿತ್ರ ನಟನ ಹೆಸರು ಗೊತ್ತಿಲ್ಲದೇ ಇರಬಹುದು. ಆದರೆ, ಅವರ ಮುಖ ಪರಿಚಯ ಇಲ್ಲದವರು ರಾಜ್ಯದಲ್ಲಿ ಬಹುತೇಕ ಯಾರೂ ಇಲ್ಲದಿರಲು ಸಾಧ್ಯವಿಲ್ಲ. ಕಾರಣ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಬರೋಬ್ಬರಿ 250. ಆದರೆ, ಇಂತಹ ಹಿರಿಯ ನಟ ಈಗ ಎಂತಹ ಸ್ಥಿತಿಯಲ್ಲಿದ್ದಾರೆ ಗೊತ್ತಾ?

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಕಿಲ್ಲರ್ ವೆಂಕಟೇಶ್ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೂ ಸಹ ಹಣವಿಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿದ್ದರು. ಈ ವಿಚಾರವನ್ನು ಅರಿತ ಅವರ ಸ್ನೇಹಿತ ನಟ ಜಗ್ಗೇಶ್, ನಿನ್ನೆ ಆಸ್ಪತ್ರೆ ಭೇಟಿ ನೀಡಿ, ಈ ವಿಚಾರವನ್ನು ಟ್ವೀಟ್ ಮಾಡಿದ್ದರು.

250 ಕನ್ನಡ ಚಿತ್ರ ನಟಿಸಿದ ಮಿತ್ರ
ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ!ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಲ್ಲಿ ಮಾತಾಡಿದ್ದು!
ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ!
ತುಂಬಾ ದುಃಖವಾಯಿತು ಹಿರಿಯಕಲಾವಿದರ ಸ್ಥಿತಿಕಂಡು!
ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿಓಂ pic.twitter.com/i7qg9ZQ6Vk

— ನವರಸನಾಯಕ ಜಗ್ಗೇಶ್ (@Jaggesh2) February 18, 2020

250 ಕನ್ನಡ ಚಿತ್ರ ನಟಿಸಿದ ಮಿತ್ರ. ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ! ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಯಲ್ಲಿ ಮಾತಾಡಿದ್ದು! ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ! ತುಂಬಾ ದುಃಖವಾಯಿತು ಹಿರಿಯ ಕಲಾವಿದರ ಸ್ಥಿತಿಕಂಡು! ರಾಯರೆ ಕಾಪಾಡಬೇಕು ಇಂಥ ಕಲಾವಿದರ.. ಹರಿಓಂ ಎಂದು ಬರೆದುಕೊಂಡಿದ್ದರು.

#victoria #hospital #Dr #Giresh
Spl off Victoria hospital
And team ಅದ್ಭುತವಾಗಿ ಸ್ಪಂದಿಸಿ ಚಿಕಿತ್ಸೆ
ನೀಡುತ್ತಿದ್ದಾರೆ..ಧನ್ಯವಾದಗಳು #ಶ್ರೀರಾಮುಲು #ಕರ್ನಾಟಕಸರ್ಕಾರ #ಮಂತ್ರಿಗಳು ಹಾಗು ಇಲಾಖೆ ಸಹಾಯಕ ಅಧಿಕಾರಿಗಳಿಗೆ..
ನನ್ನಕರೆಗೆ ಸ್ಪಂಧಿಸಿದ ಕಲಾಬಂಧು #ದರ್ಶನ ರವರಿಗೆ #ಸಾ.ರಾ #ಬಾಮಾ ಹರೀಶ್ #ಮಾಧ್ಯಮಮಿತ್ರರಿಗೆ pic.twitter.com/YerSM5QBl1

— ನವರಸನಾಯಕ ಜಗ್ಗೇಶ್ (@Jaggesh2) February 19, 2020

ಜಗ್ಗೇಶ್ ಅವರ ಮಾಹಿತಿಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ, ವೆಂಕಟೇಶ್ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಿದ್ದಾರೆ.

ಧನ್ಯವಾದಗಳು ಮಂತ್ರಿ ಶ್ರೀರಾಮುಲು pa jagadish ಹಾಗು Ramesh ಗೆ..ವಿಕ್ಟೋರಿಯಾ ಆಸ್ಪತ್ರೆ dr.girish ಹಾಗು ಉ.ಮುಖ್ಯಮಂತ್ರಿ ಅಶ್ವಥ್ನಾರಾಯಣ್ ರವರಿಗೆ..
ನನ್ನ ಕರೆಗೆ ಸ್ಪಂಧಿಸಿ ಸರಿರಾತ್ರಿಯಲ್ಲಿ #victoria #superspeciality #hospital ನಲ್ಲಿ ತಪಾಸಣೆ ಶುಶೃಷೆಮಾಡುತ್ತಿದ್ದಾರೆ..!
ಸ್ನೇಹಕಕ್ಕಾಗಿ ನನ್ನ ಅಳಿಲು ಪ್ರಯತ್ನ..ಹರಿಓಂ https://t.co/dQWuvchD5o

— ನವರಸನಾಯಕ ಜಗ್ಗೇಶ್ (@Jaggesh2) February 18, 2020

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಅರ್ಪಿಸಿರುವ ಜಗ್ಗೇಶ್, ಧನ್ಯವಾದಗಳು ಮಂತ್ರಿ ಶ್ರೀರಾಮುಲು ಪಿಎ ಜಗದೀಶ್ ಹಾಗೂ ರಮೇಶ್ ಗೆ. ವಿಕ್ಟೋರಿಯಾ ಆಸ್ಪತ್ರೆ ಡಾ ಗಿರೀಶ್ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ರವರಿಗೆ. ನನ್ನ ಕರೆಗೆ ಸ್ಪಂದಿಸಿ ಸರಿ ರಾತ್ರಿಯಲ್ಲಿ ವಿಕ್ಟೋರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ಶುಶ್ರೂಷೆ ಮಾಡುತ್ತಿದ್ದಾರೆ. ಸ್ನೇಹಕ್ಕಾಗಿ ನನ್ನ ಅಳಿಲು ಪ್ರಯತ್ನ. ಹರಿ ಓಂ ಎಂದು ಬರೆದಿದ್ದಾರೆ.

ವೈಯಕ್ತಿಕವಾಗಿ ಅವನ ಹಾರೈಕೆಗೆ ವಿನಂತಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಡಾ: ಕಾಣಲು 1.30 ನಾನೆ ಹೋಗುತ್ತಿರುವೆ..ಕಷ್ಟದಲ್ಲಿ ಇರುವ ಚಿತ್ರರಂಗದ ಹಿರಿಯರಿಗೆ ಭುಜಕೊಡುವ ಗುಣ ಇಂದಿನವರು ಅಳವಡಿಸಿಕೊಳ್ಳಲು ನಾಂದಿಹಾಡುವೆ!
ವಾ.ಮಂಡಳಿ ಹಾಗು ನಿರ್ಮಾಪಕರ ಸಂಘಕ್ಕೆ ಕೈಜೋಡಿಸಲು ಹೇಳಿರುವೆ!
ವಿಶೇಷ ಕಾಳಜಿ ತೋರಿದರು ಧನ್ಯವಾದಗಳು ಸಾ.ರಾ.ಗೋ..ಭಾ.ಮಾ. https://t.co/m6pLoC7aoC pic.twitter.com/hjHoaPqfXJ

— ನವರಸನಾಯಕ ಜಗ್ಗೇಶ್ (@Jaggesh2) February 19, 2020

ಇನ್ನು, 1987ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದ ರಣಧೀರ ಚಿತ್ರದಲ್ಲಿ ಜಗ್ಗೇಶ್, ಕಿಲ್ಲರ್ ವೆಂಕಟೇಶ್, ಅರವಿಂದ್, ಎಚ್’ಎಂಟಿ ನಂದಾ, ಯೋಗೇಶ್ವರ್ ಒಟ್ಟಾಗಿ ನಟಿಸಿದ್ದರು. ವೆಂಕಟೇಶ್ ಅವರ ಈ ಪರಿಸ್ಥಿತಿ ವಿಚಾರ ತಿಳಿದು ಜಗ್ಗೇಶ್ ಅವರೊಂದಿಗೆ ನಟ ಅರವಿಂದ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.

#ರಣಧೀರ ಗ್ಯಾಂಗ್ ಮತ್ತೆ ಸೇರಿದಾಗ…#ರಥಸಪ್ತಮಿ #ಅರವಿಂದ..
ಇದರಲ್ಲಿ HMTನಂದ ತೀರಿಹೋದ..#ಯೋಗೇಶ್ವರ್ ನಮ್ಮ ಭಾಜಪ ನಾಯಕ.. pic.twitter.com/9eB8Y9Mreo

— ನವರಸನಾಯಕ ಜಗ್ಗೇಶ್ (@Jaggesh2) February 19, 2020

ರಣಧೀರ ಚಿತ್ರದ ತಮ್ಮ ತಂಡದ ಕುರಿತು ನೆನಪಿಸಿಕೊಂಡಿರುವ ಜಗ್ಗೇಶ್, ರಣಧೀರ ಗ್ಯಾಂಗ್ ಮತ್ತೆ ಸೇರಿದಾಗ…ರಥಸಪ್ತಮಿ ಅರವಿಂದ.. ಇದರಲ್ಲಿ ಎಚ್’ಎಂಟಿನಂದ ತೀರಿಹೋದ.. ಯೋಗೇಶ್ವರ್ ನಮ್ಮ ಭಾಜಪ ನಾಯಕ.. ಎಂದು ಒಂದು ಟ್ವೀಟ್’ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್’ನಲ್ಲಿ 1987 ರಣಧೀರ ಗ್ಯಾಂಗ್… ಯೋಗೇಶ್ವರ್ ಏನಂದ ರಥಸಪ್ತಮಿ ಅರವಿಂದ ಕಿಲ್ಲರ್ ವೆಂಕಟೇಶ.. ರವಿಚಂದ್ರನ್ ಸಂಸ್ಥೆಯಲ್ಲಿ ವರ್ಷಕ್ಕೆ 5,000 ಸಂಬಳ ಪಡೆದ ಸಂತೋಷವಾಗಿ ನಗುತ್ತಾ ಸ್ವಾಭಿಮಾನದಿಂದ ಬಾಳಿದ ದಿನಗಳು….ಅಮರ ಹಳೆ ನೆನಪು.. ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

1987 #ರಣಧೀರ ಗ್ಯಾಂಗ್…#ಯೋಗೇಶ್ವರ್ #HMTನಂದ #ರಥಸಪ್ತಮಿ ಅರವಿಂದ #ಕಿಲ್ಲರ್ ವೆಂಕಟೇಶ..
ರವಿಚಂದ್ರನ್ ಸಂಸ್ಥೆಯಲ್ಲಿ ವರ್ಷಕ್ಕೆ 5,000 ಸಂಬಳ ಪಡೆದ ಸಂತೋಷವಾಗಿ
ನಗುತ್ತಾ ಸ್ವಾಭಿಮಾನದಿಂದ ಬಾಳಿದ
ದಿನಗಳು….ಅಮರಹಳೆನೆನಪು.. pic.twitter.com/ycq8J2uVU6

— ನವರಸನಾಯಕ ಜಗ್ಗೇಶ್ (@Jaggesh2) February 19, 2020

ಇನ್ನು, ಇದು ಕಿಲ್ಲರ್ ವೆಂಕಟೇಶ್ ಅವರ ಒಬ್ಬರ ವ್ಯಥೆಯಲ್ಲ. ಕನ್ನಡ ಚಿತ್ರರಂಗದ ಬಹಳಷ್ಟು ಪೋಷಕ ನಟರು ನೂರಾರು ಚಿತ್ರದಲ್ಲಿ ನಟಿಸಿದ್ದರೂ, ಅವರ ಜೀವನದ ಸ್ಥಿತಿ ಮಾತ್ರ ಉತ್ತಮವಾಗಿಯೇನೂ ಇಲ್ಲ. ದಶಕಗಳ ಕಾಲ ಕಲಾ ಸರಸ್ವತಿಯ ಸೇವೆ ಮಾಡಿದ್ದರೂ, ಕೊನೆಯ ಕಾಲಕ್ಕೆ ಚಿಕಿತ್ಸೆಗೂ ಸಹ ಹಣವಿಲ್ಲದೇ ಪರದಾಡಿದ ಹಲವು ಕಲಾವಿದರ ನಮ್ಮಲ್ಲಿದ್ದಾರೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಪ್ರಸ್ತುತ ಸರ್ಕಾರ ಕಲಾವಿದರ ಇಂತಹ ಬೆಂಬಲಕ್ಕೆ ನಿಲ್ಲಲು ಆರೋಗ್ಯ ವಿಮೆ, ಜೀವನ ಭದ್ರತೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವಿದೆ. ಈ ವಿಚಾರದಲ್ಲಿ ಇಡಿಯ ಚಿತ್ರರಂಗ ಹಾಗೂ ಮಂಡಳಿ ಒಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಮಾಡಬೇಕಿದೆ.

Get in Touch With Us info@kalpa.news Whatsapp: 9481252093

Tags: Actor AravindActor JaggeshActor Killer VenkateshDCM AshwathnarayanKannada MoviesKannada News WebsiteLatestNewsKannadaMinister SriramuluRanadheera MoviesandalwoodVictoria Hospitalಕನ್ನಡ ಚಿತ್ರರಂಗನಟ ಕಿಲ್ಲರ್ ವೆಂಕಟೇಶ್ನಟ ಜಗ್ಗೇಶ್ರಣಧೀರ ಚಿತ್ರವಿಕ್ಟೋರಿಯಾ ಆಸ್ಪತ್ರೆ
Share229Tweet125Send
Previous Post

ಸಿಎಂ ಯಡಿಯೂರಪ್ಪ ಅವರ ಕಾಲ್ಗುಣದಿಂದ ರಾಜ್ಯ ಸಮೃದ್ಧ: ಶಾಸಕ ಪಾಟೀಲ್

Next Post

ಸಂಕಷ್ಟದಲ್ಲಿರುವ ಹಿರಿಯ ನಟ: ವಿಷಯ ತಿಳಿದ 1 ಗಂಟೆಯಲ್ಲೇ 1 ಲಕ್ಷ ರೂ. ಕೊಟ್ಟು ಮಾದರಿಯಾದ ಡಿ ಬಾಸ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಂಕಷ್ಟದಲ್ಲಿರುವ ಹಿರಿಯ ನಟ: ವಿಷಯ ತಿಳಿದ 1 ಗಂಟೆಯಲ್ಲೇ 1 ಲಕ್ಷ ರೂ. ಕೊಟ್ಟು ಮಾದರಿಯಾದ ಡಿ ಬಾಸ್

ಸಂಕಷ್ಟದಲ್ಲಿರುವ ಹಿರಿಯ ನಟ: ವಿಷಯ ತಿಳಿದ 1 ಗಂಟೆಯಲ್ಲೇ 1 ಲಕ್ಷ ರೂ. ಕೊಟ್ಟು ಮಾದರಿಯಾದ ಡಿ ಬಾಸ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕೇಂದ್ರದಿಂದ ಗುಡ್ ನ್ಯೂಸ್ | ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 10 ರೂ. ಇಳಿಕೆ

ಪೆಟ್ರೋಲ್ ಬಂಕ್’ಗಳಿಗೆ ಹೊಸ ಕಟ್ಟುನಿಟ್ಟಿನ ನಿಯಮ ಜಾರಿ | ಉಲ್ಲಂಘಿಸಿದ್ರೆ ಕಠಿಣ ಕ್ರಮ

May 11, 2026
ತಾಯಿ ಜಗತ್ತಿನ ವಿಶೇಷ ಶಕ್ತಿ: ಕುಸುಮ ಋಗ್ವೇದಿ

ತಾಯಿ ಜಗತ್ತಿನ ವಿಶೇಷ ಶಕ್ತಿ: ಕುಸುಮ ಋಗ್ವೇದಿ

May 11, 2026
ಪ್ರೀತಿಸಿ, ಓಡಿ ಹೋಗಿದ್ದು ತಮ್ಮ, ಆದರೆ ಅಣ್ಣನ ಅಪಹರಿಸಿ, ಮಾರಣಾಂತಿಕ ಹಲ್ಲೆ

ಪ್ರೀತಿಸಿ, ಓಡಿ ಹೋಗಿದ್ದು ತಮ್ಮ, ಆದರೆ ಅಣ್ಣನ ಅಪಹರಿಸಿ, ಮಾರಣಾಂತಿಕ ಹಲ್ಲೆ

May 11, 2026
ಮಲೆ ಮಹದೇಶ್ವರ ಬೆಟ್ಟ | ಕಾಲ್ನಡಿಗೆಯಲ್ಲಿ ಹೊರಟಿದ್ದ ಬಾಲಕ ಚಿರತೆಗೆ ಬಲಿ | ಭಕ್ತರಲ್ಲಿ ಆತಂಕ

ಮಲೆ ಮಹದೇಶ್ವರ ಬೆಟ್ಟ | ಕಾಲ್ನಡಿಗೆಯಲ್ಲಿ ಹೊರಟಿದ್ದ ಬಾಲಕ ಚಿರತೆಗೆ ಬಲಿ | ಭಕ್ತರಲ್ಲಿ ಆತಂಕ

May 11, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ನೆಂಟರ ಮದುವೆಗೆ ಹೊರಟು ಬಸ್ ಹತ್ತುತ್ತಿದ್ದ ಮಹಿಳೆ ಬ್ಯಾಗ್ ಕಳ್ಳತನ | ಕಳೆದುಕೊಂಡಿದ್ದು ಚಿನ್ನದ ಮೌಲ್ಯ ಎಷ್ಟು?

May 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL