ಶಿಕಾರಿಪುರ: 17 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿ, ಈಗ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗಿರುವ ಜಿಲ್ಲೆಯ ಹೆಮ್ಮೆಯ ಯೋಧ ಎಸ್.ಜಿ. ಶಿವಕುಮಾರ್ ಅವರಿಗೆ ಗ್ರಾಮಸ್ಥರು ಆತ್ಮೀಯವಾಗಿ ಗೌರವಿಸಿದರು.
ಹಾರೋಗೋಪ್ಪ ಸಣ್ಣ ಈಶ್ವರಪ್ಪ ಪಾರ್ವತಮ್ಮ ದಂಪತಿ ಪುತ್ರರಾಗಿರುವ ಅವರು ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆಯನ್ನು ಸಲ್ಲಿಸಿರುವ ಅವರು ಸೇವಾ ನಿವೃತಿ ಹೊಂದಿದ್ದು ಇಂದು ಗ್ರಾಮಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವಕರು ದೇಶಸೇವೆ ಮಾಡಿದ ಯೋಧನಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಗ್ರಾಮದಲ್ಲಿ ಹಬ್ಬದ ವಾತವಾರಣವನ್ನು ಸೃಷ್ಠಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವಕ ಸುಧಕರ್ ಮಾತನಾಡಿ, ದೇಶದ ರಕ್ಷಣೆ ದೇಶಭಿಮಾನ ಇರುವ ವ್ಯಕ್ತಿಗಳು ಮಾತ್ರ ದೇಶಸೇವೆಗೆ ನಾಡಿನ ಗಡಿ ಕಾಯಲು ಹೋಗುತ್ತಾರೆ. ಸೈನಿಕರು ತಮ್ಮ ಮನೆ ಮಕ್ಕಳು ಊರುಗಳನ್ನು ಬಿಟ್ಟು ಹಗಲು ರಾತ್ರಿ ಎನ್ನದೇ ರಾಷ್ಟ್ರಕ್ಕಾಗಿ ದುಡಿಯುತ್ತಾರೆ. ಇಂತಹ ಸೈನಿಕರಲ್ಲಿ ನಮ್ಮ ಗ್ರಾಮದ ಸೈನಿಕ ಸೇವೆ ಸಲ್ಲಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಹೆಮ್ಮೆಯ ಮಾತುಗಳನ್ನಾಡಿದರು.
ಶಿವಕುಮಾರ್ ಅವರಿಗೆ ಹಾರಗಳನ್ನು ಹಾಕಿ ಸನ್ಮಾನಿಸಿ, ಊರಿನ ದ್ವಾರ ಬಾಗಿಲಿನಿಂದ ಗ್ರಾಮದ ಎಲ್ಲಾ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಅವರ ಮನೆಯವರೆಗೂ ಸಾವಿರಾರು ಮಂದಿಯೊಂದಿಗೆ ಕರೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ನೂರಾರು ಯುವಕರು ಭಾರತ ಮಾತೆಗೆ, ಭಾರತೀಯ ಸೈನ್ಯಕ್ಕೆ, ಸೈನಿಕರಿಗೆ ಜೈಕಾರಗಳನ್ನು ಹಾಕುವ ಮೂಲಕ ಇಡೀ ಗ್ರಾಮದಲ್ಲಿ ಹಬ್ಬದ ವಾತವಾರಣವನ್ನು ಸೃಷ್ಠಿಸಿದ್ದರು.
ಈ ವೇಳೆ ಮಾತನಾಡಿದ ಶಿವಕುಮಾರ್, ಸೈನಿಕನಾಗಿ ನಾನು ಇಷ್ಟು ವರ್ಷ ತಮ್ಮ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ಸೇವೆ ಮಾಡಿದ ಈಗ ನಿಜವಾದ ಗೌರವ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಣೇಶ್, ಅನಿಲ್, ತರುಣ್, ಸುನೀಲ್, ಕಿರಣ್, ಪ್ರಸನ್ನ, ಸುರೇಶ್, ಅಭಿಷೇಕ್, ಸುಖಿಲ್, ಚಂದನ್, ರಾಮು, ಗಗನ್, ದರ್ಶನ್, ಪವನ್, ಸುರೇಸ್, ಹರೀಶ್, ಮಾರುತಿ, ಗುಡದಯ್ಯ, ದ್ರಾಕ್ಷಯಣಿ, ಜಯಮ್ಮ, ಶಶಿಕಲಾ ಇದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post