No Result
View All Result
SWR to run special trains for Good Friday, Easter rush
English Articles

Regulation, Diversion and Rescheduling of Trains in the Solapur–Wadi Section

by ಕಲ್ಪ ನ್ಯೂಸ್
June 1, 2026
0

Kalpa Media House  |  Hubballi  | Due to technical works being carried out in the Solapur–Wadi section, temporary regulation, diversion...

Read moreDetails
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
  • Advertise With Us
  • Grievances
  • About Us
  • Contact Us
Monday, June 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುಬೇರನ ಅಹಂಕಾರವನ್ನು ಮಣ್ಣು ಪಾಲು ಮಾಡಿದ ಗಣೇಶನ ಕತೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 1, 2019
in Special Articles
0
ಕುಬೇರನ ಅಹಂಕಾರವನ್ನು ಮಣ್ಣು ಪಾಲು ಮಾಡಿದ ಗಣೇಶನ ಕತೆ
Share on FacebookShare on TwitterShare on WhatsApp

ವಿಘ್ನ ಹರತಾ ಪ್ರಥಮ ಪೂಜಿತ ಎಂದೆಲ್ಲಾ ಕರೆಯಿಸಿಕೊಳ್ಳುವ ಗಣೇಶನ ಹಬ್ಬಕ್ಕೆ ಅರ್ಥಾತ್ ಗಣೇಶ ಚತುರ್ಥಿಯನ್ನು ನಾಳೆ ಆಚರಿಸಲು ಎಲ್ಲೆಡೆ ಜನರು ಸಿದ್ಧವಾಗುತ್ತಿದ್ದಾರೆ. ಹೀಗಾಗಿ ಗಣೇಶನ ಕುರಿತು ಒಂದು ಕತೆ ಹೇಳಲು ಬಯಸುತ್ತೇನೆ ಕೇಳಿ.

ಸಾಮಾನ್ಯವಾಗಿ ಸಂಪತ್ತಿನ ಒಡೆಯ ಯಾರು? ಎಂದು ಕೇಳಿದರೆ ಬಹುತೇಕ ಜನ ಹೇಳುವ ಹೆಸರು ಕುಬೇರ. ಹಾಗೇ ಬಹಳ ಶ್ರೀಮಂತ ವ್ಯಕ್ತಿಗಳನ್ನು ಕುಬೇರನಿಗೆ ಹೋಲಿಸುವ ಪರಿಪಾಠವಿದೆ. ಆದರೆ ಇದು ತಪ್ಪು ಕಲ್ಪನೆ. ಏಕೆ ಅಂತ ಹೇಳ್ತಿನಿ ಮುಂದಕ್ಕೆ ಓದಿ.

ಕುಬೇರ ಶಿವನ ಅಪ್ರತಿಮ ಭಕ್ತ. ಹೀಗಾಗಿ ಯಾವುದೇ ವರದ ಫಲಾಪೇಕ್ಷೆ ಇಲ್ಲದೇ ಶಿವನನ್ನು ಕುರಿತು ಕಠೋರ ತಪಸ್ಸು ಮಾಡುತ್ತಾನೆ. ಇದನ್ನು ಕಂಡ ಶಿವ ತಪಸ್ಸಿಗೆ ಪ್ರಸನ್ನನಾಗಿ ಸ್ವತಃ ಒಂದು ವರದ ರೂಪದಲ್ಲಿ ಒಂದು ಜವಾಬ್ದಾರಿ ಕೊಡುತ್ತಾನೆ. ಆ ಜವಾಬ್ದಾರಿಯೇ ಜಗತ್ತಿನ ಸಂಪೂರ್ಣ ಧನ ಸಂಪತ್ತಿನ ರಕ್ಷಣೆ ಮಾಡುವ ಜವಾಬ್ದಾರಿ. ಹೀಗಾಗಿ ಶ್ರೀಲಕ್ಷ್ಮೀ ಸಂಪತ್ತಿನ ಒಡತಿಯಾದರೆ, ಕುಬೇರ ಆ ಸಂಪತ್ತಿನ ರಕ್ಷಕ ಮಾತ್ರ.

ಈಗ ವಿಷಯಕ್ಕೆ ಬರುತ್ತೇನೆ. ಈ ಜವಾಬ್ದಾರಿ ಹೊತ್ತು ಅದನ್ನು ನಿರ್ವಹಣೆ ಮಾಡುತ್ತಾ, ತಾನೇ ಸಂಪತ್ತಿನ ಒಡೆಯನೆಂಬ ಭಾವನೆ ಕುಬೇರನಿಗೆ ಬರುತ್ತದೆ. ಅದೇ ಭಾವನೆಯಿಂದ ಕುಬೇರನಲ್ಲಿ ಅಹಂಕಾರ ಮೂಡುತ್ತದೆ. ಇದರಿಂದ ತನ್ನ ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಸಲುವಾಗಿ ಒಂದು ಭವ್ಯ ಸಮಾರಂಭ ಆಯೋಜನೆ ಮಾಡಿ ಅದರಲ್ಲಿ ದೇವಾನುದೇವತೆಗಳಿಗೆ ಆಹ್ವಾನ ನೀಡಿ ಶಿವನನ್ನು ಕೂಡಾ ಆಹ್ವಾನ ನೀಡುತ್ತಾನೆ. ಆದರೆ ಇದರ ಉದ್ದೇಶ ಚೆನ್ನಾಗಿ ಅರಿತಿದ್ದ ಶಿವ ಆಹ್ವಾನವನ್ನು ನಯವಾಗಿ ತಿರಸ್ಕರಿಸುತ್ತಾನೆ. ಆದರೆ ಆತನಿಗೆ ಬುದ್ದಿ ಕಲಿಸುವ ಸಲುವಾಗಿ ಮಗ ಗಣೇಶನನ್ನು ಅವನೊಂದಿಗೆ ಕಳುಹಿಸುತ್ತಾನೆ.

ಕಳುಹಿಸಿ ಕೊಡುವ ಮುನ್ನ ಶಿವ ತನ್ನ ಮಗ ತಿಂಡಿಪೋತ, ಅವನ ಸತ್ಕಾರದಲ್ಲಿ ಲವಲೇಶವೂ ಕೊರತೆ ಆಗಬಾರದೆಂದು ಕುಬೇರನಿಗೆ ಎಚ್ಚರಿಕೆ ನೀಡುತ್ತಾನೆ. ಇದರ ಗುಪ್ತ ಸಂದೇಶ ಅರಿತ ಗಣೇಶ ಕುಬೇರನ ಅಹಂಕಾರ ಅಡಗಿಸುವ ನಿಶ್ಚಯ ಮಾಡಿಕೊಂಡು ಕುಬೇರನೊಂದಿಗೆ ಹೊರಡುತ್ತಾನೆ. ಕುಬೇರನ ಅರಮನೆ ತಲುಪಿದ ಗಣೇಶ ಮೊದಲು ತನಗೆ ಹಸಿವಾಗಿದೆ. ತಾನು ಮೊದಲು ಊಟ ಮಾಡುವುದಾಗಿ ಕೇಳಿಕೊಳ್ಳುತ್ತಾನೆ.

ಎಷ್ಟೆಂದರೂ ಬಾಲಕನಲ್ಲವೇ? ಎಂಬ ಭಾವಿಸಿ ಕುಬೇರ ಅವನಿಗೆ ಸತ್ಕಾರ ಮಾಡಲು ಆರಂಭಿಸುತ್ತಾನೆ. ಶಿವ ಹೇಳಿದ ಮಾತುಗಳು ನೆನಪಾದರೂ ಬಾಲಕನೋರ್ವ ಎಷ್ಟು ತಿಂದಿಯಾನು? ಎಂದು ಭಾವಿಸಿ ಸುಮ್ಮನಾಗುತ್ತಾನೆ.

ಆನ್ಯಶೆಟ್ಟಿ ಕುಂದಾಪುರ

ಎಷ್ಟು ಬಡಿಸಿದರೂ ಎಷ್ಟೇ ತಿಂದರೂ ಗಣೇಶನ ಹಸಿವು ಮಾತ್ರ ನಿಲ್ಲುವುದಿಲ್ಲ. ಆಹಾರದ ಉಗ್ರಾಣವೆಲ್ಲ ಖಾಲಿಯಾಗಿ ಮಿಕ್ಕ ದೇವತೆಗಳಿಗೆ ಆಹಾರವೇ ಇರುವುದಿಲ್ಲ. ಗಣೇಶನ ಈ ವಿರಾಟ ರೂಪ ಕಂಡ ಮೇಲೆ ಪಾಪ ದೇವತೆಗಳಿಗೆ ಸಮಾರಂಭದ ಯೋಚನೆ ಹೇಗೆ ತಾನೇ ಬಂದಿತು? ಎಲ್ಲರೂ ಅಚಂಬಿತರಾಗಿ ನಿಂತು ನೋಡ ತೊಡಗಿದರು.

ಕೊನೆಗೆ ಗಣೇಶ ಹೊಟ್ಟೆ ತುಂಬದ ಕಾರಣ ಕುಬೇರನ ಸಂಪತ್ತನ್ನೆಲ್ಲ ತಿಂದು ಮುಗಿಸಿದ. ಸಾಲದಿದ್ದಾಗ ಎದುರಿಗೆ ಕಂಡ ಪ್ರತಿಯೊಂದನ್ನೂ ತಿನ್ನಲಾರಂಭಿಸಿದ. ಸಾಲದು ಎಂಬಂತೆ ದೇವತೆಗಳ ಆಭರಣಗಳನ್ನೂ ಸಹ ತಿಂದು ಹಾಕಿದ. ದೇವತೆಗಳಿಗೆ ಗಣೇಶನ ದೃಷ್ಟಿಯಿಂದ ತಪ್ಪಿಸಿಕೊಂಡು ಹೋಗುವುದೇ ದೊಡ್ಡ ಸವಾಲಾಯಿತು. ಕಾರಣ ಪ್ರತಿ ವಸ್ತುವನ್ನೂ ತಿಂದು ಮುಗಿಸಿದ ಮೇಲೂ ಗಣೇಶನ ಹಸಿವು ಮಾತ್ರ ನೀಗಲಿಲ್ಲ. ಹೀಗಾಗಿ ಗಣೇಶನ ಮುಂದಿನ ಗುರಿ ದೇವತೆಗಳಾಗಿದ್ದರು.

ಆಗಲೇ ಶಿವನ ನುಡಿಯನ್ನು ಕುಬೇರ ಗಂಭೀರವಾಗಿ ಕಂಡಿದ್ದು. ಇನ್ನೇನು ಕುಬೇರನನ್ನು ತಿನ್ನಬೇಕೆಂದು ಗಣೇಶ ಮುಂದೆ ಬಂದಾಗ ಕುಬೇರ ಅದೃಶ್ಯನಾಗಿ ಕೈಲಾಸಕ್ಕೆ ಹೋಗಿ ಶಿವನ ಶರಾಗತನಾಗಿ ತನ್ನ ಅಹಂಕಾರವನ್ನು ಮನ್ನಿಸುವಂತೆಯೂ ಮಗನನ್ನು ಶಾಂತಗೊಳಿಸುವ ಮಾರ್ಗದ ಬಗ್ಗೆ ತಿಳಿಸುವಂತೆ ಬೇಡುತ್ತಾನೆ.

ಆಗ ಮಧ್ಯ ಪ್ರವೇಶಿಸಿದ ಗೌರಿ ಬಿಲ್ವಪತ್ರೆಗಳ ಮೇಲೆ ಶಿವನಾಮ ಅಂಕಿತಿಸಿ ಕುಬೇರನ ಕೈಗಿಟ್ಟು ಗಣೇಶನಿಗೆ ತಿನ್ನಿಸುವಂತೆಯೂ, ಇದರಿಂದ ಗಣೇಶನ ಹಸಿವು ನೀಗುವುದಾಗಿ ಹೇಳುತ್ತಾಳೆ.

ಗಣೇಶನ ಹಸಿವು ನೀಗಿಸಿ ಶಾಂತಗೊಳಿಸುವ ಮಾರ್ಗವೇನೋ ದೊರೆಯಿತು. ಆದರೆ ತಿನ್ನಿಸುವ ಸಾಹಸ ಯಾರು ತಾನೇ ಮಾಡಬಲ್ಲರು? ಎದುರು ಕಂಡರೆ ತಿಂದು ಮುಗಿಸುವ ಭಯ.

ಹೇಗೋ ಉಪಾಯ ಮಾಡಿ ಕುಬೇರ ಆ ಬಿಲ್ವಪತ್ರೆಗಳನ್ನು ಗಣೇಶ ತಿನ್ನುವಂತೆ ಮಾಡುತ್ತಾನೆ. ಆಗ ಗಣೇಶನ ಹಸಿವು ನೀಗಿ ಸಾಮಾನ್ಯ ರೂಪದಲ್ಲಿ ನಿಲ್ಲುತ್ತಾನೆ.

ಕೊನೆಗೆ ತನ್ನ ತಪ್ಪಿಗೆ ಕುಬೇರ ಗಣೇಶನಲ್ಲಿ ಕ್ಷಮೆ ಬೇಡಿ ತನ್ನದಲ್ಲದ ಸಂಪತ್ತಿನ ಬಗ್ಗೆ ಅಹಂಕಾರ ಪಡಲಾರೆ ಎಂದು ಗಣೇಶನಿಗೆ ವಚನ ನೀಡುತ್ತಾನೆ. ಇದರಿಂದ ಶಾಂತನಾದ ಗಣೇಶ ಕುಬೇರನಿಗೆ ಬುದ್ಧಿ ಮಾತನ್ನು ಉಪದೇಶಿಸಿ, ಅವನನ್ನು ಕ್ಷಮಿಸಿ ತಾನು ಆಪೋಷಣೆ ಮಾಡಿದ್ದ ಸಂಪತ್ತನ್ನೆಲ್ಲ ಕುಬೇರನಿಗೆ ಹಿಂತಿರುಗಿಸುತ್ತಾನೆ.

ಹೀಗೆ ಅಹಂಕಾರದ ಮದವೇರಿದ ಕುಬೇರನಿಗೆ ತನ್ನ ಲೀಲೆಯ ಮೂಲಕ ತಕ್ಕ ಶಾಸ್ತಿ ಮಾಡಿ ಅವನ ಗಣೇಶ ಅಹಂಕಾರವನ್ನು ಮಣ್ಣುಪಾಲು ಮಾಡುತ್ತಾನೆ. ಕೊನೆಯಲ್ಲಿ ಎರಡು ಮಾತು ಓದುಗರೇ.. ಗಣೇಶ ಚತುರ್ಥಿ ಆಚರಣೆ ಮಾಡುತ್ತೀರಿ ಒಳ್ಳೆಯದು. ಆದರೆ ಅದರಲ್ಲಿ ಬಾಹ್ಯ ಆಡಂಬರಕ್ಕಿಂತ ಒಳಗಿನ ಭಕ್ತಿ ಹೆಚ್ಚಾಗಿ ಇರಲಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಭಕ್ತಿ ಕಾಣಸಿಗುವುದು ವಿರಳವಾಗಿದೆ. ಮೂರ್ತಿ ವಿಸರ್ಜನೆಗೆ ಹೋದಾಗ ಅಶ್ಲೀಲ ಅಥವಾ ಯಾವುದೋ ಸಿನಿಮಾ ಹಾಡುಗಳಿಗೆ ಕುಣಿಯುತ್ತಾ ಮಧ್ಯ ಸೇವಿಸುತ್ತಾ ಅಥವಾ ಬಣ್ಣಗಳನ್ನು ಎರೆಚುತ್ತಾ ಹೋಗುವುದು ಅತಿಯಾಗಿ ಕಾಣುತ್ತದೆ. ಆ ಬಣ್ಣ ಎಷ್ಟು ತೊಳೆದರೂ ಮೈಯಿಂದ ಸುಲಭದಲ್ಲಿ ಹೋಗುವುದಿಲ್ಲ. ಚರ್ಮವನ್ನು ಸಹ ಇದು ಅಪಾಯಕ್ಕೆ ದೂಡುತ್ತದೆ.

ಇನ್ನೊಂದು ಮಾತು ಸಾಧ್ಯವಾದಷ್ಟು ಪ್ರಕೃತಿಯದತ್ತ ವಸ್ತುಗಳ ಮೂಲಕ ಸಿದ್ಧಗೊಂಡ ಪರಿಸರ ಸ್ನೇಹಿ ಮೂರ್ತಿಯನ್ನೇ ಪೂಜೆಗೆ ಬಳಸಿ. ಇಲ್ಲದಿದ್ದರೆ ನಮಗೆ ಬದುಕಲು ಅನುಕೂಲ ಮಾಡಿಕೊಟ್ಟ ಪ್ರಕೃತಿ ಮಾತೆಯ ನಾಶಕ್ಕೆ ನಾವೇ ಕಾರಣವಾಗುತ್ತೇವೆ. ಇವೆರಡೂ ಅಂಶಗಳ ಬಗ್ಗೆ ಗಮನವಿರಲಿ ಎನ್ನುತ್ತಾ ನನ್ನ ಲೇಖನ ಮುಗಿಸುತ್ತೇನೆ.

ನಮಸ್ಕಾರ
ಇಂತಿ ನಿಮ್ಮವ
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ

Tags: ArroganceGanesh Chaturthigoddess lakshmiHungryKannada ArticleLord GaneshaLord Ganesha and KuberaLord KuberaLord Shivaಅಹಂಕಾರಗಣೇಶ ಚತುರ್ಥಿ
Share222Tweet123Send
Previous Post

ಈಶಾನ್ಯಮುಖಿ, ಚತುರ್ಭುಜ ಗಣಪನ ದರ್ಶನವನ್ನು ನೀವೊಮ್ಮೆ ಮಾಡಲೇಬೇಕು? ಎಲ್ಲಿದೆ ಗೊತ್ತಾ?

Next Post

ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ

ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮರ ಬಿದ್ದು, ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್ | ಇಲ್ಲಿದೆ ಪರ್ಯಾಯ ಮಾರ್ಗ

ಮರ ಬಿದ್ದು, ಸಾಗರ ಶಿವಮೊಗ್ಗ ಮಧ್ಯೆ ಹೆದ್ದಾರಿ ಬಂದ್ | ಇಲ್ಲಿದೆ ಪರ್ಯಾಯ ಮಾರ್ಗ

June 1, 2026
ಅಜ್ಜಂಪುರ–ಬೀರೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ | ಚನ್ನರಾಯಪಟ್ಟಣದಲ್ಲಿ ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ನಿಲುಗಡೆ

ಅಜ್ಜಂಪುರ–ಬೀರೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ | ಚನ್ನರಾಯಪಟ್ಟಣದಲ್ಲಿ ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ನಿಲುಗಡೆ

June 1, 2026
ಗುಬ್ಬಿಯಲ್ಲಿ ರಸ್ತೆ ಕೆಳ ಸೇತುವೆ ಶಂಕುಸ್ಥಾಪನೆ | ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ | ಸಚಿವ ವಿ. ಸೋಮಣ್ಣ

ಗುಬ್ಬಿಯಲ್ಲಿ ರಸ್ತೆ ಕೆಳ ಸೇತುವೆ ಶಂಕುಸ್ಥಾಪನೆ | ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ | ಸಚಿವ ವಿ. ಸೋಮಣ್ಣ

June 1, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

June 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL