No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
  • Advertise With Us
  • Grievances
  • About Us
  • Contact Us
Thursday, July 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ

kalpa News by kalpa News
September 1, 2019
in Special Articles
0
ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿ ಪೂಜೆ
Share on FacebookShare on TwitterShare on WhatsApp

ಸಂಭ್ರಮೋತ್ಸಾಹದಿ ಮನೆಗೆ ಎಡತಾಕುವ ಗೌರಿ, ಬಾಗಿನ ಸ್ವೀಕರಿಸುತ್ತಾಳೆ. ಪೂಜೆಯ ಬಳಿಕ ಸೋಬಲಕ್ಕಿ ಸ್ವೀಕರಿಸಿ ನೀರಿನಲ್ಲಿ ಕರಗಿ ಹೋಗುತ್ತಾಳೆ. ಪೂಜಿಸಿದ ಗೌರಿಯನ್ನೇಕೆ ವಿಸರ್ಜಿಸಬೇಕು ಎನ್ನುವ ಪ್ರಶ್ನೆ ಹಲವರದು.

ಸ್ವಲ್ಪ ಯೋಚಿಸಿ ನೋಡಿದರೆ ಅದರ ಹಿಂದಿನ ಅಂತರಾರ್ಥ ತಿಳಿಯುತ್ತದೆ. ಇಷ್ಟೊಂದು ಸುಂದರವಾದ ಶರೀರ ಜೀವ ಕಳೆದುಕೊಂಡ ನಂತರ ವಿಸರ್ಜನೆಯಾಗುತ್ತದೆ. ಅಂದರೆ ಬದುಕಿದು ನಶ್ವರ, ಜೀವನಯಾನದಲ್ಲಿ ಯಾರೂ ಶಾಶ್ವತವಲ್ಲ ಎನ್ನುವ ಸ್ಪಷ್ಟ ಸಂದೇಶ ಅದರ ಹಿಂದಿದೆ. ಗೌರಿದೇವಿಯ ಪ್ರತೀಕಗಳನ್ನು ಕಂಡಾಗ ಅನಿಸುವುದಿಷ್ಟು; ನಿರಾಕಾರನಾದ ಭಗವಂತನಿಗೇಕೆ ರೂಪ ಎನ್ನುವ ಪ್ರಶ್ನೆ ಕಾಡುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಯಾವುದೇ ವಸ್ತುವಿಗೊಂದು ರೂಪ ಇಲ್ಲದಿದ್ದರೆ ಅದರಲ್ಲಿ ಮನಸ್ಸನ್ನು ಕೇಂದ್ರೀಕರಿಸಲಾಗುವುದಿಲ್ಲ. ಮನಸ್ಸನ್ನು ಕೇಂದ್ರೀಕರಿಸದ ಹೊರತು ಭಕ್ತಿ, ನಂಬಿಕೆ, ಶ್ರದ್ಧೆ ಹುಟ್ಟುವುದು ಅಸಾಧ್ಯ. ಆ ಕಾರಣ ಭಗವಂತನಿಗೊಂದು ಪ್ರತಿಮಾ ರೂಪ ಬಂದಿತು. ಹೀಗೆ ಮಣ್ಣು ಅಥವಾ ಅರಿಶಿನ ಪ್ರತಿಮಾ ರೂಪದಲ್ಲಿ ಮನಸ್ಸಿನಲ್ಲಿ ನೆಲೆ ನಿಲ್ಲುವ ಗೌರಿ ವಿರ್ಸನೆಯಾಗುವ ಮೂಲಕ ನಿರಾಕಾರಳಾಗಿ ಸ್ಥಿತಗಳಾಗುತ್ತಾಳೆ. ಈ ಅಂಶವನ್ನು ಅರಿಯದ ಹಲವಾರು ಪ್ರತಿಮೆಗಳಿಗಷ್ಟೇ ತಮ್ಮ ಮನಸ್ಸನ್ನು ಸ್ಥಿತಗೊಳಿಸುತ್ತಾರೆ.

ಆಕಾರದಿಂದ ನಿರಾಕಾರದೆಡೆಗೆ ಎನ್ನುವ ಸಿದ್ಧಾಂತಕ್ಕೆ ಭಗವಾನ್ ರಾಮಕೃಷ್ಣ ಪರಮಹಂಸರು ಸಮುದ್ರದ ನೀರಿನ ಮೇಲೆ ತೇಲುವ ಮಂಜಿನಗಡ್ಡೆಯ ನಿದರ್ಶನವನ್ನು ಕೊಡುತ್ತಾರೆ. ಆಗಾಧ ಚಳಿಯಲ್ಲಿ ತೇಲುವ ಮಂಜಿನ ಗಡ್ಡೆಗಳು ಬಿಸಿಲಿನ ಝಳಕದೊಂದಿಗೆ ಮತ್ತೆ ನೀರಿನಲ್ಲೇ ಬೆರೆಯುತ್ತವೆ. ಮಂಜಿನ ಗಡ್ಡೆಗಳಂತೆ ದೈವೀ ಆಕಾರಗಳು. ಸಮುದ್ರದ ನೀರು ನಿರಾಕಾರ ನಿರ್ಗುಣ ಚೈತನ್ಯವಿದ್ದಂತೆ. ಸೂರ್ಯನ ಶಾಖವೇ ನಮ್ಮನ್ನು ಮುಕ್ತಿಗೊಯ್ಯುವ `ವಿವೇಕ’ ಎಂಬುದೇ ಇದರ ಹಿಂದಿನ ಅರ್ಥ.

ಶಿವನದು ಧ್ಯಾನಸ್ಥ ಸ್ಥಿತಿ. ಶಿವನ ಈ ಸ್ವರೂಪವು ಸೃಷ್ಟಿಯ ಮೂಲವಾದ ಭಗವತ್ ಚೈತನ್ಯುವು ಸ್ಥಿರ ಮತ್ತು ಚಅರ ಎಂದು ಸೂಚಿಸುತ್ತದೆ. ವಿಶ್ವ ಸೃಷ್ಟಿಗೆ ಚಿರ ಚೈತನ್ಯದ ಜತೆಗೆ ಮತ್ತೊಂದು ಶಕ್ತಿಯೂ ಕಾರಣವಾಗುತ್ತದೆ. ಅದುವೇ ದೇವಿ ಶಕ್ತಿ. ಕಾಲಮಾನ ಬದಲಾದಂತೆ ಪೂಜಾ ವಿಧಾನವೂ ಬದಲಾಗಿದೆ. ಬದಲಾದ ಪದ್ಧತಿಯಲ್ಲಿ ದೇವಿಯ ವಿವಿಧ ಗುಣಗಳನ್ನು ಆಧರಿಸಿ ಆರಾಧಿಸಲಾಗುತ್ತದೆ. ಅಂದರೆ ಸರಸ್ವತಿಯಲ್ಲಿ ಜ್ಞಾನ ಕಲೆಗಳನ್ನು, ಲಕ್ಷ್ಮಿಯಲ್ಲಿ ಸಮೃದ್ಧಿ, ಐಶ್ವರ್ಯಗಳನ್ನು ಮತ್ತು ಪ್ರಕೃತಿಯ ಹೇರಳತೆ, ದಯೆ, ಸುಮಂಗಲಿ ಭಾಗ್ಯ, ಸಂತಾನ ಶಕ್ತಿಗಳನ್ನು ಗೌರಿಯಲ್ಲಿ ಕಾಣುತ್ತೇವೆ.

ತಪಃಶಕ್ತಿಯ ಸಾಕಾರ ಮಹಾ ಗೌರಿ
ಪಾರ್ವತಿಯೇ ಗೌರಿ. ಆಕೆ ಸೃಷ್ಟಿ ಕ್ರಿಯೆ ಪ್ರತಿಯೊಂದು ಕಣದಲ್ಲೂ ತನ್ನ ಆಸ್ತಿತ್ವನ್ನು ಪ್ರಕಟಗೊಳಿಸುತ್ತಾಳೆ. ಆಕೆಯೇ ಕುಂಡಲಿನಿ ಶಕ್ತಿಯಾಗಿದ್ದಾಳೆ. ಭಗವಂತನದು ಪೂರ್ಣ ರೂಪ. ಆತ ಯಾವುದೇ ರೀತಿಯ ಉಪಾಧಿಗಳಿಂದ ಬಾಧಿತನಾಗುವುದಿಲ್ಲ. ನೈದಿಲೆಯ ಎಲೆಯ ಮೇಲಿನ ಬಿಂದುವಿನಂತೆ ಆತ ಕಳಂಕರಹಿತನಾಗಿರುತ್ತಾನೆ. ಆದರೆ ಅದೇ ಭಗವಂತ ಮಾನುಷ ಅವತಾರವನ್ನು ತಾಳಿದಾಗ, ವಸ್ತು ಸ್ಥಿತಿ ಬೇರೆಯಾಗುತ್ತದೆ. ಮನುಷ್ಯ ಸಹಜವಾದ ಗುಣಗಳು ಆತನಲ್ಲಿ ಮೇಳೈಸುತ್ತವೆ. ಭಾವನೆಯ ಅಲೆಗಳಲ್ಲಿ ಆತ ಮುಳುಗೇಳುತ್ತಾನೆ. ಹೀಗೆ ಉಪಾಧಿಗಳಿಂದ ಬಂಧಿತವಾದ ಮನುಷ್ಯನ ಶರೀರ ವಿಶ್ವಪ್ರಜ್ಞೆಯೊಂದಿಗೆ ಸಮ್ಮಿಳತವಾಗುವುದು ಸುಲಭವಲ್ಲ. ಅವೆರಡೂ ಒಂದಾಗಲು ವಿಶೇಷವಾದ ವೇದಿಕೆಯೊಂದು ಬೇಕು. ಆ ವೇದಿಕೆಯೇ ತಪಸ್ಸು. ತಪಸ್ಸು ಎಂದರೆ ಯಾವುದೋ ಕಾಡಿನ ಮೂಲೆಯಲ್ಲಿ ಕೂತು, ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗಿ, ಕಣ್ಮುಚ್ಚಿಕೊಂಡು ಮಾಡುವ ಧ್ಯಾನ ಕ್ರಮವಲ್ಲ. ಬದಲಿಗೆ ಅವಿರತವಾಗಿ ಅಂತರಾತ್ಮನೊಂದಿಗೆ ಸಂಭಾಷಿಸುವುದು. ಹೀಗೆ ಅತ್ಮನೊಂದಿಗೆ ಸಂವಹಿಸುವ ಪ್ರಕ್ರಿಯೆಯೇ ಆತ್ಮ ಶೋಧನೆಯಾಗುತ್ತದೆ. ಆತ್ಮ ಶೋಧನೆಯಿಂದ ಮನಸ್ಸು, ದೇಹ ಪರಿಶುದ್ಧವಾಗುತ್ತದೆ.

ಏನನ್ನಾದರೂ ಪಡೆಯಬಹುದು
ತಪಃಶಕ್ತಿಯ ಪ್ರಭಾವದಿಂದ ಏನನ್ನು ಬೇಕದರೂ ಪಡೆದುಕೊಳ್ಳಬಹುದು. ಆಧ್ಯಾತ್ಮಿಕ ಉನ್ನತಿಯ ಜತೆ ಜತೆಗೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ನಿಜವಾದ ತಪಸ್ಸಿಗೊಂದು ಉತ್ತಮ ಉದಾಹರಣೆಯೇ ಪಾರ್ವತಿ. ಪೂರ್ವದಲ್ಲಿ ದಾಕ್ಷಾಯಣಿಯಾಗಿ, ಶಿವನ ಸತಿಯಾಗಿ, ದಕ್ಷಯಜ್ಞದಲ್ಲಿ ಪತಿಗಾದ ಅವಮಾನವನ್ನು ಸಹಿಸದೆ ಜ್ವಾಲಾಗ್ನಿಗೆ ತನ್ನ ದೇಹವನ್ನೇ ಅರ್ಪಿಸಿಕೊಂಡ ಮಹಾಸತಿ. ಶಿವನನ್ನೇ ಮತ್ತೆ ಪಡೆಯಬೇಕೆನ್ನುವ ಉತ್ಕಟಾಂಕ್ಷೆಯಿಂದಲೇ ಹಿಮವಂತನ ಮಗಳಾಗಿ ಮತ್ತೆ ಅವತರಿಸಿದಳು. ಗಿರಿಜೆಯಾಗಿ, ಪಾರ್ವತಿಯಾಗಿ ತನ್ನ ಆದಿಶಕ್ತಿ ಸ್ವರೂಪವನ್ನು ಪ್ರಕಟಗೊಳಿಸಿದಳು. ಹೌದು, ಮಾತೆ ಮಹಾಗೌರಿಯೇ ಪರಾಶಕ್ತಿ. ಇಡೀ ಬ್ರಹ್ಮಾಂಡದ ತುಂಬಾ ಆಕೆಯ ಅವ್ಯಕ್ತ ಚೇತನ ವ್ಯಾಪಿಸಿದೆ. ಆಕೆ ಮೋಡಗಳಲ್ಲಿ ಮೋಡವಾಗಿದ್ದಾಳೆ. ಬಿಂದುವಿನಲ್ಲಿ ಬಿಂದುವಾಗಿದ್ದಾಳೆ.

ಒಲುಮೆಗೆ ಯತ್ನ
ಹೀಗೆ ಮಹಾಮಾಯಿ ಯಾಗಿದ್ದರೂ, ಸೃಷ್ಟಿ, ಸ್ಥಿತಿಗೆ ಕಾರಣಕರ್ತೆಯಾಗಿದ್ದರೂ ಹಿಮವಂತನ ಮಗಳಾಗಿ ಧರೆಯಲ್ಲಿ ಅವತರಿಸಿದ ಪಾರ್ವತಿ ಸಹಜ ಸ್ವಭಾವದಿಂದಲೇ ಶಿವನ ಒಲುಮೆಗೆ ಯತ್ನಿಸುತ್ತಾಳೆ. ಕಠೋರವಾದ ತಪಸ್ಸನ್ನು ಮಾಡುತ್ತಾಳೆ. ದೇವತೆಗಳು ಇತ್ತ ತಪೋ ನಿರತನಾದ ಶಿವನ ಏಕಾಗ್ರತೆಯನ್ನು ಭಂಗ ಮಾಡಲು ಯತ್ನಿಸುತ್ತಾರೆ. ಅವರ ಪರವಾಗಿ ಮನ್ಮಥನ ಪ್ರವೇಶವಾಗುತ್ತದೆ. ಮನ್ಮಥನ ಪ್ರಯತ್ನಕ್ಕೆ ರತಿ ಕೈಜೋಡಿಸುತ್ತಾಳೆ. ಮನ್ಮಥನ ಹೂಬಾಣ ಶಿವನ ಧೃತಿಯನ್ನು ಕೆಡಿಸುತ್ತದೆ. ಚಿತ್ತ ಚಂಚಲವಾಗುತ್ತದೆ. ಕಾಮನನ್ನು ದಹಿಸುತ್ತಾನೆ. ಆಗ ಪಾರ್ವತಿಗೆ ಶಿವನೊಲುಮೆ ಸಂಪಾದಿಸಲು ತಪಸ್ಸೊಂದು ಉತ್ತಮ ಮಾರ್ಗ ಎನ್ನುವ ಸತ್ಯ ವೇದ್ಯವಾಗುತ್ತದೆ. ಹೀಗೆ ಶಿವನ ಒಲಮೆಗಾಗಿ ಪಾರ್ವತಿ ತಪಸ್ಸಿಗೆ ಕೂತ ಸ್ಥಳವೇ ಗೌರಿ ಶಿಖರ. ಆಕೆಯದು ಅಂತಿಂತಹ ತಪಸ್ಸಲ್ಲ. ಕಠೋರವಾದ ತಪಸ್ಸು. ಆಯಾ ಋತುಮಾನಕ್ಕೆ ವೈರುಧ್ಯವಾದ ಮಾರ್ಗವನ್ನೇ ಆಕೆ ಅನುಸರಿಸುತ್ತಾಳೆ. ಬೆಂಕಿ, ನೀರು, ಗಾಳಿ, ಸುಖ, ದುಃಖ ಯಾವೊಂದು ಸಂಗತಿಯೂ ಆಕೆಯ ಧೃತಿಗೆಡಿಸುವುದಿಲ್ಲ. ಮನಸ್ಸು ಶಿವನ ಹೊರತಾಗಿ ಬೇರೆಡೆ ನಿಲ್ಲುವುದಿಲ್ಲ. ನಾರುಮುಡಿ ಉಟ್ಟ ಪಾರ್ವತಿ ತನ್ನ ಮುಡಿಯನ್ನು ಕಟ್ಟಿರುತ್ತಾಳೆ. ಇಂದ್ರಿಯಗಳನ್ನು ಬಿಗಿ ಹಿಡಿದಿಡುತ್ತಾಳೆ. ಶ್ವಾಸೋಚ್ಛಾಸಗಳನ್ನು ಬಿಗಿಹಿಡಿದು ಶಿವ ನಾಮವನ್ನು ನಿರಂತರವಾಗಿ ಜಪಿಸುತ್ತಾಳೆ. ಶಿವನನ್ನು ಹೊಂದುವ ಅಪೇಕ್ಷೆಯಲ್ಲಿ ಹಸಿವು, ನಿದ್ರೆ, ಬಾಯಾರಿಕೆ, ದಣಿವನ್ನು ಮರೆಯುತ್ತಾಳೆ. ಅನ್ನ ಆಹಾರಾದಿಗಳನ್ನು ತ್ಯಜಿಸುತ್ತಾಳೆ. ಆಕೆಯ ಅಪೇಕ್ಷೆಯಲ್ಲಿ ಸಾತ್ವಿಕ ಭಾವನೆಯಿದೆ.

ಸಾತ್ವಿಕತೆಯೇ ಮಹಾಶಕ್ತಿ
ಲೋಕಕಲ್ಯಾಣದ ದೃಷ್ಟಿಯಿದೆ. ಆ ಕಾರಣದಿಂದಲೇ ಕಾಡಿನ ಪರಿಸರವೂ ಪ್ರಶಾಂತವಾಗುತ್ತದೆ. ವನ್ಯಮೃಗಗಳು ಸಹಜ ಸ್ವಭಾವವನ್ನು ಮರೆತು ಶಾಂತವಾಗುತ್ತವೆ. ಎಲ್ಲೆಡೆ ಪ್ರೀತಿ, ವಾತ್ಸಲ್ಯ, ಕರುಣೆಯ ರಸಧಾರೆ ಉಕ್ಕಿ ಹರಿಯುತ್ತದೆ. ಪಾರ್ವತಿಯ ಸಾತ್ವಿಕ ತಪಸ್ಸಿನಿಂದ ಶಿವ ಸಂಪ್ರೀತಗೊಳ್ಳುತ್ತಾನೆ. ಆಕೆಯನ್ನು ಸಹಧರ್ಮಿಣಿಯಾಗಿ ಸ್ವೀಕರಿಸಲಯ ಒಪ್ಪುತ್ತಾನೆ. ಶಿವ ಪಾರ್ವತಿಯರ ಕಲ್ಯಾಣ ಮಹೋತ್ಸವಕ್ಕೆ ದೇವತೆಗಳು ಸಾಕ್ಷಿಯಾಗುತ್ತಾರೆ. ಲೋಕದಲ್ಲಿ ಶಿವ, ಪಾರ್ವತಿ ತನ್ನ ತಪಃಶಕ್ತಿಯ ಪ್ರಭಾವದಿಂದ ದೈವೀಪ್ರಜ್ಞೆಯಾಗಿ ಬದಲಾಗುತ್ತಾಳೆ. ಶಿವನ ಪಾರ್ವತಿಗೆ ವೇದ, ಯೋಗಶಾಸ್ತ್ರ, ತಂತ್ರ ಮತ್ತು ಆರಾಧನಾ ಕ್ರಮದ ರಹಸ್ಯವನ್ನು ಬೋಧಿಸುತ್ತಾನೆ. ಹೀಗೆ ಶಿವ, ಪಾರ್ವತಿಯರ ನಡುವಿನ ಸಂವಾದವೇ ಲೋಕಜ್ಞಾನಕ್ಕೆ ಕಾರಣವಾಗುತ್ತದೆ.

ಪ್ರಕೃತಿ ಮಾತೆ ವರದಾತೆ
ಭಾದ್ರಪದ ಮಾಸದ ಆರಂಭದೊಂದಿಗೆ ಗೌರಿ ಹಬ್ಬವೂ ಬರುತ್ತದೆ. ಈ ಸಂದರ್ಭದಲ್ಲಿ ಮಳೆಯಿಂದ ನೆಂದ ಧರೆ ಬಸಿರಾಗಿ ಹಸಿರು ಬೆಳೆಯನ್ನು ಹೊರತರುತ್ತದೆ. ಹಾಗೆಂದೇ ಗೌರಿ ಪ್ರಕೃತಿ ಮಾತೆಯ ಸಂಕೇತ. ಆ ಕಾರಣ ಗೌರಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆಯೆಂದು ಪೂಜಿಸುತ್ತಾರೆ. ಪುರಾಣ ಕಥೆಯ ಪ್ರಕಾರ ಗೌರಿಯ ಸಂತಾನ ಸುಬ್ರಹ್ಮಣ್ಯ ಮತ್ತು ಗಣಪತಿ. ಶಿವನ ಗಣಗಳ ನಾಯಕನೇ ಗಣಪತಿ. ಅವನು ಇಚ್ಛಾಶಕ್ತಿಯ ಪ್ರತೀಕವಾಗಿದ್ದಾನೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದಾಗ, ಗೌರಿ-ಗಣೇಶರ ಆರಾಧನೆಯಿಂದ ನಮ್ಮೊಳಗಿನ ಒರಟು ಗುಣಗಳನ್ನು ಗೆಲ್ಲುವ ಇಚ್ಛಾಶಕ್ತಿ ವೃದ್ಧಿಯಾಗುತ್ತದೆ. ಸುಬ್ರಹ್ಮಣ್ಯ. ಅಂದರೆ ಬ್ರಹ್ಮಜ್ಞಾನಿಯ ಸ್ಥಿತಿಯನ್ನು ಪಡೆಯಲು ಅನುಕೂಲವಾಗುತ್ತದೆ.
(ವಿವಿಧ ಮೂಲಗಳಿಂದ)

Tags: BaginaGauri PoojaGururaja PoshettihallySpecial Articleಗುರುರಾಜ ಪೋಶೆಟ್ಟಿಹಳ್ಳಿಗೌರಿ ಪೂಜೆಪಾರ್ವತಿಬಾಗಿನಭಾದ್ರಪದ ಮಾಸಮಹಾ ಗೌರಿರಾಮಕೃಷ್ಣ ಪರಮಹಂಸರು
Share219Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕುಬೇರನ ಅಹಂಕಾರವನ್ನು ಮಣ್ಣು ಪಾಲು ಮಾಡಿದ ಗಣೇಶನ ಕತೆ

Next Post

ಸೆ.5ರ ನಂತರ ಮೋದಿ ಸಂಕಷ್ಟಕ್ಕೆ ಪರಿಹಾರ, ಆದರೂ ಆತಂಕ ಎದುರಿಸಬೇಕದೀತು: ಅಮ್ಮಣ್ಣಾಯ ಭವಿಷ್ಯ

kalpa News

kalpa News

Next Post
ಸೆ.5ರ ನಂತರ ಮೋದಿ ಸಂಕಷ್ಟಕ್ಕೆ ಪರಿಹಾರ, ಆದರೂ ಆತಂಕ ಎದುರಿಸಬೇಕದೀತು: ಅಮ್ಮಣ್ಣಾಯ ಭವಿಷ್ಯ

ಸೆ.5ರ ನಂತರ ಮೋದಿ ಸಂಕಷ್ಟಕ್ಕೆ ಪರಿಹಾರ, ಆದರೂ ಆತಂಕ ಎದುರಿಸಬೇಕದೀತು: ಅಮ್ಮಣ್ಣಾಯ ಭವಿಷ್ಯ

Leave a Reply Cancel reply

Your email address will not be published. Required fields are marked *

No Result
View All Result
ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
English Articles

Kotak Mahindra to acquire Deutsche Bank’s retail banking

by kalpa News
July 1, 2026
0

Kalpa Media House  | Bengaluru | Kotak Mahindra Bank Ltd. (“KMBL” / “Kotak”) and Deutsche Bank AG (XETRA: DBKGn.DB /...

Read moreDetails
A.G. Srinivas assumes charge as Additional General Manager of SWR

A.G. Srinivas assumes charge as Additional General Manager of SWR

June 30, 2026
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL