ಚಳ್ಳಕೆರೆ: ಬೆಳಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿ ತಿಪ್ಪಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಬೆಳಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಚುನಾವಣೆ ಗುರುವಾರ ನಡೆಯಿತು. ಮಂಜುಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ, ತಿಪ್ಪಮ್ಮ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಗೌತಮ್ ಘೋಷಿಸಿದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷೆಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ತಿಪ್ಪಮ್ಮ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ದಿಗೆ ಶ್ರಮಿಸುವುದು ನಮ್ಮ ಕೆಲಸ. ನಮ್ಮ ಭಾಗದಲ್ಲಿ ಬರಗಾಲವಿರುವುದರಿಂದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಿವೇಶನವಿಲ್ಲದ ಕಡುಬಡವರಿಗೆ ನಿವೇಶನ ಕೊಡಲಾಗುವುದು. ವಾಸದ ಮನೆ ಇಲ್ಲದ ಬಡವರಿಗೆ ಸರ್ಕಾರದಿಂದ ನೀಡುವ ಮನೆಯನ್ನು ಹಂಚಲಾಗುವುದು. ನರಾಗೆ ಯೋಜನೆಡಿಯಲ್ಲಿ ಕೆಲಸ ಕೊಡಲು ಕ್ರಮಕೈಗೊಳ್ಳುವ ಜೊತೆಯಲ್ಲಿ, ಬಯಲು ಮುಕ್ತ ಶೌಚಾಲಯ ಗ್ರಾಮವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಗುಂಡಪ್ಪ, ಇದ್ದರು. ಎಎಸ್ಐ ಅಲ್ಕುರಪ್ಪ ಬಂದೋಬಸ್ತ್ ಕಲ್ಪಿಸಿದ್ದರು. ಉಪಾಧ್ಯಕ್ಷೆ ಮಹಾದೇವಮ್ಮ, ಮಾಜಿ ಅಧ್ಯಕ್ಷೆ ಎ. ಸುನೇತ್ರ, ಮಂಜುಳ, ಮಂಜಮ್ಮ, ಸದಸ್ಯರಾದ ಕೆ.ಟಿ. ನಿಜಲಿಂಗಪ್ಪ, ದ್ಯಾಮಣ್ಣ, ಗೋಪಾಲಪ್ಪ, ಶಾರದಮ್ಮ, ಸಂಗಮ್ಮ, ನಾಗಭೂಷಣ್ ರಾವ್, ರಾಜಣ್ಣ, ವೀರಣ್ಣ, ಶಿವಣ್ಣ, ಆರ್. ಮಂಜಮ್ಮ, ಲಕ್ಷ್ಮೀದೇವಿ, ಕೆ.ಎಲ್. ಮಂಜಮ್ಮ, ತಿಮ್ಮಕ್ಕ, ಮುಖಂಡರಾದ ತಿಪ್ಪೇಸ್ವಾಮಿ, ಪ್ರಹ್ಲಾದ್, ನಿವೃತ ಶಿಕ್ಷಕರಾದ ರಾಜಣ್ಣ, ಪ್ರಗತಿಪರ ರೈತ ದೊಡ್ಡಲಿಂಗೇ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ಗ್ರಾಮಪಂಚಾಯ್ತಿ ಸಿಬ್ಬಂದಿಗಳು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post