ಕಲ್ಪ ಮೀಡಿಯಾ ಹೌಸ್
ತಿರುಪತಿ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಏ.12 ರಿಂದ ಸರ್ವದರ್ಶನ ಟೋಕನ್ ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದ್ದು, ಭಾನುವಾರ ಸಂಜೆ ವರೆಗೆ ಮಾತ್ರ ನೀಡಲಾಗುತ್ತದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿರುವ ಶ್ರೀಕ್ಷೇತ್ರ ಚಿತ್ತೂರು ಜಿಲ್ಲೆಗೆ ಸೇರಿದ್ದು, ಜಿಲ್ಲೆ ಕೋವಿಡ್-19 ಹಾಟ್ ಸ್ಪಾಟ್ಗಳ ಪೈಕಿ ಒಂದಾಗಿದ್ದು, ಏ. 7 ರಂದು ಚಿತ್ತೂರಿನಲ್ಲಿ 296 ಪ್ರಕರಣಗಳು ವರದಿಯಾಗಿದೆ. ತಿರುಪತಿ ನಗರ ಪ್ರದೇಶದಲ್ಲಿ 120 ಕೋವಿಡ್-19 ಪ್ರಕರಣಗಳು, ತಿರುಪತಿ ಗ್ರಾಮೀಣ ಪ್ರದೇಶದಲ್ಲಿ 48 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್-19 ಸೋಂಕಿತರ ಸಂಖ್ಯೆ 91,000 ದಾಟಿರುವ ಪರಿಣಾಮ ಸರ್ವದರ್ಶನ ಟೋಕನ್ಗಳಿಗಾಗಿ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಭೂದೇವಿ ಕಾಂಪ್ಲೆಕ್ಸ್, ವಿಷ್ಣು ನಿವಾಸಮ್ನಲ್ಲಿ ಸೇರುವುದರಿಂದ ಕೋವಿಡ್-19 ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ ಟಿಟಿಡಿ ಸರ್ವದರ್ಶನ ಟೋಕನ್ ನೀಡುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದು, ಪುನಃ ಪ್ರಾರಂಭವಾಗುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post