No Result
View All Result
Nestlé India Reports Strong Q1 Growth
English Articles

Nestlé India Reports Strong Q1 Growth; Sales Up 25.4%, Profit Jumps 47.9%

by kalpa News
July 23, 2026
0

Kalpa Media House  |  New Delhi  | Nestlé India reaffirmed its commitment to sustainability, especially in strengthening its dairy value...

Read moreDetails
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
  • Advertise With Us
  • Grievances
  • About Us
  • Contact Us
Thursday, July 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ತಪೋಭೂಮಿ ಇದು ಭಾರತ: ಪ್ರತಿ ಬಾಲಕನೂ ರಾಮನಂತೆ, ಪ್ರತಿ ಬಾಲಿಕೆಯೂ ಸೀತೆಯು

ವಿಹಿತವಿದ್ಯಾ: ಅಮೋಘ ಪುಸ್ತಕದ ಒಂದು ಸರಳ ವಿಮರ್ಶೆ

kalpa News by kalpa News
February 28, 2020
in ಸಚಿನ್ ಪಾರ್ಶ್ವನಾಥ್
0
ತಪೋಭೂಮಿ ಇದು ಭಾರತ: ಪ್ರತಿ ಬಾಲಕನೂ ರಾಮನಂತೆ, ಪ್ರತಿ ಬಾಲಿಕೆಯೂ ಸೀತೆಯು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವನದಲ್ಲಿ ಬರುವ ಕೆಲವು ಸಾಲುಗಳು ಇಂತಿವೆ. ಮರಿ ಹಕ್ಕಿ ತನ್ನ ಅಮ್ಮನನ್ನು ಕೇಳುತ್ತದೆ, ಅಮ್ಮಾ ಹಕ್ಕಿ ಮೊಟ್ಟೆಯನ್ನು ಹಾವು ತಿಂದರೆ, ಹಾವಿನ ಹೊಟ್ಟೆಯಲ್ಲಿ ಹಕ್ಕಿಯೇ ಹುಟ್ಟುತ್ತದೆ ಅಲ್ಲವೇನಮ್ಮ? ಎಂದು. ಆಗ ತಾಯಿ ಹಕ್ಕಿ ಹೇಳುತ್ತದೆ.

ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ಮೇಲೆ ಹೇಳೋದಿನ್ನೇನು?
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು..

ಅದೇ ಮರಿ ಹಕ್ಕಿಯ ಮುಗ್ಧತೆ, ಅದೇ ದಡ್ಡತನ ನಮ್ಮಲ್ಲೂ ಇದೆ, ನಾವು ಇಂದೂ ಅದೇ ಮರಿಗಳಾಗಿಯೇ ಉಳಿದಿದ್ದೇವೆ. ಆಂಗ್ಲ ಶಿಕ್ಷಣ ಪದ್ಧತಿಯ ಪಡೆದರೇನಾಯ್ತು ನಾವು ಭಾರತೀಯರೇ, ಮಕ್ಕಳು ಪಾಕಿಸ್ತಾನಕ್ಕೆ ಜೈ ಅಂದರೇನಾಯ್ತು ನಾವು ಭಾರತೀಯರೇ, ಭಾರತವನ್ನು ಕತ್ತರಿಸಿ ಬಿಡೋಣ ಎಂದರೇನಾಯ್ತು ನಾವು ಭಾರತೀಯರೇ. ನಮ್ಮ ತಲೆಗಳನ್ನು ತಿದ್ದಲು ಅವರಿಗೆ ನೀಡಿ ಎಷ್ಟೋ ದಶಕಗಳು ಉರುಳಿಹೋಗಿವೆ. ಆದರೆ ಹಕ್ಕಿ ಮೊಟ್ಟೆಯಾಗಿ ಹಾವಿನ ಹೊಟ್ಟೆಯೊಳಗೆ ಹೋಗೋಣ, ನಂತರವೂ ನಾವು ಹಕ್ಕಿಯಾಗಿಯೇ ಹೊರ ಬರುವೆವು ಎಂಬ ಭಾವನೆ. ಅದೇ ಅವಶ್ಯಕ ಶಿಕ್ಷಣದ ಅನಿವಾರ್ಯತೆ. ನಮಗೆ JNU ಮೇಲಿರುವಷ್ಟು ಅಕ್ಕರೆ ನಲಂದದ ಮೇಲಿಲ್ಲ, ನಮಗೆ ಪೊಳ್ಳು ಕಾಲ್ಪನಿಕ ಐತಿಹಾಸಿಕ ಸಿನಿಮಾಗಳ ಮೇಲಿರುವಷ್ಟು ಅಭಿಮಾನ ನೈಜ ಇತಿಹಾಸ ಅರಿಯುವುದರಲಿಲ್ಲ. ಹಾಗಾದರೆ ಎಲ್ಲಿ ಹೋಯಿತು ಆ ಅಭಿಮಾನ? ದೇಶಭಕ್ತಿ? ಉತ್ತರಗಳನ್ನು ಹುಡುಕಿ ಹೊರಟಾಗ ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕಡೆ ಸಾಗುತ್ತದೆ ನಮ್ಮ ಹಾದಿ.


ಆ ದಿನ ಆಂಗ್ಲರು ಅದನ್ನೇ ಹೇಳಿದ್ದು ಭಾರತೀಯರ ತುಳಿಯಲು ತಮ್ಮ ಸೈನ್ಯ, ಯುದ್ಧ, ಆಮಿಷಗಳಿಂದ ಸಾಧ್ಯವಿಲ್ಲ. ಅವರ ಶಿಕ್ಷಣ ಪದ್ಧತಿಯ ಮೇಲೆ ಆಕ್ರಮಣ ಮಾಡೋಣ ಎಂದು. ಆಗ ಶುರುವಾದ ನಕಲಿ ಇತಿಹಾಸಕಾರರ, ಮಧ್ಯವರ್ತಿಗಳ ಪೀಳಿಗೆ ಇಂದಿಗೂ ಜೀವಂತವಾಗಿದೆ. ಭವ್ಯ ಭಾರತದ ರಾಜಧಾನಿಯಲ್ಲಿ ನಿಂತು ಒಬ್ಬ ದ್ರೋಹಿ ಭಾರತದ ಕುತ್ತಿಗೆಯ ತರಿಯೋಣ ಎಂದರೆ ಅವನ ಸುತ್ತಲಿನ ಜನ ಅಹುದಹುದು ಎನ್ನುತ್ತಾರೆ. ಅದಕ್ಕೆ ಮತ್ತೆ ಕೆಲವರ ಸ್ವಘೋಷಿತ ಪ್ರಮುಖರ ಬೆಂಬಲ. ಇಂತಹ ಮೌಢ್ಯರ ತುಳಿದು ಮುನ್ನಡೆಯಲು ನಮಗೆ ನಮ್ಮ ನೈಜ ಭಾರತವನ್ನು ಪಸರಿಸುವ ಅವಶ್ಯಕತೆ ಇದೆ. ಅಂತಹುದೇ ಒಂದು ಪ್ರಯತ್ನ ವಿಹಿತವಿದ್ಯಾ.

ವಿಹಿತವಿದ್ಯಾ ಇದನ್ನು ಪುಸ್ತಕ ಎಂದು ಕರೆಯಲು ಆಗುವುದೇ ಇಲ್ಲ. ಇದೊಂದು ಗ್ರಂಥವೇ ಸರಿ. ಸನಾತನ ಧರ್ಮ ಮತ್ತು ಸಂಘಕ್ಕಾಗಿ ಇಡೀ ಜೀವನವನ್ನು ಸವೆಸಿದ ಶ್ರೀಯುತ ನಾರಾಯಣ ಶೇವಿರೆಯವರ ಅನುಭವದ ಧಾರೆ. ನಿಜ ಇದು ಒಂದೇ ಗುಕ್ಕಿಗೆ ಓದಿ ಮುಗಿಸುವ/ಮುಗಿಸಬಹುದಾದ ಕೃತಿಯಲ್ಲ. ಒಂದು ಅನನ್ಯ ಸಂಗ್ರಹಯೋಗ್ಯ ಗ್ರಂಥ. ಶ್ರೀಗಂಧದ ಮರದ ಎಲೆ, ಕೊಂಬೆ, ತೊಗಟೆ, ಕಾಂಡ, ಬೇರು ಅಂತೆ ಅದರ ಅಣು ರೇಣು ತೃಣಕಾಷ್ಠ ಎಲ್ಲವೂ ಗಂಧವೇ. ಹಾಗೆಯೇ ಈ ಕೃತಿ. ಇದರ ಪ್ರತಿ ಪದವೂ ಅನುಭವದ ಎರಕವೇ. ಪ್ರತಿ ಅಧ್ಯಾಯವನ್ನು ಎರಡು ಬಾರಿ ಓದಿ ಮುಂದಕ್ಕೆ ಹೋಗುವಷ್ಟು ವಿಚಾರ. ಎಲ್ಲಿಯೂ ವಿಡಂಬನೆಯ, ವಿಕಟತೆಯ ಅಥವಾ ಅಪಹಾಸ್ಯದ ಕಿಂಚಿತ್ತೂ ಕಾಣಬರುವುದಿಲ್ಲ. ಏನೂ ಹೇಳಬೇಕೋ ಅದನ್ನು ಅತ್ಯಂತ ಸರಳವಾಗಿ, ಅದಿಷ್ಟನ್ನೇ ಹೇಳಲಾಗಿದೆ. ನಾವು ಧರ್ಮವನ್ನು, ಪರಂಪರೆಯನ್ನು ದಾಟಿ ಬಂದಿದ್ದೇವೆ, ನಮಗದರ ಅವಶ್ಯಕತೆಯೂ ಇಲ್ಲ ಎನ್ನುವ ಈ ಕಾಲದಲ್ಲಿ ನಾವು ಅದನ್ನು ಮುಟ್ಟುವುದಲ್ಲ, ನಾವದರ ಹಾದಿಯಲ್ಲೂ ಇಲ್ಲ ಎಂದರಿಯಲು ಈ ಕೃತಿ ಬೇಕು.

ಒಂದಿಷ್ಟು ಸಾಲುಗಳು ನಿಮಗಾಗಿ..

  • ಗುರು ಎಂದರೆ ದೊಡ್ಡದು ಎಂದರ್ಥವಷ್ಟೆ. ದೊಡ್ಡ ಕುಲ ಗುರುಕುಲ. ಅಲ್ಲಿ ದೊಡ್ಡವರಿರುತ್ತಾರೆ. ದೊಡ್ಡವರಿಗೆ ಎಲ್ಲರನ್ನೂ ದೊಡ್ಡವರಾಗಿಸುವ ಜವಾಬ್ದಾರಿ, ಹುಮ್ಮಸ್ಸು. ಅವರ ಸನ್ನಿಧಿಯಲ್ಲಿ ಉಳಿದವರಿಗೆ ದೊಡ್ಡವರಾಗುವ ಅವಕಾಶ. ಅದಕ್ಕಾಗಿಯೇ ಜತೆಜತೆಗೆ ಇರಬೇಕು. ಆಗದು ಗುರುಕುಲವಾಗುತ್ತದೆ. ಅಂಥ ಗುರುಕುಲಗಳ ದೇಶ ಭಾರತ.
  • ಶಿಕ್ಷಣವೆಂದರೆ ಉದ್ಯೋಗಾರ್ಥಿಯ ತರಬೇತಿಯಲ್ಲ.
  • ಅದು ದುರ್ಲಾಭವನ್ನು ಕೊಳ್ಳೆ ಹೊಡೆವ ವಾಣಿಜ್ಯ ವ್ಯವಹಾರವಲ್ಲ.
  • ಶಿಕ್ಷಣವೆಂದರೆ ವ್ಯಕ್ತಿಯನ್ನು ಮನುಷ್ಯನಾಗಿಸುವ ಸಂಸ್ಕಾರವಿಶೇಷ.
  • ರಾಷ್ಟ್ರದುನ್ನತಿಯ ಕಾರ್ಯದಲ್ಲಿ ತೊಡಗುವುದಕ್ಕಾಗಿ ಭವಿಷ್ಯದ ಪೀಳಿಗೆಯನ್ನು ತಯಾರಿಸುವ ಸಾಮಾಜಿಕ ಜವಾಬ್ದಾರಿ.
  • ಸ್ವಾತಂತ್ರ ಹೋರಾಟಗಾರರಾದ ಶ್ರೀ ಧರ್ಮಪಾಲ್ ಅವರ ’ದಿ ಬ್ಯೂಟಿಫುಲ್ ಟ್ರೀ’ ಗ್ರಂಥದಲ್ಲಿ ಬರುವ ಸಾಲುಗಳು, ಬಂಗಾಳ-ಬಿಹಾರಗಳಲ್ಲಿ ಸಮೀಕ್ಷೆ ಮಾಡಿದ ವಿಲಿಯಂ ಆಡಂ, ಮದ್ರಾಸ್ ಪ್ರೆಸಿಡೆನ್ಸಿ ಬಗ್ಗೆ ಥಾಮಸ್ ಮನ್ರೋ, ಬಾಂಬೇ ಪ್ರೆಸಿಡೆನ್ಸಿ ಬಗ್ಗೆ ಪ್ರೆನ್ಡರ್ ಗಾಸ್ಟ್, ಪಂಜಾಬ್ ಪ್ರಾಂತ್ಯದ ಬಗ್ಗೆ ಜಿ. ಡಬ್ಲ್ಯೂ. ಲೈಟ್ನರ್ ಇವರು ’ಇಲ್ಲಿ ಪ್ರತಿಯೊಂದು ಹಳ್ಳಿಯೂ ಕನಿಷ್ಠ ಒಂದು ಶಾಲೆಯನ್ನು ಹೊಂದಿದೆ’ ಎಂದಿದ್ದಾರೆ. ಇದು 19ನೆಯ ಶತಮಾನದ ಅಂತ್ಯದ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಒಂದು ಚಿತ್ರಣ. ಅಂದರೆ ’1850ರವರೆಗೆ ನಮ್ಮ ದೇಶದಲ್ಲಿ ಪಾಠಶಾಲೆಗಳಿಲ್ಲದ ಹಳ್ಳಿಯೇ ಇರಲಿಲ್ಲ’. ಅಲ್ಲದೆ ಶಿಕ್ಷಣ ಬ್ರಾಹ್ಮಣರಿಗಷ್ಟೇ ಸೀಮಿತವಾಗಿರಲಿಲ್ಲ. ಶೂದ್ರರು, ಅವರಿಗಿಂತ ಕೆಳಗಿನ ಜಾತಿಯವರು, ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಎಲ್ಲರೂ ಶಿಕ್ಷಣ ಪಡೆಯುತ್ತಿದ್ದರು.
  • ಶಿಕ್ಷಣ ಲಕ್ಷ್ಯದ ಕುರಿತು ಆಂಗ್ಲರೇ ಹೊರಡಿಸಿದ್ದ ಉದ್ಘೋಷವಿತ್ತು: ’ಕಾರಕೂನರ ನಿರ್ಮಾಣ’.
  • ಅದೊಂದು ಐತಿಹಾಸಿಕ ಸ್ಥಳ. ಮಹಾಪುರುಷರು ಜನ್ಮ ತಾಳಿದ ಊರು. ಊರದರ್ಶನಕ್ಕೆಂದು ಪರ ಊರಿನ ಹಿರಿಯೊಬ್ಬರು ಬಂದರು. ಅಲ್ಲಿಯ ಕುರಿತಾಗಿ ಅಷ್ಟೊಂದು ಮಾಹಿತಿ ಇರಲಿಲ್ಲ. ಎದುರು ಸಿಕ್ಕ ಒಬ್ಬ ಹುಡುಗನಲ್ಲಿ ’ಇಲ್ಲಿ ಯಾರಾದರೂ ಮಹಾತ್ಮರು ಹುಟ್ಟಿದಾರೆಯೇ?’ ಎಂದು ಪ್ರಶ್ನಿಸಿದರು.

ಅದಕ್ಕಾತ ಸಹಜವಾಗಿಯೇ ಉತ್ತರಿಸಿದ: ’ಇಲ್ಲವಲ್ಲ! ಇಲ್ಲಿ ಯಾರೂ ಮಹಾತ್ಮರು ಹುಟ್ಟಿಲ್ಲ. ಇಲ್ಲಿ ಶಿಶುಗಳು ಮಾತ್ರ ಹುಟ್ಟುತ್ತವೆ’. ಇದೇ ಜ್ಞಾನದ ಕೊರತೆ.

‘ಮನುಷ್ಯನೊಬ್ಬ ಆರ್ಥಿಕ ಪ್ರಾಣಿ’ ಎನ್ನುವುದು ಪರಕೀಯ ದೃಷ್ಟಿ.

ಮಗು ಜನಿಸಲು ಮನೆ ಬೇಕು. ಮಹಾತ್ಮನಾಗಲು ಗುರುಕುಲ ಬೇಕು.

  • ಭವತಿ ಭಿಕ್ಷಾಂ ದೇಹಿ ಎಂಬ ನಿವೇದನೆ. ಇದು; ಮನೆಯ ಯಜಮಾನನಲ್ಲಲ್ಲ, ಯಜಮಾನ್ತಿಯಲ್ಲಿ ಹೇಳುವ ಮಾತು. ದಾನದ ಅಧಿಕಾರ ಯಜಮಾನನದ್ದಲ್ಲ, ಮನೆಯ ತಾಯಂದಿರದು ಎಂದು ವ್ಯಕ್ತವಾಗಿಯೇ ಹೇಳುವ ಮಾತು.

ಬದುಕಿನ ಉದ್ದಕ್ಕೂ ನಮಗೆ ದೊರಕುವ ಶಿಕ್ಷಣದಲ್ಲಿ ಹೇಳಿದ್ದು ಒಂದೇ ಭಾರತ ಬ್ರಿಟಿಷರು ಬರುವ ಮೊದಲು ಶೈಕ್ಷಣಿಕವಾಗಿ, ಜ್ಞಾನ ತಂತ್ರಜ್ಞಾನದ ವಿಷಯಗಳಲ್ಲಿ ಹಿಂದುಳಿದಿತ್ತು, ಅನ್ಯ ರಾಷ್ಟ್ರಗಳೊಂದಿಗೆ ವ್ಯವಹಾರವೇ ಇರಲಿಲ್ಲ, ಇಲ್ಲಿಯ ಮಹಿಳೆಯರು ಮತ್ತು ಕೆಳ ವರ್ಗದ ಜನರು ಶಿಕ್ಷಣ ವಂಚಿತರು, ಜಾತಿ ಪದ್ಧತಿ ತುತ್ತ ತುದಿಯಲ್ಲಿತ್ತು ಹೀಗೆ ಅನೇಕ ಅಸತ್ಯದ ಕಥೆಗಳು. ಹೀಗೆ ಯಥೇಚ್ಛವಾಗಿ ಸುಳ್ಳುಗಳ ತುಂಬಿಸಿ ಶಿಕ್ಷಣದ ಮತ್ತು ಪುಸ್ತಕಗಳ ರೂಪದಲ್ಲಿ ಹೊರಬಿಡಲಾಯಿತು. ಅದನ್ನೇ ನಂಬಿಸಿದರು ಕೂಡ. ಈ ಸಂದರ್ಭದಲ್ಲಿ ನಮಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಮತ್ತು ನೈಜ ಭಾರತವನ್ನು ಪಸರಿಸುವ ಸಲುವಾಗಿ ಅವಶ್ಯಕತೆ ಇದೆ ಎನ್ನಿಸುತ್ತದೆ. ಅದೆಲ್ಲಾ ಅಂಶಗಳನ್ನು ಕುರಿತಂತೆ ಒಂದು ಸರಳ ಚರ್ಚೆಯನ್ನು ಅಂತ್ಯದವರೆಗೂ ಪ್ರಸ್ತುತ ಕೃತಿ ಮಾಡುತ್ತಲೇ ಹೋಗುತ್ತದೆ. ಗ್ರಂಥದ ಕರ್ತೃ ಶ್ರೀನಾರಾಯಣ ಶೇವಿರೆಯವರು. ಬೆಳ್ತಂಗಡಿ ತಾಲೂಕಿನ ಇವರು ಎಂಜಿನಿಯರಿಂಗ್ ಪದವೀಧರರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ ಇವರಿಂದ ಇಂತಹ ಅನನ್ಯ ಕೃತಿಯಲ್ಲದೇ ಮತ್ತೇನು ನಿರೀಕ್ಷಿಸಲು ಸಾಧ್ಯ? ಅವರ ದಶಕಗಳ ಅನುಭವದ ಅಣಿಮುತ್ತುಗಳ ಸಂಗ್ರಹವೇ ವಿಹಿತವಿದ್ಯಾ. ಯಾವುದೇ ವಿಷಯವನ್ನು ಕುರಿತು ಅತ್ಯಂತ ಸರಳವಾಗಿ ಹೇಳಬೇಕೆಂದರೆ ಅದರಲ್ಲಿ ಅತ್ಯಂತ ಆಳವಾದ ಜ್ಞಾನ ಇದ್ದರಷ್ಟೇ ಸಾಧ್ಯ. ಸುಮಾರು 264 ಪುಟಗಳಲ್ಲಿ ಅಸಂಖ್ಯಾತ ಧನಾತ್ಮಕ ಆಲೋಚನೆಗಳ ಧಾರೆಯೇ ಇದೆ. ನಿಜ ಓದುಗನನ್ನು ಓದಿನ ಹಾದಿಯಲ್ಲಿ ಕ್ಷಣ ಕ್ಷಣಕ್ಕೂ ತಡೆ ಹಿಡಿವ, ನಿಲ್ಲಿಸಿ ನಡೆಸುವ ಬರವಣಿಗೆ ಇಲ್ಲಿದೆ. ತಾಯಿ ಭಾರತಿ ಅವರನ್ನು ಮನದುಂಬಿ ಹರಸಲಿ. ಮತ್ತು ಹರಿಹರಪುರದ ಗುರುಕುಲಕ್ಕೆ 24 ವರ್ಷಗಳು ತುಂಬಿವೆ. ಶ್ರೀ ನಾರಾಯಣ ಶೇವಿರೆಯವರು ಸೇರಿ ಅನ್ಯ ಹಲವು ಹಿರಿಯರ ಮಾರ್ಗದರ್ಶನದಲ್ಲಿ ಗುರುಕುಲಗಳು ರಾಜ್ಯದಾದ್ಯಂತ ಪಸರಿಸಲಿ. ಹಲವು ಪೂರ್ಣ ಮಂಡಲಗಳನ್ನು ಕಾಣಲಿ. ಭಾರತ ವಿಶ್ವಗುರುವಾಗಲಿ. ಇದು ನನ್ನ ಭಾರತ..

ಚಂದದ ನಾಡಿದು ಚಿನ್ನದ ಬೀಡಿದು ತಪೋಭೂಮಿ ಇದು ಭಾರತ
ಪ್ರತಿ ಬಾಲಕನೂ ರಾಮನಂತೆ, ಪ್ರತಿ ಬಾಲಿಕೆಯೂ ಸೀತೆಯು


Get in Touch With Us info@kalpa.news Whatsapp: 9481252093

Tags: Book ReviewGurukulaKannada News WebsiteLatestNewsKannadaNarayana ShevireSachin ParshwanathVihita Vidya Kannada Bookಗುರುಕುಲನಾರಾಯಣ ಶೇವಿರೆಭವತಿ ಭಿಕ್ಷಾಂ ದೇಹಿರಾಮರಾಷ್ಟ್ರೀಯ ಸ್ವಯಂ ಸೇವಕ ಸಂಘವಿಹಿತವಿದ್ಯಾವಿಹಿತವಿದ್ಯಾ ಪುಸ್ತಕಶಿಕ್ಷಣಸಚಿನ್ ಪಾರ್ಶ್ವನಾಥ್ಸೀತೆ
Share234Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾಲ್ಕು ಉದರದ ರೋಮಾಂತಕ ಪ್ರಾಣಿ ದೇಶದ ಸಂಪತ್ತು

Next Post

ಅಡ್ಡ ಪರಿಣಾಮವಿಲ್ಲದ ಆರ್ಯುವೇದ ಎಲ್ಲರಿಗೂ ಪ್ರಯೋಜನಕಾರಿ

kalpa News

kalpa News

Next Post

ಅಡ್ಡ ಪರಿಣಾಮವಿಲ್ಲದ ಆರ್ಯುವೇದ ಎಲ್ಲರಿಗೂ ಪ್ರಯೋಜನಕಾರಿ

Leave a Reply Cancel reply

Your email address will not be published. Required fields are marked *

No Result
View All Result
Nestlé India Reports Strong Q1 Growth
English Articles

Nestlé India Reports Strong Q1 Growth; Sales Up 25.4%, Profit Jumps 47.9%

by kalpa News
July 23, 2026
0

Kalpa Media House  |  New Delhi  | Nestlé India reaffirmed its commitment to sustainability, especially in strengthening its dairy value...

Read moreDetails
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL