ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸುಂದರ ಕಲಾ ಜಗತ್ತಿನಲ್ಲಿ ಈಗ ತಾನೆ ಮಿನುಗುತ್ತಾ ತನ್ನಲ್ಲಿರುವ ಪ್ರತಿಭೆ ಎಂಬ ಬೆಳಕನ್ನು ಎಲ್ಲೆಡೆ ಪಸರಿಸುತ್ತಿರುವ ನಕ್ಷತ್ರ ವಿನ್ಯಾಸ್ ಮಧ್ಯ.
ಸಂಗೀತವೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಪುಟ್ಟ ಮಗುವಿನಿಂದ ಹಿಡಿದು ವಯಸ್ಸಾಗುವರಗೆ ಸಂಗೀತವನ್ನು ಇಷ್ಟಪಡುವವರೇ ಜಾಸ್ತಿ…ಅಲ್ಲವೇ… ಹಾಗೆ ಇಲ್ಲೊಬ್ಬ ಸಂಗೀತಪ್ರಿಯ ಸಂಗೀತವನ್ನು ಹೃದಯಕ್ಕೆ ಅಪ್ಪಿಕೊಂಡು ಉಸಿರಿಗೆ ಹತ್ತಿರವಾಗಿಸಿಕೊಂಡು ಪ್ರೀತಿಸುತ್ತಿರುವವರು.
1996ರ ಜುಲೈ 11ರಂದು ಸುರತ್ಕಲ್ ಸನಿಹದ ಮಧ್ಯ ಎಂಬಲ್ಲಿ ಕೇಶವ್-ಶಕುಂತಲಾ ದಂಪತಿಗಳ ಪ್ರಿಯ ಪುತ್ರನಾಗಿ ಜನಿಸಿದ ವಿನ್ಯಾಸ್ ಸಂಗೀತ ಲೋಕದ ಕೂಸು. ಇವರ ಪ್ರೀತಿಯ ತಂಗಿ ಯುಕ್ತ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುರತ್ಕಲ್’ನ ವಿದ್ಯಾದಾಯಿನಿ ಶಾಲೆಯಲ್ಲಿ ಮುಗಿಸಿ, ಪಿಯುಸಿಯನ್ನು ಗೋವಿಂದದಾಸ್ ಕಾಲೇಜಿನಲ್ಲಿ, ಡಿಗ್ರಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ, ಎಂಕಾಂ ಸ್ನಾತಕೋತ್ತರ ಪದವಿಯನ್ನು ಮಂಗಳೂರು ಹಂಪನಟ್ಟೆಯ ಯುನಿವರ್ಸಿಟಿ ಕಾಲೇಜಿನಲ್ಲಿ ಮುಗಿಸಿದರು.
ಇವರು ಸಕಲಕಲಾವಲ್ಲಭ ಎಂದರೆ ತಪ್ಪಾಗಲಾರದು. ಸಂಗೀತ ಸಂಯೋಜನೆ, ಹಾಡುಗಾರಿಕೆ, ಚಿತ್ರಕಲೆ, ಮೇಕಪ್, ಫೋಟೋಗ್ರಾಫಿ, ಚೆಂಡೆ, ಎಲ್ಲದರಲ್ಲೂ ಎತ್ತಿದ ಕೈ. ಸಾಧಿಸಬೇಕೆಂದು ಹೊರಟವನಿಗೆ ಛಲ, ಉತ್ಸಾಹ ಜೊತೆಗೊಂದಿಷ್ಟು ಅದೃಷ್ಟವಿದ್ದರೆ ಎಂತಹದ್ದನ್ನು ಸಾಧಿಸಬಲ್ಲ ಎಂಬುದಕ್ಕೆ ಇವರೇ ಉದಾಹರಣೆ.
ಒಂದನೆಯ ತರಗತಿಯಿಂದಲೇ ಸಂಗೀತವನ್ನು ಅಭ್ಯಸಿಸಿದ್ದ ಇವರು, ಹಲವಾರು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ಕೊಟ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಈಗಾಗಲೇ ಎಲ್ಲೆಡೆ ಪ್ರಸಿದ್ಧವಾಗಿರುವ ಮಂತ್ರೊದ ಮೂರ್ತಿಯೇ (ಮಾಯೊದ ನಿರೆಲ್) ಮಣ್ಣದ ಮಾಣಿಕ್ಯ ಇವರೇ ಸಂಗೀತ ಸಂಯೋಜನೆ ಮಾಡಿ ಹಾಡಿರುವಂತಹ ಹಾಡುಗಳು.




Get in Touch With Us info@kalpa.news Whatsapp: 9481252093










Discussion about this post