ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸಂಕಲ್ಪ ಮಾಡಿದ್ದು, ಈಗಾಗಲೇ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ #PMNarendraModi ಹೇಳಿದರು.
ಫ್ರೀಡಂ ಪಾರ್ಕ್’ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಜಾಲ್ತಿಯಲ್ಲಿದ್ದು, ವಿಕಾಸದ ಅಭಿಯಾನದ #VikasaAbhiyan ಅಡಿಯಲ್ಲಿ ಮುಂದೆಯೂ ಇನ್ನಷ್ಟು ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
- ಪಾಯಿಂಟ್-1: 4000 ಕೋಟಿ ರೂ. ವೆಚ್ಚದಲ್ಲಿ ತುಮಕೂರು-ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ
- ಪಾಯಿಂಟ್-2: ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ
- ಪಾಯಿಂಟ್-3: 2 ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ
- ಪಾಯಿಂಟ್-4: ರೈಲ್ವೆ ಸುವಿಧಾ ಯೋಜನೆಯಡಿ ನಿಲ್ದಾಣಗಳ ಉನ್ನತೀಕರಣ
- ಪಾಯಿಂಟ್-5: ಶಿವಮೊಗ್ಗ, ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣ ಅಭಿವೃದ್ಧಿ
- ಪಾಯಿಂಟ್-6: ಜಿಲ್ಲೆಯಲ್ಲಿ 4 ಲಕ್ಷ ಆಯುಷ್ಮಾನ್ ಕಾರ್ಡ್
ಕೇಂದ್ರದ ಯೋಜನೆಗಳ ಉಲ್ಲೇಖ
ಇನ್ನು, ಕಳೆದ 10ವರ್ಷ ಬಡವರನ್ನು ಕಷ್ಟದಿಂದ ಹೊರ ಬರಲು ದಾರಿ ತೋರುವ ಕೆಲಸ ಮಾಡಿದ್ದೇವೆ. ಆಯುಷ್ಮಾನ್ ಭಾರತ ಯೋಜನೆಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 40 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ನೀಡಲಾಗಿದ್ದು, ಎಸ್ಸಿ, ಎಸ್ಟಿ ಹಾಗೂ ಓಬಿಸಿ ಜನರಿಗೆ ಬಲಗೊಳಿಸಲಾಗುತ್ತಿದೆ ಎಂದರು.
ದೇಶದಾದ್ಯಂತ ಹೈಸ್ಪೀಡ್ ಇಂಟರ್ ನೆಟ್, ಮೆಟ್ರೋ, ಅಂಡರ್ ವಾಟರ್ ಮೆಟ್ರೋ, ಎಕ್ಸ್’ಪ್ರೆಸ್ ರಸ್ತೆಗಳು, ವಂದೇ ಭಾರತ್ ರೈಲುಗಳು, ಹಳ್ಳಿ ಹಳ್ಳಿಗಳಲ್ಲೂ ಇಂಟರ್ ನೆಟ್, ಯುಪಿಐ ಸೇರಿದಂತೆ ಹಲವು ಯೋಜನೆಗಳ ಪರಿಣಾಮಕಾರಿ ಜಾರಿಯ ಕುರಿತಾಗಿ ಪ್ರಧಾನಿಯವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಬಿಜೆಪಿ ಪ್ರಮುಖರಾದ ಕುಮಾರ್ಬಂಗಾರಪ್ಪ, ಸಿ.ಟಿ. ರವಿ, ಭಾನುಪ್ರಕಾಶ್, ಶಾಸಕ ಚನ್ನಬಸಪ್ಪ, ಡಿ.ಎಸ್. ಅರುಣ್, ಪ್ರಮುಖರಾದ ಹಾಲಪ್ಪ, ದತ್ತಾತ್ರಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post