ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರದ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ಅವರ 45 ನೆಯ ಜನ್ಮದಿನದ ಅಂಗವಾಗಿ ಸರ್ವಧರ್ಮ ಗುರುಗಳ ಸಾನ್ನಿಧ್ಯದಲ್ಲಿ ಸಾರ್ವಜನಿಕರ ಉಚಿತ ಸೇವೆಗಾಗಿ ಆಂಬ್ಯುಲೆನ್ಸ್ ಬೀಗದ ಕೈ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಪೊಲೀಸ್ ಉಮೇಶ್ ಅವರು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಸಮಾಜ ಸೇವೆ ಗುರಿಯಾಗಿಸಿಕೊಂಡು ಹುಟ್ಟೂರಿನ ಜನರಿಗೆ ಏನನ್ನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹೊತ್ತು ಗುರುವಾರ ಹುತ್ತಾಕಾಲೋನಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಂಬುಲೆನ್ಸ್ ಲೋಕಾರ್ಪಣೆ ಮಾಡಿದರು.
ನಂತರ ಸಂಜೀವಿನಿ ವೃದ್ದಾಶ್ರಮಕ್ಕೆ ಸೊಳ್ಳೆಪರದೆ, ಬಡ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಪರಿಕರಗಳ ವಿತರಣೆ ಹಾಗು ಹಿರಿಯ ನಾಗರಿಕರಿಗೆ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅನೇಕ ಗಣ್ಯರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಾನ್ ಬೋಸ್ಕೋ ಐಟಿಐ ಪ್ರಾಂಶುಪಾಲ ಪಾ: ಆರೋಗ್ಯರಾಜ್, ಮುಸ್ಲಿಂ ಸಮಾಜದ ಆಸೀಫ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಮ್, ನಗರಸಭಾ ಮಾಜಿ ಸದಸ್ಯ ಕೆ.ಎನ್. ಭೈರಪ್ಪ ಗೌಡ, ಸ್ನೇಹಜೀವಿ ಬಳಗದ ಎಸ್. ಸತೀಶ್ ಗೌಡ, ಡಾ.ಸೆಲ್ವರಾಜ್, ಸಂಜಿವಿನಿ ಆಶ್ರಮದ ಸವಿತಾ, ಪ್ರಕಾಶ್ ಮುಂತಾದವರಿದ್ದರು. ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post