ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ನಗರದಲ್ಲಿ ಇಂದು ಅರಣ್ಯ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಹಾಗೂ ಹೊಸಪೇಟೆಯ ಅಸಿಸ್ಟೆಂಟ್ ಕಮೀಷನರ್ ತನ್ವೀರ್ ಸೇಠ್ ಇವರು ಇಂದು ತಾಲೂಕು ಆಫೀಸ್ ಮುಂಭಾಗದಲ್ಲಿ ಸುಮಾರು ರೈತರು ಬೆಳೆದ ತರಕಾರಿ ಮತ್ತು ಹಣ್ಣು ಹಂಪಲು ಮಾರಾಟ ಮಾಡುವ 20ಕ್ಕೂ ಅಧಿಕ ವಾಹನಗಳ ನ್ನು ಹೊಸಪೇಟೆಯ ಎಲ್ಲಾ ವಾರ್ಡ್ ಗಳಿಗೆ ಸುರಕ್ಷಿತವಾಗಿ ಕಳುಹಿಸಿದರು.
ಈ ಭಾಗದ ರೈತರು ಬೆಳೆದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಮನೆ ಮನೆ ಬಾಗಿಲಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವುದರ ಮೂಲಕ ಕೂರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹೊಸಪೇಟೆ ಮತ್ತು ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಸುರಕ್ಷಿತವಾಗಿ ತರಕಾರಿ ಮತ್ತು ಹಣ್ಣು ಹಂಪಲು ಸಿಗುವ ಉದ್ದೇಶದಿಂದ ಪ್ರತಿ ದಿನ ಬೆಳಿಗ್ಗೆ 7 ರಿಂದ 10 ಘಂಟೆ ಒಳಗೆ ರೈತರು ಮಾರಾಟ ಮಾಡಬಹುದು ಹಾಗೂ ಆರೋಗ್ಯಕರವಾದ ತರಕಾರಿ ಪದಾರ್ಥಗಳನ್ನು ತೆಗೆದುಕೊಂಡು ಹೋಗುವ ವಾಹನಗಳು ಹೊಸಪೇಟೆಯ ಎಲ್ಲಾ ವಾರ್ಡ್ ಗಳಿಗೂ ಕಳುಹಿಸುವುದರ ಮೂಲಕ ಕರೋನ ವೈರಸ್ ಜಾಗೃತಿ ಪರವಾಗಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕಿನ ಅಸಿಸ್ಟೆಂಟ್ ಕಮಿಷನರ್ ಹಾಗೂ ತಾಲೂಕು ಆಫೀಸ್ ,ತೋಟಗಾರಿಕೆ ಅಧಿಕಾರಿಗಳು ಮತ್ತು ಮಧ್ಯಮ ವರ್ಗದವರು ಇದ್ದರು.
ನೇರವಾಗಿ ರೈತರು ತಾವು ಬೆಳೆದ ತರಕಾರಿ ಹಣ್ಣು ಹಂಪಲುಗಳನ್ನು ಹೊಸಪೇಟೆಯಲ್ಲಿ ಗಂಟೆಯಿಂದ 11 ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತಾರೆ ಮಾರಾಟ ಮಾಡುವಾಗ ಸುರಕ್ಷತಾ ಕ್ರಮವಾಗಿ ತೆಗೆದುಕೂಳ್ಳಬೇಕು ಎಂದು ಸಚಿವರು ತಿಳಿಸಿದರು. ತೋಟಗಾರಿಕಾ ಇಲಾಖೆಯವರು ಈ ಸಂದರ್ಭದಲ್ಲಿ ರೈತರು ಬೆಳೆದಂತಹ ತರಕಾರಿ ಹಣ್ಣು ಹಾಗೂ ಇತರ ಎಲ್ಲಾ ಪದಾರ್ಥಗಳನ್ನು ನೇರವಾಗಿ ಜನರಿಗೆ ಮುಟ್ಟಿಸುವ ಕಾರ್ಯ ಶ್ಲಾಘನೀಯ ಎಂದರು.
ಅಧಿಕಾರಿಗಳು ನಿಗದಿಪಡಿಸಿದ ದರದಲ್ಲಿ ರೈತರು ಮಾರಾಟ ಮಾಡಬೇಕು ಮತ್ತು ಪದಾರ್ಥಗಳ ದರವನ್ನು ವಾಹನದ ಮೇಲೆ ಹಾಕಬೇಕು ಮತ್ತು ಮಾರಾಟ ಮಾಡುವವರು ಮತ್ತು ಕೊಂಡುಕೊಳ್ಳುವ ಸಾರ್ವಜನಿಕರು ಮಾಸ್ಕ್ ಹಾಕಿ ಇರಬೇಕು ಹಾಗೂ ಡಿಸ್ಟೇನ್ಸ್ನಲ್ಲಿ ನಿಂತು ಕೊಂಡುಕೊಳ್ಳಲು ತಿಳಿಸಬೇಕು ಮತ್ತು ಅಧಿಕಾರಿಗಳು ಸಹ ಮಾರಾಟ ಸಂದರ್ಭದಲ್ಲಿ ಜಾಗೃತಿ ವಹಿಸಿ ನಿಗಾ ಇಡಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಆನಂದ್ ಸಿಂಗ್ ಅವರು ಬಡ ಕುಟುಂಬಗಳಿಗೆ ಕೆಎಂಎಫ್ ನಿಂದ ಉತ್ಪಾದಿತವಾದಂತಹ ಹಾಲನ್ನು ಉಚಿತವಾಗಿ ನೀಡುವ ಯೋಜನೆ ಇದ್ದು ಇದನ್ನು ಇನ್ನೂ ಒಂದು ಅಥವಾ ಎರಡು ದಿನದಲ್ಲಿ ಕಾರ್ಯ ರೂಪಕ್ಕೆ ತರಲಾಗುತ್ತದೆ ಎಂದು ತಿಳಿಸಿದರು ಪ್ರತಿ ಮನೆಗಳಿಗೂ ಅರ್ಧ ಲೀಟರ್ ಹಾಲನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಸಿಸ್ಟೆಂಟ್ ಕಮಿಷನರ್ ಶ್ರೀ ತನ್ವೀರ್ ಸೇಠ್ ತಿಳಿಸಿದರು.
ತಮ್ಮ ತಮ್ಮ ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣು ಹಂಪಲುಗಳು ಬರುವುದರಿಂದ ಯಾರು ಮನೆಯನ್ನು ಬಿಟ್ಟು ಹೊರಗಡೆ ವಿನಾಕಾರಣ ಓಡಾಡಬಾರದು ಹಾಗೂ ಹೋರದ ಹೋಗಬಾರದು ಎಂದು ತಿಳಿಸಿದರು. ಈಗಾಗಲೇ ಹೊಸಪೇಟೆ ಭಾಗದಲ್ಲಿ ನಡೆಯುತ್ತಿರುವ ಮಾರುಕಟ್ಟೆಯನ್ನು ನಿಲ್ಲಿಸಲಾಗುತ್ತದೆ. ಈ ದಿನದಿಂದ ಪ್ರಾರಂಭ ಮಾಡಿರುವ ವಾಹನಗಳು ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣು ಹಂಪಲು ತರುವುದರಿಂದ ಜನರಿಗೆ ಪ್ರಯೋಜನವಾಗುತ್ತದೆ
ಪ್ರತಿದಿನ ಮುಂಜಾಗೃತಾ ಕ್ರಮವಾಗಿ ಹೊಸಪೇಟೆ ನಗರದ ಎಲ್ಲಾ ಬೀದಿಬೀದಿಗಳಲ್ಲಿ ಔಷಧಿಗಳನ್ನು ಸಿಂಪರಣೆ ಮಾಡುವುದರ ಮೂಲಕ ಸುರಕ್ಷತೆ ಮತ್ತು ಆರೋಗ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೊಸಪೇಟೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ 125 ಅಭ್ಯರ್ಥಿಗಳನ್ನು ಚಿಕಿತ್ಸೆ ಮಾಡಲಾಗಿದೆ ಅದರಲ್ಲಿ 25 ಜನರ ಮೇಲೆ ನಿಗಾ ಇಡಲಾಗಿದೆ. ಹೊಸಪೇಟೆ ಭಾಗದಿಂದ ಮೂರು ಜನರಿಗೆ ಮಾತ್ರ ಪಾಸಿಟಿವ್ ಕಂಡುಬಂದಿದ್ದು ಅವರನ್ನು ಈಗಾಗಲೇ ಬಳ್ಳಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಎಂದು ಶ್ರೀ ಆನಂದ್ ಸಿಂಗ್ ತಿಳಿಸಿದರು.
ವರದಿ: ಎಂ.ಎಂ. ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post