ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುಕ್ಕೆ ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಪೇಟೆ ಪ್ರದೇಶದಲ್ಲಿ ಇಂದು ನಸುಕಿನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದ್ದು, ವಾಹನ ಸಂಚಾರವಿರುವ ನಡುವೆಯೇ ನಡೆದುಹೋಗಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.
ಇಂದು ನಸುಕಿನ 5.46ರ ವೇಳೆಯಲ್ಲಿ ಮುಖ್ಯರಸ್ತೆಯ ಕಾಶಿ ಕಟ್ಟೆ ಗಣಪತಿ ದೇವಾಲಯದ ಪಕ್ಕವಿರುವ ಮಯೂರ ವಸತಿಗೃಹದಲ್ಲಿ ಆನೆ ಕಾಣಿಸಿಕೊಂಡಿದೆ. ಕಾಶಿಕಟ್ಟೆ ಮುಖ್ಯ ಮಾರ್ಗವಾಗಿ ನೂಚಿಲ ಕಡೆಗೆ ಆನೆ ತೆರಳಿದ್ದು, ಸ್ಥಳೀಯರೊಬ್ಬರು ಇದನ್ನು ವೀಡಿಯೋ ಮಾಡಿದ್ದಾರೆ.
ಬೆಳಗಿನ ಜಾವ ಆದ ಕಾರಣ ಅದಾಗಲೇ ವಾಹನ ಸಂಚಾರ ಹಾಗೂ ಜನರ ಓಡಾಟ ಆರಂಭವಾಗಿತ್ತು. ಆನೆ ಕಾಣಿಸಿಕೊಂಡ ಮೊದಲು ಇದು ದೇವಾಲಯದ ಆನೆ ಎಂದು ಭಾವಿಸಲಾಗಿತ್ತು. ಆದರೆ, ಆನಂತರ ಇದು ಕಾಡಾನೆ ಎಂದು ತಿಳಿದು ಸ್ಥಳೀಯರನ್ನು ಆತಂಕ ಮೂಡಿದೆ.
Video Courtesy: DIVU
Get in Touch With Us info@kalpa.news Whatsapp: 9481252093
Discussion about this post