ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಜಿಲ್ಲೆಯಲ್ಲಿ ನಿನ್ನೆ ಅನಾವರಣಗೊಂಡು ರಾರಾಜಿಸುತ್ತಿರುವ ದೇಶದ ಅತಿ ಎತ್ತರದ ರಾಷ್ಟ್ರ ಧ್ವಜ ಈಗ ಸಮಸ್ತ ಕರ್ನಾಟಕಕ್ಕೆ ಮುಕುಟಪ್ರಾಯವಾಗಿ ಪರಿಗಣಿತವಾಗಿದೆ.
405 ಅಡಿ ಎತ್ತರದ ಧ್ವಜ ಸ್ತಂಭದ ನಿರ್ಮಾಣದಿಂದ ವಿಜಯನಗರ ಹೊಸ ಇತಿಹಾಸ ಸೃಷ್ಟಿಸಿದೆ. ಆ.15ರಂದು ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಹಟ ಹಿಡಿದು ನಿಂತ ಹಿನ್ನೆಲೆಯಲ್ಲಿ ಇಂದು ದೇಶದ ಇತಿಹಾಸದಲ್ಲೇ ವಿಜಯನಗರ ಜಿಲ್ಲೇಯಲ್ಲಿ ಅತೀ ಎತ್ತರದ ಧ್ವಜ ಸ್ಥಂಭ ನಿರ್ಮಾಣ ದಾಖಲೆಯಾಗಿ ರಾರಾಜಿಸುತ್ತಿದೆ. ನೂತನ ವಿಜಯನಗರ ಜಿಲ್ಲೇಹೊಸಪೇಟೆಯ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ದೇಶದ ಧ್ವಜಸ್ತಂಭದಲ್ಲಿ ದೇಶದಲ್ಲೇ ಅತೀ ದೊಡ್ಡ ತ್ರಿವರ್ಣ ಧ್ವಜ ಹಾರಾಡುತ್ತಿದೆ.
405 ಅಡಿ ಎತ್ತರದ ಧ್ವಜಸ್ತಂಭದಲ್ಲಿ 120×80 ಅಡಿಯ ರಾಷ್ಟ್ರಧ್ವಜ ರಾರಾಜಿಸುತ್ತಿದೆ. 6 ಕೋಟಿ ರೂ. ವೆಚ್ಚದಲ್ಲಿ ಬಜಾಜ್ ಕಂಪನಿಯವರು 405 ಅಡಿ ಎತ್ತರದ ನೂತನ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ. ತಾಂತ್ರಿಕ ತಜ್ಞರು ಸೇರಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ನಡುರಾತ್ರಿ ಧ್ವಜ ಹಾರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಅತೀ ಎತ್ತರದ ಧ್ವಜಸ್ತಂಭದಲ್ಲಿ ಆಗಸ್ಟ್ 15ರಂದೇ ರಾಷ್ಟ್ರ ಧ್ವಜವನ್ನು ಹಾರಾಟ ಮಾಡಲು ನಿರ್ಧರಿಸಲಾಗಿತ್ತು. ಸೋಮವಾರ ಸಚಿವ ಆನಂದ ಸಿಂಗ್ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ತಡರಾತ್ರಿಯೇ ತಜ್ಞರು ಧ್ವಜ ಹಾರಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೆ ಬೆಳಗಾವಿಯಲ್ಲಿರುವ 361 ಅಡಿ ಧ್ವಜಸ್ತಂಭ ಅತ್ಯಂತ ಎತ್ತರದ ಧ್ವಜಸ್ತಂಭ ಎಂಬ ದಾಖಲೆ ಹೊಂದಿತ್ತು. ಇದೀಗ ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ 405 ಅಡಿ ಎತ್ತರದ ಧ್ವಜಸ್ತಂಭ ದೇಶದಲ್ಲಿಯೇ ಅತ್ಯಂತ ಎತ್ತರದ ದಾಖಲೆಯಾಗಿ ಮೆರೆಯುತ್ತಿದೆ. ಬೆಳಗಾವಿಯಲ್ಲಿ 361 ಅಡಿ, ಅಮೃರ್ತ್ಸ 360, ಭಕ್ತಿಶಕ್ತಿ ಪ್ರಾಣ್ 351, ಗುವಾಹಟಿ 319.5, ಕೊಲ್ಹಾಪುರ 303, ರಾಂಚಿ 293, ಹೈದರಾಬಾದ್ 291, ರಾಯಪುರ 269, ಫರೀದಾಬಾದ್ 257, ಪುಣೆ 237, ಭೂಪಾಲ್ 235, ಮುಂಬಯಿ 222, ಕಟಕ್ 215, ಹೊಸದಿಲ್ಲಿ 207, ಜೈಪುರದಲ್ಲಿ 206 ಅಡಿ ಎತ್ತರದ ಧ್ವಜಸ್ತಂಭ ಹೊಂದಿವೆ.
Also read: ಮುದ್ರಣ ಮಾಧ್ಯಮದ ಘನತೆ ಉಳಿಸಲು ಕಲ್ಲೆ ಶಿವೋತ್ತಮ ರಾವ್ ಕರೆ
405 ಅಡಿ ಎತ್ತರದ ಈ ಧ್ವಜ ಸ್ತಂಭದಲ್ಲಿ 80 ಅಡಿ ಉದ್ದ 120 ಅಡಿ ಅಗಲದ ದ್ವಜವನ್ನ ಹೊಂದಿದ್ದು, ಈ ಬೃಹತ್ ಧ್ವಜ ಹಾರಾಡಲು ಶ್ರಮವಹಿಸಿ ಯಶಸ್ವಿಯಾಗಿದ್ದಾರೆ.
ಸಚಿವ ಆನಂದ್ ಸಿಂಗ್ ಆಗಸ್ಟ್ 15 ಧ್ವಜಾರೋಹಣ ನೆರವೇರಿಸಿದರು. ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿಗಳಾದ ಅನಿರುದ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಕುಮಾರ್ ಸಮಾರಂಭದಲ್ಲಿ ಭಾಗಿಯಾಗಿ ಸಚಿವರಾದ ಆನಂದ್ ಸಿಂಗ್ ಅವರಿಗೆ ಸಾಥ್ ನೀಡಿದರು.
ನಿನ್ನೆ ರಾತ್ರಿ ಧ್ವಜಾರೋಹಣದ ಪ್ರಯೋಗಿಕ ಪರೀಕ್ಷೆ ನಡೆದ ಸಂದರ್ಭದಲ್ಲಿ ಧ್ವಜ ಸ್ಥಂಭ 150 ಅಡಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಕಷ್ಟಪಡುವ ಪರಿಸ್ಥಿತಿ ಎದುರಾಯಿತು. ಕೂಡಲೆ ಚಿತ್ರದುರ್ಗದ ಕೋತಿ ರಾಜವರನ್ನು ಕರೆಸಿ ಅವರನ್ನ ಮೇಲೇರಿಸಿ ತಾಂತ್ರಿಕ ತೊಂದರೆ ಸರಿಪಡಿಸಿ ಧ್ವಜ ಹಾರಾಟಕ್ಕೆ ಹರ ಸಾಹಸ ಪಡಬೇಕಾಯಿತು.
ಸಚಿವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆರೋಗ್ಯದ ದೃಷ್ಟಿಯಿಂದ ಹಾಗೂ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣಕ್ಕೆ ಅನುವು ಮಾಡಿಕೊಡಬೇಕೆಂದು ಅನಂದ್ ಸಿಂಗ್ ಮುಖ್ಯಮಂತ್ರಿಯವರಿಗೆ ಮಾಡಲಾದ ಮನವಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ಸಹ ಈ ಬಾರಿ ಸಚಿವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಯಾವುದೇ ಪಕ್ಷ ಯಾರಿಗೂ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಅದು ಪಕ್ಷದ ತೀರ್ಮಾನವಾಗಿರುತ್ತದೆ ಎಲ್ಲರೂ ಗೌರವಿಸಬೇಕು. ನನಗೆ ನೆರೆಯ ಕೊಪ್ಪಳ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ. ಸಮೀಪದಲ್ಲಿ ಇರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುವುದಿಲ್ಲ. ಎರಡೂ ಜಿಲ್ಲೆಗಳ ನಡುವೆ ಸಂಚರಿಸುತ್ತ ಇರುತ್ತೇನೆ. ಆದರೂ ಆರೋಗ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ನನ್ನ ಮನವಿ ಸ್ವೀಕರಿಸಿ ಅವಕಾಶ ಮಾಡಿಕೂಟ್ಟಿರುತ್ತಾರೆ. ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿಶ್ವ ಪ್ರಸಿದ್ಧ ಹಂಪಿ ಇರುವುದರಿಂದ ದೇಶ-ವಿದೇಶದ ಪ್ರವಾಸಿಗರು ಬಂದು ಹೋಗುತ್ತಿರುತ್ತಾರೆ. ದೇಶದ ಅತಿ ಎತ್ತರದ ಧ್ವಜ ಸ್ತಂಭಕ್ಕೂ ಭೇಟಿ ಕೊಡುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಆಗಸ್ಟ್ 15 ರಂದು ವಿಜಯನಗರದಲ್ಲಿ ಇತಿಹಾಸ ಸೃಷ್ಟಿಯಾಗದೆ. ವಿಜಯನಗರ ಜಿಲ್ಲೆಯ ಪ್ರತಿಯೊಬ್ಬರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನಗೆ ಸಂತಸ ತಂದಿದೆ ಎಂದು ಸಚಿವರು ತಮ್ಮ ಹರ್ಷ ವ್ಯಕ್ತಪಡಿಸಿದರು.
ಆಗಸ್ಟ್ 15 ರ ಸಂಜೆ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ನಿರುಪಮ ರಾಜೇಶ್ ಕಲಾತಂಡದವರು ಸುಮಾರು 90 ನಿಮಿಷಗಳ ವಿಜಯನಗರ ವೈಭವ ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು. ಸುಮಾರು 6 ಕಾರ್ಯಕ್ರಮಗಳನ್ನು ಸ್ಥಳೀಯ ಕಲಾವಿದರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನದಲ್ಲಿ ಜೋಳದ ರಾಶಿ ಗುಡ್ಡದ ಮೇಲೆ 25 ಕೋಟಿ ವೆಚ್ಚದಲ್ಲಿ ಶ್ರೀ ಕೃಷ್ಣದೇವರಾಯ ಕಂಚಿನ ಪ್ರತಿಮೆಯನ್ನು ಸ್ವಲ್ಪ ದಿನದಲ್ಲಿ ಅನಾವರಣ ಮಾಡಲಾಗುತ್ತಿದೆ ಎಂದಿ ತಿಳಿಸಿದರು. ಸಭೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಬಂದು ಕಾರ್ಯಕ್ರಮ ನಿರೀಕ್ಷಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರವನ್ನು ಸ್ವಚ್ಚವಾಗಿ ಇಟ್ಟುಕೊಂಡು ಮಾದರಿ ಜಿಲ್ಲೆಯಾಗಿ ಮಾಡಲು ಸಚಿವರ ಮನವಿ ಮಾಡಿದರು
(ವರದಿ: ಮುರುಳೀಧರ್ ನಾಡಿಗೇರ್, ವಿಜಯನಗರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post