ಸರ್ವಫಲ ಪ್ರದಾಯಿನಿ ಶ್ರೀವೀರಲಕ್ಷ್ಮೀ ಸನ್ನಿಧಿಯಲ್ಲಿ ವರಮಹಾಲಕ್ಷ್ಮೀ ಹಬ್ಬ ಅದ್ದೂರಿಯಾಗಿ ನಡೆಯುತ್ತದೆ.
ಬೆಂಗಳೂರು ನಗರದ ಬಳ್ಳಾರಿ ರಸ್ತೆಯಲ್ಲಿರುವ ಪ್ರತಿಷ್ಠಿತ ಕಂಪನಿ ಟ್ರೆಡೆಂಟ್ ಹುಂಡೈ ಕಾರ್ ಶೋ ರೂಂ ಹಿಂಬದಿಯಿಂದ ಕೊಗಳತೆಯ ದೂರದಲ್ಲಿ ಶ್ರೀಮಹಾಲಕ್ಷ್ಮೀ ಮಂದಿರದಲ್ಲಿ ಶ್ರೀವೀರಲಕ್ಷ್ಮೀ ದೇವಿಯ ಸಾನ್ನಿಧ್ಯವಿದೆ.
ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಶಾಂತ ವಾತಾವರಣ, ಹಕ್ಕಿಗಳ ಕಲರವದ ನಡುವೆ ಭಕ್ತಾದಿಗಳಿಗೆ ಶ್ರೀ ವೀರಲಕ್ಷ್ಮೀ ದೇವಿಯ ದಿವ್ಯದರ್ಶನ ಮಾಡಿದಾಗ ಮೂಡುತ್ತದೆ ಧನ್ಯತಾ ಭಾವ.
ಶ್ರೀಮಹಾಲಕ್ಷ್ಮೀ ಮಂದಿರದಲ್ಲಿ ಶ್ರೀವೀರಲಕ್ಷ್ಮೀ ದೇವಿ ಸ್ವರೂಪದಲ್ಲಿ ವೀರಾಜಮಾನಾಳಾಗಿದ್ದು ಎಡಗಾಲನ್ನು ಮಡಚಿ, ಬಲಗಾಲನ್ನು ಕೆಳಗೆ ಬಿಟ್ಟು ನಾಲ್ಕು ಕೈಗಳನ್ನು ಹೊಂದಿ, ಎರಡು ಕೈಗಳಲ್ಲಿ ಕಮಲಗಳನ್ನು ಹಾಗೂ ಮತ್ತೆರಡು ಕೈಗಳಲ್ಲಿ ಅಭಯ ಹಾಗೂ ವರ ನೀಡುವ ಹಸ್ತಗಳಿವೆ.
ಭಕ್ತರ ಇಷ್ಟಾರ್ಥಗಳನ್ನು ಶ್ರೀವೀರಲಕ್ಷ್ಮೀ ದೇವಿಯು ನೆರವೇರಿಸುತ್ತಾ ಈ ಪುಣ್ಯ ಕ್ಷೇತ್ರದಲ್ಲಿ ನೆಲೆಸಿದ್ಧಾಳೆ.
ಶ್ರೀವೀರಲಕ್ಷ್ಮೀ ದೇವಿಯ ಸಾನ್ನಿಧ್ಯದಲ್ಲಿ ಲಕ್ಷ್ಮೀದಾಸರ ಧ್ಯಾನ ಶ್ಲೋಕ ಮತ್ತು ಶ್ರೀವೀರಲಕ್ಷ್ಮೀ ದೇವಿಯ ಧ್ಯಾನ ಶ್ಲೋಕವನ್ನು ಹಾಕಲಾಗಿದ್ದು ಶ್ರದ್ಧಾ ಭಕ್ತಿಯಿಂದ ಪಠಿಸುತ್ತಾರೋ ಅವರ ಸಕಲ ಇಷ್ಟರ್ಥಾ ನೆರವೇರುತ್ತದೆ ಎನ್ನುತ್ತಾರೆ ದೇವಾಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿ ಶ್ರೀ ಜಗ್ಗುರಾಮ ಸುದರ್ಶನ ಅವರು.
ಸರ್ವಫಲ ಪ್ರದಾಯಿನಿ ಶ್ರೀವೀರಲಕ್ಷ್ಮೀ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ-ಮೋಕ್ಷ ಲಭ್ಯ.
ಶ್ರೀವೀರಲಕ್ಷ್ಮೀ ದೇವಿಯ ಶಿಲಾಮೂರ್ತಿಯನ್ನು ಮೇಲುಕೋಟೆಯ – ಯದು ಗಿರಿಯಮ್ಮ ಅವರು 1980ರಲ್ಲಿ ಆಗಮಶಾಸ್ತ್ರದ ಪ್ರಕಾರ ಕುಂಭಾಭಿಶೇಕ ಮಾಡಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಶ್ರೀವೈಷ್ಣವ ಸಂಪ್ರಾದಯದಂತೆ ಶ್ರೀರಾಮಾನುಜಾಚಾರ್ಯರ ಆದೇಶದಂತೆ ಆಗಮಶಾಸ್ತ್ರದ ವಿಧಿವಿಧಾನಗಳಲ್ಲಿ ಪೂಜಾ – ಕೈಂಕರ್ಯಗಳು ಪ್ರತಿನಿತ್ಯ ನೆರವೇರುತ್ತದೆ.
ಶ್ರೀವೀರಲಕ್ಷ್ಮೀ ದೇವಿಯ ಉಪಾಸನೆ ಮಾಡುವುದರಿಂದ ಸಕಲ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ. ಭೀಷ್ಟಗಳನ್ನು ನೀಡುವ ಹಾಗೂ ನಮ್ಮಲ್ಲಿ ನವಚೈತನ್ಯ, ಶಕ್ತಿ ತುಂಬುವ ದೇವತೆ ಶ್ರೀವೀರಲಕ್ಷ್ಮೀ ದೇವಿ ನಾಲ್ಕು ಭುಜಗಳಿಂದ ಕೂಡಿದ್ದವಳಾಗಿದ್ದಾಳೆ.
ಈ ದೇವಸ್ಥಾನವು ಆಗಮಶಾಸ್ತ್ರದ ಪ್ರಕಾರ ಕಟ್ಟಲ್ಪಟಿದ್ದು – ಪೂರ್ವ ಮತ್ತು ನೈಋತ್ಯಕ್ಕೂ ಮಧ್ಯಭಾಗದಲ್ಲಿ ದೇವಸ್ಥಾನದ ಪ್ರಮುಖ ದ್ವಾರವಿದ್ದು ಹಾಗೆಯೇ, ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸರಬೇಕು, ಹಾಗೆಯೇ ದೇವಸ್ಥಾನ ನಿರ್ಮಿಸಲಾಗಿದ್ದು, ದೇವಸ್ಥಾನ ವೃತ್ತಾಕಾರವಾಗಿದ್ದು ಪ್ರದಕ್ಷಿಣೆಗೆ ಅವಕಾಶವಿದೆ.
ಸನ್ನಿಧಾನ:
ಮೂಲಮೂರ್ತಿ – ಶ್ರೀವೀರಲಕ್ಷ್ಮೀ ದೇವಿ ಹಾಗೂ ಉತ್ಸವಮೂರ್ತಿ ಶ್ರೀತಿರುನಾರಾಯಣರು, ಶ್ರೀಕೃಷ್ಣ, ಶ್ರೀರಾಮದೇವರು, ಶ್ರೀ ರಾಮನುಜಾಚಾರ್ಯರು ಹಾಗೂ ಮಹಾವಿಷ್ಣುವಿನ ಸೇನಾ ನಾಯಕರು – ಶ್ರೀ ವಿಶ್ವಕ್ಸೇನ ಭಗವಾನರು ದೇವರು-ಗುರುಗಳ ದಿವ್ಯ ಸನ್ನಿಧಾನವಿದೆ.
ವಿಕಾರಿನಾಮ ಸಂವತ್ಸರ ದಕ್ಷಿಣಾಯನ, ವರ್ಷಋತು, ಶ್ರಾವಣ ಮಾಸ, ನವಮಿಯ ಶುಕ್ರವಾರದಂದು ಅಂದರೆ ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ದೇವಸ್ಥಾನ ಕಟ್ಟಲು 1963ರಲ್ಲಿ ಇದ್ದ ಅಂದಿನ ಸರ್ಕಾರ ಈ ಜಾಗವನ್ನು ಉಚಿತವಾಗಿ ನೀಡಿದೆ. ಹಣದ ತೊಂದರೆಯಿಂದ 1980ರಲ್ಲಿ ಅನೇಕ ದಾನಿಗಳ ಸಹಾಯದಿಂದ ಕಟ್ಟಿರುವ ಶ್ರೀ ವೀರಲಕ್ಷ್ಮೀ ದೇವಸ್ಥಾನ!!
ಇಂತಹ ಒಂದು ಪವಿತ್ರ ಕ್ಷೇತ್ರ ಒಮ್ಮೆಯಾದರೂ ತಪ್ಪದೇ ಭೇಟಿ ನೀಡಿ, ತಾಯಿಯ ಆಶೀರ್ವಾದ ಪಡೆಯಿರಿ.
ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಚಿತ್ರಗಳು: ಮಯೂರ್ ಕೆವಿನ್, ಬೆಂಗಳೂರು
Discussion about this post