No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Thursday, July 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕರೋನಾ ಬಾರದಂತೆ ತಡೆಯಬೇಕೆ? ಆಹಾರದಲ್ಲಿ ಹೀಗೆ ಮಾಡಿ! ಪ್ರಕಾಶ್ ಅಮ್ಮಣ್ಣಾಯ ಸೂಚಿಸಿದ ಪರಿಹಾರವಿದು

kalpa News by kalpa News
March 7, 2020
in Army
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕರೋನ ಎಂಬುದು ಒಂದು ರೀತಿಯ ಜ್ವರ ಬಾಧೆ, ನಿಮೋನಿಯಾ, ಟೈಫಾಯ್ಡ್, ವಿಷಮಶೀತ ಜ್ವರ ಇತ್ಯಾದಿಗಳಿದ್ದಂತೆ. ಜ್ವರ ಎಂದ ಹಾಗೆ ನೆನಪಾಗುವುದು ದೇಹದೊಳಗಿನ ತಾಪಮಾನ ಏರುವಿಕೆ. ಒಂದು ನಿರ್ಧಿಷ್ಟ ತಾಪಮಾನ ದಾಟಿದಾಗ ದೇಹವು ಅಸ್ತಿತ್ವ ಕಳೆದುಕೊಳ್ಳಲು ಶುರುಮಾಡುತ್ತದೆ.

ಆಗ ಕ್ಷಣ ಕ್ಷಣಕ್ಕೂ ದೇಹವು ಉತ್ಪತ್ತಿ ಮಾಡುವ(ಸ್ರವಿಸುವ) ಪೋಷಕಾಂಶಗಳೂ ಕಡಿಮೆಯಾಗುತ್ತದೆ. ಮುಂದೆ ದೇಹದೊಳಗಿನ ಖನಿಜಾಂಶಗಳು (Organs) ದುರ್ಬಲವಾಗುತ್ತಾ ಹೋಗುತ್ತವೆ. ಈ ಖನಿಜಾಂಶಗಳು ದೇಹದ ಪೋಷಕಾಂಶಕಗಳು ಎನ್ನುವುದಕ್ಕಿಂತ ಇದು ಧೈರ್ಯ ತುಂಬುವಂತದ್ದಾಗಿದೆ. ಯಾವಾಗ ಧೈರ್ಯ ಕಳೆದುಕೊಳ್ಳುತ್ತೇವೆಯೋ ಆಗ ದೇಹದಲ್ಲಿ ನಡುಕ ಉಂಟಾಗುತ್ತದೆ. ಅಂದರೆ body shivering. ಮುಂದೆ ಕುಸಿಯುತ್ತಾ ಹೋದಂತೆ ಮತ್ತೆ recovery ಕಷ್ಟವೂ ಆಗಬಹುದು, recovery ಆಗದೆಯೂ ಇರಬಹುದು. ಇದು ಮನುಷ್ಯನ ಮರಣವೇ ಆಗುತ್ತದೆ.


ಇಲ್ಲಿ ಮುಖ್ಯವಾಗಿ ನೋಡಬೇಕಾದ ಅಂಶಗಳು ಜಾತಕದಲ್ಲಿ ತುಂಬಾ ಸೂಕ್ಷ್ಮವಾಗಿದೆ. ಯಾವುದೋ ಒಂದು ಗ್ರಹಸ್ಥಿತಿಯು ಜ್ವರಬಾಧೆಯ ಲಕ್ಷಣ ಎಂದು ಗ್ರಂಥಗಳಲ್ಲಿ ಒಂದೆಡೆ ಸೂಚಿಸಿದರೂ ಇದನ್ನು ಬೇರೆ ಬೇರೆ ಆಯಾಮದಲ್ಲಿ ನೋಡದೆ ನಿರ್ಧರಿಸುವ ಹಾಗಿಲ್ಲ. ಅನೇಕ ನಿತ್ಯ ವಾತಾವರಣ ದೋಷದಿಂದ ಅಕ್ಷಿ (ಶೀನು)ಬಂದು ಶೀತ, ಜ್ವರ ಬಂದರೆ ಅದನ್ನು ಕರೋನ, ಟೈಫಾಯ್ಡ್ ಇತ್ಯಾದಿಗಳೆಂದು ತಿಳಿದುಕೊಳ್ಳಬಾರದು ಮತ್ತು ಭಯಗ್ರಸ್ತರೂ ಆಗಬಾರದು. ಹಾಗೇನಾದರೂ ಅಧಿಕ ಪ್ರಸಂಗ ಮಾಡಿಕೊಂಡು ಭಯಗ್ರಸ್ತರಾದರೆ ಮುಂದೆ ಆ ಕಾಯಿಲೆಗಳಿಗೆ ಅವರವ ಭಯವೂ ಕಾರಣವಾದೀತು. ಒಟ್ಟಿನಲ್ಲಿ ನನಗೇನೂ ಆಗಲ್ಲ ಎಂಬ ಧೈರ್ಯವಿದ್ದರೆ ಮರಣಕ್ಕೆ ಅಂಜಬೇಕಾಗಿಲ್ಲ.

ಸಾಮಾನ್ಯವಾಗಿ ಜಾತಕದ ಕುಂಡಲಿಯಲ್ಲಿ ಆರನೆಯ ಮನೆಯನ್ನು ರೋಗ, ಋಣ ಇತ್ಯಾದಿ ವಿಚಾರಗಳಿಗೆ ನೋಡುತ್ತಾರೆ. ಜ್ವರ ತಾಪಗಳನ್ನು ಕೊಡುವವನು ಕುಜ್. ಕುಜನಿಂದ ಸುಬ್ರಹ್ಮಣ್ಯ, ನೃಸಿಂಹ, ದುರ್ಗೆಯರ ಚಿಂತನೆ ಮಾಡಬೇಕೆಂದು ಶಾಸ್ತ್ರ ಹೇಳಿದೆ. ಅಂದರೆ ಈ ದೇವರುಗಳಿಗೆ ಉಷ್ಣ ತಾಪವನ್ನು ನೀಡುವ ಶಕ್ತಿಯೂ ಇದೆ, ಅದನ್ನೇ ಬೆಂಕಿಯನ್ನು ಬೆಂಕಿಯಿಂದ ಶಮನಗೊಳಿಸಬೇಕು ಎಂಬಂತೆ, ಶಮನ ಮಾಡುವ ಗುಣವೂ ಇರುತ್ತದೆ.


ಜ್ವರ ಸಮರ ಭಯೇ ಚಿಂತಯೇದ್ಯುಗ್ರ ನೃಸಿಂಹಂ ಎಂದು ನೃಸಿಂಹ ದೇವರ ಮಂತ್ರವೇ ಇದೆ. ಯುದ್ಧ, ರಣಗಳಲ್ಲಿ ದುರ್ಗಾರಾಧನೆ, ಸುಬ್ರಹ್ಮಣ್ಯನ ಪೂಜೆ ಮಾಡುವುದು ಇದಕ್ಕಾಗಿಯೆ. ಈ ದೇವರುಗಳಲ್ಲಿ ಸಂಕರ್ಷಣಾ(ಘರ್ಷಣೆ) ಶಕ್ತಿ ಹೆಚ್ಚು ಇರುವುದರಿಂದ ಇವರಿಗೆ ಸೇನಾಧಿಪತ್ಯ ಇರುತ್ತದೆ. ಸುಬ್ರಹ್ಮಣ್ಯನನ್ನು ಸೇನಾನಿ ಎಂದಿದ್ದಾರೆ. ದೇಹದೊಳಗೂ ಹೊರಗೂ ಶತ್ರುಗಳಿರುವುದು ಸ್ವಾಭಾವಿಕವಲ್ಲವೇ. ಈ ಶತ್ರು ನಿಗ್ರಹಕ್ಕಾಗಿ, ಧಮನಕ್ಕಾಗಿ ಈ ದೇವತಾ ಶಕ್ತಿಯನ್ನು ಆರಾಧನೆ ಮಾಡಿ ಎಂದರು ಪ್ರಾಜ್ಞ ಋಷಿ ಮುನಿಗಳು. ಈ ದೇವರ ಸ್ವರೂಪವನ್ನು ನೀಡುವವನೇ ಕುಜ ಗ್ರಹ. ಇವನು ಪ್ರಸರಿಸುವ ವಿಕಿರಣಗಳು ವಿಪರೀತ ಉಷ್ಣ. ತಾಪಮಾನ ಜಾಸ್ತಿ. ಇದಕ್ಕಾಗಿ ಜಾತಕದಲ್ಲಿ ಕುಜದೋಷ ಇದ್ದಾಗ ಸಿಟ್ಟು, ಅನಾಹುತಗಳಾಗುತ್ತದೆ. ಶಾಂತಿ ಮಾಡಿಸಿಕೊಳ್ಳಿ ಎಂದು ಜ್ಯೋತಿಷ್ಯರು ಸಲಹೆ ನೀಡುತ್ತಾರೆ.

ಕೇವಲ ಷಷ್ಟದಲ್ಲಿ ಕುಜ ಇದ್ದ ಮಾತ್ರಕ್ಕೇ ಅಪಾಯ ಎಂದೇನಿಲ್ಲ. ದುರ್ಬಲನಾಗಿ ಶತ್ರು ಕ್ಷೇತ್ರಗತನಾಗಿ ರವಿ ಸಂಪರ್ಕ ಇದ್ದಾಗ, ರವಿ ನವಾಂಶೆ ಪಡೆದಿದ್ದಾಗ ಇವನು ಜ್ವರಕಾರಕ. ದೇಹವು ಉಷ್ಣತೆ ಜಾಸ್ತಿ ನೀಡುತ್ತದೆ. ಇಲ್ಲಿಗೇ ಅಪಾಯಕಾರಿ ಜ್ವರ ಎಂದು ತೀರ್ಮಾನಿಸುವ ಹಾಗಿಲ್ಲ. ಇಂತಹ ಸ್ಥಿತಿಗೆ ಜಾತಕದಲ್ಲಿ ಶನಿಯೂ ದುರ್ಬಲನಾಗಿ, ಗುರುವೂ ಚಂದ್ರನಿಂದಲೋ, ಲಗ್ನದಿಂದಲೋ, ಲಗ್ನ, ಚಂದ್ರ ರಾಶ್ಯಾಧಿಪತಿಯಿಂದಲೋ ತೃತೀಯದಲ್ಲಿದ್ದರೆ ಬಡಿತ ಜಾಸ್ತಿಯಾಗುತ್ತದೆ. anxiety, aggressive nature ಸೃಷ್ಟಿಯಾಗುತ್ತೆ. ಆಗ ಇದನ್ನು ಅಪಾಯಕಾರಿ ಎನ್ನಬಹುದು. ಆದರೆ ಮರಣ ಎಂದು ಇನ್ನೂ ನಿರ್ಧರಿಸಲಾಗದು. ಹಾಗೆ ನಿರ್ಧರಿಸಬೇಕಾದರೆ, ಗೋಚರದಲ್ಲಿ ಲಗ್ನ, ಚಂದ್ರರಿಂದ, ಶನಿಯಿಂದ ಅಷ್ಟಮದಲ್ಲಿ ಶನಿ ಸಂಚಾರ ಇರಬೇಕು. ಇಷ್ಟಿದ್ದರೂ ಇನ್ನೂ ಅಪಾಯ ಎಂದೂ ನಿರ್ಧರಿಸುವ ಹಾಗಿಲ್ಲ. ಆಗ ದಶಾ ವಿಚಾರ ನೋಡಬೇಕು.

ಖರ ದ್ರೇಕ್ಕಾಣಾಧಿಪತಿಯ ದಶೆ ಭುಕ್ತಿಗಳು, ಅರುವತ್ತ ನಾಲ್ಕನೆಯ ನವಾಂಶಾಧಿಪತಿಯ ದಶೆಗಳೂ ಇದ್ದಲ್ಲಿ ಅಪಾಯ ನಿಶ್ಚಿತ ಎಂದು ತಿಳಿಯಬೇಕು. ಸುಮ್ಮ ಸುಮ್ಮನೆ YouTubeಗಳ ಮೂಲಕ ನೋಡಿ ರೋಗ ವಿಚಾರದ ವಿಚಾರವನ್ನು ತಿಳಿದುಕೊಂಡರೆ ಇದು ಭಯ ಹೆಚ್ಚಿಸಿ ಸಾವು ಬರುವಂತೆ ಮಾಡುತ್ತದೆಯೇ ವಿನಃ ಇನ್ನೇನೂ ಪ್ರಯೋಜನವಿಲ್ಲ. ಹಾಗೆ ಕೊಡುವುದಿದ್ದರೆ ನಾನೂ ನನ್ನ ಚಾನಲ್ ನಲ್ಲಿ ಇಂತಹ ವಿಚಾರ ಹೇಳಿ viewers ಹೆಚ್ವಿಸಿಕೊಂಡು ಲಾಭ ಮಾಡಬಹುದಿತ್ತು. ಆದರೆ ಇಂತಹ ವಿಚಾರ ನೇರ ನೇರ ಮುಖತಃ ವಿಚಾರ ಮಾಡಬೇಕೇ ವಿನಃ ಹಾಗೆಲ್ಲ ಹೇಳುವ ಹಾಗಿಲ್ಲ. ನೋಡುವವರು ಅವರವರ ಕುಂಡಲಿಯನ್ನು ತಾವೇ ವಿಮರ್ಷಿಸಿಕೊಂಡು ಚಿಂತೆಗೊಳಗಾಗುವಂತೆ ಮಾಡಿಕೊಂಡ ಹಾಗಾಗುತ್ತದೆ. ತಜ್ಞ ವೈದ್ಯರೂ ಅವರ ವೈದ್ಯಕೀಯ ವಿಮರ್ಷೆ(diagnosis) ಬಗ್ಗೆ ಹೀಗೇ ಸಲಹೆ ಕೊಡುತ್ತಾರೆ.

ಪ್ರತಿನಿತ್ಯ ಊಟದಲ್ಲಿ ಒಂದು ತುಳಸಿ ದಳವನ್ನು ಅನ್ನದೊಳಗಿಟ್ಟು ನುಂಗಬೇಕು. ಮಧ್ಯಾಹ್ನ ಅಥವಾ ಬೆಳಿಗ್ಗೆ, ರಾತ್ರಿ ಸೇವನೆ ಬೇಡ. ಹಲ್ಲಿಗೆ ತಾಗಿಸಬಾರದು. ತುಳಸಿ ಹಲ್ಲಿಗೆ ಮಾರಕವಾಗುತ್ತದೆ…


ಇಷ್ಟೇ ಅಲ್ಲ, ಜಾತಕನಿಗೆ ರೋಗೋತ್ಪತ್ತಿ ಆಗುವ ವಿಚಾರವನ್ನು ತೃತೀಯ ಮತ್ತು ದ್ವಿತೀಯದಿಂದ ತಿಳಿಯಬೇಕು. ಯಾವ ರೀತಿಯ ಆಹಾರ ಇಷ್ಟ ಪಡುತ್ತಾನೆ,(ದ್ವಿತೀಯವು ಆಹಾರ ಸೇವನೆ); ಎಲ್ಲೆಲ್ಲಿ ಹೇಗೆ ಹೇಗೆ ತಿನ್ನುತ್ತಾನೆ(ತೃತೀಯವು ಅನ್ನದ ಪಾತ್ರೆ)ಎಂಬ ಚಿಂತನೆಯೂ ಬೇಕು. ಅಲ್ಲದೆ ಗುರುವು (ಜ್ಞಾನ, ವಿವೇಚನೆ,) ಹೇಗಿದ್ದಾನೆ, ಆಯು ಕಾರಕ ಶನಿಯ ಸ್ಥಿತಿ ಹೇಗಿದೆ ಎಂಬುದು ಜ್ವರದ ನಿರ್ಣಯಕ್ಕೆ ಬಹಳ ಮುಖ್ಯ.

ಇದೆಲ್ಲ ವಿಚಾರ ಪೂರ್ಣ ತಿಳಿಯಲು ಅಸಾಧ್ಯ ಅಥವಾ ಹೇಳುವ ತಿಳುವಳಿಕೆಯುಳ್ಳವರೂ ವಿರಳ ಅಥವಾ ಕೇಳಿಸಿಕೊಳ್ಳುವ ಯೋಗ ಭಾಗ್ಯವೂ ಬೇಕು. ಅದಕ್ಕಾಗಿ ನಮ್ಮ ಹಿರಿಯರು ಊಟಕ್ಕೊಂದು ನಿಯಮ, ದೇವತಾ ಉಪಾಸನೆಗಳನ್ನು ಹೇಳಿದ್ದಾರೆ. ಅದನ್ನು ಕನಿಷ್ಟವಾಗಿಯಾದರೂ ಪಾಲಿಸಿಕೊಂಡು ಬರಬೇಕು.


ಅನಿಯಮಿತ ಆಹಾರ ಸೇವನೆ, ಅಪಥ್ಯ ಆಹಾರ ಸೇವನೆ, ಉದ್ದೀಪನಗೊಳ್ಳುವ(ಅಮಲು ಪದಾರ್ಥ) ಆಹಾರ ಸೇವನೆ, ರಸ್ತೆ ಬದಿಯ ಆಹಾರ ಇತ್ಯಾದಿ ವರ್ಜ್ಯ ಮಾಡಬೇಕು. ಮನೆಯಲ್ಲಿ ಅಡುಗೆ ಮಾಡಿದ ಆಹಾರವನ್ನೇ ಬುತ್ತಿಯಾಗಿ ಕೊಂಡೊಯ್ಯಬೇಕು. ದೇವರಿಗೆ ಸಮರ್ಪಣೆಯಾಗದ ಆಹಾರವು ದೇವಾನ ಆಹಾರ ಆಗುವುದಿಲ್ಲ. ಅದು ಪ್ರೇತಾನ್ನ ಆಗುತ್ತದೆ. ರಸ್ತೆ ಬದಿಯ ಆಹಾರ ಪ್ರೇತಾನ್ನವೇ. ದೇವಾನ್ನ ಆಗಬೇಕಾದರೆ ತುಳಸಿಧಳ ಹಾಕಿ ಸಮರ್ಪಣೆ ಆಗಿರಬೇಕು. ಅದೂ ಇಲ್ಲದಿದ್ದರೆ ಅಂತಹ ಅನಿವಾರ್ಯದಲ್ಲಿ ಮೊದಲ ತುತ್ತಿನ ಆಹಾರ ಸೇವಿಸುವಾಗ ಮನದಲ್ಲಿ ಕೃಷ್ಣಾರ್ಪಣಮಸ್ತು ಎಂದಾದರೂ ಹೇಳಿದರೆ ಆ ಭೋಜನವು ದೇವಾನ್ನ ಆಗುತ್ತದೆ. ಸಾಧ್ಯವಿದ್ದಷ್ಟು ಮಾಂಸಾಹಾರ ವರ್ಜ್ಯ ಮಾಡಲೇಬೇಕು. ಮಾಂಸಾಹಾರ ದೇವಾನ್ನ ಆಗಲಾರದು. ಆದರೂ ಮೀನು ಮಾತ್ರ ಮಾಂಸ ಆಹಾರಕ್ಕೆ ಯೋಗ್ಯವೇ. ಅತಿಯಾಗಬಾರದು. ಕುರಿ, ಕೋಳಿ, ಹಂದಿ, ಗೋವು ಇದೆಲ್ಲವೂ ದೇಹದ ಧಾರಣಾಶಕ್ತಿಯನ್ನು ಕುಸಿಯುವಂತೆ ಮಾಡುತ್ತದೆ. ಕೋಳಿ ಮೊಟ್ಟೆಯು ಪೌಷ್ಟಿಕವೂ ಅಪಾಯಕಾರಿಯೂ ಅಲ್ಲ ಎಂದು ಕೆಲ ಪ್ರಾಜ್ಞರು ಹೇಳಿದ್ದಿದೆ.

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ತಿಳಿದವರು ಹೇಳಿದ್ದು ಇದಕ್ಕೆ. ದೇವಾನ್ನ ಭೋಜನ ಮಾಡಿ, ರೋಗದಿಂದ ಮುಕ್ತರಾಗಿ ಸ್ವಚ್ಛ ಜೀವನ ನಡೆಸಿ.


Get in Touch With Us info@kalpa.news Whatsapp: 9481252093

Tags: Astama ShaniAstrologyAstronomyCoronavirusFeverHoroscopeKannada News WebsiteLatestNewsKannadaLord NarasihmaPrakash AmmannayaSpecial ArticleTulasi LeavesUnlimited foodಅನಿಯಮಿತ ಆಹಾರಅಷ್ಟಮ ಶನಿಕರೋನಾ ವೈರಸ್‌ಕುಂಡಲಿಜಾತಕಜ್ವರತುಳಸಿ ದಳನೃಸಿಂಹ ದೇವರುಪ್ರಕಾಶ್ ಅಮ್ಮಣ್ಣಾಯಸುಬ್ರಹ್ಮಣ್ಯ
Share301Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

Next Post

ಮುಖ್ಯಮಂತ್ರಿಗಳೇ, ಚಾಮರಾಜನಗರವೂ ನಿಮ್ಮ ಆಡಳತದ ವ್ಯಾಪ್ತಿಯಲ್ಲಿದೆ ಎಂಬುದು ನೆನಪಿದೆಯೇ?

kalpa News

kalpa News

Next Post
ಮುಖ್ಯಮಂತ್ರಿಗಳೇ, ಚಾಮರಾಜನಗರವೂ ನಿಮ್ಮ ಆಡಳತದ ವ್ಯಾಪ್ತಿಯಲ್ಲಿದೆ ಎಂಬುದು ನೆನಪಿದೆಯೇ?

ಮುಖ್ಯಮಂತ್ರಿಗಳೇ, ಚಾಮರಾಜನಗರವೂ ನಿಮ್ಮ ಆಡಳತದ ವ್ಯಾಪ್ತಿಯಲ್ಲಿದೆ ಎಂಬುದು ನೆನಪಿದೆಯೇ?

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL