ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತರೆ ಧರ್ಮೀಯರು ಆಕ್ರಮಿಸಿಕೊಂಡಿರುವ ನಮ್ಮ ದೇವಾಲಯಗಳನ್ನು ನಾವು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
Also Read: ಕಾಂಗ್ರೆಸ್ ನಿರ್ನಾಮದ ಮೂಲಕ ಡಿಕೆಶಿ-ಸಿದ್ದರಾಮಯ್ಯ ನಡುವಿನ ಯುದ್ಧ ಅಂತ್ಯ: ಈಶ್ವರಪ್ಪ ಭವಿಷ್ಯ
ಈ ಕುರಿತಂತೆ ಮಾತನಾಡಿದ ಅವರು, ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಾಲಯ ಇತ್ತು ಎನ್ನುವುದನ್ನು ಮುಸ್ಲೀಮರೇ ಒಪ್ಪಿಕೊಂಡಿದ್ದಾರೆ. ಅಂದು ಆಳುತ್ತಿದ್ದ ವ್ಯಕ್ತಿ ದೇವಾಲಯವನ್ನು ಶಿಫ್ಟ್ ಮಾಡಿ, ಉಳಿಸಿಕೊಡಲಾಗಿದೆ ಎನ್ನುತ್ತಾರೆ. ಆದರೆ, ದೇವಾಲಯವನ್ನು ಶಿಫ್ಟ್ ಮಾಡಿದ್ದಾದರೂ ಯಾಕೆ ಎಂದು ಪ್ರಶ್ನಿಸಿದ ಅವರು, ಇವರನ್ನು ಬೆಂಬಲಿಸುವ ಕಾಂಗ್ರೆಸ್ ಇದಕ್ಕೆ ಏನು ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದರು.
Also Read: ಪ್ರಿಯಾಂಕಾ ಪಾದಸ್ಪರ್ಶದಿಂದ ರಾಜ್ಯದಲ್ಲಿ ಕಾಂಗ್ರೆಸ್’ಗೆ ಪ್ರತಿಪಕ್ಷ ಸ್ಥಾನವೂ ಸಿಗದಂತಾಗಲಿ: ಈಶ್ವರಪ್ಪ ವ್ಯಂಗ್ಯ
ಮೊಘಲರು 36 ಸಾವಿರ ದೇವಾಲಯಗಳನ್ನು ದೇಶದಲ್ಲಿ ಛಿದ್ರ ಛಿದ್ರ ಮಾಡಿದ್ದಾರೆ. ಅವರುಗಳಲ್ಲೇ ಈಗ ಹೊರಕ್ಕೆ ಬರುತ್ತಿದೆ. ಇವುಗಳನ್ನೆಲ್ಲಾ ನಾವು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ. ಕಾನೂನನ್ನು ಮೀರಿ ಬೇರೆ ರೀತಿಯಲ್ಲಿ ನಾವು ಹೋಗುವುದಿಲ್ಲ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post