ವಾಘಾ: ಪಾಕಿಸ್ಥಾನದಿಂದ ಕಳೆದ ಎರಡು ದಿನಗಳ ಹಿಂದೆ ಅಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಸಂಜೆ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ.
ಪಂಜಾಬ್’ನ ವಾಘಾದಲ್ಲಿರುವ ಗಡಿಯಲ್ಲಿ ಅಭಿನಂದನ್ ಅವರನ್ನು ಪಾಕಿಸ್ಥಾನ, ಭಾರತೀಯ ವಾಯುಸೇನೆಗೆ ನಿಯಮಾವಳಿಗಳ ಪ್ರಕಾರ 5.20 ನಿಮಿಷಕ್ಕೆ ಹಸ್ತಾಂತರ ಮಾಡಿದೆ.
ಲಾಹೋರ್’ನಿಂದ ಅಭಿನಂದನ್ ಅವರನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ಪಾಕ್ ಸೇನೆ ರಸ್ತೆ ಮಾರ್ಗದ ಮೂಲಕ ಎಸ್ಕಾರ್ಟ್ ಮಾಡಿ ಕರೆದುಕೊಂಡು ಬಂದಿತು.
ಭಾರತದ ಗಡಿಯಲ್ಲಿದ್ದ ಭಾರತೀಯ ವಾಯು ಸೇನಾ ಅಧಿಕಾರಿಗಳಿಗೆ ಅಧಿಕೃತವಾಗಿ ಅಭಿನಂದನ್ ಅವರನ್ನು ಹಸ್ತಾಂತರ ಮಾಡಲಾಯಿತು.
ಇದಕ್ಕೂ ಮುನ್ನ ಗಡಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಬಿಎಸ್’ಎಫ್ ಅಧಿಕಾರಿಗಳಿಗೆ ಮೊದಲು ಹಸ್ತಾಂತರ ಮಾಡಲಾಯಿತು. ಆನಂತರ ವಾಯು ಸೇನಾ ಅಧಿಕಾರಿಗಳಿಗೆ ಅವರನ್ನು ಹಸ್ತಾಂತರ ಮಾಡಲಾಯಿತು.
Visuals from Attari-Wagah border; Wing Commander #AbhinandanVarthaman to be received by a team of Indian Air Force. pic.twitter.com/C4wv14AEAd
— ANI (@ANI) March 1, 2019
ಈ ವೇಳೆ ನಿಯಮಾವಳಿಗಳ ಪ್ರಕಾರ ಅಭಿನಂದನ್ ಅವರಿಗೆ ಸಂಪೂರ್ಣ ವೈದ್ಯಕೀಯ ತಪಾಸಣೆಯನ್ನು ತಜ್ಞರ ತಂಡ ನಡೆಸಿತು. ವೈದ್ಯಕೀಯ ತಪಾಸಣಾ ಪ್ರಕ್ರಿಯೆ ಮುಕ್ತಾಯವಾದ ನಂತರವಷ್ಟೆ ಅವರನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.
ವಾಘಾ ಗಡಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಪ್ರತಿದಿನ ನಡೆಯುವ ಬೀಟಿಂಗ್ ದಿ ರೀಟ್ರಿಟ್ ರದ್ದು ಮಾಡಲಾಗಿತ್ತು.
Pakistan: Visuals from Wagah in Lahore; IAF Wing Commander #AbhinandanVarthaman will soon be handed over to the Indian Air Force at Attari-Wagah border pic.twitter.com/xEPghVgNzi
— ANI (@ANI) March 1, 2019
ಭಾರತದ ಅತ್ಯಂತ ವೀರಾಗ್ರಣಿ ಯೋಧ ಅಭಿನಂದನ್ ಅವರನ್ನು ಸ್ವಾಗತಿಸಲು ಸಾವಿರಾರು ಮಂದಿ ಸ್ವಯಂ ಪ್ರೆರಿತರಾಗಿ ಗಡಿಯಲ್ಲಿ ಜಮಾಯಿಸಿದ್ದರು. ಪಂಜಾಬ್ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ಸಾವಿರಾರು ದೇಶಭಕ್ತರು ಸೇರಿದ್ದು, ಎಲ್ಲೆಲ್ಲೂ ಭಾರತ್ ಮಾತಾ ಕಿ ಜೈ ಸೇರಿದಂತೆ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಿದ್ದರು. ಅಭಿನಂದನ್ ಅವರನ್ನು ಸ್ವಾಗತಿಸಲು ವಾದ್ಯ ತಂಡಗಳು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಲ್ಲೆಲ್ಲೂ ಅಭಿನಂದನ್ ಅವರ ಸಾಹಸ, ಧೈರ್ಯ ಹಾಗೂ ದೇಶಭಕ್ತಿಯ ಗುಣಗಾನ ನಡೆಯುತ್ತಿತ್ತು.
ಭದ್ರತೆಯ ದೃಷ್ಟಿಯ ಹಿನ್ನೆಲೆಯಲ್ಲಿ ವಾಯಸೇನೆ, ನೌಕಾಸೇನೆ ಹಾಗೂ ಭೂಸೇನಾ ಮುಖ್ಯಸ್ಥರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಭದ್ರತೆಯ ನೆಲೆಯಲ್ಲಿ ವಾಘಾ ಗಡಿಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಇನ್ನೊಂದೆಡೆ ಇಡಿಯ ಭಾರತದಾದ್ಯಂತ ಕೋಟ್ಯಂತರ ದೇಶಭಕ್ತರು ಅಭಿನಂದನ್ ಸುರಕ್ಷಿತ ಆಗಮನವನ್ನು ಸಂಭ್ರಮಿಸಿದರು. ತಮ್ಮ ತಮ್ಮ ಊರುಗಳಲ್ಲೆ ಅಭಿನಂದನ್ ಫೋಟೋ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ವಾಘಾ ಗಡಿಯಲ್ಲಿ ಅಭಿನಂದನ್ ಅವರ ಸ್ವಾಗತಕ್ಕೆ ಆಗಮಿಸಬೇಕಾಗಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕಾರಣಾಂತರದಿಂದ ಬರಲಾಗಲಿಲ್ಲ. ಅದಕ್ಕಾಗಿ ಅವರು ಟ್ವಿಟ್ ಮೂಲಕ ತಮ್ಮ ಶುಭಾಶಯ ತಿಳಿಸಿದ್ದಾರೆ.
ಅಭಿನಂದನ್ ಅವರನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಇದ್ದ ಕಾರಣ ಇಡಿಯ ಗಡಿ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ವಾಘಾ ಗಡಿಯಲ್ಲಿ ಇತ್ತಿÃಚಿನ ವರ್ಷಗಳಲ್ಲಿ ಕಾಣದಂತಹ ಬಿಗಿ ಭದ್ರತೆಯನ್ನು ಸೇನೆ ಕಲ್ಪಿಸಿತ್ತು. ಎಲ್ಲೆಲ್ಲಿ ನೋಡಿದರೂ ಸೇನಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದರು.
ಹೆಚ್ಚಿನ ಮಾಹಿತಿ ನಿರೀಕ್ಷಿಸಿ…
Discussion about this post