ನವದೆಹಲಿ: ಹೌದು… ಅಂತಾರಾಷ್ಟ್ರೀಯ ನಿಯಮ ಹಾಗೂ ಜಿನೇವಾ ಒಪ್ಪಂದವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ತಾನು ಬಂಧಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಮಧ್ಯಾಹ್ನ ಬಿಡುಗಡೆ ಮಾಡಲಿದೆ.
ಅಭಿನಂದನ್ ಅವರನ್ನು ಪಾಕಿಗಳು ಬಂಧಿಸುವ ಮುನ್ನ ಪಾಕ್ ವಿಮಾನದ ದಾಳಿಗೆ ಅಭಿನಂದನ್ ತಮ್ಮ ವಿಮಾನದಿಂದ ಹಾರಿ ಕೆಳಕ್ಕೆ ಬಿದ್ದಿದ್ದರು. ಆದರೆ, ಇದಕ್ಕೂ ಮುನ್ನ ತಾವು ಸುಮ್ಮನೆ ಹಾರಿ ಬಿದ್ದಿರಲಿಲ್ಲ. ಬದಲಾಗಿ ತಮ್ಮ ಸಾಮರ್ಥ್ಯವನ್ನು ಉಪಯೋಗಿಸಿ ಪಾಕಿಸ್ಥಾನದ ವಿಮಾನವನ್ನು ಹೊಡೆದು ಉರುಳಿಸಿಯೇ ತಾವು ಕೆಳಕ್ಕೆ ಹಾರಿದ್ದರು ಈ ವೀರಾಗ್ರಣಿ.
ಈ ಮಾಹಿತಿ ಈಗ ಹೊರಬಿದ್ದಿದ್ದು, ಭಾರತದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತದ ವಿಂಡ್ ಕಮಾಂಡರ್ ಅಭಿನಂದನ್ ಹೊಡೆದುರುಳಿಸಿದ್ದರು.
ಪಾಕಿಸ್ಥಾನ ಗಡಿಯಲ್ಲಿ ನುಗ್ಗಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಭಾರತೀಯ ವಾಯುಪಡೆ ವಿಮಾನಗಳು ದೇಶಕ್ಕೆ ಹಿಂತಿರುಗಿದ್ದವು. ಆದರೆ, ಇದಾದ ನಂತರ ಭಾರತಕ್ಕೆ ಪಾಠ ಕಲಿಸುತ್ತೇನೆ ಎಂಬ ಹಮ್ಮಿನಿಂದ ಪಾಕ್ ತನ್ನ ಎಫ್-16ರ 24 ವಿಮಾನಗಳನ್ನು ಭಾರತದತ್ತ ಛೂ ಬಿಟ್ಟಿತ್ತು. ಆದರೆ, ಯಾವಾಗ ಪಾಕ್ ವಿಮಾನಗಳ ನಮ್ಮ ವಾಯುಗಡಿಯನ್ನು ಪ್ರವೇಶಿದವೋ ತತಕ್ಷಣವೇ ಎಚ್ಚೆತ್ತ ನಮ್ಮ ವಾಯುಪಡೆಯ 8 ವಿಮಾನಗಳು ಪಾಕ್ ವಿಮಾನಗಳಿಗೆ ಹೆದರಿಸಿ, ಆಗಸದಲ್ಲಿ ನಾಯಿಗಂತೆ ಅಟ್ಟಾಡಿಸಿ, ಪಾಕಿಸ್ಥಾನಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದವು.
ಈ ವೇಳೆ ನಮ್ಮ ವಾಯುಪಡೆ ವಿಮಾನಗಳಿಗಿಂತಲೂ ಮೂರು ಪಟ್ಟು ಹೆಚ್ಚು ವಿಮಾನಗಳನ್ನು ಒಳಗೊಂಡ ಪಾಕಿಸ್ಥಾನದ ಕುತಂತ್ರಕ್ಕೆ ಜಗ್ಗದೆ, ವಿಂಗ್ ಕಮಾಂಡರ್ ಅಭಿನಂದನ್ ತಮ್ಮ ಮಿಗ್ 21 ಬೈಸನ್ ಜೆಟ್ ಮೂಲಕ ಅರ್ಥಮಾನ್ ಆರ್–73 ಕ್ಷಿಪಣಿಯನ್ನು ಪ್ರಯೋಗಿಸಿದರು. ಈ ವೇಳೆ ಪಾಕಿಸ್ಥಾನದ ಎಫ್-೧ ಯುದ್ಧ ವಿಮಾನ ಪತ£ಗೊಂಡಿತ್ತು.
ಇನ್ನು, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮತ್ತೊಂದು ಎಫ್–16 ಯುದ್ಧ ವಿಮಾನವೊಂದು ಎರಡು ಕ್ಷಿಪಣಿಗಳನ್ನು ಅಭಿನಂದನ್ ಇದ್ದ ಮಿಗ್–21 ವಿಮಾನಕ್ಕೆ ತೂರಿಬಿಟ್ಟಿದ್ದು, ಒಂದು ಕ್ಷಿಪಣಿ ಎಎಂಆರ್ಎಎಎಂ ಬಡಿಯಿತು. ಇದರಿಂದಾಗಿ ವಿಂಗ್ ಕಮಾಂಡರ್ ಅನಿವಾರ್ಯವಾಗಿ ವಿಮಾನದಿಂದ ಜಿಗಿಯಬೇಕಾಯಿತು. ಪ್ಯಾರಾಚೂಟ್ ನಲ್ಲಿ ಹಾರುತ್ತ ಅಭಿನಂದನ್ ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ಭಾಗದಲ್ಲಿ ಬಿದ್ದರು. ಇದರಿಂದಾಗಿ ಅಭಿನಂದನ್ ಅವರನ್ನು ಬಂಧಿಸುವುದು ಪಾಕಿಸ್ಥಾನಕ್ಕೆ ಸುಲಭವಾಯಿತು.
ಹೀಗೆ, ತಾವು ಶತ್ರುಗಳಿಂದ ಬಂಧನಕ್ಕೆ ಒಳಗಾದರೂ ಜೀವ ಬಿಟ್ಟೇನು, ದೇಶದ ರಹಸ್ಯ ಬಿಡೆನು ಎಂದು ಪ್ರಾಣತ್ಯಾಗಕ್ಕೂ ಸಿದ್ದರಾಗಿದ್ದ ಅಭಿನಂದನ್, ತಾವು ಕೆಳಕ್ಕೆ ಬೀಳುವ ಮುನ್ನ ಪಾಕಿನ ವಿಮಾನವನ್ನು ಹೊಡೆದು ಬೀಳಿಸುವ ಮೂಲಕ ಭಾರತೀಯ ಯೋಧರು ಹೇಡಿಗಳಲ್ಲ, ತಾಯಿ ಭಾರತಿಗೆ ಅರ್ಪಿಸಿಕೊಳ್ಳುವ ಕೊನೆಯ ಗಳಿಗೆಯವರೆಗೂ ಹೋರಾಡುತ್ತೇವೆ ಎಂಬ ಖಡಕ್ ಸಂದೇಶವನ್ನು ಶತ್ರುಗಳಿಗೆ ರವಾನಿಸಿದ್ದಾರೆ.
Discussion about this post