ವಾಘಾ: ಇಡಿಯ ದೇಶವೇ ಹೆಮ್ಮೆ ಪಡುವಂತಹ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಇಂದು ಸಂಜೆ ಪಾಕಿಸ್ಥಾನ ಬಿಡುಗಡೆ ಮಾಡಲಿದ್ದು, ವಾಘಾ ಗಡಿಯ ಮೂಲಕ ತಾಯಿ ಭಾರತಿಯ ಮಡಿಲಿಗೆ ಆಕೆಯ ವೀರಪುತ್ರ ಆಗಮಿಸಲಿದ್ದಾರೆ.
ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ ಹೇಳಿಕೆ ನೀಡಿದಂತೆ ಇಂದು ಅಭಿನಂದನ್ ಅವರನ್ನು ಬಿಡುಗಡೆ ಮಾಡಲಿದೆ. ಜಿನೇವಾ ಒಪ್ಪಂದದಂತೆ ಅಭಿನಂದನ್ ಅವರನ್ನು ಅತ್ಯಂತ ಗೌರವಯುತವಾಗಿ ಭಾರತಕ್ಕೆ ಪಾಕಿಸ್ಥಾನ ಹಸ್ತಾಂತರ ಮಾಡಬೇಕು. ಹೀಗಾಗಿ, ಭಾರತದ ಗಡಿಯವರೆಗೂ ಅಭಿನಂದನ್ ಅವರನ್ನು ಪಾಕಿಸ್ಥಾನ ಸೇನೆ ಹಾಗೂ ಅಧಿಕಾರಿಗಳು ತಲುಪಿಸಲಿದ್ದಾರೆ. ಇಲ್ಲಿಂದ ಭಾರತೀಯ ಸೇನೆ ಹಾಗೂ ಸರ್ಕಾರ ಅಭಿನಂದನ್ ಅವರನ್ನು ಕರೆದುಕೊಳ್ಳಲಿದೆ.
Visuals from the Attari-Wagah border. Wing Commander #AbhinandanVarthaman will be released by Pakistan today. pic.twitter.com/6x30IQpqbB
— ANI (@ANI) March 1, 2019
ವಾಘಾ ಗಡಿಯಲ್ಲಿರುವ ಗೇಟ್ ಮೂಲಕ ಅಭಿನಂದನ್ ಅವರನ್ನು ದೇಶದೊಳಕ್ಕೆ ಗೌರವಯುತವಾಗಿ ಕರೆದುಕೊಳ್ಳುವುದು ಎಂದು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಇಂದು ಮುಂಜಾನೆಯಿಂದಲೇ ಕಾಯುರ ತುಂಬಿದ ಸಂಭ್ರಮ ಮನೆ ಮಾಡಿದೆ. ಅಭಿನಂದನ್ ಆಗಮಿಸುವುದು ಸಂಜೆಯೇ ಆದರೂ ಮುಂಜಾನೆಯಿಂದಲೇ ಸಾವಿರಾರು ಮಂದಿ ಇಲ್ಲಿಗೆ ಧಾವಿಸುತ್ತಿದ್ದಾರೆ.
ಇನ್ನು, ಅಭಿನಂದನ್ ಅವರನ್ನು ಸ್ವಾಗತಿಸಲು ಭಾರತೀಯ ಸೇನೆ ಉತ್ಸುಕದಲ್ಲಿ ಕಾಯುತ್ತಿದ್ದರೆ, ಈ ವೇಳೆ ಖುದ್ದು ಗಡಿಗೆ ತೆರಳುವುದಾಗಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಹೇಳಿದ್ದಾರೆ.
Dear @narendramodi ji , I’m touring the border areas of Punjab & I’m presently in Amritsar. Came to know that @pid_gov has decided to release #AbhinandanVartaman from Wagha. It will be a honour for me to go and receive him, as he and his father are alumnus of the NDA as I am.
— Capt.Amarinder Singh (@capt_amarinder) February 28, 2019
ಈ ಕುರಿತು ಮಾತನಾಡಿರುವ ಅವರು, ವಾಘಾ ಗಡಿಗೆ ನಾನು ತೆರಳುತ್ತೇನೆ. ತಾಯಿ ಭಾರತಿಯ ವೀರ ಪುತ್ರನನ್ನು ಸರ್ಕಾರ ಹಾಗೂ ದೇಶದ ಪರವಾಗಿ ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ವಾಘಾ ಗಡಿಗೆ ಅಭಿನಂದನ್ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
Discussion about this post