No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Friday, May 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಟಲ್ ಜೀ ಎಂಬ ಮಹಾನ್ ಚೇತನಕ್ಕೆ ಅಕ್ಷರ ನಮನವಲ್ಲದೇ ಇನ್ನೇನು ಅರ್ಪಿಸಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 16, 2018
in Special Articles
0
Share on FacebookShare on TwitterShare on WhatsApp
ಅಮರರಾದರು ಅಟಲ್ ಜೀ…!

ಜನರ ಜೀವನದಲ್ಲಿ ಅಬ್ಬರದಿಂದ ಬರುವ ಅಲೆಯೊಂದಿದೆ,ಪ್ರವಾಹ ಬಂದಾಗ ಆ ಅಲೆಯನ್ನೇರಿ ಬಂದಾತ ಒಳ್ಳೆಯ ಅದೃಷ್ಟವನ್ನು ತಲುಪುತ್ತಾನೆ(There is a tide in the affairs of men.which taken at the floods, leads on to fortune)ಎಂದು ಶೇಖ್‌ಸ್ಪಿಯರ್ ತನ್ನ ‘‘ಜೂಲಿಯಸ್ ಸೀಜರ್’’ ಎಂಬ ನಾಟಕದಲ್ಲಿ ಹೇಳಿದ್ದಾನೆ.

ಹಾಗೆಯೇ ಸಮನ್ವಯತೆಯ ಅಲೆಯೇರಿ ಬಂದ ಶಾಂತಿಧೂತರೊಬ್ಬರು ಹಲವು ದಶಕಗಳ ಕಾಲ ಎರಡು ರಾಷ್ಟ್ರಗಳ(ಭಾರತ-ಪಾಕಿಸ್ಥಾನ) ನಡುವೆ ಹೆಪ್ಪುಕಟ್ಟಿದ್ದ ದ್ವೇಷವನ್ನು ಕರಗಿಸುವ ಕೈಂಕರ್ಯಕ್ಕೆ ನಾಂದಿ ಹಾಡಿದರು. ಇಡೀ ವಿಶ್ವಕ್ಕೆ ಸ್ನೇಹಹಸ್ತ ಚಾಚಿ, ಆಲಂಗಿಸಿಕೊಳ್ಳುವ ಉತ್ಸಾಹವಿತ್ತು ಅವರಲ್ಲಿ. ಅದೇ ಉತ್ಸಾಹದಲ್ಲಿ ನೆರೆರಾಷ್ಟ್ರದೊಂದಿಗೆ ಸ್ನೇಹ ಬಯಸಿ, ಭಾರತ-ಪಾಕ್ ಸಂಬಂಧಗಳ ಸುಧಾರಣೆಗಾಗಿ ಸಂಝೋತಾ ರೈಲು ಪ್ರಯಾಣ, ಲಾಹೋರ್ ನಿಂದ ದೆಹಲಿಯವರೆಗೆ ಬಸ್ ಸಂಚಾರ, ಅಲ್ಲದೆ ವಿಮಾನಯಾನವನ್ನೂ ಪ್ರಾರಂಭಿಸಿಬಿಟ್ಟರು ಶಾಂತಿಧೂತ ಅಟಲ್‌ಜೀ.

ಕೆಲವರು ಇತಿಹಾಸವನ್ನು ಓದುತ್ತಾರೆ, ಕೆಲವರು ಇತಿಹಾಸವನ್ನು ಬರೆಯುತ್ತಾರೆ, ಕೆಲವರು ಇತಿಹಾಸವನ್ನು ತಿರುಚುತ್ತಾರೆ, ಆದರೆ ಕೆಲವರು ಮಾತ್ರ ಇತಿಹಾಸವನ್ನು ನಿರ್ಮಿಸುತ್ತಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇವರದೇ ಒಂದು ಅಪೂರ್ವ ಅಧ್ಯಾಯ ಸುವರ್ಣಾಕ್ಷರಗಳಿಂದ ರಚಿಸಲ್ಪಟ್ಟಿದೆ ಎಂದರೆ ಅತಿಶಯೋಕ್ತಿಯೆನಿಸದು.

ಅಟಲ್‌ಜೀ ಅವರ ಉದಾರ ತತ್ವಗಳನ್ನು ಮೆಚ್ಚಿಕೊಂಡಿದ್ದ ಪಾಕಿಸ್ಥಾನದ ಅಂದಿನ ವಾರ್ತಾಮಂತ್ರಿ ಶೇಖ್ ರಶೀದ್  Vajapayee is the only leader who can take bold steps to solve Indo-pak issues. Other than him, I think its all darkness’’ಎಂದು ಹೇಳಿದ್ದರು.

ಪಾಕ್‌ನೊಂದಿಗೆ ಸ್ನೇಹ ಬಯಸಿದ ಅಟಲ್‌ಜೀ ಅವರ ಮುತ್ಸದ್ದಿತನವನ್ನು ಪ್ರಪಂಚದ ಅಂದಿನ ರಾಜಕಾರಣಿಗಳೆಲ್ಲರೂ ಕೊಂಡಾಡಿದ್ದರು. ಆ ಕಾಲದಲ್ಲಿ ಜನಪ್ರಿಯತೆಯ ಅಲೆಯನ್ನೇರಿ ಕೀರ್ತಿಯ ಶಿಖರವನ್ನೇರಿದ್ದರು ಅಟಲ್‌ಜೀ.

ರಕ್ಷಣಾ ವಿಜ್ಞಾನದಲ್ಲಿ ಭಾರತ ಅದ್ಭುತ ಪ್ರಗತಿ ಸಾಧಿಸಿದ್ದು ಇವರ ಕಾಲದಲ್ಲೆ. 1998ರಲ್ಲಿ ಅಣ್ವಸ್ತ್ರಗಳ ಪರೀಕ್ಷೆ ನಡೆಸಿ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿದವರು ಇವರೇ. 1994ರಲ್ಲಿಯೆ ವಾಜಪೇಯಿರವರನ್ನು ಶ್ರೇಷ್ಠ ಸಂಸದೀಯ ಪಟು ಎಂದು ಸನ್ಮಾನಿಸಲಾಗಿತ್ತು.

ಅಟಲ್‌ಜೀ ಬರೀ ಪ್ರಭಾವಿ ವಕ್ತಾರರಾಗಿರಲಿಲ್ಲ, ಶುದ್ಧಮನಸ್ಸಿನ ಹಿರಿಯ ಚೇತನವಾಗಿದ್ದರು ಮತ್ತು ಯಾವುದೇ ಬಿಕಟ್ಟನ್ನು ಎದುರಿಸುವ ಮನೋಬಲವಿದ್ದ ಧೀಮಂತ ನಾಯಕರಾಗಿದ್ದರು. ‘‘ವಾಜಪೇಯಿರವರನ್ನು ರಾಜಕಾರಣಿಗಳೆಂದು ಭಾವಿಸುವುದಕ್ಕಿಂತಲೂ ಅವರನ್ನು ಮಾನವತಾವಾದಿಯೆಂದು ಭಾವಿಸುವುದು ಒಳಿತೆಂದು ವಿದೇಶಿಯರು ಗೌರವಿಸುತ್ತಿದ್ದರಂತೆ. ಲೋಕಪುರುಷರೆಂಬ ಬಿರುದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ಬಿರುಗಾಳಿಯಾಗಲಿ, ಅಬ್ಬರದ ತೆರೆಗಳಾಗಲಿ, ಅವು ಸಮರ್ಥ ನಾಯಕನ ಪರವಾಗಿರುತ್ತವೆ ಎಂಬ ಮಾತಿದೆ.(The wind and waves are always on the sides of the best navigator)ಅಟಲ್ ಜೀರವರು ಸಮರ್ಥ ನಾವಿಕನಂತೆ ಬಿರುಗಾಳಿಯನ್ನು ಎದುರಿಸಿದ್ದಾರೆ, ಅಬ್ಬರದ ಅಲೆಗಳನ್ನು ಮೃದುಗೊಳಿಸಿದ್ದಾರೆ.

ಅವರಲ್ಲಿದ್ದ ಒಂದು ವಿಶೇಷವಾದ ಗುಣವೆಂದರೆ, ಅವರು ದೇಶದ ಪ್ರಧಾನಿಯಾದ ನಂತರವೂ ವಿರೋಧ ಪಕ್ಷಗಳ ಸದಸ್ಯರಿಗೆ ಉತ್ತರ ಕೊಡುವಾಗ ಗಂಭೀರವಾಗಿ, ಪ್ರಾಮಾಣಿಕತೆಯಿಂದ ವರ್ತಿಸುತ್ತಿದ್ದುದು. ಸಭೆಯ ಘನತೆಗೆ ಭಂಗತರುವ ಅಸಭ್ಯ ಭಾಷೆಯನ್ನು ಅವರು ಎಂದೂ ಉಪಯೋಗಿಸುತ್ತಿರಲಿಲ್ಲ ಎಂದರೆ ಅವರ ವ್ಯಕ್ತಿತ್ವ ತಿಳಿಯುತ್ತದೆ.

ಒಮ್ಮೆ ವಿರೋಧ ಪಕ್ಷದ ಸದಸ್ಯರೊಬ್ಬರು ‘‘ನೀವು ಚೆನ್ನಾಗಿದ್ದೀರಿ ಆದರೆ ನಿಮ್ಮ ಸಂಘಟನೆ(RSS) ಚೆನ್ನಾಗಿಲ್ಲ’’ ಎಂದು ಅಟಲ್‌ಜೀರವರನ್ನು ಪೇಚಿಗೆ ಸಿಕ್ಕಿಸುವ ನೀರಸ ಪ್ರಯತ್ನ ಮಾಡಿದ್ದರು. ಆಗ ಅಟಲ್‌ಜೀ ಫಲ ಚೆನ್ನಾಗಿದೆ, ಆದರೆ ಮರ ಚೆನ್ನಾಗಿಲ್ಲ ಎಂಬ ಮಾತು ಸಲ್ಲದು ಎಂದಾಗ ಪ್ರಶ್ನೆ ಕೇಳಿದಾತನ ಮುಖ ಬಿಳುಚಿಕೊಂಡಿತು.

ವಾಜಪೇಯಿರವರು ಕನಸುಗಾರರು ಮತ್ತು ವಾಸ್ತವಿಕ ಜಗತ್ತಿನಿಂದ ದೂರ ಎಂಬ ಆಪಾದನೆಗೆ ಉತ್ತರಿಸುತ್ತ ಮೇ ಸಪನೋಂಕಾ ಸೌದಗಾರ್ ನಹೀ ಹೂಂ. ಮೇರೆ ಪಾಂವ್ ಜಮೀನ್ ಪರ್ ರೀಕ್ ತರಹಸೇ ಜಮೇಹುವೇ ಹೈ(ನಾನು ಕನಸುಗಳ ಮಾರಾಟಗಾರನಲ್ಲ. ನನ್ನ ಕಾಲುಗಳು ಬಲವಾಗಿ ಭೂಮಿಯಲ್ಲಿ ನಿಂತಿವೆ) ಎಂದು ಹೇಳುವ ಮೂಲಕ ಪೊಳ್ಳು ಆಪಾದನೆಗಳಿಗೆ ಬ್ರೇಕ್ ಹಾಕಿದ್ದರು.

ಸರಳತೆ, ಸಜ್ಜನಿಕೆಯೇ ಮೂರ್ತರೂಪವೆತ್ತಿನಿಂತ ವ್ಯಕ್ತಿತ್ವವವರದು. ಅವರು ಸಂಸತ್ ಸದಸ್ಯರಾಗಿದ್ದಾಗ ಆಗಾಗ್ಗೆ ಗ್ವಾಲಿಯರ್ ನಗರಕ್ಕೆ ಹೋಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ಅವರು ಅಲ್ಲಿನ ಪಾನಿಪೂರಿ ತಿಂಡಿಯ ಚಿಕ್ಕ ಹೋಟೆಲ್ಲಿಗೆ ಹೋಗುವ ರೂಢಿಯಿತ್ತು. ಸಂಸತ್ ಸದಸ್ಯರಾದ ಮೇಲೂ ಆ ಹೋಟೆಲ್ಲಿಗೆ ಹೋಗಿ ಅದರ ಮಾಲೀಕನ ಜೊತೆ ಹರಟೆ ಹೊಡೆಯುತ್ತಾ ತಿಂಡಿ ತಿಂದು ಬರುತ್ತಿದ್ದರಂತೆ.

ಅಂದು ಡಿಸೆಂಬರ್ 26, 2003. ಜಗತ್ತಿನ ಕ್ಷೇಮ ಬಯಸುತ್ತಿದ್ದ ಕನಸುಗಾರರು(ಅಟಲ್‌ಜೀ) ಎಂಬತ್ತರ ವಸಂತ್ತಕ್ಕೆ ಕಾಲಿರಿಸಿದ್ದರು. ಆ ದಿನ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂದ ಸದಸ್ಯರು ಅವರಿಗೆ ಶುಭಾಶಯ ಕೋರಲು ಅವರ ಮನೆಗೆ ಧಾವಿಸಿದ್ದರು. ಎಲ್ಲರೂ ಅವರಿಗೆ ಶುಭಾಶಯವನ್ನು ಕೋರಿದಾಗ ಅಟಲ್ ಜೀರವರ ಹಾಸ್ಯಪ್ರವೃತ್ತಿ ಜಾಗೃತವಾಯಿತು.

‘‘ಅಸ್ಸೀ ಸಾಲ್ ಕೀ ವ್ಯಕ್ತಿ ಕೋ ಹ್ಯಾಪಿ ರಿಟನ್‌ಸ್ ಕಹನಾ ಸಾಹಸ ಕೀ ಕಾಮ್ ಹೈ’’(ಎಂಬತ್ತು ವರ್ಷದ ವ್ಯಕ್ತಿಗೆ ಜನ್ಮದಿನದ ಶುಭಾಶಯ ಕೋರುವುದು ಬಹಳ ಸಾಹಸದ ಮಾತಾಗಿದೆ)ಎಂದು ಹೇಳಿ ಎಲ್ಲರನ್ನು ನಗಿಸಿದ್ದರು. ಅವರ ಪ್ರತಿಯೊಂದು ಮಾತು ಕಾವ್ಯಮಯ; ಅವರ ಪ್ರತಿಯೊಂದು ಹೇಳಿಕೆಯೂ ನಾಣ್ಣುಡಿ.

ಅಟಲ್‌ಜೀ ರಾಷ್ಟ್ರದ ಪುರ್ನನಿರ್ಮಾಣಕ್ಕಾಗಿ ಜನ್ಮವೆತ್ತಿ ಬಂದ್ದಿದ್ದ ಮಹಾಪುರುಷರು. ಜನರ ಆಸೆ-ಆಕಾಂಕ್ಷೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರವನ್ನು ಉನ್ನತ ಆದರ್ಶಗಳತ್ತ ಮುನ್ನುಗಿಸಿದ ವ್ಯಕ್ತಿ. ಇಪ್ಪತ್ತೆರಡು ಪಕ್ಷಗಳಿಂದ ಕೂಡಿದ ಸಂಯುಕ್ತ ರಂಗ ಸರ್ಕಾರದ ಮುಖ್ಯಸ್ಥರಾಗಿ ಆಡಳಿತ ನಡೆಸಿದ್ದರು. ಭಿನ್ನ ಭಿನ್ನ ವಿಚಾರಗಳನ್ನು ಸಮನ್ವಯಗೊಳಿಸಿ, ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದೇ ಗುರಿಯತ್ತ ಒಯ್ದಿದ್ದು ಅವರ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.

ದೇಶದ ಆರ್ಥಿಕ ಪ್ರಗತಿಯ ಕುರಿತು ಯೋಚಿಸುತ್ತಿದ್ದ ಅವರನ್ನು ವಿಕಾಸಪುರುಷನೆಂದರೆ ತಪ್ಪಾಗದು. ಅಂತಹ ಮಹಾನ್ ಚೇತನ ಅಮರವಾಯಿತು. ಬಿಂದು ಬಿಂದುವಿನಲ್ಲಿ ಸಿಂಧುವನ್ನು ಕಂಡವರು ಶಂಕರನೊಂದಿಗೆ ಸಮಾಗಮನ ನಡೆಸಲು ಹೊರಟುಬಿಟ್ಟರು. ಅಂತಹ ಅಜಾತಶತ್ರುವಿಗೆ ಈ ಅಕ್ಷರನಮನವನ್ನಲ್ಲದೆ ಇನ್ನೇನು ಅರ್ಪಿಸಲು ಸಾಧ್ಯ…

-ತೇಜಶ್ರೀ ವೆಂಕಟೇಶ್,
ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ಪುತ್ತೂರು

Tags: Atal Bihari VajpayeeAtal Bihari Vajpayee deathAtal jiIndiaPakistan
Share196Tweet123Send
Previous Post

ಪಂಜಾಬ್‌ನಲ್ಲಿ ಗಂಡಸರೂ ಬಳೆ ತೊಡುತ್ತಾರೆ ಎಂದು ವಾಜಪೇಯಿ ಹೇಳಿದ್ದೇಕೆ?

Next Post

ನಾಳೆ 4 ಗಂಟೆಗೆ ಯಮುನಾ ತಟದ ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಅಂತ್ಯಕ್ರಿಯೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಾಳೆ 4 ಗಂಟೆಗೆ ಯಮುನಾ ತಟದ ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಅಂತ್ಯಕ್ರಿಯೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ವಿಜಯ ರಾಘವೇಂದ್ರ ನಟನೆಯ ಕೌಟುಂಬಿಕ ಕಥಾನಕ ‘ಶ್ರೀಮತಿ ಸಿಂಧೂರ’ ಆಡಿಯೋ ಟೀಸರ್ ರಿಲೀಸ್

ವಿಜಯ ರಾಘವೇಂದ್ರ ನಟನೆಯ ಕೌಟುಂಬಿಕ ಕಥಾನಕ ‘ಶ್ರೀಮತಿ ಸಿಂಧೂರ’ ಆಡಿಯೋ ಟೀಸರ್ ರಿಲೀಸ್

May 1, 2026
ರಾಯರ ಸನ್ನಿಧಿಯಲ್ಲಿ ಸಂಧ್ಯಾ-ಸೌಮ್ಯಾ ಯುಗಳ ಗಾಯನ

ರಾಯರ ಸನ್ನಿಧಿಯಲ್ಲಿ ಸಂಧ್ಯಾ-ಸೌಮ್ಯಾ ಯುಗಳ ಗಾಯನ

May 1, 2026
ಜೋಗಕ್ಕೆ ಸಂಸದ ರಾಘವೇಂದ್ರ ಭೇಟಿ | ಅಧಿಕಾರಿಗಳಿಗೆ ಕೊಟ್ಟ ಸೂಚನೆಯೇನು?

ಜೋಗಕ್ಕೆ ಸಂಸದ ರಾಘವೇಂದ್ರ ಭೇಟಿ | ಅಧಿಕಾರಿಗಳಿಗೆ ಕೊಟ್ಟ ಸೂಚನೆಯೇನು?

April 30, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಯಶವಂತಪುರ-ಶಿವಮೊಗ್ಗ-ತಾಳಗುಪ್ಪ ನಡುವೆ ಸ್ಪೆಷಲ್ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

April 30, 2026
ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಕ್ರೈಸ್ಟ್‌ಕಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 4ನೇ ರ‍್ಯಾಂಕ್

ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಕ್ರೈಸ್ಟ್‌ಕಿಂಗ್ ಕಾಲೇಜಿನ ವಿದ್ಯಾರ್ಥಿ ರಾಜ್ಯಕ್ಕೆ 4ನೇ ರ‍್ಯಾಂಕ್

April 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL