ನವದೆಹಲಿ: ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದುಕೊಂಡ ಕಾದಾಟಕ್ಕೆ ಬಂದರೆ, ಮುಂದೆ ನಾವು ನೀಡುವ ದೊಡ್ಡ ಏಟಿಗೆ, 1971ರ ಯುದ್ಧದ ನಿಮ್ಮ ಸೋಲನ್ನೂ ಸಹ ನೀವು ಮರೆಯಬೇಕಾಗುತ್ತದೆ ಎಂದು ಪಾಕಿಸ್ಥಾನಕ್ಕೆ ಭಾರತ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಎಚ್ಚರಿಕೆ ನೀಡಿರುವ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರು, ಜಮ್ಮು ಕಾಶ್ಮೀರದಲ್ಲಿನ ಕೃತ್ಯಗಳನ್ನು ನಿಲ್ಲಿಸದೇ ಹೋದಲ್ಲಿ ಆ ದೇಶವನ್ನೇ ಬಲಿ ಹಾಕುವಂತಹ ಕೆಲಸ ಮಾಡಬೇಕಾಗುತ್ತದೆ. ಪಾಕಿಸ್ತಾನ 1971ರ ಯುದ್ಧವನ್ನು ಮರೆತಿರುವಂತಿದೆ. ಈ ಯುದ್ಧದಲ್ಲಿ ಪಾಕ್ ಹಿಡಿತದಿಂದ ಬಾಂಗ್ಲಾದೇಶ ಸ್ವತಂತ್ರಗೊಂಡಿತ್ತು. 93 ಸಾವಿರಕ್ಕೂ ಅಧಿಕ ಪಾಕ್ ಸೈನಿಕರು ಭಾರತದ ಸೇನೆಗೆ ಶರಣಾಗಿದ್ದರು. ಈ ಹೊಡೆತ ತಿಂದ ಬಳಿಕವೂ ನೆರೆಯ ದೇಶ ಇನ್ನೂ ಪಾಠ ಕಲಿತಿಲ್ಲ. ಆದರೆ ನಾನು ಒಂದು ಹೇಳುತ್ತೇನೆ. ಪಾಕಿಸ್ತಾನ ತನ್ನ ಕೃತ್ಯ ಮುಂದುವರೆಸಿದರೆ, 1971ರ ಯುದ್ಧ ಸೋಲನ್ನೂ ಮರೆತು ಬಿಡಬೇಕು, ಅಂತಹ ದೊಡ್ಡ ಏಟು ನೀಡುತ್ತೇವೆ ಎಂದಿದ್ದಾರೆ.
Discussion about this post