No Result
View All Result
First VALORANT Campus Cup Champions Crowned
English Articles

First VALORANT Campus Cup Champions Crowned

by ಕಲ್ಪ ನ್ಯೂಸ್
April 15, 2026
0

Kalpa Media House  |  INDIA | The VALORANT Campus Cup (VCC) wrapped its inaugural edition with a Grand Finale that...

Read moreDetails
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
An Immaculate Demonstration on Confluence of Architecture Design & Music

An Immaculate Demonstration on Confluence of Architecture Design & Music

April 13, 2026
Rani KoHEnur Calls Transgender Bill “Absurd”, Questions Lawmakers in Explosive Podcast Interview

Rani KoHEnur Calls Transgender Bill “Absurd”, Questions Lawmakers in Explosive Podcast Interview

April 9, 2026
  • Advertise With Us
  • Grievances
  • About Us
  • Contact Us
Wednesday, April 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ತಾತ್ವಿಕತೆ ಇದೆ ದೇವಸ್ಥಾನಗಳಿಗೆ ಪ್ರವೇಶಿಸಲು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 12, 2019
in Army
0
ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?
Share on FacebookShare on TwitterShare on WhatsApp

ಇದು ಜಾತ್ಯಾತೀತ ರಾಷ್ಟ್ರ. ಒಪ್ಪಿಕೊಳ್ಳೋಣ ಅಥವಾ ಒಪ್ಪಿಕೊಂಡಿದ್ದೇವೆ. ಆದರೆ ಎಲ್ಲಾ ಕಡೆಯೂ it is not applicable.

ಈಗ ನಾವು ಹಿಂದೂ ದೇವಸ್ಥಾನಗಳ ವಿಚಾರ ನೋಡೋಣ. ಭಾರತೀಯ ವೇದೋಕ್ತ ಸಾಂಪ್ರದಾಯಿಕತೆಯ ದೇವ ಮಂದಿರಗಳು Museum ಆಗಲು ಸಾಧ್ಯವಿಲ್ಲ. ಇದಕ್ಕೆ ಆಗಮೋಕ್ತ ಪ್ರಾಕಾರಗಳು, ನಮಸ್ಕಾರ ಮಂಟಪ, ಗರ್ಭಗುಡಿ, ಪಾಣಿಪೀಠ, ದೇವರ ಬಿಂಬ ಇತ್ಯಾದಿಗಳ ರಚನೆಗಳಿವೆ. ಇಲ್ಲಿಗೇ ಇದು ದೇವಸ್ಥಾನವಾಗುವುದಿಲ್ಲ.

ದೇವಾಲಯಕ್ಕೆ ದೈವ ಸಾನ್ನಿಧ್ಯ ಬೇಕು
ದೇವಸ್ಥಾನ ಆಗಬೇಕಿದ್ದರೆ ದೇವ ಸಾನ್ನಿಧ್ಯ ಇರಬೇಕು. ದೇವಸಾನ್ನಿಧ್ಯ ಇರಬೇಕಾದರೆ ಆಗಮೋಕ್ತ ಪ್ರತಿಷ್ಠಾ ನಿಯಮಗಳಿವೆ. ಇದರಲ್ಲಿ ಬಿಂಬ ಶುದ್ಧಿ, ತತ್ವ ಹೋಮಾದಿಗಳ ಕಾರ್ಯಗಳೆಲ್ಲ ಆದ ನಂತರ ಮಹಾ ಬ್ರಹ್ಮ ಕಲಶಾಭಿಷೇಕ ಆಗುತ್ತದೆ. ಇಲ್ಲಿಗೇ ಈ ಪ್ರಕ್ರಿಯೆ ಮುಗಿಯುವುದೂ ಇಲ್ಲ. ನಲವತ್ತೆಂಟು ದಿನಗಳ ಬಳಿಕ ದೃಢಕಲಶಾಭಿಷೇಕ ಆದ ನಂತರ ಇದು ದೇವ ಸಾನ್ನಿಧ್ಯ ಇರುವ ದೇವಸ್ಥಾನ ಆಗುತ್ತದೆ. ಯಾರೋ ವಿಚಾರ ವಾದಿಗಳು ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂದು ವಾದಿಸಬಹುದು.(ಹಾಗಾದರೆ ದೇವಸ್ಥಾನಕ್ಕೇ ಬರಬೇಕಾಗಿಯೂ ಇಲ್ಲ ಬಿಡಿ. ಸಂತೆ ಮಾರುಕಟ್ಟೆಗೂ ಹೋಗಿ ದೇವರನ್ನು ಕಾಣಿರಿ ಎಂದು ಹೇಳಿದರೆ ತಪ್ಪಾಗದು) ಹೌದು ದೇವರು ಎಲ್ಲೆಲ್ಲಿಯೂ ಇರುವುದು ಸಹಜ. ಆದರೆ ಅದಕ್ಕೂ ಒಂದು ಕೇಂದ್ರ ಬಿಂದುಗಳೂ ಇವೆ.


ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ಪ್ರವಹಿಸುವ ತಂತಿ ಇದ್ದ ಮಾತ್ರಕ್ಕೆ ಬೆಳಕು ಬರಬಹುದೇ. ಅದಕ್ಕೆ ಅದಕ್ಕೆ ತಕ್ಕಂತಹ ತಾಂತ್ರಿಕತೆ ಇದ್ದಾಗ ಫ್ಯಾನು, ಬಲ್ಬು, ರೆಫ್ರಿಜರೇಟರ್’ಗಳು ಕೆಲಸ ಮಾಡಬಹುದಷ್ಟೆ. ಅದೇ ರೀತಿ ಗಾಳಿ ಸರ್ವ ವ್ಯಾಪಿಯಾದರೂ ಗಾಳಿಯ ಅನುಭವ ನೇರವಾಗಿ ಪಡೆಯಬೇಕಾದರೆ ಫ್ಯಾನುಗಳು ಬೇಕಾಗುತ್ತದೆ. ಸರ್ವವ್ಯಾಪಿ ಭಗವಂತನಿಗೂ ಒಂದೊಂದು ಸಾನ್ನಿಧ್ಯ ಇರುತ್ತದೆ. ಅದನ್ನು ಕಲ್ಪಿಸುವವರು ನಾವೇ ಆದರೂ, ಅದೆಲ್ಲ ಒಂದು ನಿಯಮದ ಮೂಲಕವೇ ಇರುತ್ತದೆ.

ಗರ್ಭಗುಡಿಗೆ ದಿಕ್ಪಾಲಕ ಸಾನ್ನಿಧ್ಯ ಅಗತ್ಯ
ದೇವಸ್ಥಾನದ ದೇವರ ಗರ್ಭಗುಡಿಗೆ ಅಷ್ಟ ದಿಕ್ಕುಗಳಲ್ಲಿ ದಿಕ್ಪಾಲಕ ಸಾನ್ನಿಧ್ಯ ಇರಬೇಕಾಗುತ್ತದೆ. ಇದು ಕೇಂದ್ರದ ಶಕ್ತಿಯ ರಕ್ಷಣೆಗಾಗಿ, ಬಲ ವರ್ಧನೆಗಾಗಿಯೇ ಇರುವಂತದ್ದು. ಇಂತಹ ದೇವಸ್ಥಾನಗಳ ಸಾನ್ನಿಧ್ಯದ ರಕ್ಷಣೆ, ಪಾವಿತ್ರ್ಯತೆಯ ರಕ್ಷಣೆ ಕೇವಲ ಅಲ್ಲಿ ನೇಮಕಗೊಂಡ ಸಿಬ್ಬಂದಿಗಳ ಕೆಲಸ ಮಾತ್ರವೇ ಅಲ್ಲ. ಬಿಂಬ ಸಾನ್ನಿಧ್ಯ ರಕ್ಷಣೆಗೆ, ವೃದ್ಧಿಗೆ ಅರ್ಚಕರು ಬೇಕು. ವ್ಯಾವಹಾರಿಕ ರಕ್ಷಣೆ, ವೃದ್ಧಿಗಾಗಿ ಕರಣೀಕರು, ಶಾನುಭೋಗರು ಇತ್ಯಾದಿ ಸಹಾಯಕರು ಇರುತ್ತಾರೆ. ಶುಚಿತ್ವವೂ ಸಾನ್ನಿಧ್ಯ ರಕ್ಷಣೆ, ವೃದ್ಧಿಗೂ ಬೇಕು. ಅದಕ್ಕಾಗಿ ಶುಚಿತ್ವ ಮಾಡುವ ಜನರೂ ಇರುತ್ತಾರೆ.


ಇದೆಲ್ಲವೂ ಆಗಮೋಕ್ತ ಅದೃಶ್ಯ ದಿಕ್ಪಾಲಕರ ಕೆಲಸದಂತೆಯೇ ಕಣ್ಣಿಗೆ ಕಾಣುವ ಮನುಷ್ಯ ರೂಪಿಗಳು. ಇದಲ್ಲದೆ ಭಕ್ತರು ಕೂಡಾ ಭಕ್ತಿಶ್ರದ್ಧೆಯ ಮೂಲಕ, ಶುಚಿರ್ಭೂತರಾಗಿ, ನಿತ್ಯ ವೃತ ನಿಯಮದಲ್ಲಿ ಬಂದು ಹೋಗುತ್ತಾರೆ ಮತ್ತು ನೆಮ್ಮದಿಯನ್ನೂ, ದೇವತಾನುಗ್ರಹವನ್ನೂ ಪಡೆಯುತ್ತಿರುವುದರಿಂದ ಸಹಸ್ರಾರು ವರ್ಷಗಳಿಂದಲೂ ದೇವಸ್ಥಾನಕ್ಕೆ ಹೋಗುವ ಪರಿಪಾಠ ನಿರಂತರ ನಡೆದುಬಂದಿದೆ. ಇಂತಹ ಪರಿಪಾಠಗಳು ನಿತ್ಯ ನಿಯಮಗಳುಳ್ಳ ವೇದೋಕ್ತ ಸಂಪ್ರದಾಯದವರಿಗೆ ಮಾತ್ರ ಸಾಧ್ಯ. ಅಂದರೆ ಹಿಂದುಗಳಿಗೆ. ಇಲ್ಲಿ ಯಾವ ಜಾತಿಯ ಹಿಂದುಗಳೇ ಆಗಿರಲಿ, ಅವರ ಎಲ್ಲಾ ಸಂಪ್ರದಾಯಗಳೂ ವೇದೋಕ್ತವಾಗಿಯೇ ಇರುತ್ತದೆ. ಆಯಾಯ ಜಾತಿಗನುಸಾರವಾಗಿ ಸಂಪ್ರದಾಯ ವ್ಯತ್ಯಾಸಗಳಿದ್ದರೂ ಅದೆಲ್ಲವೂ ವೇದೋಕ್ತವೆ. ಇದನ್ನು ವ್ಯಾಕರಣದ ತತ್ಸಮ-ತದ್ಭವ ರೂಪ ಎನ್ನಬಹುದು. ಇಂತಹ ಭಕ್ತರು ಮಂದಿರ ಪ್ರವೇಶಿಸಿದರೆ ಮಂದಿರ ಮಲಿನವಾಗದು. ಹಿಂದು ದೇವಸ್ಥಾನಗಳ ತತ್ವ ಪರಿಜ್ಞಾನ ಇರುವ ಭಕ್ತರಿಗೆ Negative energy ಕೂಡಾ ಬರುವುದಿಲ್ಲ. ಕೆಲವೊಮ್ಮೆ ಕೆಲವೇ ಕೆಲವರಿಗೆ ದೇವಸ್ಥಾನಕ್ಕೆ ಹೋದ ತಕ್ಷಣ ತಲೆ ಸುತ್ತುವುದು, ವಿಚಿತ್ರ ಚೇಷ್ಟೆಗಳು(ನಡುಕ, ಅರಚುವುದು ಇತ್ಯಾದಿ) ಬರುವುದನ್ನು ಕಾಣಬಹುದು. ಇದು ನಿತ್ಯಾನುಷ್ಠಾನ ದೋಷದಿಂದಲೇ ಬರುವಂತದ್ದು. ಇದೂ ಒಂದು ರೀತಿಯ ರೋಗ ಬಾಧೆಯೇ ಆಗುತ್ತದೆ. ಅದರ ನಿವಾರಣೆಗೆ ಕೆಲ ವೇದೋಕ್ತ ಪರಿಹಾರಗಳೂ ಇವೆ.

ಎಲ್ಲಿ ದೋಷೋತ್ಪತ್ತಿ ಆಗುತ್ತದೆ?
ಮುಟ್ಟಾಗಿದ್ದು ಗೊತ್ತಾಗದಿದ್ದಾಗ ಅಥವಾ ಅದರ ಆಚರಣೆ ಮಾಡದಿದ್ದರೆ, ಸೂತಕಾದಿಗಳು ಇದ್ದರೆ ಇಂತಹ ಸಮಸ್ಯೆ ಬರುತ್ತದೆ. ಯಾಕೆಂದರೆ ಆ ದೇವಸ್ಥಾನವು ಪೂರ್ಣ Positive energy ತುಂಬಿದ್ದಾಗ Negative energy ಇರುವವರಿಗೆ ಬಾಧೆಯೇ ಆಗುತ್ತದೆ. ಯಾರಿಗೆ ಕನಿಷ್ಟವಾದರೂ ನಿತ್ಯಾಹ್ನಿಕ(ಮನೆಯಲ್ಲಿ ದೇವರಿಗೆ ದೀಪ ಇಡುವಂತದ್ದೋ, ಕೈ ಮುಗಿಯುವಂತದ್ದೋ, ದೇವರ ಪರಿಕಲ್ಪನೆ ಇರುವಂತದ್ದೋ ಇರಬೇಕಾಗುತ್ತದೆ) ಇರುವವರಿಗೆ ಸಮಸ್ಯೆ ಬರಲಾರದು.

ಯಾರಿಗೆ ಈ ದೇವಸ್ಥಾನ ಬಾಧೆಯೇ ಆಗುತ್ತದೆ?
ಯಾರು ದೇವತಾರಾಧನೆಯ ಅಂಗವಾದ ಗೋವನ್ನು ಭಕ್ಷಣೆ ಮಾಡುತ್ತಾರೋ ಅವರಿಗೆ ಪ್ರವೇಶ ನಿಷಿದ್ಧ. ಯಾರು ಹೆಂಡ ಕುಡಿದು ಬರುತ್ತಾರೋ ಅವರಿಗೆ ಪ್ರವೇಶ ನಿಷಿದ್ಧ. ಯಾರು ದೇವಸ್ಥಾನಕ್ಕೆ ಹೋಗುವ ದಿನ ಮಾಂಸಾಹಾರ ಮಾಡಿರುತ್ತಾರೋ ಅವರಿಗೆ ನಿಷಿದ್ಧ. ಸಾಮಾನ್ಯವಾಗಿ ನೀವು ಕೇಳಬಹುದು. ಇದನ್ನು ಹೇಗೆ ಪತ್ತೆ ಹಚ್ಚುವಿರಿ ಎಂದು. ಖಂಡಿತ ಸಾಧ್ಯವಿಲ್ಲ. ಆದರೆ ನಿತ್ಯಾನುಷ್ಟಾನ ಇರುವ ಹಿಂದುಗಳಿಗೆ ಈ ವಿಚಾರ ತಿಳಿದಿರುತ್ತದೆ ಮತ್ತು ಅವರು ಹೋಗುವುದಿಲ್ಲ ಅಥವಾ ಹೋಗಲು ಭಯ ಪಡುತ್ತಾರೆ. ಒಂದು ವೇಳೆ ಅಹಂಕಾರದಿಂದ ಹೋದರೆ ಅನಿಷ್ಟಗಳನ್ನು ಪಡೆಯುತ್ತಾರೆ. ಪಡೆಯಲಿ ಬಿಡಿ, ನಮಗೇನು? ನಾವು ತಿಳಿಸದಿದ್ದರೆ ಅದು ನಮ್ಮ ತಪ್ಪಾಗುತ್ತದೆ. ಆದರೆ ಹಿಂದುಗಳು ಅಂತಹ ಅಹಂಕಾರ ಕೃತ್ಯಕ್ಕೆ ಇಳಿಯುವುದು ಬಹಳ ವಿರಳ.

ಮುಸ್ಲಿಂ-ಕ್ರಿಶ್ಚಿಯನ್ನರಿಗೆ ದೇಗುಲ ಪ್ರವೇಶ ನಿಷಿದ್ಧ
ಇತರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ದೇವಸ್ಥಾನ ಪ್ರವೇಶ ಕೊಡುವುದು ತಪ್ಪಾಗುತ್ತದೆ. ಅವರ ಮೇಲಿನ ದ್ವೇಷದಲ್ಲಿ ಹೇಳ್ತಾ ಇಲ್ಲ. ಹಿಂದೂ ದೇವರ ತತ್ವಾನುಷ್ಟಾನ ಇಲ್ಲದ ಇವರಿಗೆ, ಹಿಂದೂ ದೇಗುಲ ಪ್ರವೇಶಿಸಿ ತೊಂದರೆಯಾಗಬಾರದು ಎಂಬ ಉದ್ಧೇಶದಿಂದ ಹೇಳುವುದಷ್ಟೆ. ಇಲ್ಲಿಯೂ ಯಾರು ಮುಸ್ಲಿಂ, ಯಾರು ಕ್ರಿಶ್ಚಿಯನ್ ಎಂದು ಹೇಳಲು ಸಾಧ್ಯವೇ? ಅದಕ್ಕಾಗಿ ಇಂತವರಿಗೆ ಪ್ರವೇಶ ಇಲ್ಲ ಎಂಬ ಎಚ್ಚರಿಕೆ ಫಲಕ ಹಾಕಬೇಕು. ಯಾಕೆಂದರೆ ಅವರ ಸಂಪ್ರದಾಯಗಳು ದೇವಸ್ಥಾನ ಪ್ರವೇಶಕ್ಕೆ ಹೇಳಿದುದಲ್ಲ. ಆದರೂ ಅವರೊಳಗೂ ದೇವರಿದ್ದಾನೆ. ಅವರನ್ನು ಒಳ ಬರದಂತೆ ತಡೆಯುವುದಕ್ಕೆ ನಾವು ದೇವರಿಗಿಂತಲೂ ತಿಳಿದವರಲ್ಲ ಮತ್ತು ಆ ಹಕ್ಕೂ ನಮಗಿಲ್ಲ. ಆದರೆ ನಾವಿಟ್ಟ ಆ ಮೂರ್ತಿಯ ಸಾನ್ನಿಧ್ಯವು ಹಾಳಾದರೆ ನಮ್ಮ ಕ್ರಿಯಾ ಲೋಪವಾಗುತ್ತದೆ. ಅದಕ್ಕಾಗಿ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ದೇವರ ಅಭಿಷೇಕ ತೀರ್ಥ ಮತ್ತು ಪಂಚಗವ್ಯ ತೀರ್ಥ ನೀಡಿ ಕುಂಕುಮವೋ, ಅರಶಿಣವೋ, ಭಸ್ಮವೋ, ಗಂಧ ಪ್ರಸಾದವನ್ನೋ ಕೊಡುವ ನಿಯಮ ಮಾಡಬೇಕು. ಇದು ಪ್ರಥಮ ಶುದ್ಧೀಕರಣ.

ಒಳಗಿನ ವ್ಯವಸ್ಥೆ(ತೀರ್ಥ ಪ್ರಸಾದ) ದೇವತಾನುಗ್ರಹದ್ದಾದರೆ, ಪ್ರವೇಶದ್ವಾರದ ವಿತರಣೆಯು ಶುದ್ಧೀಕರಣದ ಕ್ರಿಯೆಯಾಗುತ್ತದೆ. ಆಯಾಯ ದೇವಸ್ಥಾನದಲ್ಲಿ ಇರುವ ಸಂಪ್ರದಾಯ ಪ್ರಕಾರ ಹಣೆಯ ತಿಲಕದೊಂದಿಗೇ ಪ್ರವೇಶಿಸಬೇಕು. ಇಷ್ಟ ಇದ್ದವರು ಬರಲಿ. ಇಲ್ಲದವರು ಹೋಗಲಿ. ದೇವಸ್ಥಾನಕ್ಕೆ ಕೈಬೀಸಿ ಕರೆಯಬಾರದು. ಯಾವ ಭಕ್ತರನ್ನೂ ಬರಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆದರೆ ಸಂಪ್ರದಾಯಾನುಸಾರವೇ ಬರಬೇಕು, ಹೋಗಬೇಕು.


ಹರಿದ ಚಡ್ಡಿ(ಜೀನ್ಸ್‌) ಟೀ ಷರ್ಟು, ಪ್ಯಾಂಟ್, ಬನಿಯನ್, ಮುಡಿಕಟ್ಟದೆ ಕೂದಲು ಬಿಟ್ಟು ಬರುವಂತದ್ದು ಲೆಗ್ಗಿನ್ ಹಾಕಿ ಬರುವಂತದ್ದು ಎಲ್ಲವೂ ನಿಷೇಧಿತವೇ. ಗಂಡಸರಿಗೆ ದೋತಿ, ಪಂಚೆ, ಶಲ್ಯವಾದರೆ, ಹೆಂಗಸರಿಗೆ ಸೀರೆ, ಚೂಡಿದಾರ ಇತ್ಯಾದಿ ಧರಿಸಿಯೇ ಬರಬೇಕು ಎಂಬ ನಿಯಮ ರಚಿಸಬೇಕು. ಅದು ಆಗಲ್ಲ ಎಂದರೆ ಬರುವುದೇ ಬೇಡ. ದೇವಸ್ಥಾನವು ಪ್ರದರ್ಶನಾಲಯವಲ್ಲ. ದೇವಸ್ಥಾನವು ದೇವರ ದರ್ಶನಾಲಯ. ಇಲ್ಲಿ ದೇವತಾನುಗ್ರಹ, ನೆಮ್ಮದಿ ಇರಬೇಕು.

ಹೀಗೆ ನಿಯಮ ಮಾಡಿದರೆ ದೇವತಾ ಸಾನ್ನಿಧ್ಯವೂ ವೃದ್ಧಿಯಾಗುತ್ತದೆ, ಭಕ್ತರ ಮನದಿಚ್ಛೆಯೂ ಈಡೇರುತ್ತದೆ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: ChristianDress Code to Enter Hindu TempleHinduHindu TempleJyotirvijnanamKannada ArticleMuslimPrakash Ammannayaಗರ್ಭಗುಡಿಜ್ಯೋರ್ತಿವಿಜ್ಞಾನಂದೇವತಾರಾಧನೆದೇವಸ್ಥಾನದೈವ ಸಾನ್ನಿಧ್ಯಪಾಣಿಪೀಠಪ್ರಕಾಶ್ ಅಮ್ಮಣ್ಣಾಯ
Share196Tweet123Send
Previous Post

ಆಡು ಮುಟ್ಟದ ಸೊಪ್ಪಿಲ್ಲ, ಕರಾವಳಿಯ ನಮ್ಮ ವಿಜೆ ತೇಜೇಶ್ ಸಾಧಿಸದ ಕ್ಷೇತ್ರವಿಲ್ಲ

Next Post

ಚಾತುರ್ಮಾಸ್ಯದ ಮಹತ್ವವೇನು? ಆಹಾರ ಪಥ್ಯ ಹೇಗಿರಬೇಕು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಾತುರ್ಮಾಸ್ಯದ ಮಹತ್ವವೇನು? ಆಹಾರ ಪಥ್ಯ ಹೇಗಿರಬೇಕು ಗೊತ್ತಾ?

ಚಾತುರ್ಮಾಸ್ಯದ ಮಹತ್ವವೇನು? ಆಹಾರ ಪಥ್ಯ ಹೇಗಿರಬೇಕು ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

ಬಿಎಫ್‌ಸಿ vs ಈಸ್ಟ್ ಬೆಂಗಾಲ್: ಹೈ-ವೋಲ್ಟೇಜ್ ಪಂದ್ಯಕ್ಕೆ ಕೌಂಟ್‌ಡೌನ್

April 15, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ನಾರೀಶಕ್ತಿವಂದನಾ ಅಧಿನಿಯಮ ಕಾಯ್ದೆ ಐತಿಹಾಸಿಕ ಹೆಜ್ಜೆ: ಸಂಸದ ರಾಘವೇಂದ್ರ

April 15, 2026
ಮಂಡ್ಯ | ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ, ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

ಮಂಡ್ಯ | ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ, ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ

April 15, 2026
ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು: ಪ್ರಾಚಾರ್ಯ ವಿಶ್ವನಾಥ

ಅಂಬೇಡ್ಕರ್, ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು: ಪ್ರಾಚಾರ್ಯ ವಿಶ್ವನಾಥ

April 15, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL