No Result
View All Result
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ
English Articles

Duniya Vijay, Rachita Ram & Raj B. Shetty’s Landlord Premieres This Saturday on Zee Kannada

by ಕಲ್ಪ ನ್ಯೂಸ್
May 22, 2026
0

Kalpa Media House  |  Bengaluru | Zee Kannada has always captivated its audience with unique content, offering engaging fiction stories,...

Read moreDetails
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
  • Advertise With Us
  • Grievances
  • About Us
  • Contact Us
Sunday, May 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಭಾವನೆಯ ಕೊಂದು, ಹಠ ಸಾಧಿಸಿದ ಕೇರಳ ಸಿಎಂ ಗೆದ್ದಿದ್ದು ಯಾರ ವಿರುದ್ಧ?

ಕಳ್ಳತನದಿಂದ ಅಯ್ಯಪ್ಪನನ್ನು ನೋಡಿದ್ದಲ್ಲ, ಅಯ್ಯಪ್ಪನೂ ನಿಮ್ಮನ್ನು ನೋಡಿರುತ್ತಾನೆ ನೆನಪಿರಲಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 3, 2019
in ರಾಷ್ಟ್ರೀಯ
0
ಭಾವನೆಯ ಕೊಂದು, ಹಠ ಸಾಧಿಸಿದ ಕೇರಳ ಸಿಎಂ ಗೆದ್ದಿದ್ದು ಯಾರ ವಿರುದ್ಧ?
Share on FacebookShare on TwitterShare on WhatsApp

ಹೌದು… ಏನೆಲ್ಲಾ ನಾಟಕವಾಡಿ, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ, ಮುಖಮುಚ್ಚಿಕೊಂಡು ಅಯ್ಯಪ್ಪ ದೇವಾಲಯದೊಳಗೆ ತೆರಳಿದ ಇಬ್ಬರು ಹೇಡಿ ನಯವಂಚಕ ಸ್ತ್ರೀಯರು, ಕಳ್ಳತನದಿಂದ ಹೇಡಿಗಳಂತೆ ಮುಖಮುಚ್ಚಿಕೊಂಡು ತೆರಳಲು ಅವಕಾಶ ಮಾಡಿಕೊಟ್ಟ ಕೇರಳ ಕಮ್ಯೂನಿಸ್ಟ್ ಸರ್ಕಾರ ಹಾಗೂ ಗೆದ್ದೆನೆಂದು ಬೀಗುತ್ತಿರುವ ಇದರ ಸೂತ್ರಧಾರಿ ಸಿಎಂ ಪಿಣರಾಯಿ ವಿಜಯನ್ ಅಂತಿಮವಾಗಿ ಸಾಧಿಸಿದ್ದೇನು ಹಾಗೂ ಗೆದ್ದಿದ್ದು ಯಾರ ವಿರುದ್ಧ?

ನಿಜಕ್ಕೂ ಈ ಪ್ರಶ್ನೆಗೆ ಉತ್ತರವಿದೆಯೇ? ಖಂಡಿತವಾಗಿಯೂ ಇಲ್ಲ. ಬಲಪಂಥೀಯ ಹಾಗೂ ಎಡಪಂಥೀಯ ಯಾವುದೇ ಆಡಳಿತವಿರಲಿ ಅಲ್ಲಿನ ಆಡಳಿತದಲ್ಲಿ ಜನರ ಭಾವನಾತ್ಮಕ ವಿಚಾರಗಳಿಗೆ ಹಾಗೂ ಮಾನವೀಯತೆಗೆ ಬೆಲೆ ನೀಡುವುದೇ ಮುಖ್ಯವಾಗುತ್ತದೆ ಎಂಬ ಕನಿಷ್ಠ ಜ್ಞಾನವಿಲ್ಲದೇ ನಡೆದುಕೊಂಡ ಕೇರಳ ಸರ್ಕಾರದ ದಾರ್ಷ್ಟ್ಯ ನಿಜಕ್ಕೂ ಈ ದೇಶಕ್ಕೊದಗಿದ ದುರಂತ.

ಯಾವುದೇ ಪಕ್ಷವಿದ್ದರೂ ಆ ರಾಜ್ಯದಲ್ಲಿ ಎಲ್ಲ ಧರ್ಮ ಹಾಗೂ ಜಾತಿಯ ಜನರ ಭಾವನೆಗಳಿಗೆ ಗೌರವ ನೀಡಿ, ಆಡಳಿತ ನಡೆಸಬೇಕು ಎಂದು ಸಂವಿಧಾನ ಹೇಳಿದೆ. ಆದರೆ, 800 ವರ್ಷಗಳ ಧಾರ್ಮಿಕ ನಂಬಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಕೇರಳ ಸರ್ಕಾರ ಪಾಲಿಸಿತು ಎಂದೇ ಇಟ್ಟುಕೊಳ್ಳೋಣ. ಆದರೆ, ಪ್ರಕರಣ ಸುಪ್ರೀಂ ಅಂಗಳದಲ್ಲಿದ್ದಾಗ ಪಿಣರಾಯಿ ಸರ್ಕಾರ ನಡೆದುಕೊಂಡ ರೀತಿಗಳು ಹೇಗಿತ್ತು. ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತಿಳಿದಿದ್ದರೂ ರಾಜ್ಯದ ಜನರ ಭಾವನಗೆಳ ಪರವಾಗಿ ಅಲ್ಲಿನ ಸರ್ಕಾರ ಎಂದಿಗೂ ನಿಲ್ಲಲೇ ಇಲ್ಲ.

ಬದಲಾಗಿ, ಅಲ್ಲಿನ ಸಂಪ್ರದಾಯವನ್ನು ಮುರಿಯುವಂತೆ ತೀರ್ಪು ಬರುವುದಕ್ಕೆ ಏನು ಬೇಕೋ ಅದನ್ನೆಲ್ಲಾ ಮಾಡಿತು ಹಾಗೂ ಇದರ ಹಿಂದೆ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವ ಕಮ್ಯೂನಿಸ್ಟರ ಮತ್ತು ಇತರೆ ಧರ್ಮಗಳ ಕುತಂತ್ರವೂ ಇಲ್ಲವೆಂದು ಹೇಳಲು ಸಾಧ್ಯವೇ ಇಲ್ಲ.

ಇಲ್ಲಿ, ಇನ್ನೊಂದು ವಿಚಾರವೂ ಇದೆ. ಶಬರಿಮಲೆ ದೇವಾಲಯಕ್ಕೆ ಯಾತಕ್ಕಾಗಿ ಸ್ತ್ರೀಯರು ಪ್ರವೇಶಿಸಬಾರದು ಎಂಬುದನ್ನು ದೇವಾಲಯ ಆಡಳಿತ ಮಂಡಳಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿತ್ತು ಎಂಬುದನ್ನೂ ಸಹ ಹೇಳಲೇಬೇಕು. ಒಂದು ಪ್ರಕರಣದಲ್ಲಿ ಎದುರಾಳಿ ಗೆದ್ದರೆ ಆತನ ಬಲದಿಂದ ಮಾತ್ರ ಗೆಲುವು ಆಗಿರುವುದಿಲ್ಲ. ಬದಲಾಗಿ, ಸೋತವರ ವೈಫಲ್ಯಗಳು ಹಾಗೂ ಬಲಹೀನತೆಗಳೂ ಸಹ ಕಾರಣವಾಗಿರುತ್ತವೆ.

ಇನ್ನು, ಸುಪ್ರೀಂ ತೀರ್ಪು ಪಾಲನೆ ಎಂಬ ನೆಪವನ್ನಿಟ್ಟುಕೊಂಡ ಕೇರಳ ಸರ್ಕಾರ ಆನಂತರದ ದಿನಗಳಲ್ಲಿ ನಡೆದುಕೊಂಡು ರೀತಿ ಎಂತಹುದ್ದು ಎಂಬುದನ್ನು ಒಮ್ಮೆ ನೆನಪಿಕೊಂಡರೆ ಇದರ ಹಿಂದೆ ಇನ್ನೆಂತಹ ವ್ಯವಸ್ಥಿತ ಜಾಲವಿದೆ ಎಂಬುದು ತಿಳಿಯುತ್ತದೆ. ಕೇರಳ ಸರ್ಕಾರಕ್ಕೆ ಜನಹಿತವೇ ಮುಖ್ಯವಾಗಿದ್ದರೆ, ಅಂದೇ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿ, ಜನರ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಹಾಗೂ ಕಾನೂನು, ಸುವ್ಯವಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದು ಮನವರಿಕೆ ಮಾಡಿಕೊಡಬಹುದಿತ್ತು. ಆದರೆ, ಪಿಣರಾಯಿ ಸರ್ಕಾರ ಮಾಡಿದ್ದೇನು?

ಹಲವು ಸ್ತ್ರೀಯರು ದೇವಾಲಯ ಪ್ರವೇಶಿಸಬೇಕು ಎಂದು ಪ್ರಯತ್ನಿಸಿದರೂ ಭಕ್ತರ ಪ್ರತಿಭಟನೆಯಿಂದ ಕಾಲ್ಕಿತ್ತರು. ಆದರೆ, ಈಗ ಇದೇ ಕೇರಳ ಸರ್ಕಾರವೇ ಕುತಂತ್ರ ಮಾಡಿ, ಸ್ತ್ರೀಯರನ್ನು ಕಳ್ಳತನದಲ್ಲಿ  ಪ್ರವೇಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದು ದುರಂತವೇ ಸರಿ.
ಈ ಸ್ತ್ರೀಯರೆಲ್ಲಾ ನಿಜಕ್ಕೂ ಅಯ್ಯಪ್ಪನ ಭಕ್ತರೇ ಆಗಿದ್ದರೆ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಅಯ್ಯಪ್ಪ ಸ್ವಾಮಿಯ ನಿಜವಾದ ಭಕ್ತರೇ ಆಗಿದ್ದರೆ ಯಾವುದೇ ಸ್ತ್ರೀ ಅಲ್ಲಿನ ಸಂಪ್ರದಾಯ ಹಾಗೂ ನಂಬಿಕೆಗೆ ಬೆಲೆ ನೀಡಿ, ಅದರಲ್ಲೂ ಸಂತೃಪ್ತಿ ಹೊಂದುತ್ತಾರೆಯೇ ವಿನಾ, ಈ ರೀತಿ ಮೋಸದ ತಂತ್ರದಲ್ಲಿ ನಂಬಿಕೆಯನ್ನು ಮುರಿಯುವ ಕೃತ್ಯಕ್ಕೆ ಕೈ ಹಾಕುವುದಿಲ್ಲ.

ಇಷ್ಟಕ್ಕೂ, ನಿನ್ನೆ ದೇವಾಲಯ ಪ್ರವೇಶಿಸಿರುವ ಸ್ತ್ರೀಯರು ಅಯ್ಯಪ್ಪನ ಭಕ್ತರೇ? ದೇಗುಲ ಪ್ರವೇಶಿಸಿರುವ ಕನಕದುರ್ಗ ಮಲಪ್ಪುರಂ ಜಿಲ್ಲೆಯ ಅಂಗಾಡಿಪುರಂ ಹಾಗೂ ಬಿಂದು ಕೊುಯಿಕ್ಕೋಡ್ ಕೊಯಿಲಾಂಡಿ ನಿವಾಸಿ. ಇಬ್ಬರೂ ಸಿಪಿಐಎಂ ಬೆಂಬಲಿಗರಾಗಿದ್ದು, ನಕ್ಸಲರ ತಂಡದ ನೆರವಿನೊಂದಿಗೆ ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿರುವುದು ಇದರ ಹಿಂದೆ ಸರ್ಕಾರದ ಕೈವಾಡವಿದೆ ಎಂಬುದು ಸಾರಾಸಗಟಾಗಿ ಸಾಬೀತಾಗಿದೆ.
ಈಗ ಈ ಇಬ್ಬರೂ ದೇವಾಲಯ ಪ್ರವೇಶಿಸಿ ಹಾಗೂ ಇವರ ಪ್ರವೇಶದ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬೀಗುತ್ತಿರುವ ಪಿಣರಾಯಿ ಸರ್ಕಾರ ಸಾಧಿಸಿದ್ದೇನು? ಕೇರಳದಾದ್ಯಂತ ಗಲಭೆ, ಬಂದ್ ಹಾಗೂ ರಕ್ತಪಾತಗಳು!

ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಣಕಿ, ಅದರ ವಿರುದ್ದ ಗೆಲುವು ಸಾಧಿಸಿದ್ದೇವೆ ಎನ್ನುತ್ತಿರುವ ಕಮ್ಯೂನಿಸ್ಟ್ ಸರ್ಕಾರ ನಿಜಕ್ಕೂ ಈಗ ಸೋತಿದೆ. ಇದಕ್ಕೆ ಕೇರಳದ ಇಂದಿನ ಗಲಭೆಗಳೇ ಸಾಕ್ಷಿ.

ಮಹಿಳೆಯರು ದೇವಾಲಯ ಪ್ರವೇಶಿಸಿದ್ದರಿಂದ ಅಯ್ಯಪ್ಪ ಸ್ವಾಮಿಗೆ ಯಾವುದೇ ಮೈಲಿಗೆ ಹಾಗೂ ಧಕ್ಕೆಗಳಿಲ್ಲ. ಆದರೂ, ಸಂಪ್ರದಾಯದ ಹಿನ್ನೆಲೆಯಲ್ಲಿ ಅರ್ಚಕರು ಶುದ್ಧೀಕರಣ ಮಾಡಿರುವುದು ಸ್ವಾಗತಾರ್ಹ.

ಒಂದಂತೂ ನೆನಪಿಟ್ಟುಕೊಳ್ಳಿ…. ನಯವಂಚಕತನ ಮಾಡಿ, ಕಳ್ಳತನದಿಂದ ಮುಖ ಮರೆಮಾಚಿಕೊಂಡು, ದೇವಾಲಯವನ್ನು ಆ ಇಬ್ಬರೂ ಮಹಿಳೆಯರು ಪ್ರವೇಶಿಸಿ ಅಯ್ಯಪ್ಪನನ್ನು ನೋಡಿರಬಹುದು. ಇದನ್ನು ಸಾಧಿಸುವಲ್ಲಿ ವಾಮಮಾರ್ಗವನ್ನು ಅನುಸರಿಸಿ ಪಿಣರಾಯಿಯ ಕಮ್ಯೂನಿಸ್ಟ್ ಸರ್ಕಾರ ಯಶಸ್ವಿಯೂ ಆಗಿರಬಹುದು. ಆದರೆ, ಇದನ್ನೆಲ್ಲಾ ಅಯ್ಯಪ್ಪನೂ ಸಹ ನೋಡುತ್ತಿರುತ್ತಾನೆ. ಇದರ ಪ್ರಸಾದವನ್ನು ಅತ್ಯಂತ ಶೀಘ್ರದಲ್ಲೇ ಇವರಿಗೆಲ್ಲಾ ನೀಡುತ್ತಾನೆ… ನೋಡುತ್ತಿರಿ… ಯಾಕೆಂದರೆ, ಜನರ ನಂಬಿಕೆಯ ನಿಟ್ಟುಸಿರು ವಿರೋಧಿಗಳನ್ನು ಬಿಟ್ಟದ್ದು ಇತಿಹಾಸದಲ್ಲೇ ಇಲ್ಲ…

Tags: KeralaKerala Sabarimala templeLord Ayyappa templePinarayi VijayanShabarimaleShabarimale IssueSupreme Court
Share196Tweet123Send
Previous Post

150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ ಕೆಜಿಎಫ್

Next Post

ಸ್ಯಾಂಡಲ್‌ವುಡ್‌ನಲ್ಲಿ ಐಟಿ ಶಾಕ್! ದಾಳಿಗೊಳಗಾಗಿ 8 ಎಂಟು ನಟರು ಯಾರು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸ್ಯಾಂಡಲ್‌ವುಡ್‌ನಲ್ಲಿ ಐಟಿ ಶಾಕ್! ದಾಳಿಗೊಳಗಾಗಿ 8 ಎಂಟು ನಟರು ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಐಟಿ ಶಾಕ್! ದಾಳಿಗೊಳಗಾಗಿ 8 ಎಂಟು ನಟರು ಯಾರು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
A Colorful Memorable Brahmakalshotsava at Padubidri

A Colorful Memorable Brahmakalshotsava at Padubidri

May 23, 2026
ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

ಪ್ರತಿಬಿಂಬಿಸುವ ಶಿಕ್ಷಕ ಪ್ರತಿದಿನ ಬೆಳೆಯುತ್ತಾನೆ: ಡಾ. ಶಿವಕುಮಾರ್

May 23, 2026
ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

ಶಿಕ್ಷಣ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿ ಮಾಡಿದ ಶಿಕ್ಷಣ ರತ್ನ ಕೆ ಸಿ ರಂಗಯ್ಯ: ಸುರೇಶ್ ಋಗ್ವೇದಿ

May 23, 2026
ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

ಭರಮಸಾಗರ ಭಾಗದಲ್ಲಿ ಕೃಷಿಯೊಂದಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿ

May 23, 2026
ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ | 3ನೇ ಬಾರಿ ತೈಲ ದರ ಏರಿಕೆ, ಶಿವಮೊಗ್ಗದಲ್ಲಿ ಎಷ್ಟಿದೆ ರೇಟ್?

May 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL