ಸೀತೆಯ ಅಪಹರಣವಾಗಿ ರಾಮ ಲಕ್ಷ್ಮಣರು ಸೀತಾನ್ವೇಷಣೆ ಮಾಡುತ್ತಿದ್ದಾಗ ನದಿಯಲ್ಲಿ ಬಿದ್ದಿದ್ದ ಮಾತೆಯ ಆಭರಣಗಳನ್ನು ವಾನರನು ಪ್ರಭುವಿನ ಚರಣಕ್ಕೆ ಅರ್ಪಿಸುತ್ತಾನೆ. ಪ್ರಭುಗಳ ಕಣ್ಣು ತೋಯ್ದಿತ್ತು. ಗುರುತಿಸಲಾಗಲಿಲ್ಲ. ‘ಲಕ್ಷ್ಮಣಾ ಒಮ್ಮೆ ಪರಿಶೀಲಿಸಪ್ಪಾ. ಕಣ್ಣೀರು ತುಂಬಿದ ಕಂಗಳಿಂದ ಇದನ್ನು ಗುರುತಿಸಲಾಗುತ್ತಿಲ್ಲ’ ಎಂದು ಪ್ರಭುಗಳು ಲಕ್ಷ್ಮಣನಿಗೆ ಆಜ್ಞೆ ಮಾಡಿದಾಗ,’ ಅಣ್ಣಾ ನಿತ್ಯ ಮಾತೆಯ ಪಾದ ನಮಸ್ಕಾರ ಮಾಡಿ ಗುರುತಿಸುತ್ತಿದ್ದ ಗೆಜ್ಜೆಗಳ ಗುರುತು ಮಾತ್ರ ಹಿಡಿಯಬಹುದಷ್ಟೇ ಅಣ್ಣಾ’ ಎಂದು ಹೇಳಿದನು.
ಕಣ್ಣ ಮುಂದೆ ತೀರ್ಪನ್ನು ಓದುತ್ತಾ, ನೋಡುತ್ತಾ ಗದ್ಗದಿತನಾಗಿ, ಆನಂದ ಭಾಷ್ಪಗಳೊಂದಿಗೆ ಮಾತನಾಡಲು ಆಗುತ್ತಿಲ್ಲ. ಪಾದುಕಾ ಯಾತ್ರೆಯಿಂದ ಮೊದಲ್ಗೊಂಡು, ಅಯೋಧ್ಯ ಕರಸೇವೆಯವರೆಗಿನ ಕೈಂಕರ್ಯವನ್ನು ನೆನಪಿಸಿಕೊಂಡು ಇಂದಿನ ಶುಭದಿನದಲ್ಲಿ, ಶುಭ ಮುಹೂರ್ತದಲ್ಲಿ ಪ್ರಭು ಶ್ರೀರಾಮ ಚಂದ್ರನ ವೈಭೋಗ ಕಂಡೆ. ಧನ್ಯೋಸ್ಮಿ ಧನ್ಯೋಸ್ಮಿ.
ದೇಶಾ ಸಮಸ್ತಾ ಸುಖಿನೋ ಭವಂತು.
Get In Touch With Us info@kalpa.news Whatsapp: 9481252093, 94487 22200
Discussion about this post