ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಮನೆಗೆ ಬಿಜೆಪಿ ಮುಖಂಡ, ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಇಂದು ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ, ಬಿಜೆಪಿ ಈಗಾಗಲೇ ಬಿರುಸಿನ ತಯಾರಿ ಆರಂಭಿಸಿದ್ದು, ಹಲವು ರೀತಿಯ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಇದರ ಭಾಗವಾಗಿ ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಪ್ರಚಾರ ಮಾಡಲು ಸಂಪರ್ಕ್ ಫಾರ್ ಸಮರ್ಥನ್ ಎಂಬ ಕಾರ್ಯಕ್ರಮವನ್ನು ಕಳೆದ ತಿಂಗಳು ಬಿಜೆಪಿ ಜಾರಿಗೊಳಿಸಿದೆ.
It was wonderful meeting Actor @KicchaSudeep. As part of the nationwide "Sampark for Samarthan" campaign, briefed him about the achievements of PM Narendra Modi’s govt in the last 4 years. pic.twitter.com/x4S6JMCKUV
— B Sriramulu (@sriramulubjp) July 23, 2018
ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ ಶ್ರೀರಾಮುಲು ಮೋದಿ ನೇತೃತ್ವ ಬಿಜೆಪಿ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಒಳಗೊಂಡಿರುವ ಪುಸ್ತಕವನ್ನು ನೀಡಿ, ಪ್ರಮುಖ ಸಾಧನೆಯನ್ನು ವಿವರಿಸಿದರು.
Discussion about this post