No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
  • Advertise With Us
  • Grievances
  • About Us
  • Contact Us
Saturday, July 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

‘ವಿಶ್ವ ರಕ್ತದಾನಿಗಳ ದಿನ’ ನಾವೇಕೆ ಈ ದಿನವನ್ನು ಈ ವಿಶೇಷ ದಿನವನ್ನಾಗಿ ಆಚರಿಸುತ್ತಿದ್ದೇವೆ?

kalpa News by kalpa News
June 14, 2023
in Special Articles
0
‘ವಿಶ್ವ ರಕ್ತದಾನಿಗಳ ದಿನ’ ನಾವೇಕೆ ಈ ದಿನವನ್ನು ಈ ವಿಶೇಷ ದಿನವನ್ನಾಗಿ ಆಚರಿಸುತ್ತಿದ್ದೇವೆ?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ನಾಗರಾಜ ಶೆಟ್ಟರ್  |

ಪ್ರಪಂಚದಲ್ಲಿ ಯಾರಿಗಾದರೂ ನಾವು ನೀಡಬಹುದಾದ ಅಮೂಲ್ಯ ಕೊಡುಗೆಯೆಂದರೆ ರಕ್ತದಾನ ಎಂಬುದು ಈಗಾಗಲೇ ಸಾಬೀತಾಗಿದೆ. ಈ ರಕ್ತದ #Blood ಮಹತ್ವವನ್ನು ಅದು ಹೊಂದಿರುವ ವಿಶೇಷ ಗುಣಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ರಕ್ತದಾನ #BloodDonation ಮಾಡುವಾಗ ಯಾವ ರಕ್ತದ ಗುಂಪಿನವರು ಯಾವ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಬಹುದು ಎಂಬುದನ್ನು ತನ್ನ ಪ್ರಯೋಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಈ ವಿಂಗಡಣೆಯ ಸೂತ್ರಧಾರನೇ ಇಂದು ನಾವು ಆಚರಿಸುತ್ತಿರುವ ವಿಶೇಷ ದಿನದ ಕಾರಣಕರ್ತ. ಈ ಮಹಾನ್ ವ್ಯಕ್ತಿಯ ಬಗ್ಗೆ ಅರಿಯದೇ ಈ ದಿನದ ಆಚರಣೆ ಮಾಡಿದರೆ ಅದರ ಮಹತ್ವ ಕಡಿಮೆಯಾಗಬಹುದು. ಅದಕ್ಕಾಗಿ ಈ ವಿಶೇಷ ಲೇಖನ.

1901ರ ಸಮಯದಲ್ಲಿ ಕಾರ್ಲ್ ಲ್ಯಾಂಡೈನರ್ ಒಬ್ಬ ಆಸ್ಟ್ರಿಯನ್ #Austrian ಮೂಲದ ಅಮೇರಿಕನ್ ಜೀವಶಾಸ್ತ್ರಜ್ಞ, ವೈದ್ಯ ಮತ್ತು ರೋಗನಿರೋಧಕ ಶಾಸ್ತçಜ್ಞ ಮಾಡಿದ ಆವಿಷ್ಕಾರ ಇಂದು ಅವನನ್ನು ಪ್ರತಿ ಕ್ಷಣ, ಪ್ರತಿ ನಿಮಿಷ ನೆನಪಿಸಿಕೊಂಡು ಈ ‘ವಿಶ್ವ ರಕ್ತದಾನಿಗಳ ದಿನ’ #WorldBloodDonorDay ಆಚರಣೆಗೆ ಸ್ಪೂರ್ತಿಯಾಗಿದ್ದಾನೆ. ಜೀವಜಗತ್ತಿನ ಪ್ರತಿ ಜೀವಿಗೂ ಬದುಕಲು ಅತಿ ಅಗತ್ಯವೆನಿಸಿದ ರಕ್ತದ ಗುಂಪುಗಳನ್ನು ವಿಂಗಡಿಸಿ ಜಗತ್ತಿಗೆ ತಿಳಿಸಿದ ನಿತ್ಯಸ್ಮರಣೀಯ ವಿಜ್ಞಾನಿ. ಈ ಮಹಾನ್ ವ್ಯಕ್ತಿಯ ಜನ್ಮದಿನವನ್ನು ನಾವು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಿದ್ದೇವೆ.
ಲ್ಯಾಂಡೈನರ್ #CarlLandiner ವಿಜ್ಞಾನಿಯು ರಕ್ತವನ್ನು ನಾಲ್ಕು ಗುಂಪುಗಳಾಗಿ ಎ, ಬಿ, ಎಬಿ ಮತ್ತು ಓ ಎಂದು ವರ್ಗೀಕರಿಸಿ ರಕ್ತದ ವಿಶೇಷ ಗುಣಗಳನ್ನು ಜಗತ್ತಿಗೆ ಪರಿಚಯಿಸಿದರು. 1901 ರಲ್ಲಿ ಕೆಲವು ರಕ್ತದ ವರ್ಗಾವಣೆಗಳ ಪ್ರಯೋಗಗಳನ್ನು ಮಾಡಿ ಅದರಲ್ಲಿ ಯಶಸ್ಸನ್ನು ಕಂಡರು. ಹಾಗೂ ಮತ್ತೆ ಕೆಲವು ಪ್ರಯೋಗಗಳು ಮಾರಕವಾಗಿದ್ದನ್ನೂ ಸಹ ತಮ್ಮದೇ ಸಿಬ್ಬಂದಿಯ ಕೆಂಪು ರಕ್ತಕಣಗಳು ಹಾಗೂ ಸಿರಮ್ ಮಿಶ್ರಣ ಮಾಡುವ ಪ್ರಯೋಗದ ಮೂಲಕ ದೃಢಪಡಿಸಿದರು. ಸುದೀರ್ಘ ಅಧ್ಯಯನದ ನಂತರ ಎ ಬಿ ಓ (ABO) ವ್ಯವಸ್ಥೆಯ ರಕ್ತದ ಗುಂಪುಗಳ ಆವಿಷ್ಕಾರದ ಕುರಿತು ಒಂದು ಪ್ರಬಂಧವನ್ನು ಪ್ರಕಟಿಸುತ್ತಾರೆ. ಅವರ ಈ ಅಮೂಲ್ಯವಾದ ಆವಿಷ್ಕಾರದಿಂದಾಗಿ 1930 ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯುತ್ತಾರೆ.

ABO ವ್ಯವಸ್ಥೆಯಲ್ಲಿನ 4 ವಿಭಿನ್ನ ರಕ್ತದ ಗುಂಪುಗಳು ಎ, ಬಿ, ಎಬಿ ಮತ್ತು ಓ ಎಂದು ನಾವೀಗ ಅರಿತಿದ್ದೇವೆ. ಪ್ರತಿಯೊಂದು ವ್ಯಕ್ತಿಯ ರಕ್ತದ ಗುಂಪು ಎರಡು ಜೀನ್ ಗಳ ಒಂದು ಜೋಡಿಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಲ್ಯಾಂಡೈನರ್ ಪ್ರಯೋಗಗಳಿಂದ ದೃಢಪಡಿಸಿದರು. ಪ್ರತಿ ಪೋಷಕರಿಂದ ಆನುವಂಶಿಕವಾಗಿ ಪಡೆದ ಒಂದೊಂದು ಜೀನ್ ಸೇರಿ ಈ ಜೀನ್ ಜೋಡಿ ನಿರ್ಧರಿಸಲ್ಪಡುತ್ತದೆ. ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ ಅಣುಗಳಿಂದ ಗುರುತಿಸಲ್ಪಡುತ್ತದೆ. ಇವುಗಳನ್ನು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿರುವ ಪ್ರತಿಜನಕಗಳು ಅಥವಾ ಆ್ಯಂಟಿಜೆನ್ಸ್ ಎಂದು ಕರೆಯಲಾಗುತ್ತದೆ.
ರಕ್ತದಾನದ ಇತಿಹಾಸವು ಪ್ರಾಚೀನತೆಗೆ ನಮ್ಮನ್ನು ಕರೆದೊಯ್ಯುತ್ತದೆ. ಇತಿಹಾಸದ ಪುಟಗಳಲ್ಲಿ ಇಂಗ್ಲಿಷ್ ವೈದ್ಯರಾದ ರಿಚರ್ಡ್ ಲೋರ್ವ ಎಂಬುವರು ರಕ್ತ ವರ್ಗಾವಣೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಕಾರ್ಯಚಟುವಟಿಕೆಯ ಅಧ್ಯಯನದ ಕೆಲಸಕ್ಕಾಗಿ ಹೆಚ್ಚು ಸ್ಮರಣೀಯರು ಎನಿಸುತ್ತಾರೆ. ಈ ಅಧ್ಯಯನವನ್ನು ಅವರು ‘ಟ್ರಾಕ್ಟಟಸ್ ಡಿ ಕಾರ್ಡೆ’ ಎಂಬ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಅವರು ಪ್ರಾಣಿಗಳಲ್ಲಿ ರಕ್ತದಾನದ ವಿಜ್ಞಾನವನ್ನು ಪರೀಕ್ಷಿಸಿದ ಮೊಟ್ಟ ಮೊದಲಿಗರಾಗಿದ್ದರು ಮತ್ತು ಅವರು ಎರಡು ಶ್ವಾನಗಳ ನಡುವೆ ಯಾವುದೇ ಗಮನಾರ್ಹ ದುಷ್ಪರಿಣಾಮಗಳಿಲ್ಲದೆ ರಕ್ತವನ್ನು ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ವಿಶ್ವ ಆರೋಗ್ಯ ಸಂಸ್ಥೆಯು(WHO) #WHO 2004ರಲ್ಲಿ ಕಾರ್ಲ್ ಲ್ಯಾಂಡೈನರ್ ರವರ ಜನ್ಮದಿನವಾದ ಜೂನ್ 14 ನೇ ದಿನವನ್ನು ‘ವಿಶ್ವ ರಕ್ತದಾನಿಗಳ ದಿನ’ ವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡು 2005 ರಲ್ಲಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸುವ ಅಧಿಕೃತ ಘೋಷಣೆ ಹೊರಡಿಸುತ್ತದೆ. ಅಂದಿನಿಂದ ಇಂದಿನವರೆಗೂ ಈ ವಿಶೇಷ ದಿನದಂದು ವಿಶ್ವದಾದ್ಯಂತ ನಡೆಯುವ ರಕ್ತದಾನ ಶಿಬಿರಗಳ ಮೂಲಕ ಕೋಟ್ಯಂತರ ಯೂನಿಟ್ ರಕ್ತ ಸಂಗ್ರಹವಾಗಿ ಕೋಟ್ಯಂತರ ಜೀವಗಳು ಮರುಜನ್ಮ ಕಾಣಲು ಕಾರಣವಾಗಿದೆ.
ರಕ್ತದಾನದ ಮಹತ್ವವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಶೇಷವಾಗಿ ಯುವಜನತೆಗೆ ತಿಳಿಸಬೇಕಿರುವ ಅಗತ್ಯತೆ ಕಂಡು ಬರುತ್ತದೆ. ನಿಯಮಿತ ರಕ್ತದಾನವು ಮನುಷ್ಯನನ್ನು ಆರೋಗ್ಯದಿಂದಿರಲು ಹೆಚ್ಚು ಸಹಕಾರಿಯಾಗಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ಮನುಷ್ಯನು ರಕ್ತದಾನ ಮಾಡಬಹುದಾಗಿದೆ. ಮಹಿಳೆಯರಲ್ಲಿ ರಕ್ತದಾನದ ಕುರಿತು ಇದ್ದ ವಿರೋಧಾಭಾಸವು ಕಡಿಮೆಯಾಗಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ರಕ್ತದಾನಕ್ಕೆ ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಮಹಿಳೆಯರಲ್ಲಿ ಸಹಜವಾಗಿ ರಕ್ತದಾನದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿ ರಕ್ತದಾನಕ್ಕೆ ಇದ್ದ ತೊಡಕುಗಳನ್ನು ನಿವಾರಿಸುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಯಂ ಆರೋಗ್ಯದಿಂದ ಆರೋಗ್ಯವಂತ ಕುಟುಂಬ ಸಾಧ್ಯ, ಅದೇರೀತಿ ಆರೋಗ್ಯವಂತ ಕುಟುಂಬದಿಂದ ಆರೋಗ್ಯವಂತ ಸಮಾಜ, ಆರೋಗ್ಯವಂತ ದೇಶ ಸಾಧ್ಯ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ಸಾಧ್ಯ ಎಂಬ ಘೋಷವಾಕ್ಯದಡಿ ರಕ್ತದಾನ ಮಹಾದಾನ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತುಗಳಿಗೆ ಸಾಕ್ಷಿಯಾಗುವತ್ತ ನಮ್ಮ ಚಿತ್ತವನ್ನು ಬೆಳೆಸಿಕೊಳ್ಳುವ ಅಗತ್ಯತೆ ಇಂದು ನಮ್ಮೆದುರಿಗೆ ಇದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005-1.mp4

Kalahamsa Infotech private limited

Tags: 6 to 6 Kannada MovieAustrianBlood DonationBlood Donation DayCarl LandinerLatest News Kannadaಕಾರ್ಲ್ ಲ್ಯಾಂಡೈನರ್ನಾಗರಾಜ ಶೆಟ್ಟರ್ರಕ್ತದಾನವಿಶ್ವ ರಕ್ತದಾನಿಗಳ ದಿನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಆರೋಗ್ಯವಂತ ಯುವಜನತೆ ರಕ್ತದಾನ ಮಾಡಬೇಕು: ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

Next Post

ರಂಗಪ್ರವೇಶಕ್ಕೆ ಅಣಿಯಾದ ಅನನ್ಯಾ ಅಂಬರೀಶ್ | 18ರಂದು ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ

kalpa News

kalpa News

Next Post
ರಂಗಪ್ರವೇಶಕ್ಕೆ ಅಣಿಯಾದ ಅನನ್ಯಾ ಅಂಬರೀಶ್ | 18ರಂದು ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ

ರಂಗಪ್ರವೇಶಕ್ಕೆ ಅಣಿಯಾದ ಅನನ್ಯಾ ಅಂಬರೀಶ್ | 18ರಂದು ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ

Leave a Reply Cancel reply

Your email address will not be published. Required fields are marked *

No Result
View All Result
SPARSH RR Nagar Launches 5 Plastic Surgery Clinics of Excellence
English Articles

SPARSH RR Nagar Launches 5 Plastic Surgery Clinics of Excellence

by kalpa News
July 4, 2026
0

Kalpa Media House  |  Bengaluru  | To mark International Plastic Surgery Day 2026, SPARSH Hospital, RR Nagar, has launched five...

Read moreDetails
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

July 4, 2026
HERO MOTOCORP ANNOUNCES RS 3200+ CRORE INVESTMENT IN ANDHRA PRADESH

HERO MOTOCORP ANNOUNCES RS 3200+ CRORE INVESTMENT IN ANDHRA PRADESH

July 4, 2026
Indriya, Aditya Birla Jewellery makes history with India’s Largest Hand-Painted Madhubani Hoarding

Indriya, Aditya Birla Jewellery makes history with India’s Largest Hand-Painted Madhubani Hoarding

July 3, 2026
Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

Tata Motors Delivers Strong Sales with 1,08,488 Units in Q1 FY27; Sustains Robust 27% YoY Growth

July 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL