ಲಾಹೋರ್: ತಾನು ಬಂಧಿಸಿ, ಅಕ್ರಮವಾಗಿ ಕಿರುಕುಳ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ.
ಲಾಹೋರ್’ನಿಂದ 22 ಕಿಮೀ ದೂರದಲ್ಲಿರುವ ಗಡಿಯಲ್ಲಿ ವಾಘಾ ಗಡಿಯಲ್ಲಿ ಹಸ್ತಾಂತರ ಪ್ರಕ್ರಿಯೆ ನಿಗದಿಯಾಗಿತ್ತು. ಲಾಹೋರ್’ನಿಂದ ಗಡಿ ಪ್ರದೇಶದವರೆಗೂ ಅಭಿನಂದನ್ ಅವರನ್ನು ಕರೆತರಲು ಪಾಕ್ ಸೇನೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು. ಇದಕ್ಕಾಗಿ ಸಂಪೂರ್ಣ ರಸ್ತೆಯನ್ನು ಝೀರೋ ಟ್ರಾಫಿಕ್ ಮಾಡಿ, ಝೆಡ್ ಪ್ಲಸ್ ಮಾದರಿಯಲ್ಲಿ ಬಿಗಿ ಭದ್ರತೆ ರೂಪಿಸಿತ್ತು.
ಜಿನೇವಾ ಒಪ್ಪಂದದ ಪ್ರಕಾರ ಬಂಧಿಸಿದ ಯೋಧರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ನಿಯಮದಂತೆ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವ ವೇಳೆ ಅತ್ಯಂತ ಗೌರವಯುತವಾಗಿ ಹಾಗೂ ಸುರಕ್ಷಿತವಾಗಿ ನೋಡಿಕೊಳ್ಳಲಾಗಿದೆ.
ಯಾಕಿಷ್ಟು ಭದ್ರತೆ ಹಾಗೂ ಕಾಳಜಿ?
ಜಿನೇವಾ ಒಪ್ಪಂದಕ್ಕೆ ಪಾಕಿಸ್ಥಾನವೂ ಸಹ ಸಹಿ ಹಾಕಿರುವುದರಿಂದ ಸೆರೆ ಹಿಡಿಯಲಾದ ಶತ್ರು ರಾಷ್ಟçದ ಯೋಧರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವ ಜೊತೆಯಲ್ಲಿ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಆದರೆ, ಮೊನ್ನೆ ಅಭಿನಂದನ್ ಅವರನ್ನು ಬಂಧಿಸಿದ ವೇಳೆ ಪಾಕ್ ಸೈನಿಕರ ಅವರಿಗೆ ಕಿರುಕುಳ ನೀಡುವ ಮೂಲಕ ಒಪ್ಪಂದವನ್ನು ಉಲ್ಲಂಘನೆ ಮಾಡಿತ್ತು. ಇದರು ಭಾರತ ಮಾತ್ರವಲ್ಲದೇ ವಿಶ್ವದ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ವಿಚಾರದಲ್ಲಿ ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದ್ದ ಭಾರತ ಸರ್ಕಾರ, ನಮ್ಮ ಅಭಿನಂದನ್ ಅವರನ್ನು ಅತ್ಯಂತ ಗೌರವ ಹಾಗೂ ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಒಂದು ವೇಳೆ ನಮ್ಮ ಅಭಿನಂದನ್’ಗೆ ಕೊಂಚ ಏನಾದರೂ ತೊಂದರೆಯಾದರೂ ನಮ್ಮ ಗಂಭೀರತೆಯ ತೀರಾ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಎಚ್ಚರಿಕೆ ನೀಡಿತ್ತು. ಇದು ಪಾಕಿಸ್ಥಾನವನ್ನು ಅಕ್ಷರಶಃ ನಡುಗಿಸಿತ್ತು.
ಇನ್ನೊಂದೆಡೆ ಐಒಸಿ ಸಭೆಯಲ್ಲಿ ಪಾಲ್ಗೊಂಡಿರುವ ಸುಷ್ಮಾ ಸ್ವರಾಜ್ ಮುಸ್ಲಿಂ ನೆಲದಲ್ಲೆ ನಿಂತು ಮುಸ್ಲಿಂ ಉಗ್ರರಿಗೆ ಗಂಭೀರ ಎಚ್ಚರಿಕೆ ನೀಡುವ ಮೂಲಕ ಪಾಕಿಸ್ಥಾನಕ್ಕೆ ತಾಕೀತು ಮಾಡಿದ್ದರು.
ಅಲ್ಲದೇ, ಈ ವಿಚಾರದಲ್ಲಿ ಜಾಗತಿಕವಾಗಿ ಪಾಕಿಸ್ಥಾನದ ಮೇಲೆ ಒತ್ತಡ ಹೆಚ್ಚಾದ ಕಾರಣ ಪಾಕ್ ಅಕ್ಷರಶಃ ತಲ್ಲಣಿಸಿ ಹೋಗಿತ್ತು.
ಹೀಗಾಗಿ, ಅಭಿನಂದನ್ ಅವರಿಗೆ ಯಾವುದೇ ರೀತಿಯಿಂದ ತಮ್ಮ ವ್ಯಾಪ್ತಿಯಲ್ಲಿರುವಾಗ ಕೊಂಚ ತೊಂದರೆಯಾದರೂ ಅದರ ಕ್ರೂರ ಪರಿಣಾಮವನ್ನು ತಾನು ಎದುರಿಸಬೇಕಾಗುತ್ತದೆ ಎಂಬ ಭಯ ಪಾಕಿಸ್ಥಾನಕ್ಕೆ ಕಾಡಿತ್ತು. ಅಲ್ಲದೇ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಲ್ಲಿನ ಸಂಸತ್’ನಲ್ಲಿ ಘೋಷಣೆ ಮಾಡಿದ್ದಂತೆ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರ ಮಾಡುವುದು ಅನಿವಾರ್ಯವಾಗಿತ್ತು.
ಈ ಎಲ್ಲ ಕಾರಣಗಳಿಂದ ಅಭಿನಂದನ್ ಅವರನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ಝೀರೋ ಟ್ರಾಫಿಕ್ ಮಾಡಿ, ಅವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಿ, ಅತ್ಯಂತ ಸುರಕ್ಷಿತವಾಗಿ ಹಸ್ತಾಂತರ ಮಾಡಿದೆ.
Discussion about this post