No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
  • Advertise With Us
  • Grievances
  • About Us
  • Contact Us
Sunday, July 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?

ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ | ವಿಶ್ವದ ಅತಿ ಎತ್ತರದ, ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗ

kalpa News by kalpa News
June 7, 2026
in Special Articles
0
ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?
Share on FacebookShare on TwitterShare on WhatsApp
• ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕಕ್ಕೆ ಹೊಸ ದಿಕ್ಕು
• ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಐತಿಹಾಸಿಕ ಕ್ಷಣ | ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ
• ವಿಶ್ವದ ಅತಿ ಎತ್ತರದಲ್ಲಿರುವ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗ
• 10 ಮಿಲಿಯನ್ ಸುರಕ್ಷಿತ ಮಾನವ-ಗಂಟೆಗಳ ದಾಖಲೆ

ಕಲ್ಪ ಮೀಡಿಯಾ ಹೌಸ್  |  ಶ್ರೀನಗರ/ಲೇಹ್  |

ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕಕ್ಕೆ ಹೊಸ ದಿಕ್ಕು ನೀಡಲಿರುವ ಮತ್ತು ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ಜೋಜಿಲಾ ರಸ್ತೆ ಸುರಂಗ ಯೋಜನೆ ಮಹತ್ವದ ಮೈಲಿಗಲ್ಲು ತಲುಪಿದೆ.

13.153 ಕಿಮೀ ಉದ್ದದ ಜೋಜಿಲಾ ಸುರಂಗವನ್ನು ಬೇಧಿಸುವ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇದುವೆಂದು ಪರಿಗಣಿಸಲಾಗಿದೆ.

Also Read>> ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಐತಿಹಾಸಿಕ ತೂಕದ ಯಂತ್ರ ಅನಾವರಣ | ಏನಿದರ ವಿಶೇಷತೆ?

ಸಮುದ್ರ ಮಟ್ಟದಿಂದ ಸುಮಾರು 11,578 ಅಡಿ ಎತ್ತರದಲ್ಲಿರುವ ಈ ಸುರಂಗವು ವಿಶ್ವದ ಅತಿ ಎತ್ತರದಲ್ಲಿರುವ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶ್ರೀನಗರದ ಸಮೀಪದ ಸೋನ್‌ಮಾರ್ಗ್‌ನ ಬಾಲ್ತಾಲ್ ಮತ್ತು ದ್ರಾಸ್-ಕಾರ್ಗಿಲ್ ಪ್ರದೇಶದ ಮೀನಾಮಾರ್ಗ್ ನಡುವಿನ ಈ ಯೋಜನೆ, ಹಲವು ತಿಂಗಳುಗಳ ಕಾಲ ಹಿಮಪಾತ ಹಾಗೂ ಹಿಮಪಾತದ ಅಪಾಯದಿಂದ ಕಡಿತಗೊಳ್ಳುವ ಸಂಪರ್ಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿದೆ.ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್) ಪರವಾಗಿ ಮೆಘಾ ಎಂಜಿನಿಯರಿಂಗ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಹಿಮಾಲಯದ ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗೆ ಅನುಗುಣವಾಗಿ “ನ್ಯೂ ಆಸ್ಟ್ರಿಯನ್ ಟನ್ನೆಲಿಂಗ್ ಮೆಥಡ್” ತಂತ್ರಜ್ಞಾನ ಬಳಸಿ ಈ ಸುರಂಗ ನಿರ್ಮಿಸಲಾಗಿದೆ.

ಕಾಮಗಾರಿ ಮೈಲಿಗಲ್ಲುಗಳು

  • ಯೋಜನೆ ಆರಂಭ: ಅಕ್ಟೋಬರ್ 1, 2020
  • ನಿಲ್‌ಗ್ರಾರ್ ಸುರಂಗಗಳ ಬ್ರೇಕ್‌ಥ್ರೂ: 2021-22ರಲ್ಲಿ ಪೂರ್ಣ
  • ಶಾಫ್ಟ್-3 ಬ್ರೇಕ್‌ಥ್ರೂ: ನವೆಂಬರ್ 15, 2023
  • ಶಾಫ್ಟ್-1 ಬ್ರೇಕ್‌ಥ್ರೂ: ಜುಲೈ 28, 2025
  • ಜೋಜಿಲಾ ಮುಖ್ಯ ಸುರಂಗ ಅಂತಿಮ ಬ್ರೇಕ್‌ಥ್ರೂ: ಜೂನ್ 9, 2026

365 ದಿನಗಳ ಸಂಪರ್ಕಕ್ಕೆ ರಹದಾರಿ
ಈ ಸುರಂಗ ಮಾರ್ಗ ಪೂರ್ಣಗೊಂಡ ಬಳಿಕ ಶ್ರೀನಗರ ಮತ್ತು ಲಡಾಖ್ ನಡುವಿನ ಸಂಪರ್ಕ ವರ್ಷಪೂರ್ತಿ ಲಭ್ಯವಾಗಲಿದೆ.ದ್ರಾಸ್, ಕಾರ್ಗಿಲ್, ಲೇಹ್ ಸೇರಿದಂತೆ ಗಡಿಯ ಸೂಕ್ಷ್ಮ ಪ್ರದೇಶಗಳಿಗೆ ಜನರ ಹಾಗೂ ಸರಕುಗಳ ಸಂಚಾರ ಸುಗಮವಾಗಲಿದ್ದು, ಪ್ರವಾಸೋದ್ಯಮ, ವ್ಯಾಪಾರ ಹಾಗೂ ತುರ್ತು ಸೇವೆಗಳಿಗೆ ಉತ್ತೇಜನ ಸಿಗಲಿದೆ. ರಾಷ್ಟçದ ಭದ್ರತೆ ಮತ್ತು ಸೇನಾ ಲಾಜಿಸ್ಟಿಕ್ಸ್ ದೃಷ್ಟಿಯಿಂದಲೂ ಈ ಸುರಂಗ ಅತ್ಯಂತ ಮಹತ್ವದ್ದಾಗಿದೆ.

Also Read>> World Yogasana Championships 2026: Hosts India extend lead at top of medals tally with 22 gold

ಸವಾಲುಗಳ ನಡುವಿನ ಕಾಮಗಾರಿ
ಜೋಜಿಲಾ ಯೋಜನೆಯ ಕಾಮಗಾರಿ ಪಶ್ಚಿಮ ಹಿಮಾಲಯದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ನಡೆದಿದ್ದು, -20 (ಮೈನಸ್ 20) ರಿಂದ -30 (ಮೈನಸ್ 30) ಡಿಗ್ರಿ ಸೆಲ್ಸಿಯಸ್ ತಾಪಮಾನ, ಭಾರೀ ಹಿಮಪಾತ, ಹಿಮಕುಸಿತ ಹಾಗೂ ದುರ್ಬಲ ಶಿಲಾ ರಚನೆಗಳ ನಡುವೆಯೂ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದೆ.ಕಳೆದ ಐದು ವರ್ಷಗಳಲ್ಲಿ ಯೋಜನಾ ಪ್ರದೇಶದಲ್ಲಿ ಐದು ಪ್ರಮುಖ ಹಿಮಕುಸಿತ ಘಟನೆಗಳು ಸಂಭವಿಸಿದ್ದವು. 2023ರ ಜನವರಿಯಲ್ಲಿ ಸಂಭವಿಸಿದ ಭಾರೀ ಹಿಮಕುಸಿತದಲ್ಲಿ 172 ಕಾರ್ಮಿಕರನ್ನು ಭಾರತೀಯ ಸೇನೆ ಸುರಕ್ಷಿತವಾಗಿ ರಕ್ಷಿಸಿತ್ತು. ಆದಾಗ್ಯೂ ಯೋಜನಾ ತಂಡ ನಿರಂತರವಾಗಿ ಕಾಮಗಾರಿ ಮುಂದುವರಿಸಿ ಇದೀಗ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಲು ಸಜ್ಜಾಗಿದೆ.

ಯೋಜನೆಯ ಪ್ರಮುಖ ಅಂಕಿ-ಅಂಶಗಳು

  • ಒಟ್ಟು ಯೋಜನಾ ಉದ್ದ: 30.894 ಕಿ.ಮೀ.
  • ಮುಖ್ಯ ಜೋಜಿಲಾ ಸುರಂಗ: 13.153 ಕಿ.ಮೀ.
  • ನಿಲ್‌ಗ್ರಾರ್ ಜೋಡಿ ಸುರಂಗಗಳು: 457 ಮೀ. ಹಾಗೂ 1.95 ಕಿ.ಮೀ.
  • 3 ಸೇತುವೆಗಳು: ಒಟ್ಟು 460 ಮೀ.
  • 3 ಲಂಬ ಶಾಫ್ಟ್ಗಳು (ವೆಂಟಿಲೇಷನ್ ಮತ್ತು ತುರ್ತು ಸುರಕ್ಷತೆಗಾಗಿ)
  • ಭಾರತದಲ್ಲೇ ಅತಿ ಉದ್ದದ ಲಂಬ ಶಾಫ್ಟ್: 474.30 ಮೀ.
  • 7 ಕಟ್-ಅಂಡ್-ಕವರ್ ರಚನೆಗಳು: 2.35 ಕಿ.ಮೀ.
  • ಹಿಮ ರಕ್ಷಣಾ ಗ್ಯಾಲರಿ: 450 ಮೀ.

10 ಮಿಲಿಯನ್ ಸುರಕ್ಷಿತ ಮಾನವ-ಗಂಟೆಗಳ ದಾಖಲೆ
ಯೋಜನೆಯಲ್ಲಿ ಇದುವರೆಗೆ 10 ಮಿಲಿಯನ್‌ಗಿಂತ ಹೆಚ್ಚು ಸುರಕ್ಷಿತ ಮಾನವ-ಗಂಟೆಗಳ ಕಾರ್ಯನಿರ್ವಹಣೆ ದಾಖಲಾಗಿದ್ದು, 1,200ಕ್ಕೂ ಹೆಚ್ಚು ಸಿಬ್ಬಂದಿ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಶೇ.80ರಷ್ಟು ಸ್ಥಳೀಯ ನಿವಾಸಿಗಳಾಗಿದ್ದಾರೆ.

ಜೋಜಿಲಾ ಸುರಂಗದ ಅಂತಿಮ ಬ್ರೇಕ್‌ಥ್ರೂ (ಬೇಧಿಸುವ) ಭಾರತದ ಸುರಂಗ ನಿರ್ಮಾಣ ಕ್ಷೇತ್ರದ ಮಹತ್ವದ ಸಾಧನೆಯಾಗಿದ್ದು, ಕಾಶ್ಮೀರ ಮತ್ತು ಲಡಾಖ್ ನಡುವಿನ ಸರ್ವಋತು ಸಂಪರ್ಕದ ದೀರ್ಘಕಾಲದ ಕನಸನ್ನು ನನಸಾಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಇದು ದೇಶದ ಮೂಲಸೌಕರ್ಯ ಅಭಿವೃದ್ಧಿ ಸಾಮರ್ಥ್ಯಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.newsKalahamsa Infotech private limited

Tags: Jammu KashmirKannada News WebsiteKargilLadakhLatest News KannadaNational NewsSingle-tube two-way road tunnelsnowfallSonmargSrinagarZojila TunnelZojila Tunnel Updatesಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗಕಾರ್ಗಿಲ್ಜಮ್ಮು ಕಾಶ್ಮೀರಜೋಜಿಲಾ ಸುರಂಗಲಡಾಖ್ಲೇಹ್ಶ್ರೀನಗರಸೋನ್‌ಮಾರ್ಗ್‌ಹಿಮಪಾತ
Share211Tweet132Send
Aniruddha Vasishta S R

Aniruddha Vasishta S R

Editor-in-Chief

Previous Post

World Yogasana Championships 2026: Hosts India extend lead at top of medals tally with 22 gold

Next Post

Zojila Tunnel Nears Completion | A Milestone in India’s Infrastructure & National Security

kalpa News

kalpa News

Next Post
ದೇಶದ ಭದ್ರತೆಗೆ ಪೂರಕವಾದ ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ | ಏನಿದರ ವಿಶೇಷತೆ?

Zojila Tunnel Nears Completion | A Milestone in India’s Infrastructure & National Security

Leave a Reply Cancel reply

Your email address will not be published. Required fields are marked *

No Result
View All Result
Indian Railway PM Modi to Inaugurate 4 Modern Railway Stations in Karnataka
English Articles

Indian Railway | PM Modi To Launch 4 Stations In Karnataka

by kalpa News
July 16, 2026
0

Kalpa Media House  |  Bengaluru  | Indian Railways continues its transformative journey with a strong focus on modernization and global...

Read moreDetails
SWR to run special trains for Good Friday, Easter rush

Indian Railway | Danapur and Bengaluru Special Trains Extension

July 16, 2026
Shivamogga's Sri Raghavendra Swamy Mutt Becomes First In South India To Receive Three ISO Certifications

Shivamogga | Raghavendra Swamy Mutt Becomes First In South India To Receives 3 ISO Certification

July 16, 2026
Mysore - Shivamogga - Talguppa Train Indian Railway

Indian Railway | Visakhapatnam– Bengaluru–Visakhapatnam Special Train Extension

July 16, 2026
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL