ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಹೊಸಕೆರೆಹಳ್ಳಿ ಕೆರೆ ಪರಿಸರದಲ್ಲಿ ‘ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿ’ನ ಆಶ್ರಯದಲ್ಲಿ ಹೊಸಕೆರೆಹಳ್ಳಿ ಕೆರೆ ಪರಿಸರದಲ್ಲಿ “ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಎಂಬ ವಿಶಿಷ್ಟ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಹಿತಿ ಎಚ್. ಎಸ್. ವೆಂಕಟೇಶ್ ಮೂರ್ತಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಕೃತಿಗೆ ಗಾಸಿಮಾಡದಿರುವ ಜೀವನಕ್ರಮವನ್ನು ನಾವು ರೂಡಿಸಿಕೊಂಡಾಗ ಪ್ರಕೃತಿಯು ನಮ್ಮೊಂದಿಗೆ ಮಾತನಾಡಲೂ ಬಹುದು. ಇದು ಐತಿಹಾಸಿಕ ಸತ್ಯವೂ ಹೌದು. ಇತಿಹಾಸದ ಪುಟಗಳಲ್ಲಿ ಈ ಕುರಿತಾಗಿ ಇರುವ ಸತ್ಯಗಳನ್ನು ಬಿಡಿಸಿಟ್ಟರು. ಪ್ರಕೃತಿಯ ಉಳಿವು ಮನುಷ್ಯನ ಬದುಕಿಗೆ ಹೇಗೆ ಅನಿವಾರ್ಯ ಎಂಬ ಸತ್ಯವನ್ನು ಅವರು ಎಳೆ ಎಳೆಯಾಗಿ ವ್ಯಾಖ್ಯಾನಿಸಿ , ಪ್ರಕೃತಿಯನ್ನು ಉಳಿಸಲು ಸೂಕ್ಷ್ಮಮನಸ್ಸು ಬೇಕು ಎಂದರು.
ಕನಕಪುರ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಡಗಣಿ ವಿ ಗಣೇಶ ಮಾತನಾಡಿ, ಕೆಂಪೇಗೌಡರು ನೂರಾರು ಕೆರೆಗಳನ್ನು ನಿರ್ಮಾಣ ಮಾಡಿ ಮಳೆ ನೀರು ಕೆರೆ ಸೇರಿ ಯಾವುದೇ ಕಾಲಕ್ಕೂ ಅಂತರ್ಜಲ ಕಡಮೆಯಾಗದಂತೆ ಹಾಗೂ ಕುಡಿಯುವ ನೀರು ಸದಾ ಲಭ್ಯವಾಗುವಂತೆ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದರು. ಆದರೆ ಇಂದಿನ ದಿನಗಳಲ್ಲಿ ನಾವು ಕೆರೆಗಳನ್ನು ಉಳಿಸಲು ಹಲವು ಹೆಜ್ಜೆಗಳನ್ನು ಇಡಬೇಕಾಗುತ್ತದೆ ಎಂದು ಉದಾಹರಣೆ ಸಹಿತವಾಗಿ ಅವರು ವಿವರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಲ.ನ. ಶರ್ಮ ಮಾತನಾಡಿ, ಪ್ಲಾಸ್ಟಿಕ್ ಹಾಗೂ ಕಾಗದದ ವಸ್ತುಗಳನ್ನು ಕಡಿಮೆ ಉಪಯೋಗ ಮಾಡಬೇಕು. ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸದೇ ಹೋದರೆ ಮುಂದಿನ ದಿನಗಳಲ್ಲಿ ಅದರ ಘೋರ ಅಭಾವವನ್ನು ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದರು.
ಅಭಾಸಾಪ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಹಣ್ಣು ನೀಡುವ ಸಸಿಗಳನ್ನು ಕೆರೆಯ ದಂಡೆಯಲ್ಲಿ ಸ್ಥಳೀಯರ ಸಹಭಾಗಿತ್ವದೊಂದಿಗೆ ನೆಡಲಾಯಿತು ಮತ್ತು ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಸವಿತಾ ಭಟ್ ಹಾಗೂ ಶಾರದಾ ಶ್ರೀ ಪಬ್ಲಿಕ್ ಶಾಲೆಯ ಪುಷ್ಪಾವತಿ ಅವರು ಭಾಗವಹಿಸಿದ್ದರು.
Also read: ಸ್ವಾತಂತ್ರ ಅಮೃತ ಮಹೋತ್ಸವ: ರ್ಯಾಲಿಯಲ್ಲಿ ಒಂದೇ ಬೈಕ್’ನಲ್ಲಿ ಸಾಗಿ ಬಂದ ಈಶ್ವರಪ್ಪ-ರಾಘವೇಂದ್ರ
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಂಗಳೂರು ಮಹಾನಗರ ಸಂಯೋಜಕರಾದ ವಿಜಯಕುಮಾರ್ ಸ್ವಾಗತಿಸಿ ಬೆಂಗಳೂರು ಮಹಾನಗರದ ಕಾರ್ಯದರ್ಶಿಯಾದ ಶ್ರೀಕಂಠ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕಾರಿಣಿ ಸದಸ್ಯ ವರುಣ್ ವಂದನಾರ್ಪಣೆ ಮಾಡಿದರು. ಬೆಂಗಳೂರು ಮಹಾನಗರ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಜೋಯಿಸ್ ಉಪಸ್ಥಿತರಿದ್ದರು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post