ಬೆಂಗಳೂರು: ಅ:21: ಸಂಘ ಪರಿವಾರದ ಹಿರಿಯ ನಾಯಕರೂ ಆಗಿರುವ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಬೆಂಗಳೂರು ಭೇಟಿ ಕುತೂಹಲ ಕೆರಳಿಸಿತ್ತು.
ಆರ್ ಎಸ್ ಎಸ್ ಹಿರಿಯ ಪ್ರಚಾರಕ ಕೃ.ಸೂರ್ಯನಾರಾಯಣ ಹಾಗೂ ಕೃ ನರಹರಿಯವರ ಸಹೋದರ ಗೋಪಿನಾಥ್ ನಿಧನದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿ, ಅಡ್ವಾಣಿ ಅವರು ಸಾಂತ್ವನ ಹೇಳಿದರು.
ಕೆಲ ನಿಮಿಷಗಳ ಕಾಲ ಅವರ ಕುಟುಂಬದೊಂದಿಗೆ ಚಚರ್ಿಸಿದರು. ತುತರ್ು ಪರಿಸ್ಥಿತಿ ಸಂದರ್ಭದಲ್ಲಿ ನರಹರಿಯವರ ಕುಟುಂಬ ಅಡ್ವಾಣಿ ಅವರಿಗೆ ಬೆಂಗಳೂರಿನಲ್ಲಿ ಬಂಧಿಯಾಗಿದ್ದಾಗ ಎಲ್ಲಾ ಸಹಕಾರ ನೀಡಿತ್ತು. ಅಲ್ಲದೇ ಅವರ ಇಡೀ ಕುಟುಂಬ ಸಂಘದ ಏಳಿಗೆಗೆ ಇಂದಿಗೂ ಶ್ರಮಿಸುತ್ತಿರುವುದು ಸಾಮಾಜಿಕ ವಲಯದಲ್ಲಿ ಒಂದು ಸಾಧನೆ ಎನಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃ ನರಹರಿಯವರು, ಇದೊಂದು ಸೌಹಾರ್ದ ಭೇಟಿಯಾಗಿತ್ತು, ತಮ್ಮ ದಿವಂಗತ ಸಹೋದರ ಗೋಪಿನಾಥ್ ಅವರೊಂದಿಗೆ ನಿಕಟ ಒಡನಾಟವಿತ್ತು. ತುತರ್ು ಪರಿಸ್ಥಿತಿ ಸಂದರ್ಭದಲ್ಲಿ ಅಶೋಕ ಹೋಟೆಲ್ ನಲ್ಲಿ ನಡೆಯುತ್ತಿದ್ದ ಸಂಸದೀಯ ಸಮಿತಿ ಸಭೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯವರೊಂದಿಗೆ ಪಾಲ್ಗೊಂಡಿದ್ದರು. ಆಗ ಪೊಲೀಸರು ಬಂಧಿಸಲು ಮುಂದಾದಾಗ ಗೋಪಿನಾಥ್ ಅವರೇ ಸ್ವತಃ ತಮ್ಮ ಕಾರಿನಲ್ಲೇ ಸೆರಮನೆಗೆ ಕರೆದೊಯ್ದು ಬಿಟ್ಟರು. ಅಲ್ಲದೇ ತುತರ್ು ಪರಿಸ್ಥಿತಿಯ ರಾಜಕೀಯ ಬಂಧಿಗಳು ಮತ್ತು ಹೊರಗಿನ ಚಟುವಟಿಕೆಗಳಿಗೆ ಗೋಪಿನಾಥ್ ಪ್ರಮುಖ ಕೊಂಡಿಯಾಗಿದ್ದು ವಿಶೇಷತೆ ಮೆರೆದಿದ್ದನ್ನು ಅಡ್ವಾಣಿ ಈ ಸಂದರ್ಭದಲ್ಲಿ ಸ್ಮರಿಸಿದರು ಎಂದು ಕೃ ನರಹರಿಯವರು ಹಿಂದುಸ್ಥಾನ್ ಸಮಾಚಾರ್ ಗೆ ತಿಳಿಸಿದರು.
ಅಲ್ಲದೇ ಬೆಂಗಳೂರಿಗೆ ಬಂದಾಗಲೆಲ್ಲಾ ಅಡ್ವಾಣಿಯವರು ಗೋಪಿನಾಥ್ ಜೊತೆಯಲ್ಲಿಯೇ ಸುತ್ತಾಡುತ್ತಿದ್ದರು ಎಂಬುದನ್ನು ಸ್ಮರಿಸಿದ ಅವರು, ಗೋಪಿನಾಥ್ ಕುಟುಂಬದ ಬಗ್ಗೆ ವಿಚಾರಿಸಿದರು.
Discussion about this post