ಕಲ್ಪ ಮೀಡಿಯಾ ಹೌಸ್ | ದೂಧ್ ಸಾಗರ್ |
ದೂಧ್ ಸಾಗರ್ ಜಲಪಾತ (Dudhsagar Waterfalls) ವೀಕ್ಷಿಸಲು ರೈಲು ಹಳಿಗಳ ಮೂಲಕ ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರ ವಿರುದ್ಧ ರೈಲ್ವೆ ರಕ್ಷಣಾ ಪಡೆ (RPF) ಕಠಿಣ ಕ್ರಮ ಕೈಗೊಂಡು ₹16,000 ದಂಡ ವಸೂಲಿ ಮಾಡಿದೆ.
ಈ ಘಟನೆ ಜುಲೈ 5ರ ಭಾನುವಾರದಂದು ನಡೆದಿದ್ದು, ಕ್ಯಾಸಲ್ರಾಕ್ ರೈಲ್ವೆ ರಕ್ಷಣಾ ಪಡೆಯ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಿ ದೂಧ್ (DDS) ಹಾಗೂ ಸೋನಾಲಿಯಂ (LIM) ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ದಿಢೀರ್ ತಪಾಸಣೆ ನಡೆಸಲಾಯಿತು.
Also Read>> ಭದ್ರಾವತಿ | SIR ಕರ್ತವ್ಯ ವೇಳೆ ಕುಸಿದು ಬಿದ್ದು ಬಿಎಲ್ಒ ಮಹಿಳಾ ಅಧಿಕಾರಿ ಮೃತ
ತಪಾಸಣೆ ವೇಳೆ ಅರಣ್ಯ ಮಾರ್ಗದಿಂದ ಅಸುರಕ್ಷಿತವಾಗಿ ರೈಲು ಹಳಿಗೆ ಪ್ರವೇಶಿಸಿ ದೂಧ್ ಜಲಪಾತ ವೀಕ್ಷಣೆಯತ್ತ ಅಕ್ರಮವಾಗಿ ಚಾರಣ ನಡೆಸುತ್ತಿದ್ದ 32 ಪ್ರವಾಸಿಗರನ್ನು ಪತ್ತೆಹಚ್ಚಿ ಅವರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 147 (ಜನ ವಿಶ್ವಾಸ ಕಾಯ್ದೆ) ಅಡಿಯಲ್ಲಿ ಪ್ರತಿಯೊಬ್ಬರಿಂದ ತಲಾ ₹500ರಂತೆ, ಒಟ್ಟು ₹16,000 ದಂಡ ವಸೂಲಿ ಮಾಡಲಾಗಿದೆ.

ದೂಧ್ ಸಾಗರ್ ಜಲಪಾತ ಭೇಟಿಗೆ ಸಂಪೂರ್ಣ ನಿರ್ಬಂಧ
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದೂಧ್ ಸಾಗರ್ ಜಲಪಾತಕ್ಕೆ ಭೇಟಿ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ. ಆದಾಗ್ಯೂ, ಮಳೆಗಾಲದಲ್ಲಿ ಕೆಲ ಪ್ರವಾಸಿಗರು ಅರಣ್ಯ ಮಾರ್ಗದಿಂದ ಗುಪ್ತವಾಗಿ ರೈಲು ಹಳಿಗೆ ಪ್ರವೇಶಿಸಿ ಜಲಪಾತದತ್ತ ಚಾರಣ ನಡೆಸುತ್ತಿರುವುದು ಕಂಡುಬಂದಿದ್ದು, ಇದರಿಂದ ರೈಲು ಸಂಚಾರದ ಸುರಕ್ಷತೆ ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ.
Also Read>> ಎಸ್ಐಆರ್ ಸಲಹಾ ಕೇಂದ್ರದ ಸದುಪಯೋಗಪಡೆದುಕೊಳ್ಳಿ: ಈಶ್ವರಪ್ಪ
ಈ ಹಿನ್ನೆಲೆಯಲ್ಲಿ ಅಲೋಕಕುಮಾರ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು (Sr. DSC/UBL) ಅವರ ಮಾರ್ಗದರ್ಶನದಲ್ಲಿ ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಬೆಳಗಾವಿ ಘಟಕ ಮತ್ತು In-Charge, Vasco RPF Post ಮೇಲ್ವಿಚಾರಣೆಯಲ್ಲಿ ದೂಧ್ ಸಾಗರ್ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸಲಾಗಿದೆ.
ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪ್ರವಾಸಿಗರು ಇಲ್ಲಿ ಅನಧಿಕೃತವಾಗಿ ಪ್ರವೇಶಿಸದಂತೆ ಹಾಗೂ ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.
32 Tourists Fined ₹16,000 for Illegal Trekking Near Dudhsagar Falls
The Railway Protection Force (RPF) of the Hubballi Division has fined 32 tourists a total of ₹16,000 for illegally trekking along railway tracks to reach Dudhsagar Falls, despite strict safety restrictions.
The action was carried out on Sunday as part of a weekend special enforcement drive. A task force led by the Sub-Inspector of RPF, Castle Rock, conducted surprise inspections in the areas under Dudhsagar (DDS) and Sonalium (LIM) railway stations.
During the operation, officials found 32 individuals trespassing on railway tracks through forest routes to access the popular tourist destination. All offenders were booked under Section 147 of the Railways Act (as amended under the Jan Vishwas Act) and fined ₹500 each.
The South Western Railway, Hubballi Division, has clearly prohibited public access to Dudhsagar Falls via railway tracks, citing serious safety concerns. However, authorities note that during the monsoon season, some tourists continue to enter restricted zones through forest paths, putting their lives at risk and endangering train operations.
In response, surveillance in the Dudhsagar region has been intensified under the guidance of Shri Alok Kumar, Senior Divisional Security Commissioner (Sr. DSC/UBL), with coordinated monitoring by the RPF Belagavi Unit and the Vasco RPF Post.
Railway authorities have urged the public to strictly avoid trespassing on railway property and adhere to safety regulations to prevent accidents and ensure safe train operations.

ದೂಧ್ ಸಾಗರ್ ಜಲಪಾತ – ಪ್ರಕೃತಿಯ ಅದ್ಭುತ ವೈಭವ
ದೂಧ್ ಸಾಗರ್ ಜಲಪಾತವು ಭಾರತದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಇದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಗಡಿಭಾಗದಲ್ಲಿರುವ ಪಶ್ಚಿಮ ಘಟ್ಟಗಳ ನಡುವೆ ನೆಲೆಗೊಂಡಿದೆ. “ದೂಧ್ ಸಾಗರ್” ಎಂಬ ಪದದ ಅರ್ಥ “ಹಾಲಿನ ಸಾಗರ” ಎಂದು ಬರುತ್ತದೆ. ಜಲಪಾತದಿಂದ ಹರಿಯುವ ನೀರು ಹಾಲಿನಂತೆ ಬಿಳಿಯಾಗಿ ಕಾಣುವುದರಿಂದ ಈ ಹೆಸರು ಬಂದಾಗಿದೆ.
ಈ ಜಲಪಾತವು ಸುಮಾರು 310 ಮೀಟರ್ (1017 ಅಡಿ) ಎತ್ತರದಿಂದ ನಾಲ್ಕು ಹಂತಗಳಲ್ಲಿ ಕೆಳಗೆ ಬೀಳುತ್ತದೆ. ಮಳೆಗಾಲದಲ್ಲಿ ದುದ್ಸಾಗರ್ ತನ್ನ ಅತ್ಯಂತ ಆಕರ್ಷಕ ರೂಪವನ್ನು ತಾಳುತ್ತದೆ. ಆ ಸಮಯದಲ್ಲಿ ಜಲಪಾತವು ಅತ್ಯಂತ ಪ್ರಬಲವಾಗಿ ಹರಿದು ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಹಸಿರಿನಿಂದ ತುಂಬಿಸುತ್ತದೆ.
ದೂಧ್ ಸಾಗರ್ ಜಲಪಾತವು ಭಾಗವತಿ ಅರಣ್ಯ ಪ್ರದೇಶದ ಒಳಗಿದೆ ಮತ್ತು ಇದು ಜೀವ ವೈವಿಧ್ಯತೆಯಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿ ಹಲವು ಪ್ರಾಣಿ, ಪಕ್ಷಿ ಮತ್ತು ಸಸ್ಯ ಜಾತಿಗಳನ್ನು ಕಾಣಬಹುದು. ಈ ಪ್ರದೇಶವು ಪ್ರಕೃತಿ ಪ್ರಿಯರು ಮತ್ತು ಛಾಯಾಗ್ರಾಹಕರಿಗೆ ಸ್ವರ್ಗದಂತಿದೆ.
ಈ ಜಲಪಾತಕ್ಕೆ ಹೋಗುವ ಒಂದು ಜನಪ್ರಿಯ ಮಾರ್ಗವೆಂದರೆ ರೈಲ್ವೆ ಮಾರ್ಗದ ಪಕ್ಕವಾಗಿ ನಡೆಯುವುದು. ಆದರೆ ಇದು ಈಗ ಭದ್ರತಾ ಕಾರಣಗಳಿಂದ ನಿಷೇಧಿಸಲಾಗಿದೆ. ರೈಲ್ವೆ ಹಳಿ ಮೂಲಕ ತೆರಳುವುದು ಅಪಾಯಕಾರಿ ಮತ್ತು ಕಾನೂನುಬಾಹಿರವಾಗಿದೆ. ಸರ್ಕಾರ ಮತ್ತು ರೈಲ್ವೆ ಇಲಾಖೆ ಜನರು ಸುರಕ್ಷಿತ ಮಾರ್ಗಗಳನ್ನು ಮಾತ್ರ ಬಳಸುವಂತೆ ಸೂಚಿಸುತ್ತಿವೆ.
ಪ್ರವಾಸಿಗರು ಕ್ಯಾಸಲ್ ರಾಕ್ ಅಥವಾ ಕೂಲೆಂ ಭಾಗದಿಂದ ಜೀಪ್ ಸಫಾರಿ ಅಥವಾ ಅನುಮತಿತ ಮಾರ್ಗಗಳನ್ನು ಬಳಸಿಕೊಂಡು ಜಲಪಾತವನ್ನು ಭೇಟಿ ಮಾಡಬಹುದು. ಮಳೆಗಾಲದಲ್ಲಿ ವಿಶೇಷ ಅನುಮತಿ ಅಗತ್ಯವಿರಬಹುದು.
ದೂಧ್ ಸಾಗರ್ ಜಲಪಾತವು ಕೇವಲ ಒಂದು ಪ್ರವಾಸಿ ಸ್ಥಳವಷ್ಟೇ ಅಲ್ಲ, ಪ್ರಕೃತಿಯ ಶಾಂತಿ ಮತ್ತು ಸೌಂದರ್ಯವನ್ನು ಅನುಭವಿಸುವ ಸ್ಥಳವೂ ಆಗಿದೆ. ಇದನ್ನು ಭೇಟಿ ಮಾಡುವಾಗ ಪರಿಸರವನ್ನು ಕಾಪಾಡುವುದು ಮತ್ತು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






