Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೊದಲು ಜೆಡಿಎಸ್ ನಾಯಕರು ಮನೆಯೊಳಗಿನ ಸಮಸ್ಯೆ ಪರಿಹರಿಸಿಕೊಂಡು ಬಳಿಕ ರಾಜ್ಯದಲ್ಲಿ ಅಧಿಕಾರದ ಕನಸು ಕಾಣುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ Pralhad Joshi ಲೇವಡಿ ಮಾಡಿದರು.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನಲ್ಲಿ ರಾಷ್ಟ್ರೀಯ ನಾಯಕರ ಮಾತಿರಲಿ ಅವರಿಗೆ ಮನೆಯೊಳಗಿನ ಸಮಸ್ಯೆಯನ್ನೇ ಪರಿಹರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಟಿಕೆಟ್ಗಾಗಿ ಕುಟುಂಬದೊಳಗೇ ತಿಕ್ಕಾಟ ನಡೆಯುತ್ತಿದೆ. ಮೊದಲು ಅವರ ಪಕ್ಷದಲ್ಲಿನ ಆಂತರಿಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಕುಟುಕಿದರು.
ನಮ್ಮ ಪಕ್ಷದಲ್ಲಿ ರಾಷ್ಟ್ರೀಯ ನಾಯಕರು ಅತ್ಯಂತ ಸಮರ್ಥರು ಹಾಗೂ ಜನಪ್ರಿಯರಾಗಿದ್ದಾರೆ. ಹೀಗಾಗಿ ಅವರನ್ನು ಪದೇಪದೆ ರಾಜ್ಯಕ್ಕೆ ಕರೆಸಿಕೊಳ್ಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಅಂತಹ ನಾಯಕರಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರೆನಿಸಿ ಕೊಂಡವರು ಏನು ಮಾತನಾಡುತ್ತಾರೆ ಎಂಬುದು ಅವರಿಗೇ ತಿಳಿಯುವುದಿಲ್ಲ. ಜನ ಅವರನ್ನು ನಂಬುವುದೂ ಇಲ್ಲ. ಅವರು ಬೇಕಿದ್ದರೆ ರಾಹುಲ್ ಗಾಂಧಿ ಅವರನ್ನು ಕರೆಸಬಹುದು. ಆದರೆ ರಾಹುಲ್ ಬಂದರೆ ಇರುವ ಮತಗಳನ್ನೂ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ನವರಿಗೆ ಎಂದು ವ್ಯಂಗ್ಯವಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


Discussion about this post