No Result
View All Result
Naija Hegde’s Inspiring Rise to Success
English Articles

From Coast to Glory: Naija Hegde’s Inspiring Rise to Success

by ಕಲ್ಪ ನ್ಯೂಸ್
June 21, 2026
0

Kalpa Media House  |  Special Article by Satish Shetty Cherkady  | Certain achievements do not merely bring happiness; they move...

Read moreDetails
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
yoga | Participate online

India Launches Worldwide Campaign for International Day of Yoga 2026

June 13, 2026
  • Advertise With Us
  • Grievances
  • About Us
  • Contact Us
Sunday, June 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ಅಶೇಷ ಗುಣಗಳ ಪವಿತ್ರ ಜೈನ ಧರ್ಮದ ಸಾಮ್ರಾಟ ವರ್ಧಮಾನ ಮಹಾವೀರರು

ಮಹಾವೀರರ ಇತಿಹಾಸ ಸಂಕ್ಷಿಪ್ತಗೊಳಿಸಿ ಒಂದಿಡೀ ಧರ್ಮವನ್ನು ತೆರೆ ಮರೆಗೆ ಸರಿಸುವ ಪ್ರಯತ್ನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 4, 2023
in ಸಚಿನ್ ಪಾರ್ಶ್ವನಾಥ್
0
ಅಶೇಷ ಗುಣಗಳ ಪವಿತ್ರ ಜೈನ ಧರ್ಮದ ಸಾಮ್ರಾಟ ವರ್ಧಮಾನ ಮಹಾವೀರರು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್  |

ಅದು ಗಂಡಕಿ ನದಿಯ ತೀರ. ತೇಲಿ ಬರುವ ತಣ್ಣನೆಯ ಗಾಳಿ ಅಂದು ಸಂಭ್ರಮ ಹೊತ್ತು ತಂದಿತ್ತು. ವೈಶಾಲಿಯ ಒಡೆಯನ ಮನದನ್ನೆ ಹದಿನಾರು ಸುಂದರ ಸ್ವಪ್ನಗಳ ಕಂಡಿದ್ದಳು. ಅರಮನೆಯ ಪಂಡಿತರ ಭಿನ್ನವಿಸಲಾಗಿ ಮಾತೆಯ ಒಡಲಿನಲ್ಲಿ ಜಗವಾಳೋ ಅಹಿಂಸೆಯ ಪ್ರಭು ಜನಿಸಲಿದ್ದಾರೆ, ಆ ಕನಸುಗಳೆಲ್ಲವೂ ಆ ಪುಣ್ಯ ಕ್ಷಣದ ಸೂಚನೆ ಎಂದರು. ಮೊದಲೇ ಮಹಾರಾಜ, ಈಗ ಇಂತಹ ಸುದ್ದಿ, ಕೇಳಬೇಕೇ? ಇಡೀ ದೇಶವೇ ಬಣ್ಣ ಕಟ್ಟಿ ಆಡಂಬರ ಹೊತ್ತು ನಿಂತಿತು. ಎಲ್ಲೆಡೆ ಸಂಭ್ರಮ. ಅದು ಹೇಗೆ ನವಮಾಸಗಳನ್ನು ಜೀಕಿದರೋ ತಿಳಿಯದು.

ಅದಾಗಲೇ ಹಿಂದಿನ ತೀರ್ಥಂಕರರಾದ ಪಾರ್ಶ್ವನಾಥರು ಜನಿಸಿ ಸರಿ ಸುಮಾರು ಮೂರು ಶತಮಾನಗಳು ಕಳೆದಿದ್ದವು. ವೈಶಾಲಿಯ ರಾಜದಂಪತಿಗಳೀರ್ವರೂ ಪಾರ್ಶ್ವನಾಥ ತೀರ್ಥಂಕರರ ಪರಮ ಭಕ್ತರಾಗಿದ್ದರು. ಅಂತಹ ಕುಟುಂಬದಲ್ಲಿ ಧರ್ಮದ ಮುಂದಿನ ಪ್ರತಿನಿಧಿ ಜನಿಸುತ್ತಿದ್ದರು. ಅಂದು ಚೈತ್ರ ಶುಕ್ಲ ತ್ರಯೋದಶಿ. ಈಗಿನ ಬಿಹಾರದ ಕುಂದಲಪುರದಲ್ಲಿ ಮಹಾರಾಜ ಸಿದ್ದಾರ್ಥ ಮತ್ತು ಮಹಾರಾಣಿ ತ್ರಿಶಲಾದೇವಿಯರ ಸುಪುತ್ರನಾಗಿ ವರ್ಧಮಾನರ ಜನುಮವಾಯಿತು.
ಈ ಶಿಶು ಗರ್ಭಲಂಕಾರ ಮಾಡಿದ ಕ್ಷಣದಿಂದ ದೇಶವು ಅನನ್ಯ ಅಭಿವೃದ್ಧಿ ಹೊಂದುತ್ತಿದೆ ಆದ್ದರಿಂದ ರಾಜಕುವರನಿಗೆ ವರ್ಧಮಾನ ಎಂದು ನಾಮಕರಣ ಮಾಡಿ ಎಂದು ಮಹಾರಾಜರು ಆನಂದದಿಂದ ಸೂಚಿಸಿದರು. ಬಾಲ್ಯವೂ ಸಹ ಅನ್ಯರಂತೆ ಇರದೇ ಧೈರ್ಯ, ನಿಸ್ವಾರ್ಥ ಎದ್ದು ಕಾಣುತ್ತಿದ್ದವು. ಜ್ಞಾನದ ಪ್ರತಿರೂಪವಾಗಿದ್ದ ಬಾಲಕನಿಗೆ ಸ್ವಯಂ ಇಂದ್ರನೇ ಬಂದು ಆಚಾರ್ಯರಾದರು. ವರ್ಷಗಳು ಉರುಳಿ ವರ್ಧಮಾನರು ಯೌವ್ವನದ ಹಂತ ತಲುಪಿದಾಗ ರಾಜಕುಲದಲ್ಲಿ ಸಂತಸವೇನೋ ಊರ್ಜಿಸಿತು. ಆದರೆ ತರುಣನೊಳಗೆ ವೈಚಾರಿಕತೆಯ ಹಸಿವು ಮುಗಿಲು ಮುಟ್ಟಿತ್ತು. ಭೌತಿಕ ಜಗತ್ತನು ಮೀರಿ ಎಲ್ಲಾ ನೋವು ಮತ್ತು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಿ ಹೋಗುವ ಆಸಕ್ತಿ ತನ್ಮೂಲಕ ಹೆಚ್ಚಿತ್ತು. ಸ್ವರ್ಣ ಶರೀರಿಯ ಮನದನ್ನೆಯಾಗಲು ಕನ್ಯಾಮಣಿಗಳ ಪ್ರಸ್ತಾಪ ಬರತೊಡಗಿದವು. ಅಂತೆಯೇ ವರ್ಧಮಾನರು ಯಶೋಧೆಯನ್ನು ವಿವಾಹವಾದರು. ನಂತರದಲ್ಲಿ ಪುತ್ರಿ ಪ್ರಿಯದರ್ಶಿನಿಯ ಜನನವಾಯಿತು. ಸುಂದರ ರಾಜಸಂಸಾರ, ರಾಜ್ಯ, ಪ್ರಜೆಗಳು ಇವೆಲ್ಲವನ್ನೂ ಮೀರಿ ಅಲೌಕಿಕತೆಯ ಕಡೆಗೆ ಸದಾಕಾಲ ಯುವರಾಜನ ಗಮನ.

ಕೊನೆಗೂ ಅಣ್ಣ ನಂದಿವರ್ಧನ ಅಣತಿ ಪಡೆದು ಮೋಕ್ಷ ಅರಸಿ ಹೊರಟರು. ಅಪರಿಚಿತ ಸಾಮಾನ್ಯನಿಗೆ ಏನೆಲ್ಲಾ ಕಷ್ಟಗಳು ಎದುರಾಗುತ್ತಾವೋ ಅದರ ನೂರು ಪಟ್ಟು ಹಿಂಸೆ ನೋವುಗಳನ್ನು ಎದುರಿಸಿದರು. ಕಾಲಡಿಯ ನೆಲಕ್ಕೆ ಪಾದ ಸೋಕಿಸದ ರಾಜಪುತ್ರ ಬರಿಗಾಲಿನಲ್ಲಿ ದೇಶವನ್ನು ಸುತ್ತಿದರು. ಜನರು ಇವರನ್ನು ಮಾಟಗಾರನಂತೆ, ಕಳ್ಳನಂತೆ, ಗುಪ್ತಚರನಂತೆ ಅಷ್ಟೆ ಏಕೆ ಮರುಳನಂತೆ ನೋಡಿ ನಾನಾ ತರಹದ ಶಿಕ್ಷೆ ನೀಡಿದರು. ಅನ್ನ, ನೀರು, ನಿದ್ರೆ, ಬಟ್ಟೆಗಳ ತೊರೆದ ಜಿನಾಸಕ್ತನಿಗೆ ಯಾವ ಗೋಜು? ಅದೆಲ್ಲಾ ತಾಕಲೂ ಇಲ್ಲ. ಹೀಗೆ ಹನ್ನೆರಡು ವರ್ಷಗಳು ಬೇಕಾಯಿತು. ಬಿಹಾರದ ಜೃಂಬಿಕದಲ್ಲಿ ಕೇವಲಜ್ಞಾನ ಪ್ರಾಪ್ತವಾಯಿತು. ವರ್ಧಮಾನರು ಮಹಾವೀರರಾದರು. ಇಂದಿನ ಸ್ಥಿತಿ ಹೇಗಿದೆ ಎಂದರೆ ಮಹಾವೀರರ ಬೋಧನೆಗಳು ಯಾರದೋ ಹೇಳಿಕೆಗಳಾಗಿವೆ, ಅವರ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ, ಒಂದಿಡೀ ಧರ್ಮದ ಐತಿಹಾಸಿಕ ಮಹತ್ವವನ್ನು ತೆರೆ ಮರೆಗೆ ಸರಿಸಲಾಗಿದೆ. ಭಗವಾನರ ಸಂಪೂರ್ಣ ಚರಿತೆ, ಬೋಧನೆ ಮತ್ತು ಪರಿಣಾಮಗಳನ್ನು ಸಧ್ಯದಲ್ಲೇ ತಿಳಿಸುವ ಪ್ರಯತ್ನ ನಡೆಯಲಿದೆ. ಮಹಾವೀರ ಜಯಂತಿಯ ಶುಭಾಶಯಗಳು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Kalahamsa Infotech private limited

Tags: Gandaki riverJainKannada News WebsiteLatest News KannadaMahavira JayantiSachin ParshwanathSpecial ArticleVardhamana Mahaviraಕೇವಲಜ್ಞಾನಗಂಡಕಿ ನದಿಜಿನಾಸಕ್ತಮಹಾವೀರ ಜಯಂತಿವರ್ಧಮಾನ ಮಹಾವೀರಸಿದ್ದಾರ್ಥ
Share204Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜೆಡಿಎಸ್‌ಗೆ ರಾಜ್ಯದ ಜನರ ಬಹುಮತ ಖಚಿತ: ಶಾಸಕ ಬಂಡೆಪ್ಪ ಖಾಶೆಂಪುರ್ ವಿಶ್ವಾಸ

Next Post

ನಮ್ಮ ಸ್ಥಾನವನ್ನು ನಿಮಗೆ ನೀಡುತ್ತೇವೆ! ರಾಹುಲ್ ಗಾಂಧಿಗೆ ಆಹ್ವಾನ ನೀಡಿರುವುದು ಯಾರು ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಮ್ಮ ಸ್ಥಾನವನ್ನು ನಿಮಗೆ ನೀಡುತ್ತೇವೆ! ರಾಹುಲ್ ಗಾಂಧಿಗೆ ಆಹ್ವಾನ ನೀಡಿರುವುದು ಯಾರು ಗೊತ್ತಾ?

ನಮ್ಮ ಸ್ಥಾನವನ್ನು ನಿಮಗೆ ನೀಡುತ್ತೇವೆ! ರಾಹುಲ್ ಗಾಂಧಿಗೆ ಆಹ್ವಾನ ನೀಡಿರುವುದು ಯಾರು ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

ಪಶು ವೈದ್ಯಕೀಯ ಕಾಲೇಜುಗಳಿಗೆ ಖಾಸಗಿ ಪ್ರವೇಶ ವಿರೋಧ: ಶಾಸಕರಿಗೆ ವಿದ್ಯಾರ್ಥಿಗಳ ಮನವಿ

June 20, 2026
ಶಿವಮೊಗ್ಗ | ವಿವೇಕಾನಂದ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಾಣಕ್ಕೆ ಆಗ್ರಹ | ಕಾರಣವೇನು?

ಭದ್ರಾವತಿ | ತಂದೆ ವಿರುದ್ಧ 112 ಪೊಲೀಸರಿಗೆ ಕರೆ ಮಾಡಿದ ಮಗ | ಏನಾಯ್ತು?

June 20, 2026
Cymatic Carnatic

Cymatic Carnatic-see the sound of music, a program with a novel vision

June 20, 2026
ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

ಇನ್‌ಸ್ಟಾಗ್ರಾಮ್–ಟೆಲಿಗ್ರಾಂ ಟ್ರೇಡಿಂಗ್ ಮೋಸ: ರೈತ ಯುವಕನಿಂದ ₹2.05 ಕೋಟಿ ವಂಚನೆ

June 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL